ಆ್ಯಪ್ನಗರ

ನಿದ್ರೆ ಬರುತ್ತಿಲ್ಲವೇ? ಜೀರಿಗೆ ಚಹಾ, ಬೆಚ್ಚಗಿನ ಹಾಲು, ಬಾಳೆಹಣ್ಣು ಸೇವಿಸಿ ನೋಡಿ...

ರಾತ್ರಿಯ ಸಮಯದಲ್ಲಿ ಸರಿಯಾಗಿ ನಿದ್ರೆ ಮಾಡದೆ ಹೋದರೆ ಹಲವಾರು ಆರೋಗ್ಯ ತೊಂದರೆಗಳು. ಆದರೆ ಸುಲಭವಾಗಿ ಇದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಬಹುದು.

Vijaya Karnataka Web 27 Mar 2021, 12:18 pm
ನಾವು ತಯಾರು ಮಾಡುವ ಅಡುಗೆ ಸ್ವಾದವನ್ನು ಹೆಚ್ಚು ಮಾಡಲು ನಾವು ಅನೇಕ ಮಸಾಲೆ ಪದಾರ್ಥಗಳನ್ನು ಬಳಕೆ ಮಾಡುತ್ತೇವೆ. ಅದರಲ್ಲಿ ಜೀರಿಗೆ ಕೂಡ ಒಂದು. ಜೀರಿಗೆ ಕೇವಲ ಆಹಾರದ ರುಚಿಯನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ ತನ್ನಲ್ಲಿ ಅನೇಕ ಔಷಧೀಯ ಪ್ರಭಾವಗಳನ್ನು ಒಳಗೊಂಡಿದೆ.
Vijaya Karnataka Web warm milk jeera seeds and other natural ingredients that can help you get rid form insomnia
ನಿದ್ರೆ ಬರುತ್ತಿಲ್ಲವೇ? ಜೀರಿಗೆ ಚಹಾ, ಬೆಚ್ಚಗಿನ ಹಾಲು, ಬಾಳೆಹಣ್ಣು ಸೇವಿಸಿ ನೋಡಿ...


ಅನೇಕ ಆರೋಗ್ಯದ ಲಾಭಗಳು ಸಿಗುತ್ತವೆ ಎಂದು ಜೀರಿಗೆಯಿಂದ ನಾವು ನಿರೀಕ್ಷೆ ಮಾಡಬಹುದು. ಉದಾಹರಣೆಗೆ ನಮಗೆ ಎದುರಾಗುವ ಅಜೀರ್ಣತೆ, ಮಲಬದ್ಧತೆ, ನಿದ್ರಾಹೀನತೆ ಇತ್ಯಾದಿ ಸಮಸ್ಯೆಗಳನ್ನು ಇದು ಪರಿಹಾರ ಮಾಡುತ್ತದೆ.

ನಿದ್ರಾಹೀನತೆ ಎಂದ ತಕ್ಷಣ ನೆನಪಾಯಿತು. ಜೀರಿಗೆಯಲ್ಲಿ ನಮ್ಮ ನಿದ್ರೆಯ ಸಮಸ್ಯೆಗಳನ್ನು ಹೋಗಲಾಡಿಸುವ ಹಲವಾರು ಗುಣ ಲಕ್ಷಣಗಳು ಇವೆ. ಯಾವೆಲ್ಲ ರೂಪದಲ್ಲಿ ನಾವು ಜೀರಿಗೆಯನ್ನು ಬಳಕೆ ಮಾಡಿಕೊಂಡು ನಮ್ಮ ನಿದ್ರೆಯ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

​ನಿದ್ರಾಹೀನತೆ ಸಮಸ್ಯೆಯನ್ನು ದೂರ ಮಾಡುವ ಜೀರಿಗೆ ಕಾಳುಗಳು

  • ಮೊದಲು 1 ಮಾಗಿದ ಬಾಳೆ ಹಣ್ಣನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕಿವುಚಿ ಅದಕ್ಕೆ 1 ಟೀ ಚಮಚ ಜೀರಿಗೆ ಪುಡಿಯನ್ನು ಹಾಕಿ ಮಿಶ್ರಣ ಮಾಡಿ.
  • ರಾತ್ರಿ ಮಲಗುವ ಸಂದರ್ಭದಲ್ಲಿ ಈ ಮಿಶ್ರಣವನ್ನು ಸ್ವಲ್ಪ ಪ್ರಮಾಣದಲ್ಲಿ ಸೇವನೆ ಮಾಡಿ ಮಲಗಿ ಕೊಳ್ಳುವುದರಿಂದ ಕಣ್ಣುಗಳಿಗೆ ಒಳ್ಳೆಯ ನಿದ್ರೆ ಹತ್ತುತ್ತದೆ.
  • ರಾತ್ರಿ ಮಲಗಿಕೊಳ್ಳುವ ಸಂದರ್ಭದಲ್ಲಿ ನೀವು ಜೀರಿಗೆ ಚಹಾವನ್ನು ತಯಾರುಮಾಡಿ ಕುಡಿಯುವುದರಿಂದಲೂ ಸಹ ನಿಮ್ಮ ನಿದ್ರೆಯ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬಹುದು.
  • ಜೀರಿಗೆ ಚಹಾ ತಯಾರುಮಾಡಲು ಮೊದಲು 1 ಟೀ ಚಮಚ ಜೀರಿಗೆ ಕಾಳುಗಳನ್ನು ಚೆನ್ನಾಗಿ ಡ್ರೈ ರೋಸ್ಟ್ ಮಾಡಬೇಕು. ಇದಕ್ಕೆ ಒಂದು ಕಪ್ ನೀರನ್ನು ಹಾಕಿ ಚೆನ್ನಾಗಿ ಕುದಿಸಿ ಆರಿಸಿ ನಂತರ ಸೋಸಿಕೊಂಡು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

​ನಿದ್ರಾಹೀನತೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಉಳಿದಿರುವ ಇನ್ನಿತರ ಉಪಾಯಗಳು ಎಂದರೆ....

  • ಮೊಟ್ಟ ಮೊದಲಿಗೆ ರಾತ್ರಿಯ ಸಮಯದಲ್ಲಿ ನಿದ್ರೆ ಬರದೆ ನಿದ್ರೆ ಮಾತ್ರೆಗಳನ್ನು ತೆಗೆದುಕೊಂಡು ನಿದ್ರೆ ಮಾಡಲು ಪ್ರಯತ್ನಿಸುತ್ತಿರುವ ಜನರು ಈ ಅಭ್ಯಾಸವನ್ನು ಮೊದಲು ಕೈಬಿಡಬೇಕು. ಏಕೆಂದರೆ ಇದರಿಂದ ಆರೋಗ್ಯದಲ್ಲಿ ಸಾಕಷ್ಟು ಅಡ್ಡ ಪರಿಣಾಮಗಳು ಉಂಟಾಗುತ್ತವೆ.
  • ಉದಾಹರಣೆಗೆ ಹೊಟ್ಟೆ ಹಸಿವು ಇಲ್ಲವಾಗುತ್ತದೆ, ಮಲಬದ್ಧತೆ ಸಮಸ್ಯೆ, ಅಜೀರ್ಣತೆ, ಭೇದಿ, ತಲೆ ಸುತ್ತು, ಬಾಯಿ ಒಣಗುವಿಕೆ ಅಥವಾ ಗಂಟಲು ಒಣಗುವಿಕೆ ಸಮಸ್ಯೆ ಕಂಡು ಬರಬಹುದು.
  • ಅತಿಯಾಗಿ ನಿದ್ರೆ ಮಾತ್ರೆಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಉಸಿರಾಟದಲ್ಲಿ ಸಮಸ್ಯೆ ಕಂಡು ಬರಬಹುದು ಎನ್ನುವ ಸಾಧ್ಯತೆ ಕೂಡ ಇದೆ. ಹಾಗಾಗಿ ವೈದ್ಯರ ನಿರ್ದೇಶನದಂತೆ ಔಷಧಿಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

​ಸ್ವಲ್ಪ ಬೆಚ್ಚಗಿನ ಹಾಲು

  • ಮಲಗಿಕೊಳ್ಳುವ ಸಮಯದಲ್ಲಿ ಒಂದು ಲೋಟ ಹಾಲು ಕುಡಿದು ಮಲಗಬೇಕು ಎಂದು ಹೇಳುತ್ತಾರೆ. ಅದರಲ್ಲೂ ಒಂದು ಲೋಟ ಬೆಚ್ಚಗಿನ ಹಾಲು ನಿದ್ರಾಹೀನತೆ ಸಮಸ್ಯೆಯನ್ನು ಹೋಗಲಾಡಿಸುವ ಗುಣ ಪಡೆದುಕೊಂಡಿದೆ.
  • ಇದರಿಂದ ನಮ್ಮ ದೇಹದಲ್ಲಿ ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪತ್ತಿಯಾಗಿ ನಿದ್ರೆಗೆ ಕಾರಣವಾಗುತ್ತದೆ. ಈ ಹಾರ್ಮೋನ್ ಪ್ರಭಾವದಿಂದ ರಾತ್ರಿಯ ಸಮಯದಲ್ಲಿ ನಮ್ಮ ಮನಸ್ಸಿಗೆ ಸಾಕಷ್ಟು ವಿಶ್ರಾಂತಿ ಸಿಕ್ಕಿದಂತಾಗಿ ನಮ್ಮ ಈ ಹಿಂದಿನ ಸಾಕಷ್ಟು ಒಳ್ಳೆಯ ಸವಿನೆನಪುಗಳು ಕನಸುಗಳ ರೂಪದಲ್ಲಿ ಬಂದು ಒಳ್ಳೆಯ ನಿದ್ರೆಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ.

ಮಲಗುವ ಮುನ್ನ ಅರಿಶಿನ ಹಾಲು ಕುಡಿದ್ರೆ, ಆರೋಗ್ಯಕ್ಕೆ ಹತ್ತಾರು ಲಾಭ

​ಚಾಮೋಮೈಲ್ ಚಹಾ

  • ಬಹಳಷ್ಟು ಹಿಂದಿನಿಂದಲೂ ಆರೋಗ್ಯದ ವಿಚಾರದಲ್ಲಿ ಇದರ ಪಾತ್ರವನ್ನು ನಾವು ಕಡೆಗಣಿಸುವ ಹಾಗಿಲ್ಲ. ವಿಶೇಷವಾಗಿ ಮಾನಸಿಕ ಆರೋಗ್ಯದಲ್ಲಿ ಇದು ಸಾಕಷ್ಟು ಉತ್ತಮ ಬದಲಾವಣೆಗಳನ್ನು ತಂದು ಕೊಡುತ್ತದೆ.
  • ಮೈ ಕೈ ನೋವು ದೂರ ಆಗುವ ಜೊತೆಗೆ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆ ಅಚ್ಚುಕಟ್ಟಾಗಿ ಕೆಲಸ ಮಾಡಲು ಅನುಕೂಲ ಮಾಡಿಕೊಡುತ್ತದೆ. ರಾತ್ರಿಯಲ್ಲಿ ಒಳ್ಳೆಯ ನಿದ್ರೆ ಬರಲು ಸಹ ಇದು ಅನುಕೂಲ ಮಾಡಿಕೊಡುತ್ತದೆ.
  • ರಾತ್ರಿ ಊಟ ಆದ ನಂತರ ತಕ್ಷಣವೇ ಈ ಚಹಾವನ್ನು ಕುಡಿಯಿರಿ.
  • ಏಕೆಂದರೆ ಮಲಗುವ ಸಮಯದಲ್ಲಿ ಕುಡಿದು ಮಲಗುವುದರಿಂದ ಮತ್ತು ಇದು ಮೂತ್ರವರ್ಧಕ ಗುಣಲಕ್ಷಣಗಳನ್ನು ಒಳಗೊಂಡಿರುವುದರಿಂದ ರಾತ್ರಿ ನಿದ್ರೆಯಲ್ಲಿ ಮೂತ್ರ ವಿಸರ್ಜನೆಗಾಗಿ ಬಹಳಷ್ಟು ಬಾರಿ ಎಚ್ಚರವಾಗುವ ಸಾಧ್ಯತೆ ಇರುತ್ತದೆ.

​ಲ್ಯಾವೆಂಡರ್ ಆಯಿಲ್ ಮತ್ತು ಬಿಸಿ ನೀರಿನ ಸ್ನಾನ

  • ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ ಮಿಶ್ರಣ ಮಾಡಿ ಅದರಿಂದ ಸ್ನಾನ ಮಾಡುವುದರಿಂದ ರಾತ್ರಿಯ ಸಮಯದಲ್ಲಿ ಒಳ್ಳೆಯ ನಿದ್ರೆ ಬರುತ್ತದೆ.
  • ಇದರ ಜೊತೆಗೆ ವಾಸಿಸುವ ಕೊಠಡಿಯಲ್ಲಿ ಲ್ಯಾವೆಂಡರ್ ಸುಗಂಧ ದ್ರವ್ಯವನ್ನು ಬಳಸುವುದರಿಂದ ಬೆಳಗಿನ ಸಮಯದಲ್ಲೂ ಸಹ ಮನಸ್ಸು ಪ್ರಶಾಂತವಾಗಿರುತ್ತದೆ.
  • ಅಧ್ಯಯನಗಳು ಹೇಳುವಂತೆ ಇದಾಗಲೇ ಹೃದಯದ ಸಮಸ್ಯೆಯಿಂದ ಬಳಲುತ್ತಿರುವ ಮಧ್ಯವಯಸ್ಸಿನ ಮಹಿಳೆಯರಿಗೂ ಕೂಡ ಲವೆಂಡರ್ ಸುಗಂಧ ನಿದ್ರೆ ಗುಣಮಟ್ಟವನ್ನು ಹೆಚ್ಚು ಮಾಡುತ್ತದೆ. ಸಂಶೋಧಕರು ಹೇಳುವಂತೆ ನಮ್ಮ ಮನಸ್ಸಿನ ಮೇಲೆ ಮತ್ತು ದೇಹದ ಮೇಲೆ ಇದು ಒಳ್ಳೆಯ ಪ್ರಭಾವ ಬೀರಬಹುದು.

ಊಟದ ನಂತರ ಸ್ನಾನ ಮಾಡಿದರೆ ಹೊಟ್ಟೆ ನೋವು ಬರುತ್ತಾ? ಇದು ನಿಜಾನಾ?

​ಧ್ಯಾನ ಮಾಡುವ ಅಭ್ಯಾಸ ತುಂಬಾ ಒಳ್ಳೆಯದು

  • ಯಾರು ಯೋಗಾಭ್ಯಾಸ ಮತ್ತು ಧ್ಯಾನದಲ್ಲಿ ತೊಡಗುತ್ತಾರೆ ಅವರಿಗೆ ನಿದ್ರೆಯ ಸಮಸ್ಯೆಗಳು ಅಷ್ಟಾಗಿ ಕಾಡುವುದಿಲ್ಲ. ಏಕೆಂದರೆ ಮುಂಜಾನೆಯ ಸಮಯದಲ್ಲಿ ಮಾಡುವ ಧ್ಯಾನ ರಾತ್ರಿಯ ಸಮಯದ ನಿದ್ರೆಯ ಗುಣಮಟ್ಟವನ್ನು ಹೆಚ್ಚು ಮಾಡುತ್ತದೆ.
  • ಇದರ ಕಾರಣದಿಂದ ಆರೋಗ್ಯ ಸುಧಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಧ್ಯಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಎದುರಾಗುವುದಿಲ್ಲ.
  • ಅಷ್ಟೇ ಅಲ್ಲದೆ ರಾತ್ರಿಯ ಸಮಯದಲ್ಲಿ ಮಲಗಿಕೊಳ್ಳುವ ಸಮಯದಲ್ಲಿ ಮೊಬೈಲ್ ಅಥವಾ ಲ್ಯಾಪ್ಟಾಪ್ ಬಳಸಬೇಡಿ.
  • ಮಲಗಿಕೊಂಡ ನಂತರ ಎಚ್ಚರವಾದರೆ ಮತ್ತೆ ನಿದ್ರೆಯ ಪ್ರಭಾವವನ್ನು ಪಡೆದುಕೊಳ್ಳಲು ನೀವು ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಧ್ಯಾನ ಮಾಡುವ ಅಭ್ಯಾಸ ಮಾಡಿಕೊಳ್ಳಿ.

ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಸಹಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ