ಆ್ಯಪ್ನಗರ

ಹೊಟ್ಟೆ ಬೊಜ್ಜು ಕರಗಿಸುವ ಕರಿಬೇವು

ಆಯುರ್ವೇದ ಪ್ರಕಾರ ಒಂದು ಹಿಡಿ ಕರಿಬೇವಿನ ಎಲೆಯನ್ನು ಬೆಳಗ್ಗೆ ತಿನ್ನುವುದರಿಂದ ಮಧುಮೇಹ, ಒಬೆಸಿಟಿ, ಕೊಲೆಸ್ಟ್ರಾಲ್‌ ಕಾಯಿಲೆಯನ್ನು ನಿಯಂತ್ರಿಸಬಹುದು.

TIMESOFINDIA.COM 5 Sep 2020, 7:41 pm
ತೂಕ ಇಳಿಕೆಗೆ ಟ್ರೈ ಮಾಡುತ್ತಿದ್ದೀರಾ? ಹಾಗಾದರೆ ಕರಿಬೇವಿನ ಎಲೆಯೊಮ್ಮೆ ಟ್ರೈ ಮಾಡಿ ನೋಡಿ. ಕರಿಬೇವಿನ ಎಲೆ ಅಡುಗೆಗೆ ರುಚಿ ಸೇರಿಸುವುದು ಮಾತ್ರವಲ್ಲ ಆಕರ್ಷಕ ಬಾಡಿಶೇಪ್‌ ಪಡೆಯಬಹುದು.
Vijaya Karnataka Web curry leaves


ಆಯುರ್ವೇದ ಏನು ಹೇಳುತ್ತದೆ?
ಆಯುರ್ವೇದ ಪ್ರಕಾರ ಒಂದು ಹಿಡಿ ಕರಿಬೇವಿನ ಎಲೆಯನ್ನು ಬೆಳಗ್ಗೆ ತಿನ್ನುವುದರಿಂದ ಮಧುಮೇಹ, ಒಬೆಸಿಟಿ, ಕೊಲೆಸ್ಟ್ರಾಲ್‌ ಕಾಯಿಲೆಯನ್ನು ನಿಯಂತ್ರಿಸಬಹುದು.


ಕರಿಬೇವು ತಿಂದರೆ ದೇಹದಲ್ಲಿ ಚಯಪಚಯ ಕ್ರಿಯೆ ಸರಿಯಾಗಿ ನಡೆಯುವುದು. ಇದರಿಂದ ದೇಹದಲ್ಲಿ ಬೊಜ್ಜು ಸಂಗ್ರಹವಾಗುವುದು ಕಡಿಮೆಯಾಗುವುದು. ಆಗಾಗ ತಲೆಸುತ್ತು ಬರುತ್ತಿದ್ದರೆ ಕರಿಬೇವು ತಿನ್ನುವುದು ಒಳ್ಳೆಯದು.

ತೂಕ ಇಳಿಕೆಗೆ ಕರಿಬೇವನ್ನು ಏಕೆ ತಿನ್ನಬೇಕು?
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿಕರಿಬೇವನ್ನು ಹಾಗೆ ತಿನ್ನಬಹುದು. ಹಾಗೆ ತಿನ್ನಲು ಕಷ್ಟವಾದರೆ ಈ ವಿಧಾನ ಪಾಲಿಸಿ.
* ಒಂದು ಲೋಟ ನೀರನ್ನು ಕುದಿಸಿ, ಅದಕ್ಕೆ 10-15 ಕರಿಬೇವು ಹಾಕಿ ಸಿಮ್‌ನಲ್ಲಿ ಸ್ವಲ್ಪ ಹೊತ್ತು ಕುದಿಸಿ, ಉರಿಯಿಂದ ಇಳಿಸಿ.
* ನೀರಿನ ಬಿಸಿ ಸ್ವಲ್ಪ ಕಡಿಮೆಯಾದ ಮೇಲೆ ಕುಡಿಯಿರಿ. ಈ ರೀತಿ ಪ್ರತಿದಿನ ಮಾಡಿದರೆ ಹೊಟ್ಟೆ ಬೊಜ್ಜು ಕರಗುವುದು.
ಬೇಕಿದ್ದರೆ ಸ್ವಲ್ಪ ನಿಂಬೆರಸ ಸೇರಿಸಬಹುದು. ಇದರ ಫಲಿತಾಂಶ ಗೊತ್ತಾಗಲು ಒಂದು ತಿಂಗಳಾದರು ಹೀಗೆ ಮಾಡಬೇಕು.


ಮಧುಮೇಹಿಗಳಿಗೆ ಒಳ್ಳೆಯದು
ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ಕರಿಬೇವು ತುಂಬಾ ಸಹಾಯ ಮಾಡುತ್ತದೆ. ಮಧುಮೇಹಿಗಳು ತಮ್ಮ ಆಹಾರಕ್ರಮದಲ್ಲಿ ಕರಿಬೇವನ್ನು ಸೇರಿಸುವುದರಿಂದ ಆರೋಗ್ಯ ಕಾಪಾಡಬಹುದು. ಕರಿ ಬೇವಿನ ಸೊಪ್ಪಿನಲ್ಲಿ ವಿಟಮಿನ್ ' ಸಿ ' ಮತ್ತು ಬೀಟಾ - ಕ್ಯಾರೋಟಿನ್ ಅಂಶಗಳಿದ್ದು, ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿ ಉಪಯೋಗಿಸಲ್ಪಡುತ್ತದೆ. ಯಾವುದೇ ಆಂಗ್ಲ ಔಷಧಿಗಳಿಗಿಂತ ಮನುಷ್ಯನ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಅಂಶದ ಮಟ್ಟವನ್ನು ನಿಯಂತ್ರಣದಲ್ಲಿಟ್ಟು ಟೈಪ್ - 2 ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಕರಿಬೇವಿನ ಸೊಪ್ಪು ನಿಯಂತ್ರಣದಲ್ಲಿಡುತ್ತದೆ ಎಂದರೆ ಇದರ ಅದ್ಭುತ ಶಕ್ತಿಯ ಬಗ್ಗೆ ನೀವೇ ಒಮ್ಮೆ ಯೋಚಿಸಬೇಕು.

ವೀಳ್ಯದ ಎಲೆ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ

ಕರಿ ಬೇವಿನ ಸೊಪ್ಪಿನಲ್ಲಿ ವಿಟಮಿನ್, ಬೀಟಾ - ಕ್ಯಾರೋಟಿನ್ ಮತ್ತು ಕಾರ್ಬಾಝೋಲ್ ಅಲ್ಕಲಾಯ್ಡ್ ಗಳೆಂಬ ಆಂಟಿ - ಆಕ್ಸಿಡೆಂಟ್ ಗಳಿದ್ದು ಮನುಷ್ಯನ ದೇಹದಲ್ಲಿ ಫ್ರೀ ರಾಡಿಕಲ್ ಗಳಿಂದ ಆಕ್ಸಿಡೇಟೀವ್ ಡ್ಯಾಮೇಜ್ ಉಂಟು ಮಾಡುವ ಹಲವಾರು ಕಾಯಿಲೆಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಟೈಪ್ - 2 ಮಧುಮೇಹದ ಪ್ರಭಾವವನ್ನು ತಡೆಯುತ್ತದೆ. ಕರಿಬೇವಿನ ಎಲೆಗಳು ಮನುಷ್ಯನ ದೇಹದ ರಕ್ತ ಸಂಚಾರಕ್ಕೆ ಗ್ಲೂಕೋಸ್ ಅಂಶ ಸೇರಿಕೊಳ್ಳುವುದನ್ನು ನಿಯಂತ್ರಣ ಮಾಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ