ಕೆಲವರಿಗೆ ಭಯ ಎನ್ನುವುದು ಒಂದು ರೋಗದಂತೆ ಕಾಡುತ್ತಿರುವುದು. ಅವರಿಗೆ ಏನೇ ಆದರೂ ಭಯ. ಅಂತಹ ಜನರಲ್ಲಿ ಒಮ್ಮೆಲೇ ಅತಿಯಾದ ಭೀತಿ ಕಾಡಿದರೆ, ಆಗ ಅವರಲ್ಲಿ ಎದೆ ನೋವು, ಆಘಾತ ಕಂಡುಬರುವುದು. ಕೆಲವರಿಗೆ ಒಂದು ಅಥವಾ ಎರಡು ಸಲ ಇಂತಹ ಅನುಭವ ಆಗಿರಬಹುದು. ಆದರೆ ಇನ್ನು ಕೆಲವರಲ್ಲಿ ಇದು ಜೀವಮಾನವಡಿ ಇರುವುದು.
ಇಂತಹ ಆಘಾತವು ಮಕ್ಕಳು ಮತ್ತು ವಯೋವೃದ್ಧರಿಗಿಂತ ಹೆಚ್ಚಾಗಿ ವಯಸ್ಕರಲ್ಲಿ ಕಂಡುಬರುವುದು. ಆದರೆ ಇಂದಿನ ದಿನಗಳಲ್ಲಿ ಮಕ್ಕಳ ಮೇಲೆ ಅತಿಯಾದ ಓದಿನ ಒತ್ತಡ ಹೇರುತ್ತಿರುವ ಕಾರಣದಿಂದಾಗಿ ಅವರಲ್ಲಿ ಕೂಡ ಇಂತಹ ಆಘಾತವು ಕಂಡುಬರುವುದು. ಇಂತಹ ಆಘಾತವನ್ನು ನಿಭಾಯಿಸುವ ಮೊದಲು ಒತ್ತಡ ಹಾಗೂ ಆತಂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರಬೇಕು.
ಭೀತಿಯ ಆಘಾತದ ಲಕ್ಷಣಗಳು
ಭೀತಿಯು ಎಷ್ಟೇ ಸಣ್ಣ ಅಥವಾ ದೊಡ್ಡ ವ್ಯಕ್ತಿಯಲ್ಲೂ ಇದ್ದೇ ಇರುತ್ತದೆ. ಕೆಲವೊಮ್ಮೆ ಇದು ಹಠಾತ್ ಆಗಿ ಬರುವುದು. ಇಂತಹ ಭೀತಿಯ ಆಘಾತವು ಕಾಡಿದರೆ ಆಗ ಉಸಿರಾಟದ ತೊಂದರೆ, ಅತಿಯಾಗಿ ಬೆವರುವಿಕೆ ಮತ್ತು ಹೃದಯದ ಬಡಿತ ಹೆಚ್ಚಾಗುವುದು. ಇಂತಹ ಲಕ್ಷಣಗಳು ನೋವಿನಿಂದ ಉಸಿರಾಡಲು ತೊಂದರೆಯನ್ನು ಉಂಟು ಮಾಡುವುದು. ಭೀತಿಯ ಆಘಾತದ ಕೆಲವು ಲಕ್ಷಣಗಳನ್ನು ನಾವು ನಿಮಗೆ ಇಲ್ಲಿ ತಿಳಿಸಿಕೊಡಲಿದ್ದೇವೆ.
- ಬೆವರುವುದು
- ನಡುಕ
- ಎದೆನೋವು
- ಭೀತಿ
- ಉಸಿರಾಟದ ತೊಂದರೆ
- ವಾಕರಿಕೆ
- ನಿಶ್ಯಕ್ತಿ
- ತಲೆನೋವು
ಭೀತಿಯ ಆಘಾತ ನಿಭಾಯಿಸಲು ಕೆಲವು ಸಲಹೆಗಳು
ಭೀತಿಯ ಆಘಾತಕ್ಕೆ ಒಳಗಾಗಿರುವಂತಹ ವ್ಯಕ್ತಿಯನ್ನು ನೋಡಿದರೆ, ಆಗ ಬೇರೆ ಜನರಿಗೆ ಕೂಡ ಭಯವಾಗಬಹುದು.
ಭೀತಿಯ ಆಘಾತ ತಡೆಯಲು ಹಲವಾರು ಮನೆಮದ್ದುಗಳು ಇವೆ. ಅದೇ ರೀತಿಯಾಗಿ ಇದನ್ನು ನಿಭಾಯಿಸಲು ಕೆಲವು ಆರಾಮದಾಯಕ ವಿಧಾನಗಳು ಕೂಡ ಇವೆ. ಭೀತಿಯ ಆಘಾತ ನಿರ್ವಹಿಸಲು ಏಳು ಸರಳ ವಿಧಾನಗಳನ್ನು ನಾವು ನಿಮಗೆ ತಿಳಿಸಿಕೊಡಲಿದ್ದೆವೆ.
ಭಯದ ಆಘಾತಕ್ಕೆ ಒಳಗಾಗಿದ್ದೀರಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ
ಇಂತಹ ಸಮಸ್ಯೆಗೆ ಯಾವುದೇ ಪರಿಹಾರ ಕಂಡುಕೊಳ್ಳುವ ಮೊದಲು ನೀವು ಆತಂಕ ಮತ್ತು ಭೀತಿಯ ಆಘಾತಕ್ಕೆ ಒಳಗಾಗಿದ್ದೀರಿ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು.
ಇದು ನಿಮ್ಮಲ್ಲಿನ ಒಳಗಿನ ಭೀತಿ ತಗ್ಗಿಸುವುದು ಮತ್ತು ಆಘಾತವನ್ನು ನಿಯಂತ್ರಿಸಲು ನೆರವಾಗುವುದು. ಇಂತಹ ಆಘಾತವು ಕೆಲವೊಂದು ಸಂದರ್ಭದಲ್ಲಿ ತುಂಬಾ ಅಪಾಯಕಾರಿ ಆಗಬಹುದು.
ದೀರ್ಘವಾಗಿ ಉಸಿರಾಡಿ
ಭಯ, ಆತಂಕದಿಂದಾಗಿ ಆಗುವ ಆಘಾತದ ವೇಳೆ ಉಸಿರು ಕಟ್ಟುವಿಕೆ ಕಾಣಿಸಿಕೊಳ್ಳುವುದು. ಹೀಗಾಗಿ ನೀವು ದೀರ್ಘವಾಗಿ ಉಸಿರಾಡಿ. ದೀರ್ಘವಾಗಿ ಉಸಿರಾಡಿಕೊಂಡು ನಿಮ್ಮ ಮನಸ್ಸು ಹಾಗೂ ದೇಹವನ್ನು ಸರಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯ. ಉಚ್ಛಾಸ ಹಾಗೂ ನಿಚ್ಛಾಸದ ಕಡೆಗೆ ಹೆಚ್ಚು ಗಮನಹರಿಸಿ.
ಈ ಉಸಿರಾಟದ ವ್ಯಾಯಾಮಗಳು ಮಾನಸಿಕ ಆತಂಕವನ್ನು ದೂರ ಮಾಡುತ್ತವೆಯಂತೆ
ಕಣ್ಣುಗಳನ್ನು ಮುಚ್ಚಿಕೊಂಡು ಆರಾಮ ಮಾಡಿ
ದಿಗಿಲುಗೊಂಡ ವೇಳೆ ಕಾಡುವಂತಹ ಆಘಾತದಿಂದ ಪಾರಾಗಲು ನೀವು ಕಣ್ಣುಗಳನ್ನು ಮುಚ್ಚಬೇಕು. ಶಾಂತವಾಗಿರುವ ಸ್ಥಳದಲ್ಲಿ ಆರಾಮವಾಗಿ ಕುಳಿತುಕೊಳ್ಳಿ ಮತ್ತು ಧ್ಯಾನ ಮಾಡಿಕೊಂಡರೆ ಆಗ ಆಘಾತವನ್ನು ನಿಭಾಯಿಸಲು ನಿಮಗೆ ನೆರವಾಗುವುದು. ದೇಹವನ್ನು ಹಗುರವಾಗಿಸಿ ಮತ್ತು ಹಾಗೆ ವಾತಾವರಣದೊಂದಿಗೆ ಆರಾಮ ಮಾಡಿ.
ವ್ಯಾಯಾಮ/ಯೋಗ ಮಾಡಿ
ಒತ್ತಡದಿಂದ ಮುಕ್ತವಾಗಿ, ಆರಾಮವಾಗಿರಲು ಯೋಗವು ತುಂಬಾ ನೆರವಾಗಿದೆ ಎಂದು ಹಿಂದಿನಿಂದಲೂ ನಮ್ಮ ಹಿರಿಯರು ಸಲಹೆ ನೀಡುತ್ತಾ ಬಂದಿರುವರು. ನೀವು ದಿನನಿತ್ಯವೂ ವ್ಯಾಯಾಮ ಹಾಗೂ ಯೋಗ ಮಾಡಿದರೆ ಅದು ಆರೋಗ್ಯಕ್ಕೆ ಒಳ್ಳೆಯದು ಮತ್ತು ಭಯದಿಂದ ಆಗುವ ಆಘಾತವನ್ನು ಇದು ಕಡಿಮೆ ಮಾಡುವುದು.
ವ್ಯಾಯಾಮದ ವೇಳೆ ಹೀಗೆಲ್ಲಾ ಸಮಸ್ಯೆಗಳಾದರೆ, ಟೆನ್ಷನ್ ಮಾಡಬೇಡಿ!
ಮಂತ್ರ ಪಠಿಸಿ
ಮನಸ್ಸಿನಲ್ಲಿ ಭಯವು ಆವರಿಸಿದ್ದರೆ ಆಗ ನಿಮಗೆ ತಿಳಿದಿರುವಂತಹ ಯಾವುದಾದರೂ ದೇವರ ಮಂತ್ರವನ್ನು ಹಾಗೆ ಪಠಿಸಿ. ಇದು ನಿಮ್ಮಲ್ಲಿ ಧನಾತ್ಮಕತೆ ಉಂಟು ಮಾಡುವುದು. ಎಲ್ಲವೂ ಸರಿಯಾಗಿದೆ ಮತ್ತು ಬೇಗನೆ ಎಲ್ಲವೂ ಸಾಗಲಿದೆ ಎಂದು ನೀವು ಮನಸ್ಸಿಗೆ ಮನವರಿಕೆ ಮಾಡಿಕೊಡಿ.
ಸಂತೋಷದ ಸ್ಥಳವನ್ನು ಕಲ್ಪನೆ ಮಾಡಿ
ಜನರಿಗೆ ಮನಸ್ಸಿನಲ್ಲಿ ಸಂತೋಷ ಉಂಟು ಮಾಡುವ ಕೆಲವು ಸ್ಥಳಗಳು ಇರಬಹುದು. ಅದೇ ರೀತಿ ನಿಮ್ಮ ಮನಸ್ಸಿನಲ್ಲೂ ಇಂತಹ ಸ್ಥಳಗಳು ಇದ್ದೇ ಇರುವುದು. ಬೀಚ್, ಬಾರ್ ಅಥವಾ ನೀವು ತುಂಬಾ ಹತ್ತಿರವಾಗಿ ಇರುವ ಯಾವುದೇ ಜಾಗವನ್ನು ಮನಸ್ಸಿನಲ್ಲಿ ಕಲ್ಪನೆ ಮಾಡಿಕೊಳ್ಳಿ. ಇದರಿಂದ ನಿಮ್ಮ ಮನಸ್ಸಿಗೆ ಆರಾಮ ಸಿಗುವುದು. ಇದು ಮನಸ್ಸು ಹಾಗೂ ದೇಹವನ್ನು ಶಾಂತವಾಗಿಸುವುದು.
ಸ್ನಾಯುಗಳಿಗೆ ಆರಾಮ ನೀಡುವ ತಂತ್ರವನ್ನು ಅಳವಡಿಸಿ
ಭೀತಿಯಿಂದಾಗಿ ಕಾಡುವ ಆಘಾತವನ್ನು ತಡೆಯಲು ನೀವು ಸ್ನಾಯುಗಳಿಗೆ ಆರಾಮ ನೀಡುವ ತಂತ್ರ ಅಳವಡಿಸಿಕೊಂಡರೆ ತುಂಬಾ ಒಳ್ಳೆಯದು. ಇಂತಹ ತಂತ್ರಗಳು ಸ್ನಾಯುಗಳಿಗೆ ಆರಾಮ ನೀಡುವುದು. ಕೈ ಬೆರಳುಗಳು, ಕಾಲಿನ ಬೆರಳುಗಳನ್ನು ನಿಧಾನವಾಗಿ ಚಲಾಯಿಸಿ.
ಅನಿರೀಕ್ಷಿತವಾಗಿ ಕಾಡುವ ಸ್ನಾಯು ನೋವಿನ ಕಾರಣ ಗೊತ್ತಾದರೆ ಶಾಕ್ ಆಗುವಿರಿ!