ಆ್ಯಪ್ನಗರ

ಈ ಐದು ಬಗೆಯ ಗಿಡಮೂಲಿಕೆ ಚಹಾಗಳು ಸಕ್ಕರೆ ಕಾಯಿಲೆ ಇದ್ದವರಿಗೆ ರಾಮಬಾಣ!

ಈ ಚಹಾಗಳನ್ನು ಕುಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಬಹುದು.

Vijaya Karnataka Web 25 Nov 2021, 2:18 pm
ವಿಶ್ವದಲ್ಲಿ ಅತೀ ಹೆಚ್ಚು ಜನರನ್ನು ಕಾಡುತ್ತಿರುವ ಸಮಸ್ಯೆಯೆಂದರೆ ಅದು ಮಧುಮೇಹ. ಇಂದು ಮಧುಮೇಹಿಗಳು ಇಲ್ಲದ ಮನೆ ಇದ್ದರೆ ಅದು ದೊಡ್ಡ ಪುಣ್ಯ ಎಂದು ಹೇಳಬಹುದು. ಮಧುಮೇಹ ಬಂದರೆ ಅದರ ಬಳಿಕ ಹಲವಾರು ಬಗೆಯ ಅನಾರೋಗ್ಯಗಳು ಒಂದರ ಬಳಿಕ ಮತ್ತೊಂದು ಮುತ್ತಿಕೊಳ್ಳುವುದು.
Vijaya Karnataka Web these five types of teas that help to contol diabetes naturally
ಈ ಐದು ಬಗೆಯ ಗಿಡಮೂಲಿಕೆ ಚಹಾಗಳು ಸಕ್ಕರೆ ಕಾಯಿಲೆ ಇದ್ದವರಿಗೆ ರಾಮಬಾಣ!


ಮಧುಮೇಹದಿಂದ ಹೃದಯದ ಕಾಯಿಲೆ, ನರಗಳಿಗೆ ಹಾನಿ, ಕಿಡ್ನಿ ಸಮಸ್ಯೆ ಇತ್ಯಾದಿಗಳು ಕಾಡುವುದು. ಇದು ಪ್ರತಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುವುದು ಮತ್ತು ಸೋಂಕು ಬರುವಂತೆ ಮಾಡುವುದು. ಮಧುಮೇಹದಿಂದ ಆಗುವ ಸಮಸ್ಯೆಗಳನ್ನು ಕಡಿಮೆ ಮಾಡಲು ಹಲವಾರು ವಿಧಾನಗಳು ಇವೆ.

ಇದನ್ನು ಜೀವನಶೈಲಿ ಬದಲಾವಣೆಯ ಜತೆಗೆ ಸರಿಯಾಗಿ ನಿಭಾಯಿಸಿಕೊಂಡು ಹೋದರೆ ಒಳ್ಳೆಯದು. ಕೆಲವೊಂದು ಗಿಡಮೂಲಿಕೆ ಚಹಾ ಮಧುಮೇಹ ನಿಯಂತ್ರಿಸಲು ತುಂಬಾ ಪರಿಣಾಮಕಾರಿ.

​ಕ್ಯಾಮೊಮೈಲ್ ಟೀ

  • ಇದು ಯುರೋಪಿನಲ್ಲಿ ಕಂಡುಬರುವಂತಹ ಒಂದು ರೀತಿಯ ಸಸ್ಯವಾಗಿದ್ದು, ಇದರಲ್ಲಿ ಹಲವಾರು ಬಗೆಯ ಆರೋಗ್ಯ ಗುಣಗಳು ಇವೆ. ಕ್ಯಾಮೊಮೈಲ್ ಟೀ ಕುಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆ ಆಗುವುದು.
  • ಇದು ಉರಿಯೂತ ಶಮನಕಾರಿಯಾಗಿದ್ದು, ಮೇದೋಜೀರಕ ಗ್ರಂಥಿಗಳಿಗೆ ಆಗುವಂತಹ ಹಾನಿಯನ್ನು ತಡೆಯುವುದು. ಮೇದೋಜೀರಕ ಗ್ರಂಥಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿ ಆಗಿದೆ. ಇದು ನಿದ್ರೆಗೆ ಸಹಕಾರಿ ಮತ್ತು ಪ್ರತಿರೋಧಕ ಶಕ್ತಿ ವೃದ್ಧಿಸುವುದು.

​ಶುಂಠಿ ಟೀ

  • ಶುಂಠಿಯನ್ನು ನಾವೆಲ್ಲರೂ ಹೆಚ್ಚಿನ ಅಡುಗೆಯಲ್ಲೂ ಬಳಕೆ ಮಾಡುತ್ತೇವೆ. ಇದರಲ್ಲಿ ಕೂಡ ಹಲವಾರು ಬಗೆಯ ಔಷಧೀಯ ಗುಣಗಳು ಇವೆ. ಶುಂಠಿಯ ಹುಡಿಯ ಸಪ್ಲಿಮೆಂಟ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಣೆ ಮಾಡುವುದು.
  • ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಮಧುಮೇಹ ಬರುವುದನ್ನು ಕೂಡ ತಡೆಯುವುದು. ದಿನಕ್ಕೆ ನಾಲ್ಕು ಗ್ರಾಂನಷ್ಟು ಶುಂಠಿ ಸೇವನೆ ಮಾಡಿದರೆ ಅದು ರಕ್ತದಲ್ಲಿನ ಸಕ್ಕರೆ ಮಟ್ಟ ಕುಗ್ಗಿಸುವುದು ಮತ್ತು ಇನ್ಸುಲಿನ್ ಪ್ರತಿರೋಧಕವನ್ನು ಸಮತೋಲನದಲ್ಲಿಡುವುದು.

​ದಾಸವಾಳ ಟೀ

  • ದಾಸವಾಳದಲ್ಲಿ ಇರುವಂತಹ ಔಷಧೀಯ ಗುಣಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದೇ ಇದೆ. ಇದರಲ್ಲಿ ವೈರಲ್ ವಿರೋಧಿ ಗುಣಗಳಿದ್ದು, ಇದು ಆರೋಗ್ಯಕ್ಕೆ ಹಲವಾರು ಲಾಭಗಳನ್ನು ನೀಡುವುದು.
  • ದಾಸವಾಳದ ಟೀ ಕುಡಿದರೆ ಅದರಿಂದ ಟೈಪ್-2 ಮಧುಮೇಹಿಗಳಿಗೆ ಸಹಕಾರಿ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ನಿಯಂತ್ರಣದಲ್ಲಿ ಇಡುವುದು. ಆಕ್ಸಿಡೇಟಿವ್ ಒತ್ತಡದಿಂದಾಗಿ ಉಂಟಾಗುವಂತಹ ಅಧಿಕ ರಕ್ತದೊತ್ತಡವನ್ನು ಇದು ತಗ್ಗಿಸುವುದು.

​ಗ್ರೀನ್ ಟೀ

  • ಗ್ರೀನ್ ಟೀ ಮತ್ತೊಂದು ಆರೋಗ್ಯಕಾರಿ ಪಾನೀಯವಾಗಿದೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳಿದ್ದು, ಇದು ಆರೋಗ್ಯಕ್ಕೆ ಲಾಭಕಾರಿ.
  • ಗ್ರೀನ್ ಟೀಯನ್ನು ನಿತ್ಯವೂ ನಿಯಮಿತವಾಗಿ ಕುಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ತಗ್ಗುವುದು. ಇದು ಟೈಪ್ 2 ಮಧುಮೇಹ ಬೆಳವಣಿಗೆ ಆಗುವ ಅಪಾಯವನ್ನು ಕಡಿಮೆ ಮಾಡುವುದು.

​ಊಲಾಂಗ್ ಚಹಾ

  • ಇದು ಕೂಡ ಗ್ರೀನ್ ಟೀ ಮತ್ತು ಬ್ಲ್ಯಾಕ್ ಟೀ ಜಾತಿಗೆ ಸೇರಿರುವುದು. ಊಲಾಂಗ್ ಚಾವನ್ನು ಅದರ ಸಸ್ಯದ ಎಲೆಗಳನ್ನು ಉತ್ಕರ್ಷಗೊಳಿಸಿ ತಯಾರಿಸಲಾಗುತ್ತದೆ. ಊಲಾಂಗ್ ಚಾ ಕುಡಿದರೆ ಅದರಿಂದ ಟೈಪ್-2 ಮಧುಮೇಹದ ಅಪಾಯವು ಕಡಿಮೆ ಆಗುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಕಾರಿ.
  • ಈ ಗಿಡಮೂಲಿಕೆ ಚಹಾವನ್ನು ಸೇವನೆ ಮಾಡಿದರೆ ಅದರಿಂದ ತೂಕ ಇಳಿಸಲು ಕೂಡ ಸಹಕಾರಿ ಆಗಿರುವುದು. ಅದೇ ರೀತಿಯಾಗಿ ಹೃದಯದ ಕಾಯಿಲೆ ಅಪಾಯ ತಗ್ಗಿಸುವುದು ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಣೆ ಮಾಡುವುದು. ಈ ಚಹಾ ಕುಡಿದರೆ ಅದರಿಂದ ಹೃದಯ, ಮೆದುಳು, ಮೂಳೆ ಮತ್ತು ಹಲ್ಲಿನ ಆರೋಗ್ಯ ಕಾಪಾಡುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ