ಆ್ಯಪ್ನಗರ

ನೋವು ನಿವಾರಕ ನೈಸರ್ಗಿಕ ಆಹಾರ

ಪ್ರತಿದಿನ ದೇಹದ ಒಂದಲ್ಲ ಒಂದು ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ...

Vijaya Karnataka 23 Sep 2017, 12:30 pm

ಲವಲವಿಕೆ ಸುದ್ದಿಲೋಕ

ಪ್ರತಿದಿನ ದೇಹದ ಒಂದಲ್ಲ ಒಂದು ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಕೆಲವರಿಗೆ ತಲೆ ನೋವು, ಹೊಟ್ಟೆ ನೋವು, ಕಾಲು ನೋವು ಇತ್ಯಾದಿಗಳೆಲ್ಲಾ ಇದ್ದೇ ಇರುತ್ತವೆ. ಇವುಗಳಿಗೆ ಪೇನ್‌ ಕಿಲ್ಲರ್‌ ಗುಳಿಗೆಗಳನ್ನು ತೆಗೆದುಕೊಳ್ಳುವುದಕ್ಕಿಂತ ಮನೆಯಲ್ಲಿಯೇ ಇರುವ ನೈಸರ್ಗಿಕ ವಸ್ತುಗಳಿಂದ ನೋವು ನಿವಾರಣೆ ಮಾಡಿಕೊಳ್ಳಬಹುದು.

ಶುಂಠಿ: ಇದರಲ್ಲಿ ತೀಕ್ಷ ್ಣವಾದ ಉರಿ ನಿರೋಧಕ ಗುಣಗಳಿದ್ದು, ಇದು ಮಂಡಿ ನೋವು, ಹೊಟ್ಟೆ ನೋವು, ಸ್ನಾಯುಗಳ ನೋವು, ಎದೆ ನೋವು ಮತ್ತು ಋುತುಸ್ರಾವದ ನೋವುಗಳಿಗೆ ಉತ್ತಮವಾಗಿ ಪರಿಣಮಿಸಿದೆ.

ಕಾಫಿ: ಇದರಲ್ಲಿರುವ ಕೆಫೈನ್‌ ಎಂಬ ವಸ್ತು ಉತ್ತಮ ಪೇನ್‌ ಕಿಲ್ಲರ್‌ ಆಗಿದ್ದು, ಇದು ಯಾವುದೇ ರೀತಿಯ ನೋವಿನ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ. ಮುಖ್ಯವಾಗಿ ತಲೆ ನೋವು ನಿವಾರಣೆಗೆ ಕಾಫಿ ಸೇವನೆ ಒಳ್ಳೆಯದು.

ಲವಂಗ: ಇದರಲ್ಲಿರುವ ಎಜೆನಲ್‌ ಎಂಬ ನೈಸರ್ಗಿಕ ಅರಿವಳಿಕೆಯು ಹಲ್ಲು ಮತ್ತು ವಸಡುಗಳ ನೋವು ನಿವಾರಣೆಗೆ ಉತ್ತಮವಾಗಿದೆ.

ಚೆರ್ರಿ: ಈ ಹಣ್ಣಿನಲ್ಲಿ ಆ್ಯಂಟೊಸೈನಿನ್‌ ಮತ್ತು ಬಯೋಫ್ಲೆವನಾಯ್ಡ್‌ಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಇವು ಉರಿಯಿಂದ ಕೂಡಿದ ನೋವನ್ನು ಕಡಿಮೆಗೊಳಿಸುತ್ತವೆ.

ಮೊಸರು: ಸಪ್ಪೆ ಮೊಸರು ಹೊಟ್ಟೆಗೆ ಸಂಬಂಧಿಸಿದ ನೋವುಗಳನ್ನು ಕಡಿಮೆಗೊಳಿಸುತ್ತದೆ. ಹೊಟ್ಟೆಯುಬ್ಬರ, ಹೊಟ್ಟೆಯುರಿ ಮತ್ತು ಹೊಟ್ಟೆ ನೋವು ನಿವಾರಣೆಗೆ ಮೊಸರಿನ ಸೇವನೆ ಒಳ್ಳೆಯದು. ಇದರಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಗಳು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಹೊಟ್ಟೆ ನೋವನ್ನು ಉಪಶಮನಗೊಳಿಸುತ್ತವೆ.

ಸೋಯಾ: ಈ ಧಾನ್ಯದಲ್ಲಿರುವ ಐಸೊಫ್ಲೇವಾನ್ಸ್‌ ಉತ್ತಮ ಉರಿ ನಿರೋಧಕ ಗುಣಗಳನ್ನು ಹೊಂದಿದ್ದು, ಮಂಡಿ ನೋವು ಮತ್ತು ಆಸ್ಟಿಯೋಪೊರಾಸಿಸ್‌ ಸಂದರ್ಭದಲ್ಲಿ ಉಂಟಾಗುವ ನೋವನ್ನು ಕಡಿಮೆಗೊಳಿಸುತ್ತದೆ.

ಅರಶಿಣ: ಇದರಲ್ಲಿರುವ ಉರಿ ನಿರೋಧಕ ಅಂಶಗಳು ಹಲ್ಲು ನೋವು ಮತ್ತು ಬೆನ್ನು ನೋವುಗಳಿಗೆ ತುಂಬಾ ಒಳ್ಳೆಯದು. ಇದು ಮೂಳೆ ಮತ್ತು ಸ್ನಾಯುಗಳ ನೋವನ್ನು ಕಡಿಮೆಗೊಳಿಸಿ ಊತವನ್ನು ನಿವಾರಿಸುತ್ತದೆ.

ಪುದೀನ: ಹಲವಾರು ಔಷಧೀಯ ಗುಣಗಳುಳ್ಳ ಪುದೀನಾ ಸೊಪ್ಪು ಅಜೀರ್ಣತೆಯನ್ನು ಕಡಿಮೆಗೊಳಿಸುತ್ತದೆ ಹಾಗೂ ಸ್ನಾಯುಗಳ ನೋವು, ಹಲ್ಲು ನೋವು, ತಲೆ ನೋವು ಮತ್ತು ನರಗಳ ನೋವನ್ನು ಉಪಶಮನಗೊಳಿಸುತ್ತದೆ.

ಕೆಂಪು ದ್ರಾಕ್ಷಿ: ಈ ಹಣ್ಣಿನಲ್ಲಿ ರಿಸ್ವರಾಟ್ರಲ್‌ ಎಂಬ ನೈಸರ್ಗಿಕ ಆ್ಯಂಟಿ ಆಕ್ಸೈಡೆಂಟ್‌ ಇದ್ದು, ಇದು ಮೂಳೆ ಮತ್ತು ಬೆನ್ನು ನೋವುಗಳ ನಿವಾರಣೆಗೆ ಉತ್ತಮವಾಗಿ ಪರಿಣಮಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ