[This story originally published in Timesnownews.com on Jan 16, 2019]
ಹೊಸದಿಲ್ಲಿ: ಎದೆ ಹಾಗೂ ಹೊಟ್ಟೆಯ ನಡು ಭಾಗದಲ್ಲಿ ಉರಿಯುವಂತಹ ಅನುಭವ. ಇದನ್ನೇ ಅನ್ನೋದು ಎಸಿಡಿಟಿ ಎಂದು...
ಬಹುಷಃ ಅಸಿಡಿಟಿ, ಗ್ಯಾಸ್ಟ್ರಿಕ್ನಿಂದ ತೊಂದರೆ ಅನುಭವಿಸದವರು ಕಾಣ ಸಿದಗಿರುವುದು ಬಲು ಅಪರೂಪ. ಏಕೆಂದರೆ ಎಸಿಡಿಟಿ ಈಗ ಸಾಮಾನ್ಯ ಸಮಸ್ಯೆ.
ಅನಿಯಮಿತವಾಗಿ ಆಹಾರ ಸೇವನೆ, ಹೊಟ್ಟೆ ಖಾಲಿ ಬಿಡುವುದು ಸೇರಿ ಆರೋಗ್ಯಕರವಲ್ಲದ ಆಹಾರ ಕ್ರಮವೇ ಎಸಿಡಿಟಿ ಸಮಸ್ಯೆಗೆ ಮೂಲ ಕಾರಣ. ಎಸಿಡಿಟಿ ಹೆಚ್ಚಾದರೆ, ಏನೇ ತಿಂದರೂ ವಾಂತಿಯಾಗುವ ಪರಿಸ್ಥಿತಿ ಎದುರಾಗುತ್ತದೆ. ಇವನ್ನು ನಿಯಂತ್ರಣಕ್ಕೆ ತರಲು ಮನೆಮದ್ದು ಹೆಚ್ಚು ಸಹಕಾರಿ. ಹೊಟ್ಟೆಯಲ್ಲಿ ಉರಿಯುವಂತಹ ಅನುಭವ ಆದ ತಕ್ಷಣ ಮನೆಯಲ್ಲೇ ಕೆಲ ವಿಧಾನಗಳನ್ನು ಅಳವಡಿಸಿ, ಆಹಾರ ಕ್ರಮ ಸರಿಪಡಿಸಿ!
ತಂಪಾದ ಮಜ್ಜಿಗೆ (ಕೋಲ್ಡ್ ಬಟರ್ಮಿಲ್ಕ್)
ಹೊಟ್ಟೆ, ಜೀರ್ಣಕ್ರಿಯೆಗೆ ಸಂಬಂಧಿತ ಅನೇಕ ಸಮಸ್ಯೆಗೆ ಮಜ್ಜಿಗೆ ರಾಮಬಾಣ. ಎಸಿಡಿಟಿ ಆಗದಂತೆ ತಡೆಯಲು ಊಟದ ಬಳಿಕ ಮಜ್ಜಿಗೆ ಕುಡಿಯುವ ಪದ್ದತಿ ಈಗಲೂ ಇದೆ. ಎಸಿಡಿಟಿ ಆದಲ್ಲಿ, ತಂಪಾದ ಮಜ್ಜಿಗೆ ನಿಯಮಿತವಾಗಿ ಸೇವಿಸುವುದು ಒಳ್ಳೆಯದು.
ತಂಪಾದ ಹಾಲು ಕುಡಿಯಿರಿ
ಎಸಿಡಿಟಿ ಈಗಾಗಲೇ ಆರಂಭವಾದರೆ, ತಂಪಾದ ಹಾಲು ತುಂಬಾ ಒಳ್ಳೆಯ ಔಷಧವಾಗಿ ಪರಿಣಮಿಸುತ್ತದೆ. ಹಾಲಿನಲ್ಲಿರುವ ಅಂಶ ಆ್ಯಸಿಡ್ ಅಂಶವನ್ನು ಹೀರಿಕೊಳ್ಳುವ ಗುಣಹೊಂದಿದೆ. ಸಕ್ಕರೆ ಅಥವಾ ಇನ್ನಿತರ ಯಾವುದೇ ವಸ್ತುಗಳನ್ನು ಬೆರೆಸದೆ, ತಂಪಾದ ಹಾಲನ್ನು ಕುಡಿಯಿರಿ.
ಬಾಳೆಹಣ್ಣು ತಿಂದರೆ ಇನ್ನೂ ಉತ್ತಮ
ಪೊಟ್ಯಾಷಿಯಂ ಅಂಶವನ್ನು ಹೊಂದಿರುವ ಬಾಳೆ ಹಣ್ಣುಗಳು ಹೊಟ್ಟೆಯಲ್ಲಿ ಆ್ಯಸಿಡ್ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಉತ್ತಮ ಕೆಲಸ ಮಾಡುತ್ತದೆ. ಅಲ್ಲದೆ ಜೀರ್ಣಕ್ರಿಯೆಗೂ ಬಾಳೆಹಣ್ಣು ಸಹಕಾರಿ.
ತುಳಸಿ ಬಳಸಿ
ಜೀರ್ಣಕ್ರಿಯೆಯನ್ನು ಸರಿಪಡಿಸುವಲ್ಲಿ ತುಳಸಿಯನ್ನು ಔಷಧಿ ಎಂದೇ ಪರಿಗಣಿಸಲಾಗುತ್ತದೆ. ಅಷ್ಟು ಮಾತ್ರ ಅಲ್ಲ, ಆಯುರ್ವೇದದಲ್ಲಿ ತುಳಸಿ ರಸ ಔಷಧವೆಂದೇ ಪರಿಗಣಿಸಲಾಗಿದೆ. ತುಳಸಿ ಎಲೆಯನ್ನು ಹಾಗೆಯೇ ತಿನ್ನಬಹುದು, ಅಥವಾ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿಯೂ ಸೇವಿಸಬಹುದು. ಇದನ್ನು ನಿಮ್ಮ ಊಟದ ಬಳಿಕ ಸೇವಿಸಿದರೆ ಇನ್ನೂ ಒಳ್ಳೆಯದು
ಇದಲ್ಲದೆ, ಜೀರಿಗೆಯೂ ಹೊಟ್ಟೆಯ ಸಮಸ್ಯೆಗಳನ್ನು ದೂರವಾಗಿಸಲು ಬಳಸುತ್ತಾರೆ. ಜೀರಿಗೆಯನ್ನು ನೇರ ಬಾಯಿಗೆ ಹಾಕಬಹುದು ಅಥವಾ ಅವನ್ನು ನೀರಿನಲ್ಲಿ ಕುದಿಸಿ, ಬಿಸಿ ನೀರನ್ನೂ ಕುಡಿಯುವುದರಿಂದ ಹೆಚ್ಚು ಅನುಕೂಲವಾಗುತ್ತದೆ.
ಹೊಸದಿಲ್ಲಿ: ಎದೆ ಹಾಗೂ ಹೊಟ್ಟೆಯ ನಡು ಭಾಗದಲ್ಲಿ ಉರಿಯುವಂತಹ ಅನುಭವ. ಇದನ್ನೇ ಅನ್ನೋದು ಎಸಿಡಿಟಿ ಎಂದು...
ಬಹುಷಃ ಅಸಿಡಿಟಿ, ಗ್ಯಾಸ್ಟ್ರಿಕ್ನಿಂದ ತೊಂದರೆ ಅನುಭವಿಸದವರು ಕಾಣ ಸಿದಗಿರುವುದು ಬಲು ಅಪರೂಪ. ಏಕೆಂದರೆ ಎಸಿಡಿಟಿ ಈಗ ಸಾಮಾನ್ಯ ಸಮಸ್ಯೆ.
ಅನಿಯಮಿತವಾಗಿ ಆಹಾರ ಸೇವನೆ, ಹೊಟ್ಟೆ ಖಾಲಿ ಬಿಡುವುದು ಸೇರಿ ಆರೋಗ್ಯಕರವಲ್ಲದ ಆಹಾರ ಕ್ರಮವೇ ಎಸಿಡಿಟಿ ಸಮಸ್ಯೆಗೆ ಮೂಲ ಕಾರಣ. ಎಸಿಡಿಟಿ ಹೆಚ್ಚಾದರೆ, ಏನೇ ತಿಂದರೂ ವಾಂತಿಯಾಗುವ ಪರಿಸ್ಥಿತಿ ಎದುರಾಗುತ್ತದೆ. ಇವನ್ನು ನಿಯಂತ್ರಣಕ್ಕೆ ತರಲು ಮನೆಮದ್ದು ಹೆಚ್ಚು ಸಹಕಾರಿ. ಹೊಟ್ಟೆಯಲ್ಲಿ ಉರಿಯುವಂತಹ ಅನುಭವ ಆದ ತಕ್ಷಣ ಮನೆಯಲ್ಲೇ ಕೆಲ ವಿಧಾನಗಳನ್ನು ಅಳವಡಿಸಿ, ಆಹಾರ ಕ್ರಮ ಸರಿಪಡಿಸಿ!
ತಂಪಾದ ಮಜ್ಜಿಗೆ (ಕೋಲ್ಡ್ ಬಟರ್ಮಿಲ್ಕ್)
ತಂಪಾದ ಹಾಲು ಕುಡಿಯಿರಿ
ಎಸಿಡಿಟಿ ಈಗಾಗಲೇ ಆರಂಭವಾದರೆ, ತಂಪಾದ ಹಾಲು ತುಂಬಾ ಒಳ್ಳೆಯ ಔಷಧವಾಗಿ ಪರಿಣಮಿಸುತ್ತದೆ. ಹಾಲಿನಲ್ಲಿರುವ ಅಂಶ ಆ್ಯಸಿಡ್ ಅಂಶವನ್ನು ಹೀರಿಕೊಳ್ಳುವ ಗುಣಹೊಂದಿದೆ. ಸಕ್ಕರೆ ಅಥವಾ ಇನ್ನಿತರ ಯಾವುದೇ ವಸ್ತುಗಳನ್ನು ಬೆರೆಸದೆ, ತಂಪಾದ ಹಾಲನ್ನು ಕುಡಿಯಿರಿ.
ಬಾಳೆಹಣ್ಣು ತಿಂದರೆ ಇನ್ನೂ ಉತ್ತಮ
ಪೊಟ್ಯಾಷಿಯಂ ಅಂಶವನ್ನು ಹೊಂದಿರುವ ಬಾಳೆ ಹಣ್ಣುಗಳು ಹೊಟ್ಟೆಯಲ್ಲಿ ಆ್ಯಸಿಡ್ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಉತ್ತಮ ಕೆಲಸ ಮಾಡುತ್ತದೆ. ಅಲ್ಲದೆ ಜೀರ್ಣಕ್ರಿಯೆಗೂ ಬಾಳೆಹಣ್ಣು ಸಹಕಾರಿ.
ತುಳಸಿ ಬಳಸಿ
ಜೀರ್ಣಕ್ರಿಯೆಯನ್ನು ಸರಿಪಡಿಸುವಲ್ಲಿ ತುಳಸಿಯನ್ನು ಔಷಧಿ ಎಂದೇ ಪರಿಗಣಿಸಲಾಗುತ್ತದೆ. ಅಷ್ಟು ಮಾತ್ರ ಅಲ್ಲ, ಆಯುರ್ವೇದದಲ್ಲಿ ತುಳಸಿ ರಸ ಔಷಧವೆಂದೇ ಪರಿಗಣಿಸಲಾಗಿದೆ. ತುಳಸಿ ಎಲೆಯನ್ನು ಹಾಗೆಯೇ ತಿನ್ನಬಹುದು, ಅಥವಾ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿಯೂ ಸೇವಿಸಬಹುದು. ಇದನ್ನು ನಿಮ್ಮ ಊಟದ ಬಳಿಕ ಸೇವಿಸಿದರೆ ಇನ್ನೂ ಒಳ್ಳೆಯದು
ಇದಲ್ಲದೆ, ಜೀರಿಗೆಯೂ ಹೊಟ್ಟೆಯ ಸಮಸ್ಯೆಗಳನ್ನು ದೂರವಾಗಿಸಲು ಬಳಸುತ್ತಾರೆ. ಜೀರಿಗೆಯನ್ನು ನೇರ ಬಾಯಿಗೆ ಹಾಕಬಹುದು ಅಥವಾ ಅವನ್ನು ನೀರಿನಲ್ಲಿ ಕುದಿಸಿ, ಬಿಸಿ ನೀರನ್ನೂ ಕುಡಿಯುವುದರಿಂದ ಹೆಚ್ಚು ಅನುಕೂಲವಾಗುತ್ತದೆ.