ಆ್ಯಪ್ನಗರ

ಸಿಂಪಲ್ ಮನೆಮದ್ದು: ಹೊಟ್ಟೆ ನೋವು ಬಂದರೆ ಓಂಕಾಳುಗಳನ್ನು ಈ ರೀತಿ ಬಳಸಿ

ಒಂದು ವೇಳೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ನಿಮಗೆ ಹೊಟ್ಟೆ ನೋವು ಕಂಡು ಬರುತ್ತಿದ್ದರೆ, ಅದಕ್ಕೆ ಇಲ್ಲಿದೆ ಸುಲಭ ಪರಿಹಾರ...

Vijaya Karnataka Web 12 Aug 2022, 3:34 pm
ಮಹಿಳೆಯರಿಗೆ ಮತ್ತು ಪುರುಷರಿಗೆ ಹೊಟ್ಟೆ ನೋವು ಬೇರೆ ಬೇರೆ ಕಾರಣಗಳಿಂದ ಬರುತ್ತದೆ. ಅದರಲ್ಲಿ ಬಹುತೇಕ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೆಚ್ಚು ಬರುತ್ತದೆ ಎಂದು ಹೇಳುತ್ತಾರೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬರುವ ಹೊಟ್ಟೆ ನೋವು ಹೊಟ್ಟೆಯಲ್ಲಿ ಆಮ್ಲೀಯ ಪ್ರಮಾಣ ಇರುವವರೆಗೆ ಕಡಿಮೆ ಆಗುವುದಿಲ್ಲ. ಹಾಗೆಂದು ಪ್ರತಿಬಾರಿ ಗ್ಯಾಸ್ಟ್ರಿಕ್ ಆದಾಗ ಇದಕ್ಕೆ ಸಂಬಂಧಪಟ್ಟಂತೆ ಔಷಧಿ ಗಳನ್ನು ತೆಗೆದುಕೊಂಡು ಕೂರಲು ಸಾಧ್ಯವಿಲ್ಲ.
Vijaya Karnataka Web home remedies ajwain in different forms can cure your stomach pain
ಸಿಂಪಲ್ ಮನೆಮದ್ದು: ಹೊಟ್ಟೆ ನೋವು ಬಂದರೆ ಓಂಕಾಳುಗಳನ್ನು ಈ ರೀತಿ ಬಳಸಿ


ಏಕೆಂದರೆ ಈ ಅಭ್ಯಾಸ ಆನಂತರದಲ್ಲಿ ಅಡ್ಡ ಪರಿಣಾಮವಾಗಿ ತಿರುಗುತ್ತದೆ. ಹಾಗಾಗಿ ನೈಸರ್ಗಿಕವಾದ ರೂಪದಲ್ಲಿ ಏನಾದರೂ ಇದಕ್ಕೆ ಪರಿಹಾರ ಇದೆಯೇ ಎಂದು ಹುಡುಕುತ್ತಾ ಹೋದರೆ ಅಜ್ವೈನ್ ಅಥವಾ ಓಂಕಾಳುಗಳು ಪರಿಹಾರದಾಯಕವಾಗಿ ಕಾಣುತ್ತವೆ. ಬೇರೆಬೇರೆ ರೂಪಗಳಲ್ಲಿ ನಾವು ಓಂ ಕಾಳುಗಳನ್ನು ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರವಾಗಿ ಬಳಸಿಕೊಳ್ಳಬಹುದು.

ಓಂ ಕಾಳುಗಳನ್ನು ಜಗಿದು ತಿನ್ನಿ!

  • ನಿಮಗೆ ಯಾವಾಗಲಾದರೂ ಹೊಟ್ಟೆ ನೋವು ಬಂದರೆ, ಅದು ಸಾಮಾನ್ಯವಾಗಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಆಗಿರುತ್ತದೆ. ಈ ಸಂದರ್ಭದಲ್ಲಿ ನೀವು ಓಂ ಕಾಳುಗಳ ಸೇವನೆ ಮಾಡಿ ಹೊಟ್ಟೆ ನೋವಿನಿಂದ ಪರಿಹಾರ ಕಂಡುಕೊಳ್ಳಬಹುದು.
  • ಬಾಯಲ್ಲಿ ಒಂದು ಚಮಚ ಓಂ ಕಾಳುಗಳನ್ನು ಹಾಕಿಕೊಂಡು ಅದರ ರಸ ಸೇವನೆ ಮಾಡುತ್ತಾ ಮತ್ತು ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಕೇವಲ ಸ್ವಲ್ಪ ಹೊತ್ತಿನಲ್ಲಿ ಹೊಟ್ಟೆ ನೋವು ಪರಿಹಾರ ವಾಗುತ್ತದೆ.

ಓಂ ಕಾಳುಗಳ ನೀರು

ಒಂದು ಲೋಟ ನೀರಿನಲ್ಲಿ 1 ಟೀಚಮಚ ಓಂ ಕಾಳುಗಳನ್ನು ಹಾಕಿ ಚೆನ್ನಾಗಿ ಕುದಿಸಿ ನೀರು ಅರ್ಧಕ್ಕೆ ಬರುವಂತೆ ನೋಡಿಕೊಂಡು ಆನಂತರದಲ್ಲಿ ಅದನ್ನು ತಣ್ಣಗೆ ಮಾಡಿ ಸೋಸಿಕೊಂಡು ಕುಡಿಯುವುದ ರಿಂದ ಹೊಟ್ಟೆ ಉಬ್ಬರ ಅಥವಾ ಆಮ್ಲೀಯತೆ ದೂರವಾಗುತ್ತದೆ.

ವೀಳ್ಯದೆಲೆ ಮತ್ತು ಓಂಕಾಳು

ನೀವು ಎಲೆ-ಅಡಿಕೆ ಹಾಕಿಕೊಳ್ಳುವ ತರಹ ಸ್ವಲ್ಪ ಓಂ ಕಾಳುಗಳನ್ನು ವೀಳ್ಯದೆಲೆಯಲ್ಲಿ ಸೇರಿಸಿ ಅದನ್ನು ಬಾಯಿಯಲ್ಲಿ ಇಟ್ಟುಕೊಂಡು ಜಗಿದು ಅದರ ರಸ ಕುಡಿಯುವುದರಿಂದ ನಿಮ್ಮ ಜೀರ್ಣಶಕ್ತಿ ಹೆಚ್ಚಾಗುತ್ತದೆ ಮತ್ತು ನಿಮ್ಮ ಬಾಯಿಯಲ್ಲಿ ಬರುವಂತಹ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಇದು ನಿಮ್ಮ ದೇಹದಲ್ಲಿ ಜೀರ್ಣಶಕ್ತಿ ಉತ್ತಮವಾಗಲು ನೆರವಾಗುತ್ತದೆ ಮತ್ತು ಮೆಟಬಾಲಿಸಂ ಪ್ರಕ್ರಿಯೆ ಕೂಡ ಉತ್ತಮಗೊಳ್ಳುತ್ತದೆ.

ಓಂಕಾಳು ಮತ್ತು ಹೀಟಿಂಗ್ ಪ್ಯಾಡ್

ಒಂದು ಕಪ್ ಓಂಕಾಳು ತೆಗೆದುಕೊಂಡು ಅದನ್ನು ಬಣ್ಣ ಬದಲಾಗುವವರೆಗೆ ಚೆನ್ನಾಗಿ ಹುರಿದು ಅದನ್ನು ಒಂದು ಕಾಟನ್ ಬಟ್ಟೆಗೆ ವರ್ಗಾವಣೆ ಮಾಡಬೇಕು. ಬಟ್ಟೆಯನ್ನು ಸುತ್ತಿಕೊಂಡು ಹೊಟ್ಟೆ ನೋವು ಬರುವ ಭಾಗದಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಪರಿಹಾರವಾಗುತ್ತದೆ ಮತ್ತು ಹೊಟ್ಟೆ ನೋವು ಸಹ ದೂರವಾಗುತ್ತದೆ. ಆದರೆ ತುಂಬಾ ಬಿಸಿ ಇರುವ ಸಂದರ್ಭದಲ್ಲಿ ಇಟ್ಟುಕೊಳ್ಳುವುದು ಬೇಡ.

ಶುಂಠಿ ಮತ್ತು ಓಂಕಾಳುಗಳು

ಒಂದು ಇಂಚು ಶುಂಠಿ ತೆಗೆದುಕೊಂಡು ಅದರ ಜೊತೆ ಯಾವ ಕಾಳುಗಳನ್ನು ಹಾಕಿ ಚೆನ್ನಾಗಿ ಜಜ್ಜಿ ಅದಕ್ಕೆ ಒಂದು ಲೋಟ ನೀರು ಹಾಕಿ ಅರ್ಧಕ್ಕೆ ಬರುವವರೆಗೆ ಚೆನ್ನಾಗಿ ಕುದಿಸಬೇಕು. ಇದನ್ನು ಕುಡಿದರೆ ಹೊಟ್ಟೆಯಲ್ಲಿ ಇರುವಂತಹ ಆಮ್ಲೀಯತೆ ಬಹಳ ಬೇಗನೆ ದೂರವಾಗುತ್ತದೆ ಮತ್ತು ನಿಮ್ಮ ಜೀರ್ಣ ಶಕ್ತಿ ಕೂಡ ಅಧಿಕಗೊಳ್ಳುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ