ಆ್ಯಪ್ನಗರ

ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿರ್ವಹಿಸಲು ಈರುಳ್ಳಿ ರಸ ಬೆಸ್ಟ್ ಅಂತೆ!

ಮಧುಮೇಹವು ನಿಮ್ಮ ಮುಖ್ಯ ಅಂಗಗಳಾದ ಮೂತ್ರಪಿಂಡ ಮತ್ತು ಕಣ್ಣುಗಳ ಮೇಲೂ ಪರಿಣಾಮ ಬೀರಬಹುದು. ಮಧುಮೇಹಕ್ಕೂ ಹೃದಯ ಸಂಬಂಧಿ ಸಮಸ್ಯೆಗಳಿಗೂ ಸಂಬಂಧವಿದೆ ಎಂಬ ವರದಿಗಳು ಸಹ ಸಾಮಾನ್ಯವಾಗಿ ಪ್ರಕಟವಾಗುತ್ತಲೇ ಇವೆ. ಇದಕ್ಕೊಂದು ಸುಲಭ ಮನೆಮದ್ದು ಎಂದರೆ ನೀರುಳ್ಳಿ ನೀರು.

Vijaya Karnataka Web 19 Nov 2020, 6:02 pm
ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುವ ಈ ಮಧುಮೇಹ ಎಂಬ ವಿಲಕ್ಷಣ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನ ಹೊಂದಿದೆ. ಒಮ್ಮೆ ಎದುರಾದ ಬಳಿಕ ಈ ಸ್ಥಿತಿಯನ್ನು ನಿರ್ವಹಿಸಲು ಏನೂ ಮಾಡದೇ ಇದ್ದಲ್ಲಿ, ಮಧುಮೇಹವು ನಿಮ್ಮ ಇತರ ಅಂಗಗಳಾದ ಮೂತ್ರಪಿಂಡ ಮತ್ತು ಕಣ್ಣುಗಳ ಮೇಲೂ ಪರಿಣಾಮ ಬೀರಬಹುದು. ಮಧುಮೇಹಕ್ಕೂ ಹೃದಯ ಸಂಬಂಧಿ ಸಮಸ್ಯೆಗಳಿಗೂ ಸಂಬಂಧವಿದೆ ಎಂಬ ವರದಿಗಳು ಸಹ ಸಾಮಾನ್ಯವಾಗಿ ಪ್ರಕಟವಾಗುತ್ತಲೇ ಇವೆ. ಎಲ್ಲಕ್ಕೂ ಮೊದಲು, ಮಧುಮೇಹ ಎಂದರೇನು? ಎಂಬುದನ್ನು ಅರಿತುಕೊಳ್ಳೋಣ. ಮಧು ಎಂದರೆ ಸಕ್ಕರೆ, ಮೇಹನ ಎಂದರೆ ಮೂತ್ರ. ಅಂದರೆ ಮೂತ್ರದಲ್ಲಿ ಸಕ್ಕರೆ ಇರುವ ರೋಗವೇ ಮಧುಮೇಹನ ಅಥವಾ ಹೃಸ್ವವಾಗಿ ಮಧುಮೇಹವಾಗಿದೆ. ರಕ್ತಕ್ಕೆ ಆಗಮಿಸುವ ಸಕ್ಕರೆಯನ್ನು ಒಡೆಯಲು ಮೇದೋಜೀರಕಾಂಗ ಇನ್ಸುಲಿನ್ ಎಂಬ ರಾಸಾಯನಿಕವನ್ನು ಉತ್ಪಾದಿಸುತ್ತದೆ. ಒಂದು ವೇಳೆ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿಯಾಗದೇ ಇದ್ದರೆ (ಟೈಪ್ 1) ಅಥವಾ ಉತ್ಪತ್ತಿಯಾದರೂ ಇದನ್ನು ದೇಹ ಬಳಸಿಕೊಳ್ಳಲು ವಿಫಲವಾದರೆ (ಟೈಪ್ 2) ಸಕ್ಕರೆ ಮೂತ್ರಪಿಂಡಗಳ ಮೂಲಕ ಶೋಧಿಸಲ್ಪಟ್ತು ಮೂತ್ರದ ಮೂಲಕ ಹೊರಹೋಗುತ್ತದೆ.
Vijaya Karnataka Web do you know that onion water will controle blood sugar
ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿರ್ವಹಿಸಲು ಈರುಳ್ಳಿ ರಸ ಬೆಸ್ಟ್ ಅಂತೆ!


​ಅನುವಂಶಿಕ ಕಾಯಿಲೆ

ಇವೆರಡು ಮಧುಮೇಹದ ಮುಖ್ಯ ಪ್ರಕಾರಗಳಾಗಿವೆ. ಇವುಗಳ ಹೊರತು Gestational diabetes ಎಂದು ಕರೆಯಲಾಗುವ ಗರ್ಭಾವಸ್ಥೆಯಲ್ಲಿ ಎದುರಾಗುವ ತಾತ್ಕಾಲಿಕ ಅವಧಿಯ ಮಧುಮೇಹವೂ ಕಾಣಿಸಿಕೊಳ್ಳುತ್ತದೆ. ಆದರೆ ಇದು ಬಾಣಂತನದ ಅವಧಿಯೊಂದಿಗೆ ತಾನಾಗಿಯೇ ಗುಣವಾಗುತ್ತದೆ. ಇನ್ನೊಂದು ವಿಧ ಎಂದರೆ ಮಧುಮೇಹದ ಪೂರ್ವಸ್ಥಿತಿ (Pre-diabetes). ಮಧುಮೇಹ ಅನುವಂಶಿಕ ಕಾಯಿಲೆಯಾಗಿದ್ದು ವಂಶಪಾರಂಪರ್ಯವಾಗಿ ಬರುವ ರೋಗವಾಗಿದ್ದು ಇದನ್ನು ಆದಷ್ಟೂ ತಡವಾಗಿಸಬಹುದೇ ಹೊರತು ಆವರಿಸಿದ ಬಳಿಕ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಇವುಗಳ ಲಕ್ಷಣಗಳನ್ನು ಅರಿತು ಆರೋಗ್ಯವನ್ನು ಕಾಪಾಡಿಕೊಂಡು ಹೋಗುವುದೇ ಉತ್ತಮ.

​ಮಧುಮೇಹ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ

ಮಧುಮೇಹವನ್ನು ನಿರ್ವಹಿಸುವಲ್ಲಿ ನಿಮ್ಮ ಆಹಾರವು ನಿರ್ಣಾಯಕ ಪಾತ್ರ ವಹಿಸುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಅನೇಕ ಆಹಾರಗಳು ನೆರವಾಗುತ್ತಿವೆ. ಇವುಗಳಲ್ಲಿ ಪ್ರಮುಖವಾದುದು ಹಲವು ಅಡುಗೆಗಳ ಮೂಲವಾಗಿರುವ ನೀರುಳ್ಳಿ. ಹೌದು, ನೀವು ಸರಿಯಾಗಿಯೇ ಓದಿದಿರಿ. ನಿಮ್ಮ ಮಧುಮೇಹ ನಿಯಂತ್ರಣದ ಆಹಾರದಲ್ಲಿ ಸಾಕಷ್ಟು ನೀರುಳ್ಳಿಯನ್ನು ಸೇರಿಸುವುದು ನಿಜಕ್ಕೂ ಒಂದು ಉತ್ತಮ ಉಪಾಯ, ಆದರೆ ಈ ಭಾಗವನ್ನು ಗಮನದಲ್ಲಿಟ್ಟುಕೊಳ್ಳಬೇಕು. 'ಎನ್ವೈರ್ನಮೆಂಟಲ್ ಹೆಲ್ತ್ ಇನ್ಸೈಟ್ಸ್' ('Environmental Health Insights) ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ತಾಜಾ ನೀರುಳ್ಳಿಯ ಸೇವನೆಯು ಟೈಪ್ -1 ಮತ್ತು ಟೈಪ್ -2 ಮಧುಮೇಹಿಗಳ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ನೀರುಳ್ಳಿ ಕಡಿಮೆ ಗ್ಲೈಸೆಮಿಕ್ ಕೋಷ್ಟಕ ಕ್ರಮಾಂಕ ಹೊಂದಿರುವ, ಅಂದರೆ ಅತಿ ಹೆಚ್ಚು ಹೊತ್ತು ಪಡೆದು ಜೀರ್ಣವಾಗುವ ಆಹಾರವಾಗಿದೆ ಹಾಗೂ ಅತಿ ನಿಧಾನವಾಗಿ ರಕ್ತದಲ್ಲಿ ಸಕ್ಕರೆ ಬೆರೆಯುವಂತೆ ಮಾಡುತ್ತದೆ.

ಆಹಾರದಲ್ಲಿ ದಾಸವಾಳದ ಹೂವನ್ನು ಸೇರಿಸಿಕೊಂಡರೆ ಎಂತಹ ಏನೆಲ್ಲಾ ಲಾಭ ಇದೆ


​ಇಷ್ಟವಾದ ರೂಪದಲ್ಲಿ ಸೇವಿಸಬಹುದು

ನೀರುಳ್ಳಿಯನ್ನು ಮಧುಮೇಹಿಗಳು ತಮಗೆ ಇಷ್ಟವಾದ ರೂಪದಲ್ಲಿ ಸೇವಿಸಬಹುದು. ನೀರುಳ್ಳಿ, ಸೂಪ್, ಸಾಲಾಡ್, ಸ್ಯಾಂಡ್ವಿಚ್, ಅಥವಾ ನಿಮ್ಮ ನೆಚ್ಚಿನ ಇತರ ಯಾವುದೇ ಖಾದ್ಯಗಳ ರೂಪದಲ್ಲಿ ಸೇವಿಸಿ. ಆದರೆ ಮಧುಮೇಹಿಗಳಿಗೆ ನೀರುಳ್ಳಿ ನೀರು ಉತ್ತಮ ಆಯ್ಕೆಯಾಗಿದ್ದು ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವಾಗಿದೆ ಹಾಗೂ ದೇಹದಿಂದ ಕಲ್ಮಶಗಳನ್ನು ನಿವಾರಿಸಲೂ ನೆರವಾಗುತ್ತದೆ. ಗರಿಷ್ಟ ಪ್ರಯೋಜನ ಪಡೆಯಲು ಈ ನೀರನ್ನು ದಿನದ ಪ್ರಥಮ ಆಹಾರವಾಗಿ ಬೆಳಿಗ್ಗೆ ಸೇವಿಸಬೇಕು.

ತಯಾರಿಸುವುದು ಹೇಗೆ?

ಮಧುಮೇಹವನ್ನು ನಿರ್ವಹಿಸಲು ನೆರವಾಗುವ ನೀರುಳ್ಳಿ ನೀರನ್ನು ತಯಾರಿಸುವ ವಿಧಾನವನ್ನು ಅರಿಯೋಣ

ಅಗತ್ಯವಿರುವ ಸಾಮಾಗ್ರಿಗಳು:

2 ಚಿಕ್ಕದಾಗಿ ಹೆಚ್ಚಿನ ಮಧ್ಯಮ ಗಾತ್ರದ ನೀರುಳ್ಳಿ

1 ಕಪ್ ನೀರು

1 ಚಿಕ್ಕ ಚಮಚ ಲಿಂಬೆರಸ

1 ಚಿಟಿಕೆ ಕಲ್ಲುಪ್ಪು

ತಯಾರಿಕಾ ವಿಧಾನ:

ಇವೆಲ್ಲವನ್ನೂ ಮಿಕ್ಸಿಯ ದೊಡ್ಡ ಜಾರ್ ನಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿ. ಬಳಿಕ ಲೋಟವೊಂದಕ್ಕೆ ಬಗ್ಗಿಸಿಕೊಳ್ಳಿ. ಸೋಸುವ ಅಗತ್ಯವಿಲ್ಲ. ಏಕೆಂದರೆ ನೀರುಳ್ಳಿನ ನಾರಿನಂಶ ನಿಮಗೆ ಅಗತ್ಯವಿದೆ.

ನೀರುಳ್ಳಿಯ ಕಟು ರುಚಿ ಮತ್ತು ವಾನಸೆಯನ್ನು ಕಡಿಮೆ ಮಾಡಲು ಉಪ್ಪು ನೆರವಾಗುತ್ತದೆ. ಒಂದು ವೇಳೆ ನಿಮಗೆ ನೀರುಳ್ಳಿಯ ರುಚಿ ಮತ್ತು ವಾಸನೆಯಿಂದ ತೊಂದರೆ ಇಲ್ಲ ಎಂದರೆ ಉಪ್ಪು ಹಾಕದೇ ಇದ್ದರೂ ಸರಿ. ಉಪ್ಪನ್ನು ಆದಷ್ಟೂ ಇಲ್ಲವಾಗಿಸಲು ಯತ್ನಿಸಿ. ಏಕೆಂದರೆ ಉಪ್ಪು ಹೆಚ್ಚಿದ್ದಷ್ಟೂ ರಕ್ತದ ಒತ್ತಡ ಹೆಚ್ಚುತ್ತದೆ. ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿದ್ದರೆ ನೀವು ಕೊಂಚವೇ ಜೇನನ್ನೂ ಬೆರೆಸಬಹುದು. ಆದರೆ ಕುಡಿಯುವ ಮುನ್ನ ಸಕ್ಕರೆಯ ಮಟ್ಟವನ್ನು ಪರೀಕ್ಷಿಸಿಕೊಳ್ಳಿ.

ಚಿಕ್ಕ ಪುಟ್ಟ ಸುಟ್ಟ ಗಾಯಗಳಿಗೆ ಆಲೂಗಡ್ಡೆ, ಜೇನಿನಂತಹ ಮನೆಮದ್ದೇ ಸಾಕು


​ಮುಂಜಾನೆ ಬರೀ ಹೊಟ್ಟೆಗೆ ಸೇವಿಸಿ

ಈ ನೀರನ್ನು ಮುಂಜಾನೆ ಎದ್ದ ತಕ್ಷಣ ದಿನದ ಮೊದಲ ಆಹಾರವಾಗಿ ಸೇವಿಸಿ. ಬಳಿಕ ಕೊಂಚ ಹೊತ್ತು, ಅಂದರೆ ಸುಮಾರು ಮುಕ್ಕಾಲು ಘಂಟೆಯಾದರೂ ಏನನ್ನೂ ಸೇವಿಸದಿರಿ ಹಾಗೂ ಈ ಸಮಯದಲ್ಲಿ ಸರಳ ವ್ಯಾಯಾಮ ನಡಿಗೆಗಳನ್ನು ನಿರ್ವಹಿಸಿ.

ಮಧುಮೇಹವನ್ನು ನಿರ್ವಹಿಸುವ ಜೊತೆಗೇ, ನೀರುಳ್ಳಿ ನೀರು ರೋಗನಿರೋಧಕ ಶಕ್ತಿ ಮತ್ತು ಚರ್ಮದ ಆರೋಗ್ಯಕ್ಕೂ ಒಳ್ಳೆಯದು ಏಕೆಂದರೆ ಇದು ಒಳಗೊಂಡಿರುವ ಉತ್ಕರ್ಷಣ ನಿರೋಧಕಗಳ ವ್ಯಾಪ್ತಿಯೇ ಇದಕ್ಕೆ ಕಾರಣ. ಆದರೂ ನೀವು ಸೇವಿಸುವ ಪ್ರಮಾಣದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಯಾವುದಕ್ಕೂ ಹೆಚ್ಚಿನದನ್ನು ದೀರ್ಘಾವಧಿಯಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ