ಆ್ಯಪ್ನಗರ

ಕಾರಿನ ಗಾಜನ್ನು ಸಂಪೂರ್ಣವಾಗಿ ಮುಚ್ಚುವ ಮಂಜನ್ನು ತೊಡೆದುಹಾಕಲು ಈ ಟಿಪ್ಸ್ ಫಾಲೋ ಮಾಡಿ

ಕಾರಿನಲ್ಲಿ ವಿಂಡ್‌ ಶೀಲ್ಡ್ ಮತ್ತು ಕಿಟಕಿಗಳು ಮಂಜಿನಿಂದ ಕೂಡಿದಾಗ ಅದನ್ನು ತೆಗೆದುಹಾಕುವುದು ತುಂಬಾ ಕಠಿಣವಾಗಿದೆ. ಚಾಲನೆ ಮಾಡುವಾಗ ಬಹಳ ಕಷ್ಟವಾಗುತ್ತದೆ. ಆದರೆ ಇದಕ್ಕೂ ಕೆಲವು ಮಾರ್ಗಗಳಿವೆ.

Vijaya Karnataka Web 17 May 2021, 10:58 am
ಕಾರು ಚಾಲನೆ ಮಾಡುವವರಿಗೆ ಇದೊಂದು ತಲೆ ಬಿಸಿ. ಸಾಮಾನ್ಯವಾಗಿ ತಂಪು ವಾತವರಣದಲ್ಲಿ ಕಾರು ಚಲಾಯಿಸುವಾಗ ಅಥವಾ ಮಳೆ ಬಂದಾಗ ಅಥವಾ ಮಂಜಿನ ಹನಿಗಳು ನಮ್ಮ ಕಾರಿನ ಮುಂಭಾಗದಲ್ಲಿ ಅಂದರೆ ವಿಂಡ್‌ ಶೀಲ್ಡ್ ಮೇಲೆ ಬಿದ್ದಾಗ ಅದು ನೋಡಲು ಥೇಟ್ ಮಂಜುಗಡ್ಡೆಯಂತೆ ಕಾಣುತ್ತದೆ. ಆಗ ನಾವು ಮಂಜನ್ನು ಸಾಧ್ಯವಾದಷ್ಟು ಬೇಗ ತೊಡೆದುಹಾಕಲು ಬಯಸುತ್ತೇವೆ. ಇಲ್ಲದಿದ್ದರೆ ನಾವು ಸುರಕ್ಷಿತವಾಗಿ ರಸ್ತೆಯಲ್ಲಿ ಕಾರು ಚಲಾಯಿಸಲು ಸಾಧ್ಯವಾಗುವುದಿಲ್ಲ.
Vijaya Karnataka Web how to get rid of foggy car windows
ಕಾರಿನ ಗಾಜನ್ನು ಸಂಪೂರ್ಣವಾಗಿ ಮುಚ್ಚುವ ಮಂಜನ್ನು ತೊಡೆದುಹಾಕಲು ಈ ಟಿಪ್ಸ್ ಫಾಲೋ ಮಾಡಿ


ವಿಶೇಷವಾಗಿ ಚಳಿಗಾಲದಲ್ಲಿ, ಹೊರಗಿನಿಂದ ಬರುವ ತಂಪಾದ ಗಾಳಿಯು ವಾಹನದೊಳಗಿನ ಬೆಚ್ಚಗಿನ ಗಾಳಿಯನ್ನು ಭೇಟಿಯಾದಾಗ ನಿಮ್ಮ ಕಾರು ಮಂಜಿನಿಂದ ಆವರಿಸುತ್ತದೆ. ವಿಂಡ್‌ ಶೀಲ್ಡ್ ಒಳಗಿನಿಂದ ಮಂಜು ಉಂಟಾಗುತ್ತದೆ. ಆದರೆ ಈ ಕೆಳಗಿನ 6 ಸಲಹೆಗಳು ವಿಂಡ್‌ ಶೀಲ್ಡ್ ಮೇಲೆ ಬಿದ್ದಿರುವ ತೇವಾಂಶವನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ.

​ಕಾರಿನ ಗ್ರಿಲ್ ಅನ್ನು ಸ್ವಚ್ಛಗೊಳಿಸಿ

ಹೌದು, ನಮ್ಮ ಕಾರಿನ ಗ್ರಿಲ್ ಅನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯ. ಇವುಗಳು ಕೆಲವೊಮ್ಮೆ ಕಸ-ಕಡ್ಡಿ, ಎಲೆಗಳಿಂದಾಗಿ ಹೆಚ್ಚಾಗಿ ಮುಚ್ಚಿಹೋಗುತ್ತವೆ. ಮಳೆಯು ಅದನ್ನು ತೊಳೆಯಲು ಸಾಧ್ಯವಾಗದಿದ್ದರೆ, ಅದು ನಿಮ್ಮ ಕಾರಿನಲ್ಲೇ ಉಳಿದುಕೊಂಡುಬಿಡುತ್ತದೆ. ಕೊನೆಗೆ ಅದು ಕಾರಿನ ವಿಂಡೋಸ್ ಅನ್ನು ಮಂಜು ಕವಿಯುವಂತೆ ಮಾಡುತ್ತದೆ.

ಚಿಕನ್ ಫ್ರೆಶ್ ಆಗಿದೆ ಎಂದು ಕಂಡುಹಿಡಿಯುವುದು ಹೇಗೆ?

​ಹೀಟ್ ಆನ್ ಮಾಡಿ, ಕಿಟಕಿಯನ್ನು ತೆರೆಯಿರಿ

ವೆಂಟ್ ರೀಸರ್ಕ್ಯೂಲೇಶನ್ ಬಟನ್ ಆನ್ ಮಾಡಬೇಡಿ. ಬದಲಿಗೆ ಅದನ್ನು ಆಫ್ ಮಾಡಿ. ನೀವು ಹಾಗೆ ಮಾಡಿದರೆ, ನಿಮ್ಮ ಕಾರಿಗೆ ಹೊಸ ಗಾಳಿ ಬರುವುದಿಲ್ಲ. ತಂಪಾದ ಗಾಳಿಗಿಂತ ಬೆಚ್ಚಗಿನ ಗಾಳಿಯು ಹೆಚ್ಚು ತೇವಾಂಶವನ್ನು ಎಳೆದುಕೊಳ್ಳುತ್ತದೆ. ಈ ಮಧ್ಯೆ, ನಿಮ್ಮ ವಿಂಡ್‌ ಶೀಲ್ಡ್’ನಿಂದ ಮಂಜನ್ನು ತೆಗೆದುಹಾಕಲು ವೇಗವಾದ ಮತ್ತು ಸುಲಭವಾದ ಪರಿಹಾರವೆಂದರೆ ಕಿಟಕಿಗಳನ್ನು ತೆರೆಯುವುದು. ಕಿಟಕಿಗಳನ್ನು ಓಪನ್ ಮಾಡುವುದರಿಂದ ಆರ್ದ್ರತೆಯನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.

ನಿಮ್ಮ ವಿಂಡ್‌ ಸ್ಕ್ರೀನ್ ಮತ್ತು ಕಿಟಕಿಗಳು ಮಂಜು ಆಗಿರುವುದನ್ನು ನೀವು ಕಂಡುಕೊಂಡ ತಕ್ಷಣ, ಕಿಟಕಿಗಳನ್ನು ನಿಮ್ಮ ಎತ್ತರಕ್ಕೆ ತಕ್ಕಂತೆ ಕೆಳಗಿಳಿಸಿ ಮತ್ತು ಹೊರಗಿನ ಗಾಳಿ ಕಾರಿನ ಒಳಭಾಗವನ್ನು ತುಂಬಲು ಅನುಮತಿಸಿ. ಇದು ಕಾರಿನ ಒಳಭಾಗವನ್ನು ಹೊರಗಿನ ತಾಪಮಾನದಲ್ಲಿರಿಸುತ್ತದೆ ಮತ್ತು ಮಂಜಿನಿಂದ ಆವೃತವಾಗುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ.

​ಹವಾನಿಯಂತ್ರಣ (ಎಸಿ) ಸ್ಪೀಡ್ ಕಡಿಮೆ ಮಾಡಿ

ಹೆಚ್ಚಿನ ಜನರು ಬೇಸಿಗೆಯ ದಿನಗಳಲ್ಲಿ ತಂಪಾಗಿರಲು ಹವಾನಿಯಂತ್ರಣವನ್ನು ಆನ್ ಮಾಡುತ್ತಾರೆ. ಕಾರಿನೊಳಗೆ ತಂಪಾದ ಗಾಳಿಯು ಬೇಸಿಗೆಯಲ್ಲಿ ಸೊಗಸಾದ ಅನುಭವ ನೀಡಿದರೂ, ಚಾಲನೆ ಮಾಡುವಾಗ ಇದು ಸಾಕಷ್ಟು ಅಪಾಯಕಾರಿ. ನಿಮ್ಮ ವಿಂಡ್‌ ಶೀಲ್ಡ್ ‘ನಲ್ಲಿ ಮಂಜಿನಿಂದ ಆವೃತವಾಗುವ ಪ್ರಮಾಣವನ್ನು ಕಡಿಮೆ ಮಾಡಲು ನೀವು ಬಯಸಿದರೆ, ಹವಾನಿಯಂತ್ರಣದ ಸ್ಪೀಡ್ ಕಡಿಮೆ ಮಾಡಿ. ಇದು ಸ್ವಲ್ಪ ನಿಮಗೆ ಕಷ್ಟವಾದರೂ ಬೇರೆ ಆಪ್ಷನ್ ಇಲ್ಲ.

ಕಾರಿನೊಳಗೆ ತಾಪಮಾನ ಹೆಚ್ಚಾದಾಗ, ಇಲ್ಲಿನ ಗಾಳಿಯು ಹೊರಗಿನ ಗಾಳಿಗೆ ಹೊಂದಿಕೆಯಾಗಲು ಪ್ರಾರಂಭವಾಗುತ್ತದೆ ಮತ್ತು ತ್ವರಿತವಾಗಿ ಮಂಜು ಕಟ್ಟದಂತೆ ನಿಲ್ಲಿಸುತ್ತದೆ. ನಿಮ್ಮ ಕಾರು ಮಂಜಿನಿಂದ ಆವೃತವಾಗದಂತೆ ತಡೆಯಲು ನೀವು ಹೊರಗಿನ ಗಾಳಿಯನ್ನು ಕಾರೊಳಗೆ ಬರಲು ಸ್ವಲ್ಪ ಕಿಟಕಿ ತೆರೆಯಬೇಕು. ಇದು ತಾಪಮಾನವನ್ನು ತ್ವರಿತವಾಗಿ ಸಮತೋಲನಗೊಳಿಸುವುದಲ್ಲದೆ, ತಂಪಾದ ತಂಗಾಳಿಯನ್ನು ಆನಂದಿಸಲು ಸಹ ಅನುಮತಿಸುತ್ತದೆ.

ಬೇಳೆಕಾಳುಗಳನ್ನು ಬೇಯಿಸುವ ಮೊದಲು ನೀವು ಏಕೆ ನೆನೆಸಬೇಕು?

​ಕಾರನ್ನು ಡ್ರೈ ಆಗಿಡಿ

ಮಳೆಗಾಲದಲ್ಲಿ ಪ್ರತಿ ಬಾರಿ ನಿಮ್ಮ ಕಾರು ಹತ್ತುವ ಮೊದಲು ನೀವು ಮಳೆಯಲ್ಲಿ ಒದ್ದೆಯಾಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ, ನಿಮ್ಮ ಒದ್ದೆಯಾದ ಜಾಕೆಟ್, ಬ್ಯಾಗ್, ಛತ್ರಿ ಮತ್ತು ಇತರ ವಸ್ತುಗಳನ್ನು ಕಾರಿನ ಟ್ರಂಕ್’ನಲ್ಲಿ ಇರಿಸಿ. ಇದು ನಿಮ್ಮ ಕಾರಿನಲ್ಲಿರುವ ಸೀಟ್, ಕ್ಯೂಶನ್ ಯಾವುದೇ ತೇವಾಂಶವನ್ನು ಹೀರಿಕೊಳ್ಳದಂತೆ ತಡೆಯುತ್ತದೆ. ನೀವು ಮನೆಗೆ ಬಂದ ನಂತರ, ಸ್ವಲ್ಪ ಗಾಳಿ ಬೀಸಲು ನಿಮ್ಮ ಕಿಟಕಿಗಳನ್ನು ತೆರೆಯುವುದು ಒಳ್ಳೆಯದು. ಅಂದರೆ, ನೀವು ನಿಲುಗಡೆಗೆ ಒಣ ಸ್ಥಳ ಅಥವಾ ಗ್ಯಾರೇಜ್ ಹೊಂದಿದ್ದರೆ ಹೀಗೆ ಮಾಡಬಹುದು.

​ಡಿಹ್ಯೂಮಿಡಿಫೈಯರ್

ಡಿಹ್ಯೂಮಿಡಿಫೈಯರ್ಸ್ ಅಥವಾ ವಿಶೇಷ ಕುಶನ್’ಗಳಂತಹ ವಿಶೇಷ ಡಿಹ್ಯೂಮಿಡಿಫೈಯಿಂಗ್ ಉತ್ಪನ್ನಗಳಿವೆ. ನಿಮ್ಮ ಕಾರಿನಲ್ಲಿನ ಆರ್ದ್ರತೆಯನ್ನು ತೊಡೆದುಹಾಕಲು ನೀವು ಇವುಗಳನ್ನು ಖರೀದಿಸಬಹುದು.

ಶಾಂಪೂ

ಮಂಜು ತಡೆಗಟ್ಟಲು ವಿಂಡ್‌ ಶೀಲ್ಡ್ ಒಳಭಾಗದಲ್ಲಿ ಸ್ವಲ್ಪ ಸೋಪ್ ಅಥವಾ ಶಾಂಪೂ ಉಜ್ಜಿ. ಆದರೆ ಹೆಚ್ಚು ಉಜ್ಜಬೇಡಿ. ಇದರಿಂದ ನಿಮಗೆ ರಸ್ತೆಯನ್ನು ಸರಿಯಾಗಿ ನೋಡಲು ಸಾಧ್ಯವಾಗುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ