ಸಕ್ಕರೆಕಾಯಿಲೆಯನ್ನು ಕಂಟ್ರೋಲ್ನಲ್ಲಿಡುತ್ತಂತೆ ಈ ಆಯುರ್ವೇದಿಕ್ ಪೌಡರ್
ಮಧುಮೇಹವನ್ನು ಕಂಟ್ರೋಲ್ನಲ್ಲಿಡಲು ಈ ಆಯುರ್ವೇದಿಕ್ ಮನೆಮದ್ದನ್ನು ತಿಳಿಸಿದ್ದಾರೆ ಪೌಷ್ಟಿಕತಜ್ಞೆ ಲವ್ಲೀನ್ ಕೌರ್. ಇದರಿಂದ ಆಹಾರ ಸೇವನೆಯ ನಂತರವೂ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಂಟ್ರೋಲ್ನಲ್ಲಿಡಬಹುದಂತೆ.
ಆಯುರ್ವೇದಿಕ್ ಪುಡಿ
ಈ ಔಷಧಿಯು ಮಧುಮೇಹವನ್ನು ಕಂಟ್ರೋಲ್ ಮಾಡಲು ಉತ್ತಮವಾಗಿದೆ ಎಂದು ಪೌಷ್ಟಿಕತಜ್ಞೆ ಲವ್ಲೀನ್ ಕೌರ್ ಹೇಳುತ್ತಾರೆ. ಅಂತಹ ಒಂದು ಪಾಕವಿಧಾನವೆಂದರೆ ಈ ಮನೆಯಲ್ಲಿ ತಯಾರಿಸಿದ ಪುಡಿ, ಇದು ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ನಿಧಾನಗೊಳಿಸುತ್ತದೆ. ಮಧುಮೇಹಕ್ಕೆ ಈ ಔಷಧಿಯನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆಂದು ತಿಳಿಯೋಣವೇ?
ಇದನ್ನೂ ಓದಿ: ಮಧುಮೇಹದ ಈ ಲಕ್ಷಣಗಳು ಕಾಣಿಸಿದ್ರೆ ಕಂಟ್ರೋಲ್ ಮಾಡಲು ಈ ನಾಲ್ಕು ಟಿಪ್ಸ್ ಸಾಕಂತೆ
ಪೌಷ್ಟಿಕತಜ್ಞೆ ಸಲಹೆ
ಬೇಕಾಗುವ ಸಾಮಾಗ್ರಿಗಳು
ಕರಿಮೆಣಸು - 100 ಕಾಳುಗಳು
ಏಲಕ್ಕಿ - 100 ಕಾಳುಗಳು
ಬಾದಾಮಿ - 100 ಕಾಳುಗಳು
ಮೆಂತ್ಯ ಬೀಜಗಳು - 2 ಟೀಸ್ಪೂನ್
ನೆಲ್ಲಿಕಾಯಿ ಪುಡಿ - 2 ಟೀಸ್ಪೂನ್
ಕಪ್ಪು ಕಡಲೆ - 250 ಗ್ರಾಂ
ಒಣ ಬೇವಿನ ಎಲೆಗಳು - 2 ಟೇಬಲ್ ಚಮಚ
ಜಾಮೂನ್ ಪುಡಿ - 2 ಟೇಬಲ್ ಚಮಚ
ಬಳಕೆಯ ವಿಧಾನ
ಈ ಎಲ್ಲಾ ವಸ್ತುಗಳನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ. ಊಟಕ್ಕೆ 30 ನಿಮಿಷಗಳ ಮೊದಲು ಸುಮಾರು 1 ಟೀಚಮಚ ಈ ಪುಡಿಯನ್ನು ನೀರಿನೊಂದಿಗೆ ಮಿಕ್ಸ್ ಮಾಡಿ ತೆಗೆದುಕೊಳ್ಳಿ. ಸಕ್ಕರೆ ಮಟ್ಟವು ಅಧಿಕವಾಗಿದ್ದರೆ, ನೀವು ದಿನಕ್ಕೆ ಎರಡು ಬಾರಿ ಈ ಇದನ್ನು ಸೇವಿಸಬಹುದು.
ಇದನ್ನೂ ಓದಿ: ರಾತ್ರಿ ಮಧುಮೇಹವನ್ನು ಕಂಟ್ರೋಲ್ನಲ್ಲಿಡಲು ಪೌಷ್ಟಿಕ ತಜ್ಞೆಯ ಸಲಹೆ ಇಲ್ಲಿದೆ
ಇದು ಮಧುಮೇಹವನ್ನು ಹೇಗೆ ಕಂಟ್ರೋಲ್ ಮಾಡುತ್ತದೆ?
ಮಧುಮೇಹಕ್ಕೆ ಮನೆಯಲ್ಲಿ ತಯಾರಿಸಿದ ಈ ಪುಡಿಯು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ ಅದು ರಕ್ತದಲ್ಲಿನ ಗ್ಲೂಕೋಸ್ ಅನ್ನು ಸ್ಥಿರಗೊಳಿಸುತ್ತದೆ. ಆದ್ದರಿಂದ ಆಹಾರ ಸೇವಿಸಿದ ನಂತರ ರಕ್ತದಲ್ಲಿನ ಸಕ್ಕರೆಯು ಇದ್ದಕ್ಕಿದ್ದಂತೆ ಏರುವುದಿಲ್ಲ.
ಬಾದಾಮಿ ಮತ್ತು ಕರಿಮೆಣಸಿನಲ್ಲಿರುವ ವಿಟಮಿನ್ ಇ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಮೂಲಕ ಮಧುಮೇಹಕ್ಕೆ ಪರಿಹಾರವನ್ನು ನೀಡುತ್ತದೆ.
ಗರ್ಭಿಣಿಯರು, ಮಧುಮೇಹದ ಔಷಧಿಗಳನ್ನು ತೆಗೆದುಕೊಳ್ಳುವ ರೋಗಿಗಳು ಅಥವಾ ಹೃದ್ರೋಗಿಗಳು ಈ ಪರಿಹಾರವನ್ನು ಟ್ರೈ ಮಾಡುವ ಮೊದಲು ಒಮ್ಮೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.