ಆ್ಯಪ್ನಗರ

ಅಪಘಾತವಾದಾಗ ತಕ್ಷಣ ಏನು ಮಾಡಬೇಕು?

ಅಪಘಾತವಾದಾಗ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

Vijaya Karnataka 27 May 2019, 11:26 am
ಡಾ. ಸಲೀಂ

ಅಪಘಾತದಂತಹ ಸಮಯದಲ್ಲಿ ಎದುರಾಗುವ ತುರ್ತು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವ ಗೊಂದಲ ಹಲವರಲ್ಲಿ ಇರುತ್ತದೆ. ಆದರೆ ಆ ಸಮಯದಲ್ಲಿ ಭಯ, ಆತಂಕವನ್ನು ದೂರವಿಟ್ಟು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ರಸ್ತೆ ಅಪಘಾತಗಳಳ್ಲಿ ಸಾಯುವವರ ಸಂಖ್ಯೆ ಭಾರತದಲ್ಲಿ ಅತಿ ಹೆಚ್ಚು. ಈ ಸಮಯದಲ್ಲಿ ಏನು ಮಾಡಬೇಕು ಎನ್ನುವುದಕ್ಕಿಂತ ಏನು ಮಾಡಬಾರದು ಎಂಬುದರ ಬಗ್ಗೆ ಅರಿವಿರಬೇಕು.

ಏನು ಮಾಡಬಾರದು?

ಬಾಯಲ್ಲಿ ನೀರು ಸುರಿಯುವುದು ಅಥವಾ ಬಲವಂತವಾಗಿ ನೀರು ಕುಡಿಸುವುದು ಬೇಡ.

ಗಾಯಾಳುಗಳಿಗೆ ಚಿಕಿತ್ಸೆ ಬೇಕು, ನೀರಲ್ಲ. ದೇಹದ ಒಳಗಡೆ ಸೇರಿದ ಗಾಜು, ಚೂಪು ವಸ್ತು ಹೊರತೆಗೆಯುವ ಅಸಮರ್ಪಕ ಪ್ರಯತ್ನ ಮಾಡದಿರಿ.

ಅಪಘಾತವಾದ ವಾಹನದಲ್ಲಿ ಸಿಲುಕಿದವರನ್ನು , ಮೂಳೆ ಮುರಿದ ಗಾಯಾಳುಗಳನ್ನು ಅಡ್ಡಾದಿಡ್ಡಿ ಹೊರಗೆಳೆಯುವುದು ಬೇಡ. ಕತ್ತು, ಸೊಂಟದ ಮೂಳೆಗಳು ಮುರಿದರೆ ಸೊಂಟದ ಕೆಳಭಾಗ ಸ್ವಧೀನ ಕಳೆದುಕೊಳ್ಳಬಹುದು.

ಏನು ಮಾಡಬೇಕು?


ಸ್ವಯಂ ಸುರಕ್ಷತೆಗೆ ಆದ್ಯತೆ ನೀಡಬೇಕು. ತಕ್ಷಣ ಸಹಾಯಕ್ಕೆ ಅಂಬುಲೆನ್ಸ್ ಅಥವಾ ಆಸ್ಪತ್ರೆಗೆ ಕರೆ ಮಾಡಿ.

ಗಾಯಾಳು ಅಥವಾ ತೊಂದರೆ ಗೀಡಾದ ವ್ಯಕ್ತಿಗೆ ಗಾಳಿ ಬೆಳಕು ಸಿಗುವಂತೆ ಮಾಡಬೇಕು

ಆ್ಯಂಬುಲೆನ್ಸ್ ಅಥವಾ ವೃತ್ತಿಪರ ಸಹಾಯಕ್ಕೆ ಆಗಮಿಸುವವರೆಗೆ ಗಾಯಾಳುಗಳಿಗೆ ಧೈರ್ಯ, ಸಾಂತ್ವನ, ಹೇಳುತ್ತಾ ಅವರ ವೈಯಕ್ತಿಕ ಮಾಹಿತಿಗಳನ್ನು ಕೇಳಬೇಕು.

ಅಪಘಾತದ ವೀಡಿಯೋ ಅಥವಾ ಸೆಲ್ಫಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಅಮಾನುಷ ಹಾಗೂ ಘಟನೆಯ ವೈಜ್ಞಾನಿಕ ನಿರ್ವಹಣೆಯ 50%ರಷ್ಟು ಸಾವುಗಳನ್ನು ಹಾಗೂ ಹೆಚ್ಚಿನ ತೊಂದರೆಯಿಂದ ಕಾಪಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ