ಆ್ಯಪ್ನಗರ

ನಿಮಗೆ ಗೊತ್ತಿರಲಿ ಬಿಪಿ ಇದ್ದವರಿಗೆ, ಇಂತಹ ಹಣ್ಣು-ತರಕಾರಿಗಳು ಬಹಳ ಒಳ್ಳೆಯದು!

How to Control High BP: ತಜ್ಞರ ಪ್ರಕಾರ, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸುಲಭವಾದ ಮಾರ್ಗವೆಂದರೆ ಆರೋಗ್ಯಕಾರಿಯಾದ ಆಹಾರ ಪದ್ಧತಿ ಹಾಗೂ ಆರೋಗ್ಯಕರವಾದ ಜೀವನಶೈಲಿಯನ್ನು ಅನುಸರಿಸಿಕೊಂಡು ಹೋದರೆ, ಈ ಕಾಯಿಲೆಯನ್ನು ಅಚ್ಚುಕಟ್ಟಾಗಿ ನಿಯಂತ್ರಿಸಬಹುದು.

Produced byಮನೋಹರ್ ಶೆಟ್ಟಿ | Vijaya Karnataka Web 17 Mar 2023, 5:36 pm
ವೈದ್ಯರೇ ಹೇಳುವ ಪ್ರಕಾರ ಮನುಷ್ಯನ ರಕ್ತಸಂಚಾರದಲ್ಲಿ ಯಾವತ್ತಿಗೂ ಕೂಡ ಏರುಪೇರು ಉಂಟಾಗಬಾರದು. ಒಂದು ವೇಳೆ ರಕ್ತದಲ್ಲಿ ಏರುಪೇರು ಉಂಟಾದರೆ, ಅಧಿಕ ರಕ್ತದೊತ್ತಡದಂತಹ ಕಾಯಿಲೆ, ಕಂಡು ಬರಲು ಶುರು ವಾಗುತ್ತದೆ. ಅದರಲ್ಲೂ ಈ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಮುಂದಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ!
Vijaya Karnataka Web these fruits and vegetables that help lower your blood pressure naturally
ನಿಮಗೆ ಗೊತ್ತಿರಲಿ ಬಿಪಿ ಇದ್ದವರಿಗೆ, ಇಂತಹ ಹಣ್ಣು-ತರಕಾರಿಗಳು ಬಹಳ ಒಳ್ಳೆಯದು!


ಹೀಗಾಗಿ ಒಂದು ವೇಳೆ ಈ ಸಮಸ್ಯೆ ಕಂಡು ಬಂದರೆ, ವೈದ್ಯರು ನೀಡಿರುವ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳು ವುದರ ಜೊತೆಗೆ, ಕಟ್ಟುನಿಟ್ಟಿನ ಆಹಾರ ಪದ್ಧತಿ ಹಾಗೂ ವ್ಯಾಯಾಮಗಳನ್ನು ಅನುಸರಿಸಿಕೊಂಡು ಬಂದರೆ, ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರ ಜೊತೆಗೆ ಇದರಿಂದ ಉಂಟಾಗಬಹುದಾದ ಅಪಾಯ ದಿಂದ ಕೂಡ ಪಾರಾಬಹುದು.

ಬನ್ನಿ ಇಂದಿನ ಲೇಖನದಲ್ಲಿ ಅಧಿಕ ರಕ್ತದೊತ್ತಡವನ್ನು ಕಂಟ್ರೋಲ್‌ನಲ್ಲಿಡಲು ನೆರವಾಗುವ ತರಕಾರಿಗಳು ಹಾಗೂ ಹಣ್ಣುಗಳ ಬಗ್ಗೆ ನೋಡೋಣ...

ಪೊಟ್ಯಾಸಿಯಂ ಅಂಶ ಹೆಚ್ಚಿರುವ ಹಣ್ಣು-ತರಕಾರಿಗಳನ್ನು ಸೇವನೆ ಮಾಡಬೇಕು

  • ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಅಧಿಕ ಪೊಟ್ಯಾಸಿಯಂ ಅಂಶ ಹೆಚ್ಚಿರುವ ಹಣ್ಣು- ತರಕಾರಿ ಗಳನ್ನು ಹೆಚ್ಚು ಸೇವನೆ ಮಾಡಬೇಕು.
  • ಇದಕ್ಕೆ ಪ್ರಮಖ ಕಾರಣ ಪೊಟ್ಯಾಸಿಯಂ ಅಂಶ, ನಮ್ಮ ದೇಹದಲ್ಲಿ ಇರುವ ಹೆಚ್ಚುವರಿ ಸೋಡಿಯಮ್ ಅಂಶ ವನ್ನು ನಿವಾರಣೆ ಮಾಡುತ್ತದೆ.
  • ಇನ್ನೂ ಪ್ರಮುಖವಾಗಿ ರಕ್ತನಾಳಗಳಲ್ಲಿ, ಒತ್ತಡ ಬೀಳದಂತೆ ತಡೆಯುತ್ತದೆ. ಇದರಿಂದ ರಕ್ತ ಪರಿಚಲನೆ ಸರಾಗವಾಗಿ ನಡೆಯಲು ಅನುಕೂಲವಾಗುತ್ತದೆ.
  • ಇನ್ನು ಪೊಟ್ಯಾಸಿಯಂ ಅಂಶ ಹೆಚ್ಚಿರುವ ಹಣ್ಣು ತರಕಾ ರಿಗಳ ಬಗ್ಗೆ ನೋಡುವುದಾದರೆ, ಹಸಿರೆಲೆ ಸೊಪ್ಪು ತರಕಾರಿಗಳು ಉದಾಹರಣೆಗೆ ಹೂಕೋಸು, ಎಲೆಕೋಸು, ಪಾಲಕ್ ಸೊಪ್ಪು, ಬ್ರೊಕೋಲಿ ಟೊಮೆಟೊ ಹಣ್ಣುಗಳು, ಆಲೂಗಡ್ಡೆ, ಸಿಹಿಗೆಣಸು ಇತ್ಯಾದಿಗಳು ನಿಮ್ಮ ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವ ಗುಣ ಲಕ್ಷಣ ಪಡೆದಿವೆ.
  • ಇನ್ನು ಹಣ್ಣುಗಳಾದ ಬಾಳೆಹಣ್ಣು, ಕಲ್ಲಂಗಡಿ ಹಣ್ಣು, ಕಿತ್ತಳೆ ಮತ್ತು ಏಪ್ರಿಕಾಟ್ ಹಣ್ಣುಗಳನ್ನು ಸೇವಿಸಬೇಕು.​

ಆರೋಗ್ಯ ಕಾಪಾಡುತ್ತೆ ಪೊಟಾಶಿಯಂ ಅಧಿಕವಿರುವ ಇಂತಹ ಆಹಾರಗಳು

ವಿಟಮಿನ್ ಸಿ ಅಂಶ ಹಣ್ಣು-ತರಕಾರಿಗಳನ್ನು ಹೆಚ್ಚು ಸೇವನೆ ಮಾಡಬೇಕು

  • ವಿಟಮಿನ್ ಸಿ ಅಂಶ ಹಣ್ಣು-ತರಕಾರಿಗಳಲ್ಲಿ ಆರೋಗ್ಯ ವೃದ್ಧಿಸುವ ಆಂಟಿಆಕ್ಸಿಡೆಂಟ್ ಅಂಶಗಳು ಯಥೇಚ್ಛವಾಗಿ ಕಂಡು ಬರುವುದರಿಂದ, ರಕ್ತನಾಳದ ಮೇಲೆ ಇರುವ ಒತ್ತಡವನ್ನು ನಿವಾರಣೆ ಮಾಡಿ, ಹೃದಯಕ್ಕೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ನೆರವಾಗುತ್ತದೆ
  • ಪ್ರಮುಖವಾಗಿ ಇಂತಹ ಆಹಾರಗಳು, ರಕ್ತದ ಒತ್ತಡವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ಹೃದಯಾಘಾತ ಸಾಧ್ಯತೆಯನ್ನು ತಪ್ಪಿಸುತ್ತದೆ.
  • ಉದಾಹರಣೆಗೆ ಹಣ್ಣುಗಳಾದ ಸೀಬೆಹಣ್ಣು, ಕಿತ್ತಳೆ, ಮೂಸಂಬಿ, ನೆಲ್ಲಿಕಾಯಿ, ದೊಣ್ಣೆಮೆಣಸು ಇಂತಹ ಆಹಾರಳನ್ನು ಹೆಚ್ಚಾಗಿ ಸೇವನೆ ಮಾಡಿದರೆ ಒಳ್ಳೆಯದು.​

ಈರುಳ್ಳಿ

  • ಈರುಳ್ಳಿ ಕೂಡ ಅಷ್ಟೇ, ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ಔಷಧೀಯ ಗುಣಲಕ್ಷಣಗಳನ್ನು ಒಳಗೊಂಡಿದೆ.
  • ಪ್ರಮುಖವಾಗಿ ಇದರಲ್ಲಿ ಕ್ವಾರ್ಸಿಟಿನ್ ಎಂಬ ಆಂಟಿ ಆಕ್ಸಿಡೆಂಟ್ ಅಂಶ ಯಥೇಚ್ಛವಾಗಿ ಕಂಡು ಬರುತ್ತದೆ.
  • ಇದು ವಿಶೇಷವಾಗಿ ರಕ್ತದ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯಕ್ಕೆ ನಿಲ್ಲುತ್ತದೆ. ಹೀಗಾಗಿ ಸಣ್ಣ ತುಂಡು ಈರುಳ್ಳಿಯನ್ನು ಸಣ್ಣಗೆ ಹಚ್ಚಿ, ಒಂದು ಕಪ್ ಮೊಸರಿನ ಜೊತೆಗೆ ಮಿಕ್ಸ್ ಮಾಡಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.
  • ನೆನಪಿಡಿ: ಒಳ್ಳೆಯ ಫಲಿತಾಂಶಕ್ಕಾಗಿ ಈರುಳ್ಳಿಯನ್ನು ಬೇಯಿಸಿ ಅಥವಾ ಎಣ್ಣೆಯಲ್ಲಿ ಫ್ರೈ ಮಾಡಿ ಸೇವನೆ ಮಾಡುವ ಬದಲು, ಹಸಿಯಾಗಿ ಅದನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.


ನೀವು ಹಸಿ ಈರುಳ್ಳಿ ತಿಂತೀರಾ? ಹಾಗಾದರೆ ಈ ವಿಷಯ ತಿಳಿಯಲೇಬೇಕು..

ಟೊಮೆಟೊ ಹಣ್ಣು

  • ರಕ್ತದ ಒತ್ತಡವನ್ನು ನಿಯಂತ್ರಣಕ್ಕೆ ತಂದುಕೊಳ್ಳಬೇಕು ಎಂದರೆ ವೈದ್ಯರು ನೀಡುವ ಬಿಪಿ ಮಾತ್ರೆಗಳನ್ನು ತೆಗೆದು ಕೊಳ್ಳುವುದರ ಜೊತೆಗೆ, ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಟೊಮೆಟೊ ಅನ್ನು ಕೂಡ ಬಳಸುವ ಅಭ್ಯಾಸ ಮಾಡಿಕೊಳ್ಳಬೇಕು.
  • ಇದರಿಂದ ಕೇವಲ ರಕ್ತದ ಒತ್ತಡ ಮಾತ್ರ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ, ಹೃದಯದ ಸಮಸ್ಯೆಗೆ ಕಾರಣ ವಾಗುವ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕೂಡ ಅಚ್ಚು ಕಟ್ಟಾಗಿ ನಿರ್ವಹಣೆಯಾಗುತ್ತದೆ.
  • ಒಳ್ಳೆಯ ಫಲಿತಾಂಶಕ್ಕೆ ಪ್ರತಿ ದಿನ ಉಪ್ಪು ಹಾಕದೆ ಟೊಮೆಟೊ ಹಣ್ಣಿನ ರಸವನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.

ಕೊನೆಯ ಮಾತು

  • ಮೊದಲೇ ಹೇಳಿದ ಹಾಗೆ ಆದಷ್ಟು ಪೊಟ್ಯಾಶಿಯಂ ಭರಿತ ಆಹಾರಗಳನ್ನು ಹೆಚ್ಚು ಸೇವನೆ ಮಾಡಿ
  • ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಂಸ್ಕ ರಿಸಿದ ಅಥವಾ ಪ್ಯಾಕೆಟ್ ಮಾಡಿದ ಆಹಾರ ಪದಾರ್ಥ ಗಳನ್ನು ಸೇವಿಸದೇ ಇರುವುದು ಒಳ್ಳೆಯದು.
  • ಉಪ್ಪು ಹಾಗೂ ಉಪ್ಪಿನಾಂಶ ಇರುವ ಆಹಾರಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿ.
  • ಟೀ-ಕಾಫಿಯಲ್ಲಿ ಕೆಫಿನ್ ಅಂಶವು ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ಇದನ್ನು ಆದಷ್ಟು ಮಿತ ಪ್ರಮಾಣದಲ್ಲಿ ಸೇವನೆ ಮಾಡಿ.
  • ಅದರಲ್ಲೂ ಕೆಫಿನ್ ಅಂಶ ಇರುವ ಪಾನೀಯವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಎಂಬುದನ್ನು ಸಾಬೀತು ಪಡಿಸಲಾಗಿದೆ.
  • ಇನ್ನು ಎಲ್ಲಾದಕ್ಕಿಂತ ಮುಖ್ಯವಾಗಿ, ಆರೋಗ್ಯಕರವಾದ ಆಹಾರ ಕ್ರಮಗಳನ್ನು ಅನುಸರಿಸುವುದು, ದಿನನಿತ್ಯ ವ್ಯಾಯಾಮ ಮಾಡುವುದು, ಒತ್ತಡರಹಿತ ಜೀವನಶೈಲಿ ಯನ್ನು ಅನುಸರಿಸುವುದು ಮುಂತಾದ ಉತ್ತಮ ಒಳ್ಳೆಯ ಅಭ್ಯಾಸಗಳನ್ನು ಅನುಸರಿಸಿಕೊಂಡು ಹೋದರೆ, ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು.

All Images source: Istock


ಲೇಖಕರ ಬಗ್ಗೆ
ಮನೋಹರ್ ಶೆಟ್ಟಿ
"ಕನ್ನಡದ ಲೇಖನ ಬರವಣಿಗೆಯಲ್ಲಿ 9 ವರ್ಷಗಳ ಸುದೀರ್ಘ ವೃತ್ತಿಪರ ಅನುಭವದೊಂದಿಗೆ ಭಾಷೆಯ ಅನುವಾದದೊಂದಿಗೆ ಪ್ರಾರಂಭಿಸಿ ಇಂದಿಗೆ ವಿವಿಧ ವಿಭಾಗಗಳಲ್ಲಿ ಅಂದರೆ ಜೀವನಶೈಲಿ, ಆರೋಗ್ಯ, ಸೌಂದರ್ಯ, ಸಂಬಂಧ, ಜಾಹೀರಾತು ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸಿದ ಹೆಮ್ಮೆ ನನ್ನದು. ಭಾಷೆಯ ಬಗೆಗಿನ ಹಿಡಿತ, ವಿಚಾರದ ಕುರಿತಾದ ಜ್ಞಾನಾಸಕ್ತಿಯೊಂದಿಗೆ ಓದುಗರಿಗೆ ಅತ್ಯುತ್ತಮ ವಿಷಯಗಳನ್ನೊಳಗೊಂಡ ಲೇಖನಗಳನ್ನು ನೀಡುವಲ್ಲಿ ನನಗೆ ತೃಪ್ತಿಯಿದೆ. ಅದು ವಿಚಾರವಿರುವ ಲೇಖನವಾದರೂ ಅಥವಾ ಸಾಧಾರಣ ಮುಖ್ಯಾಂಶವಾದರೂ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಬರವಣಿಗೆಯನ್ನು ತರಲು ನಾನು ಪ್ರಯತ್ನಿಸುತ್ತೇನೆ. ಸದ್ಯದ ಡಿಜಿಟಲ್ ವಿದ್ಯಮಾನಗಳ ಬಗ್ಗೆ ನನ್ನನ್ನು ನಾನು ಕ್ರೂಢೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಇತರ ಲೇಖಕರ ವಿಷಯಗಳನ್ನು, ವಿಚಾರಗಳನ್ನು ಅನುಸರಿಸಿ ನನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಾ ನನ್ನ ಬರವಣಿಗೆಯ ಗುಣಮಟ್ಟವನ್ನು ಈಗಿನ ಓದುಗರ ಆಸಕ್ತಿಗೆ ತಕ್ಕಂತೆ ಕಾಪಾಡಿಕೊಳ್ಳುತ್ತೇನೆ. ಬಿಡುವಿನ ಸಮಯದಲ್ಲಿ ನನ್ನ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯುವ ಮೂಲಕ ಉತ್ತಮ ವೃತ್ತಿಪರತೆಗಾಗಿ ನನ್ನನ್ನು ನಾನು ಚೈತನ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತೇನೆ."... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ