ಆ್ಯಪ್ನಗರ

ನಾಲ್ಕೇ ನಾಲ್ಕು ನೆನೆಸಿಟ್ಟ 'ಒಣದ್ರಾಕ್ಷಿ ಸೇವಿಸಿ' ಆರೋಗ್ಯವಾಗಿರುವಿರಿ

ಒಣಹಣ್ಣುಗಳಲ್ಲಿರುವ ಪ್ರಯೋಜನಗಳ ಬಗ್ಗೆ ವಿಷಯ ಬಂದಾಗ, ನಾವೆಲ್ಲಾ ಬಾದಾಮಿ, ಗೋಡಂಬಿ, ಪಿಸ್ತಾ ಇತ್ಯಾದಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ, ಒಣದ್ರಾಕ್ಷಿಯನ್ನು ಮಾತ್ರ ಮರೆತೇ ಬಿಡುತ್ತೇವೆ! ಆದರೆ ಇದರಲ್ಲಿ ಇರುವಂತಹ ಆರೋಗ್ಯ ಲಾಭಗಳ ಬಗ್ಗೆ ತಿಳಿದರೆ ಆಗ ಖಂಡಿತವಾಗಿಯೂ ಒಣದ್ರಾಕ್ಷಿಯನ್ನು ತಪ್ಪದೇ ಸೇವಿಸುವಿರಿ

Vijaya Karnataka Web 9 Nov 2021, 12:12 pm
ದೇಹವು ಆರೋಗ್ಯವಂತ ಹಾಗೂ ಫಿಟ್ ಆಗಿದ್ದರೆ ಆಗ ಯಾವುದೇ ಕೆಲಸವನ್ನು ಮಾಡಬಹುದು. ಒಂದು ವೇಳೆ ದೇಹವು ಫಿಟ್ ಇಲ್ಲದೆ ಇದ್ದರೆ ಆಗ ಹಲವಾರು ರೀತಿಯ ಅನಾರೋಗ್ಯವು ಕಾಡುವುದು. ಇಂದಿನ ದಿನಗಳಲ್ಲಿ ಹೆಚ್ಚಿನವರು ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು ತುಂಬಾ ಶ್ರಮ ವಹಿಸುವರು. ಹೀಗಾಗಿ ಫಿಟ್ ದೇಹ ಪಡೆಯಲು ಪ್ರತಿನಿತ್ಯ ವ್ಯಾಯಾಮ ಹಾಗೂ ಆಹಾರ ಕ್ರಮವನ್ನು ಸರಿಯಾಗಿ ಪಾಲಿಸಿಕೊಂಡು ಹೋಗಬೇಕು. ಆಗ ದೇಹವು ಫಿಟ್ ಆಗಿರುತ್ತದೆ.
Vijaya Karnataka Web Timesof india 1


ಇನ್ನು ನೈಸರ್ಗಿಕದತ್ತವಾಗಿರುವಂತಹ ಕೆಲವು ಆಹಾರಗಳನ್ನು ಸೇವನೆ ಮಾಡಿದರೆ ಅದರಿಂದ ನಮ್ಮ ದೇಹವು ಫಿಟ್ ಆಗಿರುತ್ತದೆ. ಮುಖ್ಯವಾಗಿ ನಾವು ಸಿಹಿ ತಿನಿಸುಗಳು ಹಾಗೂ ಇತರ ಕೆಲವೊಂದು ಖಾದ್ಯ, ಐಸ್ ಕ್ರಿಮ್ ಗಳಲ್ಲಿ ಬಳಸುವಂತಹ ಒಣ ದ್ರಾಕ್ಷಿಯು ನಮ್ಮ ಆರೋಗ್ಯಕ್ಕೆ ಅತೀ ಉತ್ತಮ.

ಮುಖ್ಯವಾಗಿ ಒಣದ್ರಾಕ್ಷಿಯಲ್ಲಿ ಕಬ್ಬಿನಾಂಶ, ಪೊಟಾಶಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ನಾರಿನಾಂಶ ಆಗಾಧ ಪ್ರಮಾಣದಲ್ಲಿದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರೇ ಹೇಳುತ್ತಾರೆ. ಇನ್ನು ಒಣದ್ರಾಕ್ಷಿಯಲ್ಲಿರುವ ಹೆಚ್ಚಿನ ಮಟ್ಟದ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಸಿಗಬೇಕೆಂದರೆ, ಪ್ರತಿದಿನ ಮಲಗುವ ಮುನ್ನ ನಾಲ್ಕರಿಂದ ಐದು ಒಣದ್ರಾಕ್ಷಿಯನ್ನು ರಾತ್ರಿ ಅರ್ಧ ಕಪ್ ನೀರಿನಲ್ಲಿ ನೆನಸಿಟ್ಟು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸಾಕು

ಖಿನ್ನತೆ ನಿವಾರಕ ದ್ರಾಕ್ಷಿ

ನೈಸರ್ಗಿಕ ಸಕ್ಕರೆ ಅಂಶವನ್ನು ಒಳಗೊಂಡಿರುವಂತಹ ಒಣದ್ರಾಕ್ಷಿಯು ನಿಮ್ಮಲ್ಲಿ ಚುರುಕುತನ ಮತ್ತು ಶಕ್ತಿ ತುಂಬಿರುವಂತೆ ಮಾಡುವುದು. ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದ ಕಬ್ಬಿನಾಂಶ, ಪೊಟಾಶಿಯಂ ಮತ್ತು ಕ್ಯಾಲ್ಸಿಯಂ ಇದ್ದು, ನಿಮ್ಮನ್ನು ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಆಗಿಡುತ್ತದೆ.

ತೂಕ ಇಳಿಸಿಕೊಳ್ಳಲು ಸಹಕಾರಿ
ನೀವು ಬೊಜ್ಜು ದೇಹವನ್ನು ಹೊಂದಿದ್ದರೆ, ಎಲ್ಲಾ ರೀತಿಯ ಶ್ರಮ ವಹಿಸಿಯೂ ತೂಕ ಇಳಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ಆಗ ನೀವು ನೆನೆಸಿರುವ ಒಣ ದ್ರಾಕ್ಷಿ ಸೇವಿಸಬೇಕು. ಇದರಲ್ಲಿ ನೈಸರ್ಗಿಕ ಸಕ್ಕರೆ ಅಂಶವಿದೆ ಮತ್ತು ಇದು ಬಯಕೆ ಕಡಿಮೆ ಮಾಡಿ ಹೆಚ್ಚುವರಿ ಕ್ಯಾಲರಿ ಸೇರ್ಪಡೆ ಯಾಗದಂತೆ ತಡೆಯುವುದು. ಆದರೆ ನೀವು ಇದನ್ನು ಅತಿಯಾಗಿ ಸೇವಿಸಬೇಡಿ ಮತ್ತು ತಜ್ಞರು ಹೇಳಿದಷ್ಟೇ ಸೇವಿಸಿ. ತೂಕ ಇಳಿಸಿಕೊಳ್ಳಬೇಕಾದರೆ ನೀವು ಒಣ ದ್ರಾಕ್ಷಿ ತಿಂದರೆ ಆಗ ದೀರ್ಘ ಕಾಲದ ತನಕ ಹೊಟ್ಟೆಯು ತುಂಬಿದಂತೆ ಇರುವುದು.

ಕೇವಲ 6 ತಿಂಗಳಲ್ಲಿ 20 ಕೆ.ಜಿ ತೂಕ ಇಳಿಸಿಕೊಂಡ ಮಹಿಳೆಯ ರಿಯಲ್ ಸ್ಟೋರಿ

ಜೀರ್ಣಕ್ರಿಯೆ ಸರಾಗಗೊಳಿಸುವುದು
ಒಣ ದ್ರಾಕ್ಷಿಯಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ ಮತ್ತು ಇದು ನೈಸರ್ಗಿಕ ವಿರೇಚಕವಾಗಿ ಕೆಲಸ ಮಾಡುವುದು. ನೀರಿನಲ್ಲಿ ನೆನೆಸಿದ ವೇಳೆ ಇದು ಅದ್ಭುತವಾಗಿ ಕೆಲಸ ಮಾಡುವುದು. ಇದರಿಂದ ಮಲಬದ್ಧತೆ ಇದ್ದರೆ ಆಗ ನೆನೆಸಿದ ದ್ರಾಕ್ಷಿ ಸೇವಿಸಿ ಮತ್ತು ಕರುಳಿನ ಕ್ರಿಯೆಯನ್ನು ಇದು ಸರಾಗವಾಗಿಸುವುದು. ನೆನೆಸಿದ ದ್ರಾಕ್ಷಿ ಸೇವಿಸಿದರೆ ಆಗ ಜೀರ್ಣ ಕ್ರಿಯೆಯು ಸುಧಾರಣೆ ಆಗುವುದು.

ರಕ್ತದೊತ್ತಡ ನಿಯಂತ್ರಣದಲ್ಲಿ ಇಡುವುದು
ರಕ್ತದೊತ್ತಡ ಕಡಿಮೆ ಮಾಡಿಕೊಳ್ಳಬೇಕು ಎಂದು ನಿಮಗನಿಸುತ್ತಿದ್ದರೆ ಆಗ ನೀವು ನೆನೆಸಿರುವಂತಹ ಒಣದ್ರಾಕ್ಷಿ ಸೇವಿಸಿ. ಅಧಿಕ ಉಪ್ಪು ಸೇವಿಸಿರುವ ಪರಿಣಾಮವಾಗಿ ರಕ್ತದೊತ್ತಡವು ಹೆಚ್ಚಾಗುವುದು. ಇಂತಹ ವೇಳೆ ಒಣ ದ್ರಾಕ್ಷಿ ಪರಿಣಾಮಕಾರಿ. ಒಣ ದ್ರಾಕ್ಷಿಯಲ್ಲಿ ಪೊಟಾಶಿಯಂ ಅಂಶವಿದೆ ಮತ್ತು ಇದು ದೇಹದಲ್ಲಿ ಉಪ್ಪಿನ ಅಂಶವನ್ನು ಸಮತೋಲನದಲ್ಲಿ ಇಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದು.

ಬಲಿಷ್ಠ ಮೂಳೆಗಳ ನಿರ್ಮಾಣಕ್ಕೆ ನೆರವಾಗುವುದು

ಮೂಳೆಗಳ ನಿರ್ಮಾಣಕ್ಕೆ ಬೇಕಾಗಿರುವಂತಹ ಬೊರೊನ್ ಎನ್ನುವ ಅಂಶವು ಒಣ ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಮೂಳೆಗಳಿಗೆ ಬಲ ನೀಡಲು ಬೇಕಾಗಿರುವಂತಹ ಕ್ಯಾಲ್ಸಿಯಂ ಕೂಡ ಒಣದ್ರಾಕ್ಷಿಯಲ್ಲಿದೆ. ನೆನೆಸಿದ ಒಣದ್ರಾಕ್ಷಿ ತಿಂದರೆ ಆಗ ಈ ಪೋಷಕಾಂಶಗಳನ್ನು ದೇಹವು ಬೇಗನೆ ಹೀರಿಕೊಳ್ಳುವುದು ಮತ್ತು ಮೂಳೆಗಳ ಖನಿಜಾಂಶ ಸಾಂದ್ರತೆಯನ್ನು ಸುಧಾರಿಸುವುದು. ಅಸ್ಥಿರಂಧ್ರತೆ ಮತ್ತು ಇತರ ಕೆಲವು ಸಮಸ್ಯೆಗಳಿಂದ ಇದು ನಿಮ್ಮನ್ನು ದೂರವಿಡುವುದು.

ಬಾಯಿಯ ದುರ್ವಾಸನೆ ನಿವಾರಿಸುವುದು
ಬಾಯಿಯ ದುರ್ವಾಸನೆಯಿಂದಾಗಿ ನಿಮಗೆ ದೊಡ್ಡ ಸಮಸ್ಯೆಯಾಗಿದೆಯಾ? ಇದು ನಿಮಗೆ ನಾಲ್ಕು ಜನರ ಮುಂದೆ ಮುಜುಗರ ಉಂಟು ಮಾಡುತ್ತಿದೆಯಾ? ಹಾಗಾದರೆ ನೀವು ಒಣದ್ರಾಕ್ಷಿ ಸೇವಿಸ ಬೇಕು. ಒಣದ್ರಾಕ್ಷಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯ ಸ್ವಚ್ಛತೆ ಕಾಪಾಡಲು ನೆರವಾಗುವುದು ಮತ್ತು ಬಾಯಿಯ ದುರ್ವಾಸನೆ ತಡೆಯುವುದು. ರಾತ್ರಿ ವೇಳೆ ನೆನಸಲು ಇಟ್ಟ ಒಣ ದ್ರಾಕ್ಷಿಯ ನೀರನ್ನು ಕೂಡ ಕುಡಿಯಬಹುದು. ನೆನೆಸಿರುವ ವೇಳೆ ಇದರಲ್ಲಿ ಪೋಷಕಾಂಶಗಳು ಮತ್ತಷ್ಟು ಹೆಚ್ಚಾಗುವುದು ಮತ್ತು ಒಣ ದ್ರಾಕ್ಷಿ ನೆನೆಸಿಟ್ಟ ನೀರನ್ನು ಕುಡಿದರೆ ಅದರಿಂದ ಸಿಗುವ ಲಾಭಗಳ ಬಗ್ಗೆ ಕೂಡ ನೀವು ತಿಳಿಯಬಹುದು. ಅದು ಯಾವುದು ಎಂದು ನೀವು ತಿಳಿಯಿರಿ.

ಮನೆ ಮೆಡಿಸಿನ್‌: ಕಾಯಿಲೆ ನಿವಾರಣೆಗೆ ಒಣ ದ್ರಾಕ್ಷಿ

ನಿರ್ವಿಷಗೊಳಿಸುವುದು
ದೇಹವನ್ನು ನಿರ್ವಿಷಗೊಳಿಸುವಲ್ಲಿ ಒಣದ್ರಾಕ್ಷಿ ನೆನೆಸಲು ಹಾಕಿದ ನೀರು ತುಂಬಾ ಪ್ರಮುಖ ಪಾತ್ರ ವಹಿಸುವುದು. ಇದು ಯಕೃತ್ ಮತ್ತು ಕರುಳನ್ನು ನಿರ್ವಿಷಗೊಳಿಸುವುದು. ಆಯುರ್ವೇದದ ಪ್ರಕಾರ ಇದು ಅತ್ಯುತ್ತಮವಾಗಿ ದೇಹವನ್ನು ನಿರ್ವಿಷಗೊಳಿಸುವ ಕೆಲಸ ಮಾಡುವುದು.

ನೆನೆಸಲು ಹಾಕಿದ ಒಣದ್ರಾಕ್ಷಿಯ ನೀರಿನಲ್ಲಿ ಇರುವಂತಹ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಮತ್ತು ಆಹಾರದ ನಾರಿನಾಂಶವು ಇದರಲ್ಲಿನ ನಿರ್ವಿಷಗೊಳಿಸುವ ಕಾರ್ಯಕ್ಕೆ ನೆರವಾಗುವುದು. ಆಂಟಿಆಕ್ಸಿಡೆಂಟ್ ಯಕೃತ್ ಗೆ ತುಂಬಾ ಒಳ್ಳೆಯದು ಮತ್ತು ಆರೋಗ್ಯ ಕಾಪಾಡುವುದು. ಅದೇ ರೀತಿಯಾಗಿ ಆಹಾರದ ನಾರಿನಾಂಶವು ಮಲವನ್ನು ಸರಾಗವಾಗಿ ಸಾಗಿಸಲು ಕರುಳಿಗೆ ನೆರವಾಗುವುದು. ಇನ್ನು ನೆನೆಸಿದ ಒಣ ದ್ರಾಕ್ಷಿಯಂತೆಯೇ, ನೆನೆಸಲು ಹಾಕಿದ ನೀರು ಕೂಡ ಅಷ್ಟೇ ಅರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ.. ಮಾಹಿತಿಗಾಗಿ ಮುಂದೆ ಓದಿ

ಅಧಿಕ ರಕ್ತದೊತ್ತಡ ಸಮಸ್ಯೆಯ ನಿಯಂತ್ರಣಕ್ಕೆ ಆಯುರ್ವೇದ ಚಿಕಿತ್ಸೆ

ರಕ್ತದೊತ್ತಡ ಸಮತೋಲನದಲ್ಲಿಡುವುದು
ಒಣದ್ರಾಕ್ಷಿ ಮತ್ತು ಅದನ್ನು ನೆನೆಸಿದ ನೀರು ಕುಡಿದರೆ ಆಗ ರಕ್ತದೊತ್ತಡವನ್ನು ಸಮತೋಲನದಲ್ಲಿ ಇಟ್ಟುಕೊಳ್ಭಹುದು. ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದ ನಾರಿನಾಂಶ, ಪೊಟಾಶಿಯಂ, ಪೈಥೋನ್ಯೂಟ್ರಿಯಂಟ್ಸ್ ಮತ್ತು ಆಂಟಿಆಕ್ಸಿಡೆಂಟ್ ಗಳು ಇವೆ ಮತ್ತು ಇದೆಲ್ಲವೂ ರಕ್ತದೊತ್ತಡ ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು.

ಕೊಲೆಸ್ಟ್ರಾಲ್ ಕಡಿಮೆ ಮಾಡುವುದುನೆನೆಸಿದ ಒಣದ್ರಾಕ್ಷಿ ಮತ್ತು ಅದರ ನೀರಿನಿಂದ ಸಿಗುವ ಮತ್ತೊಂದು ಲಾಭವೆಂದರೆ ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು. ಆಕ್ಸಿಡೀಕರಿಸಿದ ಕಡಿಮೆ ಸಾಂದ್ರತೆಯ ಕೊಲೆಸ್ಟ್ರಾಲ್ ದೇಹದಲ್ಲಿದ್ದರೆ ಆಗ ಅದು ಹೃದಯಕ್ಕೆ ತುಂಬಾ ಅಪಾಯ ತಂದೊಡ್ಡಬಹುದು ಮತ್ತು ಅಪಧಮನಿಯ ಹಲವಾರು ಕಾಯಿಲೆಗಳಿಗೆ ಇದು ಕಾರಣವಾಗಬಹುದು. ಒಣದ್ರಾಕ್ಷಿ ಮತ್ತು ದ್ರಾಕ್ಷಿ ನೀರು ಇದೆಲ್ಲದರಿಂದ ನಿಮ್ಮನ್ನು ಕಾಪಾಡುವುದು. ನೀವು ನೆನೆಸಿದ ಒಣದ್ರಾಕ್ಷಿ ಜತೆಗೆ ಅದರ ನೀರನ್ನು ಕೂಡ ಕುಡಿಯಿರಿ ಮತ್ತು ಆರೋಗ್ಯವಾಗಿರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ