ಆ್ಯಪ್ನಗರ

ಗಂಟಲು ಕೆರೆತ, ಕೆಮ್ಮು ಸಮಸ್ಯೆ ಹೋಗಲಾಡಿಸಲು ಹೀಗೆ ಮಾಡಿ

ಶುಂಠಿ ಟೀ ಕುಡಿಯಿರಿ. ಒಂದು ಲೀಟರ್‌ ನೀರಿಗೆ ಶುಂಠಿ ಹಾಕಿ ಚೆನ್ನಾಗಿ ಕುದಿಸಿ, ನೀರು ಕುದಿ ಬಂದು ಅರ್ಧ ಲೀಟರ್‌ ಆದಾಗ ಸೋಸಿ, ಆ ನೀರಿಗೆ ಜೇನು ಹಾಗೂ ನಿಂಬೆರಸ ಹಾಕಿ ಕುಡಿದರೆ ಗಂಟಲು ಕೆರೆತ ಕಡಿಮೆಯಾಗುವುದು.

TIMESOFINDIA.COM 24 May 2019, 5:16 pm
ಕೆಮ್ಮು, ಗಂಟಲು ಕೆರೆತ ಸಮಸ್ಯೆಯೇ? ಈ ಸರಳ ಮನೆಮದ್ದು ಮಾಡಿ ಸಮಸ್ಯೆ ಹೋಗಲಾಡಿಸಿ:
Vijaya Karnataka Web throat itching


1. ಗಂಟಲು ತುಂಬಾ ತುರಿಸುತ್ತಿದ್ದರೆ ಕೆಮ್ಮು ನಿಲ್ಲುವುದೇ ಇಲ್ಲ. ಮೊದಲಿಗೆ ಗಂಟಲು ಕೆರೆತ ಕಡಿಮೆ ಮಾಡಬೇಕು. ಅದಕ್ಕಾಗಿ ಒಂದು ಕಪ್‌ ಬಿಸಿ ನೀರಿಗೆ 1 ಚಮಚ ಆ್ಯಪಲ್ ಸಿಡರ್‌ ವಿನಿಗರ್‌ ಹಾಕಿ, 1ಚಮಚ ಜೇನು ಹಾಕಿ ಕುಡಿಯುವುದರಿಂದ ಗಂಟಲು ಕೆರೆತ ಕಡಿಮೆಯಾಗುವುದು.

2. ಗಂಟಲು ಕೆರೆತ ಕಡಿಮೆ ಮಾಡಲು ಬಿಸಿ ನೀರಿಗೆ ಉಪ್ಪು ಹಾಕಿ ಆಗಾಗ ಬಾಯಿ ಮುಕ್ಕಳಿಸಿ.

3. . ಒಂದು ಚಮಚ ಕೃಷ್ಣ ತುಳಸಿ ರಸಕ್ಕೆ 1 ಚಮಚ ಜೇನು 5-6 ಕಾಳು ಮೆಣಸನ್ನು ಪುಡಿ ಮಾಡಿ ಮಿಕ್ಸ್ ಮಾಡಿ ಅದನ್ನು ಸ್ವಲ್ಪ-ಸ್ವಲ್ಪ ಬಾಯಿಗೆ ಹಾಕಿದರೆ ಗಂಟಲು ಕೆರೆತ ಕಡಿಮೆಯಾಗುವುದು, ಕೆಮ್ಮು ಕೂಡ ಶಮನವಾಗುವುದು. ಇದನ್ನು ದಿನದಲ್ಲಿ ಎರಡು ಬಾರಿ ಮಾಡಿ.

4. ಗಂಟಲು ನೋವು ಕಂಡು ಬಂದರೆ ಬಿಸಿ ನೀರಿಗೆ ನಿಂಬೆರಸ ಹಾಕಿ ಅದಕ್ಕೆ ಸ್ವಲ್ಪ ಜೇನು ಸೇರಿಸಿ ಕುಡಿದರೆ ಒಳ್ಳೆಯದು.

5 . ಶುಂಠಿ ಟೀ ಕುಡಿಯಿರಿ. ಒಂದು ಲೀಟರ್‌ ನೀರಿಗೆ ಶುಂಠಿ ಹಾಕಿ ಚೆನ್ನಾಗಿ ಕುದಿಸಿ, ನೀರು ಕುದಿ ಬಂದು ಅರ್ಧ ಲೀಟರ್‌ ಆದಾಗ ಸೋಸಿ, ಆ ನೀರಿಗೆ ಜೇನು ಹಾಗೂ ನಿಂಬೆರಸ ಹಾಕಿ ಕುಡಿದರೆ ಗಂಟಲು ಕೆರೆತ ಕಡಿಮೆಯಾಗುವುದು.

6. ಚಕ್ಕೆ, ಬಾದಾಮಿ ಹಾಲು
ಒಂದು ಕಪ್ ಬಾದಾಮಿ ಹಾಲಿಗೆ ಸ್ವಲ್ಪ ಚಕ್ಕೆ ಹಾಕಿ, ರುಚಿಗೆ ತಕ್ಕ ಸಿಹಿ ಸೇರಿಸಿ ಕುಡಿಯುವುದರಿಂದ ಗಂಟಲು ಕರೆತ ಕಡಿಮೆಯಾಗುವುದು.

7. ಆಗಾಗ ಬಿಸಿ ನೀರು ಕುಡಿಯುವುದರಿಂದ ಗಂಟಲು ಕೆರೆತ ಕಡಿಮೆಯಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ