ಇದರಲ್ಲಿ ಮೊದಲಿಗೆ ಜನರಿಗೆ ಶೀತ ಉಂಟಾಗಿ ಆನಂತರದಲ್ಲಿ ಅದು ಕೆಮ್ಮು ಮತ್ತು ಜ್ವರವಾಗಿ ಬದಲಾಗುತ್ತದೆ. ಒಬ್ಬ ವ್ಯಕ್ತಿಯ ರೋಗನಿರೋಧಕ ಶಕ್ತಿಯ ನಿಜವಾದ ಸಾಮರ್ಥ್ಯ ಈ ಸಮಯದಲ್ಲಿ ಗೊತ್ತಾಗುತ್ತದೆ. ಕೇವಲ ಹೊರಗಿನ ತಾಪಮಾನ ಸಣ್ಣ ಪ್ರಮಾಣದಲ್ಲಿ ಏರುಪೇರು ಉಂಟಾದ ತಕ್ಷಣ ಮನುಷ್ಯನ ಆರೋಗ್ಯ ಹದಗೆಟ್ಟು ಹೋಗುತ್ತದೆ.
ಈ ಸಮಯದಲ್ಲಿ ಕಣ್ಣುಗಳಲ್ಲಿ ನೀರು ಸುರಿಯುವುದು, ಮೂಗಿನಲ್ಲಿ ನೆಗಡಿ, ಗಂಟಲು ನೋವು, ಮೈ ನಡುಕ ಹೀಗೆ ಹಲವಾರು ಸಮಸ್ಯೆಗಳು ಒಂದರ ಹಿಂದೆ ಒಂದು ಪ್ರಾರಂಭವಾಗುತ್ತವೆ. ಅದು ಅಲ್ಲದೆ ಗಾಳಿಯಿಂದ ಹರಡುವ ಇಂತಹ ಸಮಸ್ಯೆಗಳು ಬಹಳ ಬೇಗನೆ ಒಬ್ಬರಿಂದ ಒಬ್ಬರಿಗೆ ವರ್ಗಾವಣೆ ಆಗುತ್ತವೆ ಎಂದು ಹೇಳುತ್ತಾರೆ.
ಈ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳು
- ಮಳೆಗಾಲವೇ ಆದರೂ ಸರಿ ಸ್ವಚ್ಛತೆಗೆ ನಾವು ಹೆಚ್ಚು ಆದ್ಯತೆ ಕೊಡಬೇಕು. ಒಂದು ವೇಳೆ ನಿಮಗೆ ಇಂತಹ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳ ಆರಂಭಿಕ ಲಕ್ಷಣಗಳು ಕಂಡುಬಂದಿದ್ದರೆ, ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ
- ಗಾಳಿಯ ಮೂಲಕ ಹರಡುವ ವೈರಸ್ ಪ್ರಭೇದಗಳ ವಿರುದ್ಧ ರಕ್ಷಣೆಗಾಗಿ ನೀವು ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು.
- ಜನಸಂದಣಿ ಇರುವ ಜಾಗವನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ. ಏಕೆಂದರೆ ಗುಂಪಿನಲ್ಲಿ ಗೋವಿಂದ ಎನ್ನುವ ಹಾಗೆ ಯಾರಿಗೆ ಈಗಾಗಲೇ ಯಾವ ಆರೋಗ್ಯದ ಸೋಂಕು ಇರುತ್ತದೆ ಎಂದು ಹೇಳಲು ಬರುವುದಿಲ್ಲ.
ಕೈಗಳನ್ನು ಆಗಾಗ ಸ್ವಚ್ಛ ಮಾಡಿಕೊಳ್ಳುತ್ತಿರಿ
- ನಿಮ್ಮ ಕೈಗಳನ್ನು ಆಗಾಗ ಸ್ವಚ್ಛ ಮಾಡಿಕೊಳ್ಳುತ್ತಿರಬೇಕು. ನೀವು ಯಾವುದೇ ವಸ್ತುವನ್ನು ಮುಟ್ಟಿದರೂ ಸಹ ಕೈಗಳಿಗೆ ಸೋಪು ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ಒಂದು ವೇಳೆ ಸೋಪು ಲಭ್ಯತೆ ಇಲ್ಲದಿದ್ದರೆ ಸ್ಯಾನಿಟೈಸರ್ ಹಾಕಿ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಿ.
- ಕೆಮ್ಮುವಾಗ ಮತ್ತು ಸೀನುವಾಗ ನಿಮ್ಮ ಮೂಗು ಹಾಗೂ ಬಾಯಿಯನ್ನು ಸಾಧ್ಯವಾದಷ್ಟು ನಿಮ್ಮ ಮೊಣಕೈ ಮೂಲಕ ಅಡ್ಡಗಟ್ಟಿಕೊಳ್ಳಲು ಪ್ರಯತ್ನಿಸಿ.
- ಹೊರಗಡೆ ಮಳೆಯಲ್ಲಿ ಹೆಚ್ಚು ನೆನೆಯಲು ಹೋಗಬೇಡಿ. ನಿಮ್ಮ ದೇಹವನ್ನು ಆದಷ್ಟು ಉಷ್ಣಾಂಶದಿಂದ ಇರುವಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ದೇಹವನ್ನು ಹೆಚ್ಚು ತಂಪು ಮಾಡಿಕೊಳ್ಳಲು ಹೋಗಬೇಡಿ.
ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ
ಸದಾ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಹೊರಗಡೆ ಹೋದಂತಹ ಸಂದರ್ಭದಲ್ಲಿ ಕೇವಲ ಫಿಲ್ಟರ್ ಮಾಡಿದ ವಾಟರ್ ಬಾಟಲ್ ಖರೀದಿಸಿ ನೀರು ಕುಡಿಯಿರಿ. ರಸ್ತೆ ಬದಿಯ ನಲ್ಲಿ ನೀರು, ಅಕ್ಕಪಕ್ಕದ ಟಿ ಅಂಗಡಿಗಳಲ್ಲಿ ಸಿಗುವ ಜಗ್ಗು ನಲ್ಲಿ ತುಂಬಿರುವ ನೀರು ಕುಡಿಯಬೇಡಿ.
ಕಾಯಿಲೆ ಇರುವ ವ್ಯಕ್ತಿಗಳಿಂದ ನಿಮ್ಮ ಮಕ್ಕಳನ್ನು ದೂರ ಇರಿಸಿ
- ನಿಮ್ಮ ಮನೆಯಲ್ಲಿ ಸದಾ ಗಾಳಿ ಆಡುವಂತೆ ನೋಡಿಕೊಳ್ಳಿ. ನೀವು ಯಾವಾಗಲೂ ಮುಟ್ಟುವಂತಹ ವಸ್ತುಗಳನ್ನು ಆಗಾಗ ಸ್ಯಾನಿಟೈಸರ್ ನಿಂದ ಸ್ವಚ್ಛ ಮಾಡಿ.
- ಮುಖ್ಯವಾಗಿ ನೀವು ಬಳಸುವ ಫೋನ್ ಮೇಲ್ಮೈ ವೈರಸ್ ಮತ್ತು ಇನ್ನಿತರ ರೋಗಕಾರಕ ಸೂಕ್ಷ್ಮಾಣು ಕಣಗಳಿಂದ ತುಂಬಿರುತ್ತದೆ. ಹಾಗಾಗಿ ಇದರ ಸ್ವಚ್ಛತೆ ತುಂಬಾ ಅವಶ್ಯಕ.
ಮಳೆಗಾಲದ ಸೋಂಕುಗಳನ್ನು ನಿಯಂತ್ರಣ ಮಾಡುವಲ್ಲಿ ಅವಶ್ಯವಿರುವ ಮನೆಮದ್ದುಗಳು
ಇತ್ತೀಚಿಗಷ್ಟೇ ಕೇಂದ್ರ ಆಯುಷ್ ಸಚಿವಾಲಯ ಕೆಲವೊಂದು ಮನೆಮದ್ದುಗಳನ್ನು ಭಾರತೀಯ ಜನರಿಗಾಗಿ ಸೋಂಕುಗಳನ್ನು ದೂರ ತಿಳಿಸುವ ಸಲುವಾಗಿ ತಿಳಿಸಿದೆ. ಅವುಗಳನ್ನು ನೋಡುವುದಾದರೆ........
ಅರಿಶಿನ ಭರಿತ ಹಾಲು
- ಬಹಳಷ್ಟು ಹಿಂದಿನ ಕಾಲದಿಂದಲೂ ಜ್ವರ, ನೆಗಡಿ, ಕೆಮ್ಮು, ತಲೆನೋವು, ಮೂಗು ಕಟ್ಟುವಿಕೆ, ಎದೆ ಕಟ್ಟುವಿಕೆ, ಉಸಿರಾಡಲು ತೊಂದರೆ ಆಗುವುದು, ಗಂಟಲು ನೋವು ಇತ್ಯಾದಿಗಳ ಸಮಸ್ಯೆಗೆ ಹಾಲಿಗೆ ಅರಿಶಿನ ಬೆರೆಸಿ ಕುಡಿಯುವ ಪದ್ಧತಿ ಜಾರಿಯಲ್ಲಿ ಬಂದಿದೆ ಮತ್ತು ಯಶಸ್ವಿ ಕೂಡ ಆಗಿದೆ.
- ಅರಿಶಿನದಲ್ಲಿ ಔಷಧಿಯ ಗುಣಲಕ್ಷಣಗಳು ಸಾಕಷ್ಟು ಕಂಡುಬರುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಇದರ ಪಾತ್ರವನ್ನು ಮರೆಯುವಂತಿಲ್ಲ. ಇದರ ಜೊತೆಗೆ ಮೆದುಳಿನ ಕಾರ್ಯಚಟುವಟಿಕೆಯನ್ನು ಉತ್ತಮಪಡಿಸಿ ನೆನಪಿನ ಶಕ್ತಿಯನ್ನು ಸಹ ಅರಿಶಿನ ಹೆಚ್ಚು ಮಾಡುತ್ತದೆ.
ನೀರಿನ ಆವಿ ತೆಗೆದುಕೊಳ್ಳುವುದು ಉತ್ತಮ
- ನಿಮಗೆ ಈಗಾಗಲೇ ವಿಪರೀತ ಮೂಗು ಮತ್ತು ಎದೆ ಕಟ್ಟಿಕೊಂಡಿದ್ದರೆ, ಮೊದಲು ನೀರನ್ನು ಚೆನ್ನಾಗಿ ಕುದಿಸಿ, ಒಂದು ಅಗಲವಾದ ಪಾತ್ರೆಯಲ್ಲಿ ಹಾಕಿ, ಬೇಕೆಂದರೆ ಇದಕ್ಕೆ ಸ್ವಲ್ಪ ಉಪ್ಪು ಬೆರೆಸಿ ನೀರಿನ ಆವಿಯನ್ನು ನಿಮ್ಮ ಮೂಗು ಹಾಗೂ ಬಾಯಿಯ ಮೂಲಕ ತೆಗೆದುಕೊಳ್ಳುವ ಪ್ರಯತ್ನ ಮಾಡಿ.
- ನಿಮ್ಮ ತಲೆಯ ಭಾಗವನ್ನು ಟವಲ್ ನಿಂದ ಕವರ್ ಮಾಡಿಕೊಂಡು ಮೂಗಿನಿಂದ ನೀರಿನ ಆವಿಯನ್ನು ಒಳಗೆ ತೆಗೆದುಕೊಳ್ಳಿ. ನೀರಿನಲ್ಲಿ ನೀವು ಬೇಕೆಂದರೆ ಕೆಲವು ಎಸೆನ್ಶಿಯಲ್ ಆಯಿಲ್ ಮಿಶ್ರಣ ಮಾಡಬಹುದು ಅಥವಾ ಓಂ ಕಾಳು ಇಲ್ಲವೆಂದರೆ ಪುದೀನ ಸೊಪ್ಪನ್ನು ಸಹ ಮಿಶ್ರಣ ಮಾಡಬಹುದು. ಬಹಳಷ್ಟು ಪರಿಣಾಮಕಾರಿಯಾಗಿ ಇವುಗಳ ಪ್ರಭಾವ ನಿಮ್ಮ ಆರೋಗ್ಯದ ಮೇಲೆ ಇರುತ್ತದೆ.
- ಮೂಗು ಮತ್ತು ಎದೆ ಕಟ್ಟಿಕೊಂಡಿರುವವರೆಗೆ ಆಯುರ್ವೇದ ತಜ್ಞರು ಒಂದು ಸಲಹೆಯನ್ನು ಕೊಟ್ಟಿದ್ದಾರೆ. ಅದೇನೆಂದರೆ ಪುದೀನಾ ಸೊಪ್ಪಿನ ಮತ್ತು ಓಂ ಕಾಳುಗಳ ಜೊತೆಗೆ ನೀಲಗಿರಿ ಎಲೆಗಳನ್ನು ಹಾಕಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ಅದನ್ನು ಕುತ್ತಿಗೆ ಭಾಗಕ್ಕೆ ಮತ್ತು ಗಂಟಲಿನ ಭಾಗಕ್ಕೆ ಅನ್ವಯಿಸುವುದರಿಂದ ಅತ್ಯಂತ ಪರಿಣಾಮಕಾರಿಯಾಗಿ ಪರಿಹಾರವನ್ನು ಕಂಡುಕೊಳ್ಳಬಹುದು.