ಆ್ಯಪ್ನಗರ

ನಿಮ್ಮ ದೇಹದೊಳಗಿನ ರಕ್ತವನ್ನು ಸದಾ ಕ್ಲೀನ್ ಆಗಿಸುವ ಆಹಾರಗಳಿವು...

ನಿಮ್ಮ ದೇಹಕ್ಕೆ ಅಗತ್ಯ ಎನಿಸುವ ಉತ್ತಮ ಆಹಾರಗಳನ್ನು ನೀವು ಎಂದಿಗೂ ನಿರ್ಲಕ್ಷ ಮಾಡಬಾರದು. ಅದರಲ್ಲೂ ಆರೋಗ್ಯಕರವಾದ ರಕ್ತ ಸಂಚಾರಕ್ಕೆ ಅವಶ್ಯವಿರುವ ಈ ಆಹಾರಗಳನ್ನು ಆಗಾಗ ತಿನ್ನಲೇಬೇಕು.

Produced byಮನೋಹರ್ ಶೆಟ್ಟಿ | Vijaya Karnataka Web 21 Mar 2023, 5:42 pm
ಮನುಷ್ಯನ ದೇಹದ ರಕ್ತ ಆತನಿಗೆ ಎಷ್ಟು ಇಂಪಾರ್ಟೆಂಟ್ ಎಂದರೆ, ದೇಹದ ಒಳಗಿನ ಕಾರ್ಯ ಚಟುವಟಿಕೆಗಳು ಸರಾಗವಾಗಿ ನಡೆಯುವುದು ರಕ್ತ ಸಂಚಾರದಿಂದಲೇ ಎನ್ನುವಷ್ಟು. ಇಲ್ಲಿ ಕೆಂಪು ರಕ್ತ ಕಣಗಳ ಆಟ ಬಲು ಜೋರು!
Vijaya Karnataka Web these foods are necessary for healthy blood in your body
ನಿಮ್ಮ ದೇಹದೊಳಗಿನ ರಕ್ತವನ್ನು ಸದಾ ಕ್ಲೀನ್ ಆಗಿಸುವ ಆಹಾರಗಳಿವು...



ಒಂದು ಕಡೆಯಿಂದ ಮತ್ತೊಂದು ಕಡೆಗೆ ಆಮ್ಲಜನಕವನ್ನು ತೆಗೆದುಕೊಂಡು ಹೋಗುವ ಮತ್ತು ಅಂಗಾಂಗಗಳಿಗೆ ನೀಡುವ ಪ್ರಮುಖವಾದ ಕೆಲಸವನ್ನು ಇವು ಮಾಡುತ್ತವೆ. ಅದೇ ತರಹ ಪೌಷ್ಟಿಕಾಂಶಗಳನ್ನು ಸಹ.

ಇಂತಹ ಒಂದು ದೇಹದ ರಕ್ತವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬೇಕು ಎಂದರೆ ನಾವು ನಮ್ಮ ಈಗಿನ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದುಕೊಳ್ಳಬೇಕು....

ತಜ್ಞರಾದ ಅಂಜಲಿ ಮುಖರ್ಜಿ ಪ್ರಕಾರ...

ಉತ್ತಮವಾದ ಆಹಾರ ಪದಾರ್ಥಗಳನ್ನು ಅದರಲ್ಲೂ ಆರೋಗ್ಯ ಕರವಾದ ರಕ್ತ ಸಂಚಾರಕ್ಕೆ ಬೆಂಬಲಿಸುವ ಅತ್ಯಗತ್ಯ ಆಹಾರ ಗಳನ್ನು ಸೇವಿಸುವುದು ಅನಿವಾರ್ಯವಾಗಿದೆ ಎಂದು ಪೌಷ್ಟಿ ಕಾಂಶ ತಜ್ಞರಾದ ಅಂಜಲಿ ಮುಖರ್ಜಿ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ವಿವರವಾಗಿ ಮಾಹಿತಿಯನ್ನು ಈ ರೀತಿ ಹಂಚಿ ಕೊಂಡಿದ್ದಾರೆ...

ರಕ್ತವನ್ನು ಸದಾ ಕ್ಲೀನ್ ಆಗಿಸುವ ಆಹಾರಗಳಿವು

View this post on Instagram A post shared by Anjali Mukerjee (@anjalimukerjee)

ಪೌಷ್ಟಿಕಾಂಶ ತಜ್ಞರಾದ ಅಂಜಲಿ ಮುಖರ್ಜಿ ಪ್ರಕಾರ...

  • ಅವರು ಹೇಳುವ ಹಾಗೆ ನಾವು ಯಾವಾಗ ವಿಟಮಿನ್ ಸಿ ಹೆಚ್ಚಾಗಿರುವ ಆಹಾರಗಳನ್ನು ಸೇವಿಸುತ್ತೇವೆ ಆಗ ಅದು ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪತ್ತಿಯನ್ನು ಹೆಚ್ಚಿಸುತ್ತದೆ.
  • ಅದೇ ರೀತಿ ಕಬ್ಬಿಣದ ಅಂಶ, ವಿಟಮಿನ್ ಸಿ ಮತ್ತು ಇನ್ನಿತರ ಪೌಷ್ಟಿಕಾಂಶಗಳನ್ನು ಒಳಗೊಂಡ ಆಹಾರ ಗಳನ್ನು ಸೇವಿಸುವುದರಿಂದ ಕೆಂಪು ರಕ್ತ ಕಣಗಳ ಉತ್ಪತ್ತಿಯ ಜೊತೆಗೆ ದೇಹದ ವಿವಿಧ ಕಡೆಗೆ ಆಮ್ಲಜನ ಕವನ್ನು ಅತ್ಯುತ್ತಮವಾಗಿ ಪೂರೈಸುತ್ತದೆ. ಈ ಒಂದು ಪ್ರಕ್ರಿಯೆಗೆ ನೆರವಾಗುವ ಆಹಾರ ಗಳೆಂದರೆ..

ಇಂತಹ ಆಹಾರಗಳನ್ನು ಸೇವಿಸಬೇಕು...

  • ಕಬ್ಬಿಣದ ಅಂಶ ಹೆಚ್ಚಾಗಿರುವ ಗೋಧಿ ಹುಲ್ಲಿನ ರಸ, ಕಬ್ಬು, ಅಲಸಂದೆ ಕಾಳು, ತೋಫು ಇತ್ಯಾದಿಗಳನ್ನು ಸೇವಿಸಿ ದರೆ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾ ಗುತ್ತದೆ.
  • ಆರೋಗ್ಯಕರವಾದ ದೇಹದ ರಕ್ತಕ್ಕೆ ಅಗತ್ಯವಾಗಿ ಬೇಕಾದ ಹಸಿರು ಎಲೆ ತರಕಾರಿಗಳನ್ನು ಸೇವಿಸುವುದು ಅಗತ್ಯ ವಾಗಿದೆ. ಉದಾಹರಣೆಗೆ ಪಾಲಕ್ ಸೊಪ್ಪು, ಬ್ರೊಕೋಲಿ, ಕೇಲ್ ಇತ್ಯಾದಿಗಳು.

ಪ್ರೋಟೀನ್ ಮತ್ತು ಕಬ್ಬಿಣದ ಅಂಶ ಇರುವ ಹಣ್ಣುಗಳು

  • ಕಿತ್ತಳೆ ಹಣ್ಣಿನ ಜ್ಯೂಸ್, ಖರ್ಜೂರಗಳು, ಜೇನುತುಪ್ಪ, ಒಣದ್ರಾಕ್ಷಿ ಹಾಗೂ ಅದರ ರಸ ರಕ್ತದಲ್ಲಿ ಪ್ರೋಟೀನ್ ಮತ್ತು ಕಬ್ಬಿಣದ ಅಂಶವನ್ನು ನಿರ್ವಹಣೆ ಮಾಡಲು ಸಹಾಯ ಮಾಡುತ್ತವೆ.
  • ಆಯುರ್ವೇದ ಗಿಡಮೂಲಿಕೆಗಳಾದ ಅಮಲಕಿ, ಮಂಜಿಷ್ಟ, ಗುಡುಚಿ ಇತ್ಯಾದಿಗಳು ರಕ್ತ ಶುದ್ಧೀಕರಣದಲ್ಲಿ ಕೆಲಸ ಮಾಡಿ ಆರೋಗ್ಯಕರವಾದ ರಕ್ತ ಸಂಚಾರ ಆಗುವಂತೆ ನೋಡಿಕೊಳ್ಳುತ್ತವೆ.​

ಕಬ್ಬಿಣಾಂಶ ಹೆಚ್ಚಾಗಿರುವ ಗಿಡಮೂಲಿಕೆಗಳು...

  • ಕಬ್ಬಿಣದ ಅಂಶ ಹೆಚ್ಚಾಗಿರುವ ಮತ್ತು ಗಿಡಮೂಲಿಕೆ ಗಳನ್ನು ಸೇವಿಸುವುದರಿಂದ ದೇಹದಲ್ಲಿ ನೈಸರ್ಗಿಕ ರಕ್ಷಣಾ ವ್ಯವಸ್ಥೆ ಬಲಗೊಳ್ಳುತ್ತದೆ ಎಂಬುದು ಆರೋಗ್ಯ ತಜ್ಞರ ಮಾತು.
  • ಇದರ ಜೊತೆಗೆ ಆರೋಗ್ಯಕರವಾದ ರಕ್ತ ನಿಮ್ಮದಾಗಬೇಕು ಎಂದರೆ ಬೆಳಗಿನ ಸಮಯದಲ್ಲಿ ವ್ಯಾಯಾಮ ಮಾಡು ವುದು, ವಾಕಿಂಗ್ ಮಾಡುವುದು, ಸ್ವಿಮ್ಮಿಂಗ್, ಸೈಕ್ಲಿಂಗ್, ಇತ್ಯಾದಿಗಳು ನೆರವಾಗುತ್ತವೆ.
  • ಹೃದಯ ಬಡಿತವನ್ನು ಹೆಚ್ಚು ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಇದರಿಂದ ಕಡಿಮೆಯಾಗುತ್ತದೆ. ಹೃದಯ ದಲ್ಲಿರುವ ಕಲ್ಮಶ ದೂರವಾಗಿ ಉತ್ತಮವಾದ ರಕ್ತ ಸಂಚಾರ ಇಡೀ ದೇಹದ ತುಂಬಾ ಇರುತ್ತದೆ.​

All Images Source: Istock

ಲೇಖಕರ ಬಗ್ಗೆ
ಮನೋಹರ್ ಶೆಟ್ಟಿ
"ಕನ್ನಡದ ಲೇಖನ ಬರವಣಿಗೆಯಲ್ಲಿ 9 ವರ್ಷಗಳ ಸುದೀರ್ಘ ವೃತ್ತಿಪರ ಅನುಭವದೊಂದಿಗೆ ಭಾಷೆಯ ಅನುವಾದದೊಂದಿಗೆ ಪ್ರಾರಂಭಿಸಿ ಇಂದಿಗೆ ವಿವಿಧ ವಿಭಾಗಗಳಲ್ಲಿ ಅಂದರೆ ಜೀವನಶೈಲಿ, ಆರೋಗ್ಯ, ಸೌಂದರ್ಯ, ಸಂಬಂಧ, ಜಾಹೀರಾತು ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸಿದ ಹೆಮ್ಮೆ ನನ್ನದು. ಭಾಷೆಯ ಬಗೆಗಿನ ಹಿಡಿತ, ವಿಚಾರದ ಕುರಿತಾದ ಜ್ಞಾನಾಸಕ್ತಿಯೊಂದಿಗೆ ಓದುಗರಿಗೆ ಅತ್ಯುತ್ತಮ ವಿಷಯಗಳನ್ನೊಳಗೊಂಡ ಲೇಖನಗಳನ್ನು ನೀಡುವಲ್ಲಿ ನನಗೆ ತೃಪ್ತಿಯಿದೆ. ಅದು ವಿಚಾರವಿರುವ ಲೇಖನವಾದರೂ ಅಥವಾ ಸಾಧಾರಣ ಮುಖ್ಯಾಂಶವಾದರೂ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಬರವಣಿಗೆಯನ್ನು ತರಲು ನಾನು ಪ್ರಯತ್ನಿಸುತ್ತೇನೆ. ಸದ್ಯದ ಡಿಜಿಟಲ್ ವಿದ್ಯಮಾನಗಳ ಬಗ್ಗೆ ನನ್ನನ್ನು ನಾನು ಕ್ರೂಢೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಇತರ ಲೇಖಕರ ವಿಷಯಗಳನ್ನು, ವಿಚಾರಗಳನ್ನು ಅನುಸರಿಸಿ ನನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಾ ನನ್ನ ಬರವಣಿಗೆಯ ಗುಣಮಟ್ಟವನ್ನು ಈಗಿನ ಓದುಗರ ಆಸಕ್ತಿಗೆ ತಕ್ಕಂತೆ ಕಾಪಾಡಿಕೊಳ್ಳುತ್ತೇನೆ. ಬಿಡುವಿನ ಸಮಯದಲ್ಲಿ ನನ್ನ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯುವ ಮೂಲಕ ಉತ್ತಮ ವೃತ್ತಿಪರತೆಗಾಗಿ ನನ್ನನ್ನು ನಾನು ಚೈತನ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತೇನೆ."... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ