ಆ್ಯಪ್ನಗರ

ಕಳಲೆಯನ್ನು ಏಕೆ ತಿನ್ನಬೇಕು ಎನ್ನುವುದು ನಿಮಗೆ ಗೊತ್ತಾ?

ಕಳಲೆ ಅಥವಾ ಬಿದಿರಿನ ಚಿಗುರು ಎಂದು ಕರೆಯುವ ಇದನ್ನು ನಮ್ಮ ಆಹಾರದಲ್ಲಿ ಸೇರಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

Vijaya Karnataka Web 10 Aug 2020, 9:56 am
ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಕಷ್ಟು ಹೊಸ ಸಸ್ಯಗಳು ಹುಟ್ಟಿಕೊಳ್ಳುತ್ತವೆ. ಅವು ತಮ್ಮ ಬಣ್ಣ ಹಾಗೂ ವಿಶೇಷತೆಯಿಂದ ಪ್ರಕೃತಿಯಲ್ಲಿ ಹೊಸತನವನ್ನು ಮೂಡಿಸುವುದು. ಅಂತಹ ವಿಶೇಷ ಸಸ್ಯಗಳಲ್ಲಿ ಕಳಲೆಯು ಒಂದು. ಬಿದಿರಿನ ಪುಟ್ಟ ಪುಟ್ಟ ಸಸಿಗಳಿಗೆ ಕಳಲೆ ಎಂದು ಕರೆಯುತ್ತಾರೆ. ಇದು ಮಳೆಗಾಲದಲ್ಲಿ ಹೇರಳವಾಗಿ ದೊರೆಯುವುದರಿಂದ ಇದನ್ನು ಬಳಸಿ ಸಾಹಕಷ್ಟು ಆಹಾರ ಪದಾರ್ಥಗಳನ್ನು ತಯಾರಿಸಲಾಗುವುದು. ಇದರಲ್ಲಿ ಇರುವ ಔಷಧೀಯ ಗುಣ ಹಾಗೂ ಆರೋಗ್ಯಕರ ಅಂಶವು ಅತ್ಯುತ್ತಮ ಪೋಷಣೆ ನೀಡುವುದು. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಇದರ ಖಾದ್ಯಗಳು ಹಾಗೂ ಉಪಯೋಗಗಳನ್ನು ಹೆಚ್ಚಾಗಿ ಮಾಡುತ್ತಾರೆ. ಇತ್ತೀಚೆಗೆ ಇದನ್ನು ವಿವಿಧ ಪ್ರದೇಶದಲ್ಲೂ ಬಳಕೆ ಮಾಡುತ್ತಿರುವುದನ್ನು ಕಾಣಬಹುದು.
Vijaya Karnataka Web what are the benefits of eating bamboo shoots
ಕಳಲೆಯನ್ನು ಏಕೆ ತಿನ್ನಬೇಕು ಎನ್ನುವುದು ನಿಮಗೆ ಗೊತ್ತಾ?


​ಕಳಲೆಯ ಬೆಳೆ:

ಕಳಲೆ ಅಥವಾ ಬಿದಿರಿನ ಚಿಗುರು ಎಂದು ಕಡೆಯಲ್ಪಡುವ ಈ ಸಸ್ಯದಲ್ಲಿ ಸೈನೋಜೆನಿಕ್ ಗ್ಲೈಕೋಸೈಡ್ ಎಂಬ ನೈಸರ್ಗಿಕ ಜೀವಾಣು ತುಂಬಿರುತ್ತದೆ. ಇದು ಒಂದು ಬಗೆಯ ವಿಷದ ರೂಪ. ಅಡುಗೆ ಮಾಡುವಾಗ ಇದನ್ನು ಕುದಿಯುವ ನೀರಿನಲ್ಲಿ ಹಲವಾರು ಬಾರಿ ಕುದಿಸಿ, ಸ್ವಚ್ಛಮಾಡಲಾಗುವುದು. ಹಾಗಾಗಿ ಈ ಅಂಶವು ಸಂಪೂರ್ಣವಾಗಿ ನಾಶವಾಗುವುದು. ನಂತರ ಇದನ್ನು ಅಡುಗೆಯಲ್ಲಿ ಬಳಸಲಾಗುವುದು. ಜಪಾನ್, ತೈವಾನ್ ಮತ್ತು ಚೀನಾಗಳಲ್ಲಿ ಇದ್ದನು ಬೇಸಿಗೆಯಲ್ಲಿಯೇ ಕೊಯ್ಲು ಮಾಡುತ್ತಾರೆ. ನಮ್ಮ ಭಾರತದ ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಜಾರ್ಖಂಡ್, ಒಡಿಶಾ ಮತ್ತು ಕರ್ನಾಟಕ ರಾಜ್ಯದಲ್ಲಿ ಇದನ್ನು ಬೆಳೆಯುವರು. ಅರಣ್ಯ ತರಕಾರಿಗಳ ರಾಜ ಎಂದು ಕರೆಯಲ್ಪಡುವ ಈ ಗಿಡಮೂಲಿಕೆಯನ್ನು ಪ್ರಾಚೀನ ಕಾಲದ ವಿವಿಧ ಸಾಂಪ್ರದಾಯಿಕ ಚಿಕಿತ್ಸೆಯಲ್ಲಿ ಹಾಗೂ ಔಷಧಿಯಲ್ಲಿ ಬಳಸಲಾಗುವುದು.

ಪೌಷ್ಠಿಕಾಂಶದ ವಿವರ:

ಬಿದಿರಿನ ಚಿಗುರಲ್ಲಿ ಸಾಕಷ್ಟು ಪ್ರೋಟೀನ್, ಕಾರ್ಬೋಹೈಡ್ರೇಟ್, ನಾರಿನಂಶ, ಖನಿಜಗಳು ಇರುತ್ತವೆ. ಇದರಲ್ಲಿ ಕೊಬ್ಬು ಮತ್ತು ಸಕ್ಕರೆಯ ಪ್ರಮಾಣ ಕಡಿಮೆ ಇರುವುದರಿಂದ ಮಧುಮೇಹಿಗಳಿಗೆ ಇದು ಅತ್ಯುತ್ತಮ ಆಹಾರ ಪದಾರ್ಥಗಳಾಗುವುದು. ಕಳಲೆಯಲ್ಲಿ ನ್ಯೂಟ್ರಾಸ್ಯುಟಿಕಲ್ ಎಂದು ಕರೆಯಲ್ಪಡುವ ದೊಡ್ಡ ನಾರಿನಂಶ ಅಧಿಕವಾಗಿರುತ್ತದೆ. ಇದು ಕರುಳಿನ ಸಮಸ್ಯೆ ನಿಭಾಯಿಸಲು ಸಹಾಯ ಮಾಡುವುದು.

ಎಳನೀರು ಮತ್ತು ತೆಂಗಿನ ಹಾಲು: ಇವುಗಳಲ್ಲಿ ಯಾವುದು ಆರೋಗ್ಯಕರವಾದುದ್ದು?

​ಕ್ಯಾನ್ಸರ್ ತಡೆಯುವುದು:

ಇತ್ತೀಚೆಗೆ ನಡೆಸಿದ ಕೆಲವು ಅಧ್ಯಯನಗಳ ಪ್ರಕಾರ ಬಿದುರಿನ ಚಿಗುರು ಅಥವಾ ಕಳಲೆಯಲ್ಲಿ ಫಿನಾಲಿಕ್ ಎನ್ನುವ ಸಂಯುಕ್ತಗಳಿವೆ. ಇದು ಉತ್ಕರ್ಷಣ ನಿರೋಧಕವು ಸ್ವತಂತ್ರ ರಾಡಿಕಲ್ಸ್ ವಿರುದ್ಧ ಹೋರಾಡಲು ಸಹಾಯ ಮಾಡುವುದು. ಜೊತೆಗೆ ಕ್ಯಾನ್ಸರ್‍ನ ವಿರುದ್ಧ ಹೋರಾಡುವುದು. ಪ್ರತಿಜೀವಕ ಮತ್ತು ಆಂಟಿ ವೈರಲ್ ಗುಣಲಕ್ಷಣಗಳನ್ನು ಒಳಗೊಂಡಿರುವುದರಿಂದ ಕ್ಯಾನ್ಸರ್‍ನಂತಹ ಕಣಗಳನ್ನು ನಾಶಮಾಡುವುದು. ಇದು ದೇಹಕ್ಕೆ ಅಗತ್ಯವಾದ ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಬಿ6, ಥಯಾಮಿನ್, ರಿಬೋಫ್ಲಾಮಿನ್, ಕ್ಯಾಲ್ಸಿಯಂ, ಮೆಗ್ನಿಸಿಯಮನ್ನು ಒಳಗೊಂಡಿದೆ. ಇದನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ ಮಾರಣಾಂತಿಕ ಕಾಯಿಲೆಯಿಂದ ದೂರ ಉಳಿಯಬಹುದು.

​ಹೃದಯದ ಆರೋಗ್ಯಕ್ಕೆ ಉತ್ತಮ:

ಪ್ರತಿ 100 ಗ್ರಾಂ ಕಳಲೆಯಲ್ಲಿ 20 ಗ್ರಾಂ ನಷ್ಟು ಕ್ಯಾಲೋರಿ ಇರುತ್ತದೆ. ಕಾರ್ಬೋಹೈಡ್ರೇಟ್ ಪ್ರಮಾಣವು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. 100 ಗ್ರಾಂ. ಬಿದುರಿನ ಚಿಗುರಲ್ಲಿ ಕೇವಲ 3 ರಿಂದ 4 ಗ್ರಾಂ ನಷ್ಟು ಕಾರ್ಬೋ ಹೈಡ್ರೇಟ್ ಇರುತ್ತವೆ. ಇದು ಹೃದಯ ಸಮಸ್ಯೆ ಇರುವವರಿಗೆ ಅತ್ಯುತ್ತಮವಾದ ಆಹಾರ ಆಗುವುದು. ಕೆಟ್ಟ ಕೊಲೆಸ್ಟ್ರಾಲ್ ವಿರುದ್ಧ ಹೋರಾಡುವುದರ ಜೊತೆಗೆ ರಕ್ತದ ಸ್ಥಿತಿ ಸಮತೋಲನದಲ್ಲಿ ಇರುವಂತೆ ಮಾಡುವುದು. ಹೃದಯಕ್ಕೆ ಸಂಬಂಧಿಸಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುವುದು. ಹಾಗಾಗಿ ಹೃದಯ ರೋಗಿಗಳಿಗೆ ಕಳಲೆಯನ್ನು ಸೇವಿಸಲು ವೈದ್ಯರು ಸಲಹೆ ನೀಡುವರು.

​ರೋಗನಿರೋಧಕ ಶಕ್ತಿ ಹೆಚ್ಚಿಸುವುದು:

ಜೀವಸತ್ವಗಳು ಮತ್ತು ಖನಿಜಗಳು ಬಿದಿರಿನ ಚಿಗುರಲ್ಲಿ ಹೇರಳವಾಗಿವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ವೈರಸ್, ಬ್ಯಾಕ್ಟೀರಿಯಾ ಮತ್ತು ಸೋಂಕುಗಳು ತಗುಲದಂತೆ ರಕ್ಷಣೆ ನೀಡುವುದು. ಹಾಗಾಗಿ ಮಳೆಗಾಲ ಮತ್ತು ಚಳಿಗಾಲದ ಸಮಯದಲ್ಲಿ ಇದನ್ನು ತಪ್ಪದೇ ಸೇವಿಸಬೇಕು ಎಂದು ಸಲಹೆ ನೀಡಲಾಗುವುದು. ಇದರಲ್ಲಿರುವ ಆರೋಗ್ಯಕರ ಘಟಕಗಳು ಮೆದುಳಿನ ತೀಕ್ಷ್ಣವಾದ ಕಾರ್ಯನಿರ್ವಹಣೆಗೆ ಸಹಕಾರಿಯಾಗುವುದು. ಅಲ್ಲದೆ ನ್ಯೂರೋ ಡೆಜೆನೆರೆಟಿವ್ ಕಾಯಿಲೆಗಳ ಅಪಾಯವನ್ನು ತಡೆಯುವುದು.

ಆಲಿವ್ ಎಣ್ಣೆ ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ

ವಿಷತೆಗೆಯಲು ಸಹಾಯ:

ಹಾವು, ಚೇಳುಗಳಂತಹ ವಿಷಕಾರಿ ಜೀವಿಗಳು ಕಚ್ಚಿದ ಸಂದರ್ಭದಲ್ಲಿ ಇದರ ರಸವನ್ನು ಕುಡಿಸಿ ವಿಷವನ್ನು ಹೊರ ತೆಗೆಯಲಾಗುವುದು. ಇದು ದೇಹದಲ್ಲಿ ಇರುವ ನಂಜು ಹಾಗೂ ಸೋಂಕನ್ನು ತೆಗೆದಯಲು ಸಹಾಯಮಾಡುವುದು.

​ಗರ್ಭಾಶಯದ ತೊಂದರೆ:

ಬಿದಿರಿನ ಚಿಗುರು ಗರ್ಭಕೋಶದ ಆರೋಗ್ಯವನ್ನು ಕಾಪಾಡುವುದು. ಇದು ಗರ್ಭಾಶಯದ ಸಂಕೋಚವನ್ನು ಉತ್ತೇಜಿಸುವುದು. ಇದು ನೈಸರ್ಗಿಕ ಹೆರಿಗೆಗೆ ಸಹಾಯ ಮಾಡುವುದು. ಪ್ರಾಚೀನ ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ಇದನ್ನು ಬಳಸಲಾಗುವುದು. ಗರ್ಭಾವಸ್ಥೆಯಲ್ಲಿ ಇರುವವರಿಗೆ ಹೆರಿಗೆಗೆ ಅನುಕೂಲವಾಗಲು ಕಳಲೆಯ ಆಹಾರ ಪದಾರ್ಥಗಳನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಲು ಶಿಫಾರಸ್ಸು ಮಾಡಲಾಗುವುದು.

​ಶ್ವಾಸಕೋಶದ ಆರೋಗ್ಯಕ್ಕೆ:

ಶ್ವಾಸಕೋಶಗಳನ್ನು ಬಲಪಡಿಸಲು ಕಳಲೆ ಅತ್ಯುತ್ತಮವಾದ ಆಹಾರ. ಶ್ವಾಸಕೋಶದಲ್ಲಿ ಕಫವನ್ನು ಹೊರಹಾಕಲು ಕಳಲೆಯನ್ನು ಬಳಸಬಹುದು. ತೊಳೆದ ಬಿದಿರಿನ ಚಿಗುರನ್ನು ನೀರಿನಲ್ಲಿ ಕುದಿಸಿ. ತಣ್ಣಗಾದ ಬಳಿಕ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿ. ದಿನದಲ್ಲಿ ಎರಡು ಬಾರಿ ಇದನ್ನು ಸೇವಿಸುವುದರಿಂದ ಉಸಿರಾಟದ ತೊಂದರೆ ಹಾಗೂ ಕಫದ ಸಮಸ್ಯೆ ಬಹುಬೇಗ ನಿವಾರಣೆಯಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ