ಮನೆ ಮದ್ದು: ಅಸಿಡಿಟಿ ನಿವಾರಣೆಗೆ ಸುಲಭೋಪಾಯ
-ಹೆಚ್ಚು ಹುಳಿ, ಉಪ್ಪು ಹಾಗೂ ಖಾರದ ಆಹಾರ ಸೇವನೆ, ಎಣ್ಣೆಯಲ್ಲಿ ಕರಿದ ಆಹಾರ, ಮೈದಾ ಪದಾರ್ಥಗಳು, ಹಸಿವಿದ್ದರೂ ಆಹಾರ ಸೇವಿಸದಿರುವುದು ಈ ಎಲ್ಲಾ ಕಾರಣದಿಂದ ಅಸಿಡಿಟಿ ಹೆಚ್ಚಾಗುತ್ತದೆ.
-ಒಂದು ಚಮಚ ಪುದೀನಾ ರಸಕ್ಕೆ 1/2 ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿದರೆ ಎದೆ ಉರಿ ನಿವಾರಣೆಯಾಗುತ್ತದೆ.
-ಹೊಟ್ಟೆ ಉರಿ ಇದ್ದರೆ ಖಾಲಿ ಹೊಟ್ಟೆಗೆ ಸಮಪ್ರಮಾಣದ ಹುರಿದ ಜೀರಿಗೆ ಮತ್ತು ಒಣಗಿಸಿದ ಬೆಲ್ಲ ಹಾಗೂ ತುಪ್ಪ ಸೇವಿಸಬೇಕು.
-ಒಂದು ಚಮಚ ಕೊತ್ತಂಬರಿ ಬೀಜವನ್ನು ಎರಡು ಲೋಟ ತಣ್ಣೀರಿನಲ್ಲಿ ಹಾಕಿ ನೆನೆಸಿ. ನಂತರ ಸೋಸಿದ ನೀರನ್ನು ಕುಡಿದರೆ ಅಸಿಡಿಟಿ ಗುಣವಾಗುತ್ತದೆ.
-ಒಂದು ನಿಂಬೆ ರಸಕ್ಕೆ 5 ಗ್ರಾಂ ಸಕ್ಕರೆ ಕಲಸಿ ಸೇವಿಸಿದರೆ ಎದೆ ಉರಿ ಕಡಿಮೆಯಾಗುತ್ತದೆ.
-ನಿಯಮಿತ ಪ್ರಮಾಣದಲ್ಲಿ ಗುಲ್ಕಂದ್ ಸೇವಿಸಿದರೆ ಅಸಿಡಿಟಿ ನಿವಾರಣೆಯಾಗುತ್ತದೆ.
-ಬೂದುಕುಂಬಳದ ರಸಕ್ಕೆ ಕಲ್ಲುಸಕ್ಕರೆ ಸೇರಿಸಿ ಖಾಲಿ ಹೊಟ್ಟೆಗೆ ಕುಡಿದರೆ ಅಸಿಡಿಟಿ ಗುಣವಾಗುತ್ತದೆ.
-10 ಗ್ರಾಂ ಒಣ ದ್ರಾಕ್ಷಿ ಹಾಗೂ 5 ಗ್ರಾಂ ಸೊಂಪು ಎರಡನ್ನೂ ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಅದನ್ನು ಕಲಸಿ ಸೇವಿಸಿದರೆ ಅಸಿಡಿಟಿ ನಿವಾರಣೆಯಾಗುತ್ತದೆ.
ಡಾ. ಸುಚೇತಾ ಜಯರಾಮ್.