ಚಳಿಗಾಲದಲ್ಲಿ ಕಾಡುವ ಶೀತ-ಕೆಮ್ಮಿಗೆ, ಕರಿಮೆಣಸು-ಜೇನುತುಪ್ಪ ಬೆಸ್ಟ್!
ಚಳಿಗಾಲದಲ್ಲಿ ಎದುರಾಗುವ ಶೀತ ಹಾಗೂ ಕೆಮ್ಮಿನ ಹಲವು ಸಮಸ್ಯೆಗಳಿಗೆ ರಾಮಬಾಣ ಜೇನುತುಪ್ಪ ಮತ್ತು ಕಪ್ಪು ಮೆಣಸಿನಲ್ಲಿದೆ.
Vijaya Karnataka Web 6 Dec 2021, 11:20 am
ಸಾಧಾರಣವಾಗಿ ಚಳಿಗಾಲ ಎಂದರೆ ಬಹುತೇಕ ಎಲ್ಲರೂ ಹೆದರುತ್ತಾರೆ. ಎಂತಹ ಗಟ್ಟಿಮುಟ್ಟಾದ ಬಲಾಢ್ಯವಾದ ದೇಹ ಕೂಡ ಚಳಿಗೆ ನಡುಗಲೇ ಬೇಕು. ಅದರಲ್ಲೂ ಸೋಂಕಿನ ತೀವ್ರತೆ ಈಗ ಎಲ್ಲಾ ಕಡೆ ಇರುವುದರಿಂದ, ಯಾವ ಸಮಯದಲ್ಲಿ ಯಾವ ಕಾಯಿಲೆ ಬರುತ್ತದೆ ಎನ್ನುವ ಭಯ ಬೇರೆ ಕಾಡಲು ಪ್ರಾರಂಭವಾಗುತ್ತದೆ.
ಪ್ರಮುಖವಾಗಿ ಉಸಿರಾಟದ ತೊಂದರೆಗಳು, ನೆಗಡಿ, ಕೆಮ್ಮು, ಶೀತ ಕೊನೆಗೆ ಜ್ವರ ಇವೆಲ್ಲವೂ ಈ ಸಂದರ್ಭದಲ್ಲಿ ಮಾಮೂಲು. ಇಂತಹ ಸಂದರ್ಭದಲ್ಲಿ ನೈಸರ್ಗಿಕವಾದ ರೀತಿಯಲ್ಲಿ ಕಾಳುಮೆಣಸು ಮತ್ತು ಜೇನುತುಪ್ಪ ಸೇವನೆಗೆ ಆದ್ಯತೆ ಕೊಡುವುದು ಬಹಳ ಮುಖ್ಯ.
ಏಕೆಂದರೆ ನೈಸರ್ಗಿಕವಾದ ಪರಿಹಾರಗಳಲ್ಲಿ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಈ ಲೇಖನದಲ್ಲಿ ಶೀತದ ಹಲವಾರು ಸಮಸ್ಯೆಗಳಿಗೆ ಜೇನುತುಪ್ಪ ಮತ್ತು ಕಾಳುಮೆಣಸಿನ ಪ್ರಭಾವ ಹೇಗಿರಲಿದೆ ಎಂಬ ಬಗ್ಗೆ ತಿಳಿದುಕೊಳ್ಳೋಣ.
ಪ್ರಮುಖವಾಗಿ ಉಸಿರಾಟದ ತೊಂದರೆಗಳು, ನೆಗಡಿ, ಕೆಮ್ಮು, ಶೀತ ಕೊನೆಗೆ ಜ್ವರ ಇವೆಲ್ಲವೂ ಈ ಸಂದರ್ಭದಲ್ಲಿ ಮಾಮೂಲು. ಇಂತಹ ಸಂದರ್ಭದಲ್ಲಿ ನೈಸರ್ಗಿಕವಾದ ರೀತಿಯಲ್ಲಿ ಕಾಳುಮೆಣಸು ಮತ್ತು ಜೇನುತುಪ್ಪ ಸೇವನೆಗೆ ಆದ್ಯತೆ ಕೊಡುವುದು ಬಹಳ ಮುಖ್ಯ.
ಏಕೆಂದರೆ ನೈಸರ್ಗಿಕವಾದ ಪರಿಹಾರಗಳಲ್ಲಿ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಈ ಲೇಖನದಲ್ಲಿ ಶೀತದ ಹಲವಾರು ಸಮಸ್ಯೆಗಳಿಗೆ ಜೇನುತುಪ್ಪ ಮತ್ತು ಕಾಳುಮೆಣಸಿನ ಪ್ರಭಾವ ಹೇಗಿರಲಿದೆ ಎಂಬ ಬಗ್ಗೆ ತಿಳಿದುಕೊಳ್ಳೋಣ.
ಕೆಮ್ಮಿನ ವಿರುದ್ಧ ಜೇನುತುಪ್ಪ ಹಾಗೂ ಕಾಳುಮೆಣಸಿನ ಎಫೆಕ್ಟ್!
- ನೈಸರ್ಗಿಕವಾದ ರೀತಿಯಲ್ಲಿ ಜೇನುತುಪ್ಪ ನಮ್ಮ ಕೆಮ್ಮು, ಕಫ, ಗಂಟಲು ನೋವು ಇತ್ಯಾದಿಗಳನ್ನು ಸುಲಭವಾಗಿ ಹೋಗಲಾಡಿಸುತ್ತದೆ.
- ಜೇನುತುಪ್ಪದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಸಾಕಷ್ಟಿರುತ್ತವೆ. ಇವುಗಳು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಕೆಮ್ಮಿನ ಸಮಸ್ಯೆಯನ್ನು ದೂರ ಮಾಡುತ್ತವೆ.
ಇವುಗಳ ಬಳಕೆ ಹೇಗೆ...
- ಬಹುತೇಕ ಆಹಾರ ಪದಾರ್ಥಗಳಲ್ಲಿ ನಿರಂತರವಾಗಿ ಇವುಗಳ ಬಳಕೆ ವಿಶೇಷವಾಗಿ ಈಗಿನ ಚಳಿಗಾಲದ ಸಂದರ್ಭದಲ್ಲಿ ಮಾಡುವುದರಿಂದ ಹಲವು ಆರೋಗ್ಯ ಲಾಭಗಳಿವೆ.
- ಏಕೆಂದರೆ ಕೆಮ್ಮು ಹಾಗೂ ಶೀತವನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಇವುಗಳಲ್ಲಿ ಕಂಡುಬರುವ ವಿಟಮಿನ್ ಸಿ, ಫ್ಲೇವನಾಯ್ಡ್, ಆಂಟಿಆಕ್ಸಿಡೆಂಟ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಆರೋಗ್ಯದ ಮೇಲೆ ಅತ್ಯುತ್ತಮ ಪ್ರಭಾವ ಬೀರುತ್ತವೆ.
- ಎದೆಯಲ್ಲಿ ಕಟ್ಟಿದ ಕಫ ಕರಗಿಸುವಲ್ಲಿ ಮತ್ತು ಉಸಿರಾಟದ ತೊಂದರೆಯನ್ನು ಸರಿಪಡಿಸುವಲ್ಲಿ ಇವುಗಳ ಪಾತ್ರ ತುಂಬಾ ದೊಡ್ಡದಿರುತ್ತದೆ.
ಜೇನುತುಪ್ಪ ಹಾಗೂ ಕಾಳುಮೆಣಸನ್ನು ಬಳಕೆ ಮಾಡುವುದು ಹೇಗೆ?
ಕಾಳು ಮೆಣಸು ಹಾಗೂ ಜೇನುತುಪ್ಪವನ್ನು ಮಕ್ಕಳಿಂದ ಹಿಡಿದು ವಯೋವೃದ್ದರವರೆಗೆ ಕೆಮ್ಮು ಹಾಗೂ ಶೀತ ಪರಿಹಾರ ವಿಚಾರಕ್ಕೆ ಸಂಬಂಧಪಟ್ಟಂತೆ ಬಳಸಲಾಗುತ್ತದೆ. ಈ ಕೆಳಗಿನ ವಿಧಾನಗಳಲ್ಲಿ ಇವುಗಳ ಉಪಯೋಗ ಪಡೆದುಕೊಳ್ಳಬಹುದು.
ಕಾಳುಮೆಣಸಿನ ಪುಡಿ ಮತ್ತು ಜೇನುತುಪ್ಪ
- ಕಡಿಮೆ ಉರಿಯಲ್ಲಿ ಐದರಿಂದ ಆರು ಕಪ್ಪು ಮೆಣಸಿನ ಕಾಳುಗಳನ್ನು ಹುರಿದು ತಣ್ಣಗೆ ಮಾಡಿ ಆನಂತರ ಅವುಗಳನ್ನು ಪುಡಿಮಾಡಿಕೊಳ್ಳಿ.
- ಇದರ ಸ್ವಲ್ಪ ಭಾಗವನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಜೇನು ತುಪ್ಪ ಹಾಕಿ ಮಿಶ್ರಣ ಮಾಡಿ.
- ಇದನ್ನು ಸ್ವಲ್ಪ ಪ್ರಮಾಣದಲ್ಲಿ ನಿಯಮಿತವಾಗಿ ಪ್ರತಿ ದಿನ ಸೇವನೆ ಮಾಡುತ್ತಾ ಬನ್ನಿ. ಬೆಳಗಿನ ಸಮಯದಲ್ಲಿ ಉಪಹಾರ ಆದ ನಂತರದಲ್ಲಿ ಇದನ್ನು ತಿನ್ನುವುದರಿಂದ ಹೆಚ್ಚು ಪರಿಹಾರವಿದೆ ಎಂದು ಹೇಳಬಹುದು.
- ವಿಶೇಷವಾಗಿ ಶೀತ ಹಾಗೂ ಗಂಟಲು ನೋವಿನ ಪರಿಹಾರಕ್ಕೆ ಇದು ರಾಮಬಾಣ.
ಕಾಳುಮೆಣಸಿನ ಚಹಾ
- ಸಾಧಾರಣ ಚಹಾ ಕುಡಿಯುವ ಸಂದರ್ಭದಲ್ಲಿ ಅದಕ್ಕೆ ಕಪ್ಪು ಕಾಳುಮೆಣಸಿನ ಪುಡಿಯನ್ನು ಹಾಕಿಕೊಂಡು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಕೆಮ್ಮು ಹಾಗೂ ಕಫ ಸಮಸ್ಯೆ ದೂರವಾಗುತ್ತದೆ.
- ಇದಕ್ಕಾಗಿ ನೀವು ಚಹ ತಯಾರು ಮಾಡುವ ಸಂದರ್ಭದಲ್ಲಿ ಚಹಾಪುಡಿ ಜೊತೆಗೆ ಕಾಳುಮೆಣಸಿನ ಪುಡಿಯನ್ನು ಜೊತೆಗೆ ಸೇರಿಸಿ ಐದು ನಿಮಿಷ ಚೆನ್ನಾಗಿ ಕುದಿಸಿ ಆನಂತರ ಆರಿಸಿ ಉಗುರು ಬೆಚ್ಚಗಿನ ತಾಪಮಾನ ಇರುವಾಗ ಸ್ವಲ್ಪ ಜೇನುತುಪ್ಪ ಬೆರೆಸಿ ಸೇವನೆ ಮಾಡಿ. ಚಳಿಗಾಲಕ್ಕೆ ಇದಕ್ಕಿಂತ ಉತ್ತಮ ಪರಿಹಾರ ಮತ್ತೊಂದಿಲ್ಲ ಎಂಬುದನ್ನು ಜ್ಞಾಪಕದಲ್ಲಿಡಿ.