ಆ್ಯಪ್ನಗರ

"ಮೆಂತ್ಯೆ ಲಡ್ಡು" ತಿಂದ್ರೆ ಡಯಾಬಿಟೀಸ್‌ನ್ನು ಕಂಟ್ರೋಲ್ ಮಾಡಬಹುದು!

ಮೆಂತ್ಯೆ ಲಡ್ಡು ತಿಂದರೆ ಅದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಇದನ್ನು ಮಧುಮೇಹಿಗಳು ಅಲ್ಲದೆ ಇರುವವರು ತಿಂದರೂ ಆರೋಗ್ಯಕ್ಕೆ ಒಳ್ಳೆಯದು.

Vijaya Karnataka Web 11 Jun 2020, 1:56 pm
ಮಧುಮೇಹಿಗಳಿಗೆ ಏನಾದರೂ ಸಿಹಿ ತಿನ್ನಬೇಕು ಎನ್ನುವ ಮನಸ್ಸು ಬರುವುದು. ಅದರಲ್ಲೂ ಬಗೆ ಬಗೆಯ ಸಿಹಿ ತಿಂಡಿಗಳು, ಲಡ್ಡು ನೋಡಿದರಂತೂ ಅವರ ಬಾಯಿಯಲ್ಲಿ ನೀರು ಬರುವುದು. ಆದರೆ ಇದೆಲ್ಲವನ್ನೂ ತಿಂದರೆ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ಮತ್ತಷ್ಟು ಹೆಚ್ಚಿ ಸಮಸ್ಯೆಗಳು ಸೃಷ್ಟಿಯಾಗಬಹುದು.
Vijaya Karnataka Web homemade fenugreek ladoo to control diabetes
"ಮೆಂತ್ಯೆ ಲಡ್ಡು" ತಿಂದ್ರೆ ಡಯಾಬಿಟೀಸ್‌ನ್ನು ಕಂಟ್ರೋಲ್ ಮಾಡಬಹುದು!


ಇಂತಹ ಸಮಯದಲ್ಲಿ ಮಧುಮೇಹಿಗಳಿಗೆ ಕೆಲವೊಂದು ಸಿಹಿಗಳು ಬಂದಿವೆ. ಇದನ್ನು ಬಳಸಿದರೆ ಅದರಿಂದ ಯಾವುದೇ ಸಮಸ್ಯೆಯಾಗದು. ಇಂತಹ ಒಂದು ಸಿಹಿ ತಿಂಡಿಯಲ್ಲಿ ಮೆಂತ್ಯೆ ಲಡ್ಡು ಕೂಡ ಒಂದು. ಮಧುಮೇಹಿಗಳಿಗಾಗಿ ತಯಾರಿಸಲ್ಪಡುವಂತಹ ಮೆಂತ್ಯೆ ಲಡ್ಡುವಿನ ಬಗ್ಗೆ ತಿಳಿಯುವ.

ಮಧುಮೇಹಕ್ಕೆ ಮೆಂತ್ಯೆ ಲಡ್ಡು

ದೇಹದಲ್ಲಿನ ಅಂಗಾಂಶಗಳು ಇನ್ಸುಲಿನ್ ಗೆ ಸರಿಯಾಗಿ ಕೆಲಸ ಮಾಡದೆ ಇರುವುದೇ ಮಧುಮೇಹ ಎನ್ನಬಹುದು. ಈ ವೇಳೆ ಮಧುಮೇಹಿಯ ರಕ್ತದಲ್ಲಿನ ಸಕ್ಕರೆ ಮಟ್ಟವು ಸರಾಸರಿಗಿಂತಲೂ ಹೆಚ್ಚಾಗಿರುತ್ತದೆ. ಮೆಂತ್ಯೆ ಕಾಳು ಹಾಕಿದಂತಹ ಬಿಸಿ ನೀರನ್ನು ದಿನಾಲೂ ಕುಡಿದರೆ ಅದರಿಂದ ಟೈಪ್-2 ಮಧುಮೇಹವನ್ನು ನಿಯಂತ್ರಿಸಬಹುದು ಎಂದು ಅಧ್ಯಯನಗಳು ಹೇಳಿವೆ.

ಮೆಂತ್ಯೆ ಕಾಳು ರಕ್ತದಲ್ಲಿನ ಸಕ್ಕರೆ ಮಟ್ಟ ತಗ್ಗಿಸುವುದು. ಇದರಲ್ಲಿ ಇರುವಂತಹ ನಾರಿನಾಂಶವು ಜೀರ್ಣ ಕ್ರಿಯೆಗೆ ವೇಗ ನೀಡುವುದು. ಇದೇ ವೇಳೆ ದೇಹದಲ್ಲಿ ಸಕ್ಕರೆ ಬಳಸುವುದನ್ನು ಸುಧಾರಿಸುವುದು.

ಮಧುಮೇಹಿಗಳಿಗೆ ಗೋಡಂಬಿ, ಖರ್ಜೂರ ಮತ್ತು ತೆಂಗಿನಕಾಯಿ ಲಾಡು!

ಮೆಂತ್ಯೆ ಕಾಳನ್ನು ಮಧುಮೇಹಕ್ಕೆ ಬಳಸುವುದು ಹೇಗೆ?

ಈ ಸಾಂಬಾರ ಪದಾರ್ಥವು ಇಂದು ಪ್ರತಿಯೊಂದು ಭಾರತೀಯರ ಮನೆಯಲ್ಲೂ ಲಭ್ಯವಿದೆ. ಇದು ಸ್ವಲ್ಪ ಕಹಿ ರುಚಿ ನೀಡಿದರೂ ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿದೆ. ಇದನ್ನು ಹೆಚ್ಚಿನ ಖಾದ್ಯಗಳಿಗೆ ಬಳಕೆ ಮಾಡುವುದು. ತರಕಾರಿ, ಕೋಳಿ ಹೀಗೆ ಹಲವಾರು.

ಅದರಲ್ಲೂ ಆಲೂಗಡ್ಡೆ ಮತ್ತು ಮೆಂತ್ಯೆಯ ಪಲ್ಯವು ತುಂಬಾ ಜನಪ್ರಿಯವಾಗಿದೆ. ಇದು ಬಟಾಟೆಯ ಸಿಹಿ ಮತ್ತು ಮೆಂತ್ಯೆ ಸೊಪ್ಪಿನ ಕಹಿಯ ಜತೆಗೆ ಸವಿಯಲು ತುಂಬಾ ಚೆನ್ನಾಗಿರುವುದು.

ಮೆಂತ್ಯೆ ಮತ್ತು ಮಾಂಸದ ಅಡುಗೆಯ ಜತೆಗೆ ರೋಟಿ ಇದ್ದರೆ ಅದನ್ನು ಸವಿಯಲು ತುಂಬಾ ಚೆನ್ನಾಗಿರುವುದು. ಗುಜರಾತ್ ನಲ್ಲಿ ತೇಪ್ಲಾ ಎನ್ನುವ ತಿಂಡಿಯನ್ನು ಗೋಧಿ ಹಿಟ್ಟು, ಕಡಲೆ ಹಿಟ್ಟು ಮತ್ತು ಮೆಂತ್ಯೆ ಸೊಪ್ಪು ಹಾಕಿ ತಯಾರಿಸಲಾಗುತ್ತದೆ.

ಇದನ್ನು ಮೆಣಸಿನ ಉಪ್ಪಿನಕಾಯಿ ಜತೆಗೆ ಸೇವಿಸುವರು. ಮೆಂತ್ಯೆ ಸೊಪ್ಪನ್ನು ಒಣಗಿಸಿಕೊಂಡು ಅದನ್ನು ಅಡುಗೆ ರುಚಿ ಹೆಚ್ಚಿಸಲು ಬಳಸಲಾಗುತ್ತದೆ. ತಾಜಾ ಮತ್ತು ಒಣ ಮೆಂತ್ಯೆ ಸೊಪ್ಪು ಕಾದ್ಯಕ್ಕೆ ರುಚಿ ನೀಡುವುದು.

ನೆನೆಸಿಟ್ಟ ಮೆಂತೆ ಕಾಳಿನ ನೀರು ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು

ಮಧುಮೇಹಕ್ಕೆ ಮೆಂತ್ಯೆ ಲಡ್ಡು

ಮೆಂತ್ಯೆ ಕಾಳು ಕೊಲೆಸ್ಟ್ರಾಲ್ ನಿಯಂತ್ರಿಸುವ ಜತೆಗೆ ಹೃದಯದ ಕಾಯಿಲೆ ತಡೆಯುವುದು ಮತ್ತು ಮಧುಮೇಹವನ್ನು ನಿಯಂತ್ರಿಸುವುದು. ನಾರಿನಾಂಶ, ಆಂಟಿಆಕ್ಸಿಡೆಂಟ್, ವಿಟಮಿನ್ ಗಳು ಮತ್ತು ಖನಿಜಾಂಶಗಳು ಜೀರ್ಣಕ್ರಿಯೆಗೆ ನೆರವಾಗುವುದು.

ಒಂದು ಸಣ್ಣ ಚಮಚ ಮೆಂತ್ಯೆಯನ್ನು ಅಡುಗೆಗೆ ಬಳಸಿದರೆ ಅದರಿಂದ ಆಮ್ಲೀಯ ಹಿಮ್ಮುಖ ಹರಿವು ಕಡಿಮೆ ಆಗುವುದು ಎಂಧು ಹೇಳಲಾಗುತ್ತದೆ. ಮೆಂತ್ಯೆ ಕಾಳು ತಿಂದರೆ ಅದರಿಂದ ರಕ್ತದಲ್ಲಿ ಸಕ್ಕರೆ ಮಟ್ಟವು ಕಡಿಮೆ ಆಗಿ ಮಧುಮೇಹವನ್ನು ತಡೆಯಬಹುದು. ಮೆಂತ್ಯೆಯಲ್ಲಿ ಇರುವಂತಹ ಗ್ಯಾಲಕ್ಟೋಮನ್ನನ್ ಅಂಶವು ರಕ್ತದಲ್ಲಿ ಸಕ್ಕರೆ ಹೀರಿಕೊಳ್ಳುವುದನ್ನು ಕಡಿಮೆ ಮಾಡುವುದು.

ಟೈಪ್ 2 ಮಧುಮೇಹವನ್ನು ನಿಯಂತ್ರಿಸುವಲ್ಲಿ ಎತ್ತಿದ ಕೈ

ಪ್ರತಿನಿತ್ಯವೂ 10 ಗ್ರಾಂನಷ್ಟು ಮೆಂತ್ಯೆ ಹಾಕಿದ ಬಿಸಿ ನೀರು ಕುಡಿದರೆ ಅದರಿಂದ ಟೈಪ್ 2 ಮಧುಮೇಹ ನಿಯಂತ್ರಿಸಬಹುದು ಎಂದು ಅಧ್ಯಯನಗಳು ಹೇಳಿವೆ. ಮೆಂತ್ಯೆ ಕಾಳಿನಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಶಕ್ತಿ ಇದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ನಾರಿನಾಂಶವು ಜೀರ್ಣಕ್ರಿಯೆಗೆ ವೇಗ ನೀಡುವುದು. ಹೀಗಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು.

ಮೆಂತ್ಯೆ ಲಡ್ಡು ಹಿಂದಿನಿಂದಲೂ ತಯಾರಿಸಿಕೊಂಡು ಬಂದಿರುವಂತಹ ಸಿಹಿ ತಿಂಡಿಯಾಗಿದೆ. ಇದನ್ನು ಔಷಧಿಯಾಗಿಯೂ ಸೇವನೆ ಮಾಡಬಹುದು. ಇದನ್ನು ವಿವಿಧ ರೀತಿಯಿಂದ ತಯಾರಿ, ಬಳಕೆ ಮಾಡುವರು. ಮೆಂತ್ಯೆ ಕಾಳಿನಿಂದ ಲಡ್ಡು ತಯಾರಿಸಲು ಒಣ ಶುಂಠಿ, ಸೋಂಪು ಮತ್ತು ಬೆಲ್ಲವನ್ನು ಬಳಸಿಕೊಳ್ಳುವರು. ಇದು ಗರ್ಭಿಣಿಯರಿಗೆ ತುಂಬಾ ಒಳ್ಳೆಯದು.

ನಾಲ್ಕೇ ನಾಲ್ಕು ಮೆಂತೆ ಕಾಳು ಸಾಕು, ಡಯಾಬಿಟಿಸ್‌ನ್ನು ನಿಯಂತ್ರಿಸುತ್ತದೆ!

ಬೇಕಾಗುವ ಸಾಮಗ್ರಿಗಳು

  • ½ ಕಪ್ ತುಪ್ಪ
  • 1 ಕಪ್ ಹಿಟ್ಟು
  • 1 ಚಮಚ ಮೆಂತ್ಯೆ ಕಾಳು
  • 2 ಚಮಚ ಸೋಂಪು
  • ಒಂದು ಸಣ್ಣ ಚಮ ಒಣ ಶುಂಠಿ ಹುಡಿ
  • ¾ ಕಪ್ ಬೆಲ್ಲ

ತಯಾರಿಸುವ ವಿಧಾನ

  • ಬಾಣಲೆಯಲ್ಲಿ ತುಪ್ಪವನ್ನು ಸುರಿದು ಕರಗಿಸಿ. ಇದಕ್ಕೆ ಹಿಟ್ಟು ಹಾಕಿ ಮತ್ತು ಹದ ಬೆಂಕಿಯಲ್ಲಿ ಬಿಸಿ ಮಾಡಿ.
  • ಅರ್ಧ ಗಂಟೆ ಕಾಲ ಇದನ್ನು ಬಿಸಿ ಮಾಡಿ. ಇದು ಸ್ವಲ್ಪ ಕಂದು ಬಣ್ಣಕ್ಕೆ ಬರಲಿ. ಇದರ ಬಳಿಕ ಬೆಂಕಿ ನಂದಿಸಿ, ಇದನ್ನು ತಂಪಾಗಲು ಬಿಡಿ. ಇದು ಸಂಪೂರ್ಣವಾಗಿ ತಣ್ಣಗಾಗದೆ ಅದಕ್ಕೆ ಬೆಲ್ಲ ಸೇರಿಸಿದರೆ ಆಗ ಅದು ಒಣಗುವುದು.
  • ಒಣ ಕಾಳುಮೆಣಸು, ಸೋಂಪು, ಹಾಕಿ ಮತ್ತು ಹುರಿಯಿರಿ.
  • ತಣ್ಣಗಾದ ಬಳಿಕ ಇದಕ್ಕೆ ಬೆಲ್ಲ, ಒಣ ಶುಂಠಿ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ.
  • ಇದನ್ನು ಕೈಯಿಂದ ಸರಿಯಾಗಿ ಮಿಶ್ರಣ ಮಾಡಿ. ಇದು ಸ್ವಲ್ಪ ಮೆತ್ತಗೆ ಆಗಲಿ.
  • ಪಿಸ್ತಾ ಮತ್ತು ಬಾದಾಮಿ ಹಾಕಿಕೊಂಡು ಇದನ್ನು ಅಲಂಕರಿಸಬಹುದು.
  • ಇದನ್ನು ಬಿಗಿಯಾದ ಮುಚ್ಚಳ ಹಾಕಿದ ಡಬ್ಬದಲ್ಲಿ ಹಾಕಿ ಆರು ವಾರಗಳ ಕಾಲ ಹಾಗೆ ಇಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ