Please enable javascript.Pepper Is Good For Jaundice,ಕಾಮಾಲೆ ಹೋಗಲಾಡಿಸುವ ಕಾಳುಮೆಣಸು - pepper is good for jaundice - Vijay Karnataka

ಕಾಮಾಲೆ ಹೋಗಲಾಡಿಸುವ ಕಾಳುಮೆಣಸು

Vijaya Karnataka 11 Sep 2017, 5:30 am
Subscribe

- ಪೇರಳೆ ಹಣ್ಣನ್ನು ಹೋಳು ಮಾಡಿ, ಜೀರಿಗೆ ಪುಡಿಯಲ್ಲಿ ಅದ್ದಿ ಒಂದು ರಾತ್ರಿ ಪೂರ್ತಿ ಮಂಜು ಬೀಳುತ್ತಿರುವ ಜಾಗದಲ್ಲಿಡಬೇಕು...

pepper is good for jaundice
ಕಾಮಾಲೆ ಹೋಗಲಾಡಿಸುವ ಕಾಳುಮೆಣಸು

- ಪೇರಳೆ ಹಣ್ಣನ್ನು ಹೋಳು ಮಾಡಿ, ಜೀರಿಗೆ ಪುಡಿಯಲ್ಲಿ ಅದ್ದಿ ಒಂದು ರಾತ್ರಿ ಪೂರ್ತಿ ಮಂಜು ಬೀಳುತ್ತಿರುವ ಜಾಗದಲ್ಲಿಡಬೇಕು. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಎರಡು ವಾರಗಳವರೆಗೆ ಈ ರಸ ಕುಡಿಯುತ್ತಿದ್ದರೆ ಕಾಮಾಲೆ ನಿವಾರಣೆಯಾಗುತ್ತದೆ.

- ಒಂದು ಟೀ ಸ್ಪೂನಿನಷ್ಟು ಹುಣಸೆಗೊಜ್ಜಿಗೆ ಅರ್ಧ ಟೀ ಸ್ಪೂನಿನಷ್ಟು ಜೀರಿಗೆಯ ಪುಡಿ, ಒಂದು ಚಮಚ ಜೇನು ತುಪ್ಪ ಸೇರಿಸಿ ಒಂದು ವಾರ ಸೇವಿಸಿದರೆ ಕಾಮಾಲೆ ದೂರವಾಗುವುದು.

- ಮಾವಿನಕಾಯಿಗೆ ಕಾಳುಮೆಣಸು, ಜೇನುತುಪ್ಪವನ್ನು ಹಚ್ಚಿಕೊಂಡು ತಿನ್ನುತ್ತಿದ್ದರೆ ಪಿತ್ತಕೋಶ ಶುದ್ಧಿಯಾಗುವುದರ ಜತೆಗೆ ಪಿತ್ತರಸವೂ ವೃದ್ಧಿಸುತ್ತದೆ.

-ಒಂದು ಬಟ್ಟಲಿನಷ್ಟು ಹಸುವಿನ ಹಾಲಿಗೆ ಒಂದು ಟೀ ಸ್ಪೂನಿನಷ್ಟು ಒಣಶುಂಠಿಯ ಪುಡಿಯನ್ನು ಬೆರೆಸಿ, ದಿನಕ್ಕೆ ಒಂದೆರೆಡು ಬಾರಿ ಸೇವಿಸುತ್ತಾ ಬಂದರೂ ಕಾಮಾಲೆಯಿಂದ ಪಾರಾಗಬಹುದು.

-ದೊಡ್ಡಪತ್ರೆ ಎಲೆಗಳನ್ನು ಚೆನ್ನಾಗಿ ಜಗಿದು, ರಸವನ್ನು ನುಂಗುತ್ತಿದ್ದರೆ ಕಾಯಿಲೆ ಮಾಯವಾಗುವುದು. ಆದರೆ ಇದನ್ನು ಒಂದು ವಾರ ಮಾಡಬೇಕು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ