ಆ್ಯಪ್ನಗರ

ರೋಗ ರುಜಿನ ದೂರವಾಗಲು ಮನೆಯ ಸ್ವಚ್ಛತೆ ಹೀಗಿರಲಿ...

ಧೂಳು ಹಾಗೂ ಕಸ ತುಂಬಿರುವಂತಹ ಮನೆಯನ್ನು ತುಂಬಾ ಸುಲಭವಾಗಿ ಶುಚಿ ಮಾಡಬಹುದು.

Vijaya Karnataka Web 17 May 2021, 11:55 am
ಮನೆಯು ಶುಚಿಯಾಗಿದ್ದರೆ, ದೇಹದ ಆರೋಗ್ಯವು ಉತ್ತಮವಾಗಿರುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಧೂಳು, ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳು ಗಂಭೀರ ರೀತಿಯ ಅನಾರೋಗ್ಯವನ್ನು ಉಂಟು ಮಾಡಬಹುದು.
Vijaya Karnataka Web tips for cleaning home to keep diseases at bay
ರೋಗ ರುಜಿನ ದೂರವಾಗಲು ಮನೆಯ ಸ್ವಚ್ಛತೆ ಹೀಗಿರಲಿ...


ಕೆಲವೊಂದು ಸಲ ಇದರಿಂದ ಅಲರ್ಜಿ, ಅಸ್ತಮಾ ದಾಳಿ ಕಂಡುಬರಬಹುದು. ಹೀಗಾಗಿ ಸಂಪೂರ್ಣ ಮನೆ ಹಾಗೂ ಕೋಣೆಯನ್ನು ಶುಚಿಯಾಗಿಡುವುದು ಅತೀ ಅಗತ್ಯ.

ಆದರೆ ಮನೆಯನ್ನು ಶುಚಿ ಮಾಡುವುದು ತುಂಬಾ ಕಠಿಣ ಕೆಲಸ, ಇದನ್ನು ಸರಳವಾಗಿ ಮಾಡುವುದು ಹೇಗೆ ಎಂದು ತಿಳಿಯಲು ಸ್ಕ್ರೋಲ್ ಡೌನ್ ಮಾಡುತ್ತಾ ಸಾಗಿ.

​ಒಂದು ಹೆಜ್ಜೆ ಮಾತ್ರ

ದೊಡ್ಡ ಮನೆಯಾಗಿದ್ದರೆ, ಆಗ ಒಬ್ಬರೇ ಎಲ್ಲಾ ಕೋಣೆಗಳನ್ನು ಶುಚಿ ಮಾಡುವುದು ತುಂಬಾ ಕಷ್ಟ. ಇದಕ್ಕಾಗಿ ಒಂದು ಸಲ ಒಂದೇ ಕೋಣೆಯನ್ನು ಶುಚಿ ಮಾಡಿ. ಪ್ರತಿಯೊಂದು ಕೋಣೆಯನ್ನು ಶುಚಿ ಮಾಡಲು ಮುಂದಾಲೋಚನೆ ಮಾಡಿಕೊಳ್ಳಬೇಕು. ಸರಳವಾಗಿ ಹೇಗೆ ಮಾಡುವುದು ಎಂದು ಯೋಚಿಸಿ.

​ಅಡುಗೆ ಮನೆಯ ನೆಲ

  • ಅಡುಗೆ ಮನೆಯ ನೆಲದಲ್ಲಿ ಹೆಚ್ಚಿನ ಅಂಟು ಪದಾರ್ಥಗಳು ನೆಲವನ್ನು ಸೇರಿರಬಹುದು. ಇದನ್ನು ತೆಗೆಯುವುದು ತುಂಬಾ ಕಷ್ಟವಾಗಬಹುದು. ಅಡುಗೆ ಮನೆಯ ನೆಲವನ್ನು ಶುಚಿ ಮಾಡಲು ನೀವು ಅದನ್ನು ಗಂಟೆಗಟ್ಟಲೆ ಉಜ್ಜಬೇಖಾಗಿಲ್ಲ.
  • ಇದಕ್ಕಾಗಿ ನೀವು ಬ್ಲೀಚ್ ನ್ನು ನೀರಿಗೆ ಹಾಕಿಕೊಂಡು ಬಳಸಿ. ಈ ಮಿಶ್ರಣವನ್ನು ಟೈಲ್ಸ್ ಮೇಲೆ ಹಾಕಿ ಮತ್ತು 20 ನಿಮಿಷ ಕಾಲ ಹಾಗೆ ಇರಲಿ. ಇದರ ಬಳಿಕ ಒದ್ದೆ ಬಟ್ಟೆಯಿಂದ ಒರೆಸಿ. ಇದರಿಂದ ಜಿಡ್ಡು, ಕಲೆ ಮತ್ತು ಶಿಲೀಂಧ್ರಗಳು ದೂರವಾಗುವುದು.

ಅಡುಗೆ ಮನೆಯ ಸ್ವಚ್ಛತೆಯ ಜೊತೆಗೆ, ಕೈಗಳನ್ನು ಸಹ ಸರಿಯಾಗಿ ತೊಳೆಯಬೇಕು!

​ಕಿಟಕಿಗಳು ಹೊಳೆಯುತ್ತಿರಲಿ

ನೀರಿಗೆ ಸ್ವಲ್ಪ ವಿನೇಗರ್ ಹಾಕಿಕೊಂಡು ಅದನ್ನು ಸ್ಪ್ರೇ ಬಾಟಲಿಗೆ ಹಾಕಿಕೊಳ್ಳಿ ಮತ್ತು ಇದನ್ನು ಕಿಟಕಿಯ ಗಾಜುಗಳಿಗೆ ಸ್ಪ್ರೇ ಮಾಡಿ. 2-3 ನಿಮಿಷ ಕಾಲ ಹಾಗೆ ಇರಲಿ. ಇದರ ಬಳಿಕ ಒಣ ಬಟ್ಟೆಯಿಂದ ನೀವು ಇದನ್ನು ಒರೆಸಿಕೊಳ್ಳಿ.

​ಕರ್ಟೈನ್ ಶುಚಿ ಮಾಡಿ

ಕರ್ಟೈನ್ ತುಂಬಾ ನಿಸ್ತೇಜ ಮತ್ತು ಧೂಳಿನಿಂದ ಕೂಡಿದ್ದರೆ, ಆಗ ನೀವು ಇದನ್ನು ತೆಗೆದು, ಒದ್ದೆ ಟವೆಲ್ ನೊಂದಿಗೆ ಅದನ್ನು ವಾಷಿಂಗ್ ಮೆಷಿನ್ ಗೆ ಹಾಕಿ. ಮೆಷಿನ್ ನಲ್ಲಿ ನೀರು ಹಾಕದೆ ಹಾಗೆ ಚಲಾಯಿಸಿ, ಈಗ ಧೂಳು ಸುಲಭವಾಗಿ ದೂರವಾಗುವುದು.

​ಗುಜರಿ

  • ಬಳಸದೆ ಇರುವಂತಹ ಸಾಮಗ್ರಿಗಳು ಮನೆಯಲ್ಲಿ ಶೇಖರಣೆ ಆಗಿದ್ದರೆ, ಅದರಿಂದ ಹೆಚ್ಚಿನ ಜಾಗವು ವ್ಯರ್ಥವಾಗುವುದು ಮತ್ತು ಇದರಲ್ಲಿ ಧೂಳು ಶೇಖರಣೆ ಆಗಿ ಅಲರ್ಜಿ ಕೂಡ ಕಾಡಬಹುದು.
  • ಇದನ್ನು ನಿವಾರಣೆ ಮಾಡಲು ಈ ಜಾಗವನ್ನು ಸರಿಯಾಗಿ ಶುಚಿ ಮಾಡಿ. ಬಳಸದೆ ಇರುವಂತಹ ವಸ್ತುಗಳನ್ನು ನೀವು ಆದಷ್ಟು ಹೊರಗೆ ಬಿಸಾಕಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ