ಆ್ಯಪ್ನಗರ

ಗಂಟಲು ಕೆರೆತಕ್ಕೆ ಸುಲಭೋಪಾಯದ ಮನೆಮದ್ದು

ಪದೇ ಪದೇ ಬದಲಾಗುವ ಹವಾಮಾನದಿಂದಾಗಿ ಹಲವಾರು ರೀತಿಯ ರೋಗಗಳು ಬಂದು ಬಿಡುತ್ತದೆ. ಅದರಲ್ಲೂ ಈ ಸಮಯದಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆ ಅಂದ್ರೆ ಗಂಟಲ ಕೆರೆತ ಸಮಸ್ಯೆ

Vijaya Karnataka 23 Jul 2020, 8:45 pm
ವಾತಾವರಣದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೆಲವೊಮ್ಮೆ ಮನುಷ್ಯನ ಆರೋಗ್ಯದಲ್ಲಿ ಏರುಪೇರಾಗುವುದು. ಚಳಿಗಾಲ ಅಥವಾ ಮಳೆಗಾಲದಲ್ಲಿ ಗಂಟಲು ಕೆರೆತ ಸರ್ವೇಸಾಮಾನ್ಯ.
Vijaya Karnataka Web ಗಂಟಲು ಕೆರೆತಕ್ಕೆ ಸುಲಭೋಪಾಯದ ಮನೆಮದ್ದು


ಹಾಗೆ ಉಂಟಾಗುವ ಗಂಟಲು ಕೆರೆತಕ್ಕೆ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಮನೆ ಮದ್ದನ್ನು ತಿಳಿದುಕೊಳ್ಳೋಣ. ಅದೂ ಅತಿ ಸುಲಭ ಮತ್ತು ಅಡುಗೆ ಮನೆಯ ಕೈಗೆಟುಕುವ ಸಾಮಗ್ರಿಗಳಿಂದ!


ಬೇಕಾಗುವ ಸಾಮಗ್ರಿಗಳು
1. ನೀರು 1 ಲೋಟ
2. ನಿಂಬೆಹಣ್ಣು ½ ಹೋಳು
3. ಜೇನುತುಪ್ಪ 1 ಚಮಚ

'ಗಂಟಲ ಕೆರೆತ' ಸಮಸ್ಯೆ ನಿಲ್ಲಿಸುವ ಮನೆ ಔಷಧಿಗಳು
ತಯಾರಿಸುವ ವಿಧಾನ
• ಒಂದು ಲೋಟದಷ್ಟು ನೀರನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ. ಅದನ್ನು ಒಲೆಯ ಮೇಲಿಟ್ಟು ಕುದಿಸಿಕೊಳ್ಳಿ.
• ಕುದ್ದಿರುವ ನೀರನ್ನು ಒಂದು ಲೋಟಕ್ಕೆ ಬಗ್ಗಿಸಿಕೊಂಡು ಸ್ವಲ್ಪವೇ ತಣಿಯಲು ಬಿಡಿ.
• ನೀರು ಪೂರ್ತಿಯಾಗಿ ತಣಿಯದೆ ಬಿಸಿಯಿರುವಾಗಲೇ ½ ನಿಂಬೆ ರಸವನ್ನು ಅದಕ್ಕೆ ಹಿಂಡುಕೊಳ್ಳಬೇಕು.
• ಬಿಸಿ ನೀರಿಗೆ ನಿಂಬೆ ರಸದೊಂದಿಗೆ 1ಚಮಚ ಜೇನು ಬೆರೆಸಿಕೊಂಡು ಕುಡಿಯಿರಿ. ಗಂಟಲಿಗೆ ಹಿತವೆನಿಸುತ್ತದೆ.
ಇದರಲ್ಲಿರುವ ನಿಂಬೆಯ ರಸ, ಗಂಟಲಲ್ಲಿ ಸೇರಿಕೊಂಡ ಲೋಳೆಯನ್ನು ಕಡಿಮೆ ಮಾಡುತ್ತದೆ.
ಇದಲ್ಲದೆ ಮತ್ತೊಂದು ಮನೆ ಮದ್ದನ್ನು ತಿಳಿದುಕೊಳ್ಳೋಣ ಬನ್ನಿ. ಇದು ಇನ್ನೂ ಸುಲಭ ಹಾಗೂ ಪ್ರಯೋಜನಕಾರಿಯಾಗಿದೆ.

ಬಿಸಿ ನೀರಿಗೆ ನಿಂಬೆ, ಜೇನು ಹಾಕಿ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ?undefined

ಬೇಕಾಗಿರುವ ಪದಾರ್ಥ
1. ಶುಂಠಿ
2. ಜೇನು ತುಪ್ಪ

ಮಾಡುವ ವಿಧಾನ
1. ಮೊದಲಿಗೆ ಶುಂಠಿಯನ್ನು ಚೆನ್ನಾಗಿ ತೊಳೆದುಕೊಂಡು ಆನಂತರ ಸಿಪ್ಪೆಯನ್ನು ಹೆರೆದುಕೊಳ್ಳಬೇಕು.
2. ಸಿಪ್ಪೆ ಹೆರೆದ ಶುಂಠಿಯನ್ನು ತುರಿದಿಟ್ಟುಕೊಳ್ಳಬೇಕು.
3. ಎರಡು ಚಮಚದಷ್ಟು ಶುಂಠಿಯ ತುರಿಗೆ ಒಂದು ಚಮಚದಷ್ಟು ಜೇನು ಬೆರೆಸಿಕೊಳ್ಳಬೇಕು. ಇದನ್ನು ಒಂದು ಬಾಟಲಿಯಲ್ಲಿ ಶೇಖರಿಸಿಟ್ಟುಕೊಂಡು ಆಗಾಗ ಜಿಗಿಯುತ್ತಿರಬೇಕು.

*ನಿಂಬೆಯಂತೂ ಬಹು ಖನಿಜಾಂಶಗಳ ಭಂಡಾರ
*ಜೇನು ಆಂಟಿ ಬ್ಯಾಕ್ಟೀರಿಯಲ್ ಆಗಿ ಕೆಲಸ ಮಾಡುತ್ತದೆ, ಗಂಟಲು ಕಿರಿಕಿರಿ ಸಮಸ್ಯೆಗೆ ರಾಮ ಬಾಣವಾಗಿ ಕಾರ್ಯ ನಿರ್ವಹಣೆ ಮಾಡುತ್ತದೆ.
*ಶುಂಠಿಯಂತೂ ಗಂಟಲಲ್ಲಿನ ಟಾಕ್ಸಿನ್ ಕಡಿಮೆ ಮಾಡುತ್ತದೆ. ಇದರ ಆಂಟಿ ಇನ್ ಫ್ಲಮೇಟರಿ ಗುಣ ಬ್ಯಾಕ್ಟೀರಿಯಾವನ್ನು ಹೋಗಲಾಡಿಸುತ್ತದೆ. ಒಟ್ಟಿನಲ್ಲಿ ಅಡ್ಡಪರಿಣಾಮವಾಗದ ಕಾರಣ ಈ ಮನೆಮದ್ದು ನಿಮಗೆ ಬಹು ಉಪಯುಕ್ತವಾಗಬಲ್ಲದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ