ಆ್ಯಪ್ನಗರ

ಮಲಬದ್ದತೆಯೇ? ಈ ಐದು ರುಚಿಕರ ಹಣ್ಣಿನ ರಸಗಳು ತೊಂದರೆಯನ್ನು ನಿವಾರಿಸಬಲ್ಲವು

ಒಂದು ವೇಳೆ ಎರಡು ದಿನಗಳವರೆಗೂ ಬಹಿರ್ದೆಶೆ ಆಗದೇ ಇದ್ದರೆ ಹಾಗೂ ಮುಂದಿನ ದಿನದ ಬಹಿರ್ದೆಶೆ ಅತಿ ಗಟ್ಟಿ ಹಾಗೂ ನೋವು ನೀಡುವಂತಹದ್ದಾಗಿದ್ದರೆ ಈ ಸ್ಥಿತಿಯೇ ಮಲಬದ್ದತೆಯಾಗಿದೆ. ಪ್ರತಿದಿನ ಆಗುತ್ತಿದ್ದರೂ ವಿಸರ್ಜನೆಗೆ ಹೆಚ್ಚಿನ ಒತ್ತಡ ಬೇಕಾಗಿದ್ದರೆ ಮತ್ತು ಹೆಚ್ಚು ಗಟ್ಟಿಯಾಗಿದ್ದರೂ ಇದನ್ನು ಮಲಬದ್ದತೆ ಎನ್ನಬಹುದು. ಈ ಸ್ಥಿತಿಗೆ ಕೆಲವು ಹಣ್ಣಿನ ರಸಗಳೇ ಔಷಧಿಯಾಗಬಲ್ಲವು.

Vijaya Karnataka Web 21 Jan 2021, 1:39 pm
ಮಲಬದ್ದತೆಯ ತೊಂದರೆ ಇರುವ ಯಾವುದೇ ವ್ಯಕ್ತಿ ವೈದ್ಯರ ಹೊರತಾಗಿ ಯಾರೊಂದಿಗೂ ಈ ತೊಂದರೆಯನ್ನು ಹೇಳಿಕೊಳ್ಳುವುದಿಲ್ಲ. ಮಲಬದ್ದತೆಯ ತೊಂದರೆಯ ಬಗ್ಗೆ ಚರ್ಚಿಸುವ ಮುನ್ನ ಮಲಬದ್ದತೆ ಹೇಗೆ ಎದುರಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ನಮ್ಮ ಆಹಾರ ಜೀರ್ಣಾಂಗಗಳಲ್ಲಿ ಚಲಿಸಲು ಸಾಕಷ್ಟು ಪ್ರಮಾಣದ ಕರಗುವ ಮತ್ತು ಕರಗದ ನಾರಿನಂಶಗಳು ಇರಬೇಕು. ಕರಗುವ ನಾರು ಎಂದರೆ ಇದು ಜೀರ್ಣಗೊಂಡು ದ್ರವರೂಪ ಪಡೆದರೂ ಕರುಳುಗಳಲ್ಲಿ ಹೀರಲ್ಪಡುವುದಿಲ್ಲ. ಉದಾಹರಣೆಗೆ ಬಾಳೆಹಣ್ಣು. ಕರಗದ ನಾರು ಎಂದರೆ ಜೀರ್ಣಾಂಗಗಳಲ್ಲಿ ಇವು ಕರಗದೇ ಮೂಲ ರೂಪವನ್ನು ಉಳಿಸಿಕೊಳ್ಳುತ್ತವೆ. ಉದಾಹರಣೆಗೆ ಟೊಮಾಟೋ ಸಿಪ್ಪೆ. ನಮ್ಮ ಜೀರ್ಣವ್ಯವಸ್ಥೆಗೆ ಇವೆರಡೂ ನಾರುಗಳು ಇರಬೇಕು. ಇವುಗಳ ಕೊರತೆಯಿಂದ ಆಹಾರದ ಚಲನೆ ಮತ್ತು ತ್ಯಾಜ್ಯಗಳ ವಿಸರ್ಜನೆಗೆ ಬಹಳ ಕಷ್ಟವಾಗುತ್ತದೆ. ನಮ್ಮ ದೊಡ್ಡ ಕರುಳುಗಳು ತ್ಯಾಜ್ಯದಿಂದ ನೀರನ್ನು ಹೀರಿಕೊಂಡು ತ್ಯಾಜ್ಯವನ್ನು ಗಟ್ಟಿಯಾಗಿಸುತ್ತಾ ಹೋಗುತ್ತದೆ.
Vijaya Karnataka Web you can try these juices to relieve constipation
ಮಲಬದ್ದತೆಯೇ? ಈ ಐದು ರುಚಿಕರ ಹಣ್ಣಿನ ರಸಗಳು ತೊಂದರೆಯನ್ನು ನಿವಾರಿಸಬಲ್ಲವು


ಸಾಮಾನ್ಯವಾಗಿ ಎರಡನೆಯ ದಿನ ನೀರು ಹೀರಿಕೊಳ್ಳುವಿಕೆ ಪರಿಪೂರ್ಣವಾಗುತ್ತದೆ ಹಾಗೂ ಮಲ ಅತಿ ಗಟ್ಟಿಯಾಗುತ್ತದೆ. ಇನ್ನೂ ಹೆಚ್ಚು ಕಾಲ ಮುಂದುವರೆದರೆ ಇದು ಇನ್ನಷ್ಟು ಗಟ್ಟಿಯಾಗುತ್ತಾ ಕಟ್ಟಿಗೆಯ ತುಂಡಿನಂತಾಗುತ್ತದೆ. ಈ ದೃಢತನದಿಂದಾಗಿಯೇ ಇದು ಚಲಿಸುವ ನಾಳಗಳ (ಗುದನಾಳ) ಒಳಗೋಡೆಗಳ ಮೇಲೆ ಅತಿಯಾದ ಒತ್ತಡ ಬೀಳುತ್ತದೆ ಹಾಗೂ ಗಾಯಗಳು ಮತ್ತು ಒಳಪದರದ ಒಂದು ಭಾಗವನ್ನು ಸೆಳೆದು ಒತ್ತಡದಿಮ್ದ ಬೆರಳಿನಾಕೃತಿಯಲ್ಲಿ ಮಲದ್ವಾರದ ಹೊರಗೆ ಬರುವಂತೆ ಮಾಡಬಹುದು. ಇದನ್ನು ಮೂಲವ್ಯಾಧಿ (haemorrhoids) ಎಂದು ಕರೆಯಲಾಗುತ್ತದೆ

​ಮೂತ್ರವ್ಯವಸ್ಥೆಯ ಮೇಲೂ ಪರಿಣಾಮ ಬೀರಬಹುದು

ಕೆಲವೊಮ್ಮೆ ಗಟ್ಟಿಯಾದ ಮಲದ ದೃಢವಾದ ಅಂಚು ಒಳಗೋಡೆಯನ್ನು ಹರಿದು ಗಾಯ ಮಾಡಬಹುದು. ಇದನ್ನು anal fissures ಎಂದು ಕರೆಯಲಾಗುತ್ತದೆ. ಅಲ್ಲದೇ ಕರುಳಿನಿಂದ ಮಲ ಹೆಚ್ಚು ಹೊತ್ತು ಹೊರಹೋಗದೇ ಇರುವ ಕಾರಣ ಹಿಂದೆ, ಅಂದರೆ ಸಣ್ಣಕರುಳಿನಲ್ಲಿಯೂ ಮಲದ ಸಂಗ್ರಹ ಹೆಚ್ಚುತ್ತಾ ಸೋಂಕು, ವ್ರಣ ಮೊದಲಾದವು ಎದುರಾಗಬಹುದು ಈ ಎಲ್ಲಾ ತೊಂದರೆಗಳನ್ನು ಸಾಮೂಹಿಕವಾಗಿ colonic conditions ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲ, ಮೂತ್ರವ್ಯವಸ್ಥೆಯ ಮೇಲೂ ಈ ತೊಂದರೆಗಳು ಪರೋಕ್ಷವಾಗಿ ಪ್ರಭಾವ ಬೀರಬಹುದು. ಇವನ್ನು urologic disorders ಎಂದು ಕರೆಯಲಾಗುತ್ತದೆ. ಇದಕ್ಕೆ ಅತಿ ಸರಳ ಪರಿಹಾರ ಎಂದರೆ ನಮ್ಮ ಆಹಾರದಲ್ಲಿ ಸಾಕಷ್ಟು ಕರಗದ ಮತ್ತು ಕರಗುವ ನಾರುಗಳು ಇರುವಂತೆ ನೋಡಿಕೊಳ್ಳುವುದು.

ಈ ಕೆಲಸವನ್ನು ಉತ್ತಮವಾಗಿ ನಿರ್ವಹಿಸುವ ಐದು ಬಗೆಯ ಹಣ್ಣಿನ ರಸಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಅದರೆ ಇವು ಸರಳ ಮನೆಮದ್ದುಗಳೇ ಹೊರತು ತಜ್ಞರು ನೀಡಿರುವ ಔಷಧಿಗಳಿಗೆ ಹಾಗೂ ವೃತ್ತಿಪರ ಚಿಕಿತ್ಸೆಗೆ ಎಂದೂ ಸಾಟಿಯಾಗಲಾರವು. ಅಲ್ಲದೇ ಇದು ಆಗಾಗ ಎದುರಾಗುವ ಸರಳ ಮಲಬದ್ದತೆಗೆ ಮಾತ್ರವೇ ಅನ್ವಯವಾಗುತ್ತವೆಯೇ ವಿನಃ ಗಂಭೀರ ಸ್ಥಿತಿಯ ಮಲಬದ್ದತೆ ಹಾಗೂ ಇದಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಸೂಕ್ತವಲ್ಲ. ಕೇವಲ ವೈದ್ಯರು ಮಾತ್ರವೇ ಈ ಸ್ಥಿತಿಯ ನಿಜವಾದ ಸ್ಥಿತಿಯನ್ನು ಪರಿಗಣಿಸಿ ಸೂಕ್ತ ಔಷಧಿ ಮತ್ತು ಚಿಕಿತ್ಸೆಯನ್ನು ನೀಡಬಲ್ಲರು.

ಹೊಟ್ಟೆಯನ್ನು ಕರಗಿಸಲು ತೆಂಗಿನೆಣ್ಣೆಯನ್ನು ಬಳಸುವುದು ಉತ್ತಮ

​ಮಲಬದ್ದತೆ ಸಾಮಾನ್ಯ ಕಾರಣಗಳು

ಮಲಬದ್ಧತೆಗೆ ಸಾಮಾನ್ಯ ಕಾರಣಗಳಲ್ಲಿ ದಿನದ ಅವಧಿಯಲ್ಲಿ ಸಾಕಷ್ಟು ನೀರು ಕುಡಿಯದಿರುವುದು, ಆಹಾರದಲ್ಲಿ ಸಾಕಷ್ಟು ನಾರಿನಂಶ ಇಲ್ಲದಿರುವುದು. ಉರಿಯೂತ ಉಂಟು ಮಾಡುವ ಕರುಳಿನ ಸಹಲಕ್ಷಣಗಳು, ಜಡತನದ ಅಥವಾ ದೈಹಿಕ ಚಲನೆ ಇಲ್ಲದ ಜೀವನಶೈಲಿ, ಗರ್ಭಧಾರಣೆ, ಕೆಲವು ಔಷಧಿಗಳು, ಪಾರ್ಶ್ವವಾಯು, ಮಧುಮೇಹ ಮತ್ತು ಇತರ ಕಾರಣಗಳಿರಬಹುದು.

​ಅನಾನಾಸಿನ ರಸ

ಅನಾನಾಸ್ ಹಣ್ಣಿನಲ್ಲಿ ನಮ್ಮ ಜೀರ್ಣವ್ಯವಸ್ಥೆಯ ಆರೋಗ್ಯವನ್ನು ಉತ್ತಮಗೊಳಿಸಲು ಸಹಾಯ ಮಾಡುವ ಹಲವಾರು ಗುಣಗಳಿವೆ. ಇವು ಬ್ರೊಮಿಲೈನ್ (bromelain) ಎಂಬ ಕಿಣ್ವವನ್ನು ಹೊಂದಿರುತ್ತದೆ, ಇದು ಕರುಳಿನಲ್ಲಿ ಆಹಾರದ ಚಲನೆಯನ್ನು ಸುಲಭವಾಗಿಸಲು ಸಹಾಯ ಮಾಡುತ್ತದೆ. ಇದರಲ್ಲಿ ದ್ರವಗಳು ಮತ್ತು ನೀರು ಸಹಾ ಇರುವ ಕಾರಣ, ಅದು ಮಲವನ್ನು ಸರಿಯಾಗಿ ಹಾದುಹೋಗಲು ಮೃದುವಾದ ಮಾರ್ಗವನ್ನು ರಚಿಸಲು ಸಹಾಯ ಮಾಡುತ್ತದೆ.

​ಸೇಬಿನ ರಸ

ದಿನಕ್ಕೊಂದು ಸೇಬು ಮಲಬದ್ದತೆಯನ್ನೂ ದೂರವಿರಿಸುತ್ತದೆ ಎಂದು ಹೇಳಬಹುದು. ಈ ಅದ್ಭುತ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ಕರಗದ ನಾರು, ಕರಗುವ ನಾರು, ಖನಿಜಗಳು ಮತ್ತು ವಿಟಮಿನ್ನುಗಳಿವೆ ಹಾಗೂ ಇವೆಲ್ಲವೂ ಮಲಬದ್ದತೆಯಾಗದೇ ಇರಲು ನೆರವಾಗುತ್ತವೆ. ಇದಕ್ಕಾಗಿ ಒಂದು ಸೇಬಿನ ತಿರುಳಿನಿಂದ ಬೀಜ ನಿವಾರಿಸಿ ಅರ್ಧ ಚಿಕ್ಕ ಚಮಚ ದೊಡ್ಡ ಜೀರಿಗೆ ಅಥವಾ ಸೌಂಫ್ ಪುಡಿ ಮತ್ತು ಅರ್ಧ ಕಪ್ ನೀರು ಹಾಕಿ ಮಿಕ್ಸಿಯ ಬ್ಲೆಂಡರಿನಲ್ಲಿ ನುಣ್ಣಗೆ ಅರೆಯಿರಿ. ಈ ರಸವನ್ನು ಕುಡಿಯುವ ಮೂಲಕ ಮಲಬದ್ದತೆಗೆ ಶೀಘ್ರವೇ ಪರಿಹಾರ ಸಿಗುತ್ತದೆ. ಸೌಂಫ್ ನಲ್ಲಿಯೂ ಉತ್ತಮ ಪ್ರಮಾಣದ ಕರಗದ ನಾರಿನಂಶವಿದೆ ಹಾಗೂ ಮಲದಲ್ಲಿ ನೀರಿನಂಶವನ್ನು ಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ ಹಾಗೂ ಸುಖವಾದ ವಿಸರ್ಜನೆಗೆ ನೆರವಾಗುತ್ತದೆ.

​ದ್ರಾಕ್ಷಾರಸ

ಕೊಂಚ ತಾಜಾ ದ್ರಾಕ್ಷಿಗಳನ್ನು ಅರ್ಧಕ್ಕೆ ಕತ್ತರಿಸಿ ಬೀಜಗಳನ್ನು ನಿವಾರಿಸಿ ಇದಕ್ಕೆ ಕೊಂಚ ಹಸಿಶುಂಠಿ ಬೆರೆಸಿ ಕೊಂಚ ನೀರಿನೊಂದಿಗೆ ಇನ್ನಷ್ತು ಅರೆಯಿರಿ. ಈ ರಸವನ್ನು ಕುಡಿದರೆ ಮಲಬದ್ದತೆ ಶೀಘ್ರವೇ ಇಲ್ಲವಾಗುತ್ತದೆ. ದ್ರಾಕ್ಷಿಯಲ್ಲಿರುವ ಕರಗದ ನಾರು ಮತ್ತು ನೀರಿನಂಶ ದೇಹಕ್ಕೆ ಅಗತ್ಯ ಆರ್ದ್ರತೆಯನ್ನು ಒದಗಿಸುವ ಜೊತೆಗೇ ಮಲವನ್ನು ಸುಲಭವಾಗಿ ವಿಸರ್ಜಿಸಲು ನೆರವಾಗುತ್ತದೆ.

ಊದಿರುವ ವಸಡಿನ ಸಮಸ್ಯೆಯೇ ಹಾಗಾದ್ರೆ ಈ ಮನೆ ಮದ್ದುಗಳನ್ನು ಬಳಸಿ

​ಕಿತ್ತಳೆ ರಸ

ಈ ರುಚಿಕರ ಹಣ್ಣಿನಲ್ಲಿ ವಿಟಮಿನ್ ಸಿ, ಖನಿಜಗಳು ಮತ್ತು ಆಹಾರದ ನಾರಿನಂಶಗಳು ಉತ್ತಮ ಪ್ರಮಾಣದಲ್ಲಿವೆ. ಇವೆಲ್ಲವೂ ದೇಹದಲ್ಲಿ ನೀರಿನಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕರುಳಿನಲ್ಲಿ ಆಹಾರದ ಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಸಿಪ್ಪೆ ಸುಲಿದು ಬೀಜ ನಿವಾರಿಸಿದ ಕಿತ್ತಳೆ ಹಣ್ಣಿನ ತೊಳೆಗಳನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಕೊಂಚ ಕಪ್ಪು ಉಪ್ಪನ್ನು ರಸಕ್ಕೆ ಸೇರಿಸಿ ನುಣ್ಣಗೆ ಅರೆಯಿರಿ. ಈ ರಸವನ್ನು ಸೇವಿಸುವ ಮೂಲಕ ಮಲಬದ್ದತೆ ಶೀಘ್ರವೇ ಇಲ್ಲವಾಗುತ್ತದೆ.

​ಲಿಂಬೆರಸ ಬೆರೆಸಿದ ನೀರು

ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಕರಗುವ ನಾರು ಉತ್ತಮ ಪ್ರಮಾಣದಲ್ಲಿವೆ, ಇವೆರಡೂ ಮಲಬದ್ಧತೆಗೆ ಅದ್ಭುತವಾದ ಪರಿಹಾರವನ್ನು ಒದಗಿಸುತ್ತವೆ. ಇದಲ್ಲದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸಬಹುದಾದ ಅತ್ಯುತ್ತಮ ಪರಿಹಾರವಾಗಿದೆ. ಒಂದು ಲೋಟದಲ್ಲಿ ಅರ್ಧ ಲಿಂಬೆಯ ರಸವನ್ನು ಹಿಂಡಿ ಕೊಂಚ ಜೇನು ಮತ್ತು ಜೀರಿಗೆ ಪುಡಿಯನ್ನು ಬೆರೆಸಿ ಅರ್ಧ ಲೋಟ ಉಗುರುಬೆಚ್ಚನೆಯ ನೀರು ಬೆರೆಸಿ ಕುಡಿಯಿರಿ. ಜೀರಿಗೆ ಪುಡಿಯೂ ಜೀರ್ಣಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ನೆರವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ