ಆ್ಯಪ್ನಗರ

ಮನೆಯೊಳಗೆ ಸಕಾರಾತ್ಮಕತೆ ಹೆಚ್ಚಿಸಲು ಈ ಬದಲಾವಣೆಯನ್ನು ಮಾಡಿ

ಮನೆಯ ವಾತಾವರಣವನ್ನು ಸಕಾರಾತ್ಮಕ ರೀತಿಯಲ್ಲಿ ಬದಲಿಸಿಕೊಂಡರೆ ಮನೆಯ ವಾತಾವರಣವು ಹಿತವಾಗಿರುತ್ತದೆ. ಜೊತೆಗೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಉತ್ಸಾಹ ದೊರೆಯುವುದು.

Vijaya Karnataka Web 19 Oct 2020, 6:37 pm
ಮನೆಯು ಪ್ರತಿಯೊಬ್ಬರಿಗೂ ಮನಸ್ಸಿಗೆ ಹಿತವನ್ನು ಹಾಗೂ ದೇಹಕ್ಕೆ ವಿಶ್ರಾಂತಿಯನ್ನು ನೀಡುವ ಸ್ಥಳ. ಮನೆಯಲ್ಲಿ ನೆಮ್ಮದಿಯ ವಾತಾವರಣ ಹಾಗೂ ಸಂತೋಷದ ವಾತಾವರಣ ಇದ್ದರೆ ಮಾಡುವ ಕೆಲಸದಲ್ಲಿ ಉತ್ಸಾಹ ಹಾಗೂ ವರ್ತನೆಯಲ್ಲಿ ಚೈತನ್ಯ ಶೀಲತೆಯು ತಾನಾಗಿಯೇ ಬರುವುದು. ಅದೇ ಮನೆಯಲ್ಲಿ ನಕಾರಾತ್ಮಕ ವಾತಾವರಣ, ನೆಮ್ಮದಿ ಇಲ್ಲದೆ ಇದ್ದರೆ ಬದುಕು ಬೇಸರ ಎನಿಸುವುದು. ಜೊತೆಗೆ ಯಾವುದೇ ಕೆಲಸವನ್ನು ಕೈಗೊಳ್ಳಲು ಆಸಕ್ತಿ ಇರುವುದಿಲ್ಲ. ಇದೀಗ ಸೋಂಕಿನ ಕಾರಣದಿಂದಾಗಿ ಮನೆಯಲ್ಲಿಯೇ ಇರುವ ಪರಿಸ್ಥಿತಿ ಬಂದಿದೆ.
Vijaya Karnataka Web this tips can help you to create a positive aura at home
ಮನೆಯೊಳಗೆ ಸಕಾರಾತ್ಮಕತೆ ಹೆಚ್ಚಿಸಲು ಈ ಬದಲಾವಣೆಯನ್ನು ಮಾಡಿ


​ಗೋಡೆಯ ಬಣ್ಣ ಬದಲಿಸಿ

ಮನೆಯಲ್ಲಿ ಇರುವ ಗೋಡೆಗಳಿಗೆ ಇರುವ ಬಣ್ಣಗಳು ನಮ್ಮ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಖಾಲಿ ಗೋಡೆ ಅಥವಾ ಈ ಹಿಂದೆ ಬಳಸಿದ ಬಣ್ಣಗಳು ಮಾಸಿದಂತಾಗಿದ್ದರೆ ಹೊಸ ಬಣ್ಣವನ್ನು ಬಳಿಯುವುದರ ಮೂಲಕ ಮನೆಗೆ ಹೊಸ ಸೊಬಗನ್ನು ನೀಡಿ. ಮನೆಗೆ ಹೊಸ ವಾತಾವರಣವು ಮಾನಸಿಕವಾಗಿ ಸಕಾರಾತ್ಮಕ ಬದಲಾವಣೆಯನ್ನು ನೀಡುವುದು. ಬಣ್ಣವನ್ನು ಸೃಜನ ಶೀಲತೆಯಿಂದ ಬಳಸಿದರೆ ಮನೆಯು ಹೊಸ ವಿನ್ಯಾಸದಲ್ಲಿ ರೂಪಗೊಂಡಂತೆ ಕಾಣುವುದು.

​ಮನೆಯೊಳಗಿನ ಪೀಠೋಪಕರಣ

ಮನೆಯಲ್ಲಿ ಹಾಳಾದ ಪೀಠೋಪಕರಣಗಳು ಹಾಗೂ ವಿಘ್ನಗೊಂಡ ಮೂರ್ತಿಗಳು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತವೆ. ಅಂತಹ ವಸ್ತುಗಳನ್ನು ತೆಗೆದು, ಸುಂದರವಾದ ಪೀಠೋಪಕರಣಗಳ ಆಯ್ಕೆ ಅಥವಾ ನೀವೇ ಕೈಯಲ್ಲಿ ತಯಾರಿಸಿದ ಕೆಲವು ಕಲಾಕೃತಿಯಿಂದ ಮನೆಯನ್ನು ಸಿಂಗರಿಸಿ. ಮನೆಯ ಸದಸ್ಯರ ಸುಂದರ ಭಾವಚಿತ್ರಗಳನ್ನು ಗೋಡೆಯ ಮೇಲೆ ಇರಿಸಿ. ಅದು ನಿಮಗೆ ಹೆಚ್ಚು ಸಂತೋಷ ಹಾಗೂ ಹೆನ್ನೆಯ ಭಾವನೆಯನ್ನು ನೀಡುವುದು. ಜೊತೆಗೆ ಮನೆಯಲ್ಲಿಯೇ ಕೆಲಸ ಮಾಡಲು ಉತ್ಸಾಹ ದೊರೆಯುವುದು.

ತುಪ್ಪವನ್ನು ಕೆಡದಂತೆ ದೀರ್ಘ ಕಾಲ ಇಡಲು ಕೆಲವೊಂದು ಟಿಪ್ಸ್‌ಗಳು

​ಸ್ವಚ್ಛತೆಗೆ ಆಧ್ಯತೆ ನೀಡಿ

ಮನೆಯಲ್ಲಿ ಇರುವ ವಸ್ತುಗಳನ್ನು ಮನಸ್ಸಿಗೆ ಕಂಡಂತೆ ಎಸೆದಿಡಬಾರದು. ಒಮ್ಮೆ ಬಳಸಿದ ವಸ್ತುಗಳನ್ನು ಸರಿಯಾಗಿ ಎತ್ತಿಡಬೇಕು. ಎಲ್ಲೆಂದರಲ್ಲಿ ಬಟ್ಟೆ, ಪೇಪರ್, ಇನ್ನಿತರ ಸಲಕರಣೆಗಳನ್ನು ಬಿಸಾಡಬಾರದು. ಪ್ರತಿಯೊಂದಕ್ಕೂ ಒಂದೊಂದು ವಿಶೇಷ ಸ್ಥಳವನ್ನು ಮಾಡಿ, ಅಲ್ಲಿಯೇ ಅಚ್ಚುಕಟ್ಟಾಗಿ ಎತ್ತಿಡಬೇಕು. ಮನೆಯ ಮೂಲೆಯಲ್ಲಿ ಜೇಡರ ಬಲೆ ಕಟ್ಟಿರದಂತೆ ನೋಡಿಕೊಳ್ಳಬೇಕು. ಆಹಾರ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ. ಅವುಗಳು ಇದ್ದಲ್ಲಿ ಇರುವೆಗಳು ಹಾಗೂ ಕ್ರಿಮಿ ಕೀಟಗಳು ಉತ್ಪತ್ತಿಯಾಗುತ್ತವೆ. ಸೋಫಾ, ಹಾಸಿಗೆ ಇರುವ ಪ್ರದೇಶದಲ್ಲಿ ಆಹಾರ ಸೇವಿಸುವುದನ್ನು ನಿಲ್ಲಿಸಿ. ಊಟ ತಿಂಡಿಗಾಗಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಂಡು, ನಿತ್ಯವೂ ಮನೆಯವರೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡಿ. ಮನೆಯಲ್ಲಿ ಸ್ವಚ್ಛತೆ ಹಾಗೂ ಒಗ್ಗಟ್ಟು ಇದ್ದಾಗ ಮನೆ ಮಂದಿಯಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚುವುದು.

ನಿಂಬೆ ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಎಂತೆಂಥಾ ಉಪಯೋಗಗಳಿವೆ ಗೊತ್ತಾ?

​ವಿಶ್ರಾಂತಿ ಪಡೆಯುವ ಸ್ಥಳ

ಸಾಮಾನ್ಯವಾಗಿ ವಿಶ್ರಾಂತಿ ಪಡೆಯುವ ಸ್ಥಳ ಎಂದರೆ ಮಲಗುವ ಕೋಣೆ. ಅಲ್ಲಿಯ ವಾತಾವರಣವು ಮಾನಸಿಕವಾಗಿ ಖುಷಿಯನ್ನು ಹಾಗೂ ನಿರಾಳತೆಯನ್ನು ನೀಡುವಂತೆ ಇರಬೇಕು. ಹಾಸಿಗೆಯ ಬಟ್ಟೆಯು ಸ್ವಚ್ಛತೆಯಿಂದ ಇರಬೇಕು. ಜೊತೆಗೆ ಬಟ್ಟೆಗಳನ್ನು ಕಬೋರ್ಡ್‍ಗಳಲ್ಲಿ ಅಚ್ಚುಕಟ್ಟಾಗಿ ಜೋಡಿಸಿ ಇಡುವುದು, ತಾಜಾ ಹೂವುಗಳಿಂದ ಕೂಡಿರುವ ಒಂದು ಹೂವಿನ ಕುಂಡ ಇಟ್ಟುಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು. ಕೋಣೆಯ ಕಿಟಕಿಗಳನ್ನು ಸೂಕ್ತ ಸಮಯಗಳಲ್ಲಿ ತೆರೆದಿಟ್ಟು ತಾಜಾ ಗಾಳಿ ಒಳಗೆ ಪ್ರವೇಶಿಸುವಂತೆ ನೋಡಿ. ಬೆವರು ಅಥವಾ ಇನ್ಯಾವುದೇ ವಾಸನೆಗಳು ಮಲಗುವ ಕೋಣೆಯಲ್ಲಿ ತುಂಬಿರಬಾದರು. ಆಗ ಉತ್ತಮ ವಿಶ್ರಾಂತಿ ಹಾಗೂ ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳುವಾಗ ಒಂದಿಷ್ಟು ಮಾನಸಿಕ ನೆಮ್ಮದಿ ದೊರೆಯುವುದು.

To read in English click: Make these simple changes for a positive aura at home

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ