ಆ್ಯಪ್ನಗರ

ತುರಿಕೆ ಹಾಗೂ ದದ್ದು ಸಮಸ್ಯೆಯನ್ನು ತಕ್ಷಣವೇ ಗುಣಪಡಿಸುವ ಮನೆಮದ್ದುಗಳು

ತುರಿಕೆ ಮತ್ತು ದದ್ದಿನಂತಹ ಆರೋಗ್ಯ ಸಮಸ್ಯೆಯು ಸಾಕಷ್ಟು ತೊಂದರೆಯನ್ನು ಉಂಟುಮಾಡುತ್ತವೆ. ಚರ್ಮದ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಗಳು ಸಾಕಷ್ಟು ಕಿರಿಕಿರಿಯನ್ನು ಉಂಟುಮಾಡುತ್ತವೆ.

Vijaya Karnataka Web 21 Feb 2020, 12:59 pm
ತುರಿಕೆ ಮತ್ತು ದದ್ದಿನಂತಹ ಆರೋಗ್ಯ ಸಮಸ್ಯೆಯು ಸಾಕಷ್ಟು ತೊಂದರೆಯನ್ನು ಉಂಟುಮಾಡುತ್ತವೆ. ಚರ್ಮದ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಗಳು ಸಾಕಷ್ಟು ಕಿರಿಕಿರಿಯನ್ನು ಉಂಟುಮಾಡುತ್ತವೆ. ಈ ರೀತಿಯ ಅಸ್ವಸ್ಥತೆಯನ್ನು ಗಂಭೀರ ಸಮಸ್ಯೆ ಎಂದೇ ಪರಿಗಣಿಸಲಾಗುವುದು. ಏಕೆಂದರೆ ಇಂತಹ ಸಮಸ್ಯೆಗಳು ಒಮ್ಮೆ ಬಂದರೆ ದೀರ್ಘಾವಧಿಗಳ ಕಾಲ ಇರುತ್ತವೆ. ಒಮ್ಮೆ ಗುಣಮುಖವಾದಂತೆ ಕಂಡುಬಂದರೂ ಪದೇ ಪದೇ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಇಂತಹ ಸಮಸ್ಯೆಗಳು ಎದುರಾದಾಗ ಆದಷ್ಟು ಆಯುರ್ವೇದ ಹಾಗೂ ಮನೆಮದ್ದಿನ ಪರಿಹಾರ ಕಂಡುಕೊಳ್ಳುವುದು ಉತ್ತಮ. ಇಂತಹ ಚರ್ಮ ಸಂಬಂಧಿ ಸಮಸ್ಯೆ ಎದುರಾದಾಗ ಕೈಗೊಳ್ಳಬಹುದಾದ ಮನೆಮದ್ದಿನ ಪರಿಹಾರ ತಿಳಿಯಿರಿ.
Vijaya Karnataka Web try these home remedies to get rid for itching rashes
ತುರಿಕೆ ಹಾಗೂ ದದ್ದು ಸಮಸ್ಯೆಯನ್ನು ತಕ್ಷಣವೇ ಗುಣಪಡಿಸುವ ಮನೆಮದ್ದುಗಳು


​ಅಲೋವೆರಾ

ಅಲೋವೆರಾ ಚರ್ಮದ ಆರೈಕೆಯಲ್ಲಿ ಮಾಂತ್ರಿಕವಾದ ಪರಿಣಾಮವನ್ನು ಬೀರುತ್ತದೆ. ಮೊಡವೆ, ಎಸ್ಜಿಮಾ, ದದ್ದು, ಗಾಯ, ತುರಿಕೆ, ಉರಿಯೂತದಂತಹ ಯಾವುದೇ ಸಮಸ್ಯೆ ಎದುರಾದರೂ ಅಲೋವೆರಾ ವಿಟಮಿನ್ ಇ ಹಾಗೂ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಸಮೃದ್ಧವಾಗಿ ಪಡೆದುಕೊಂಡಿದೆ. ಚರ್ಮದಲ್ಲಿ ತುರಿಕೆ ಕಾಣಿಸಿಕೊಂಡಾಗ ಮೊದಲು ನೀರಿನಿಂದ ಆ ಜಾಗವನ್ನು ತೊಳೆದು, ತಾಜಾ ಅಲೋವೆರಾ ಜೆಲ್ ಅನ್ವಯಿಸಬೇಕು. ಹೀಗೆ ಗಣನೀಯವಾಗಿ ಈ ಕ್ರಮವನ್ನು ಅನುಸರಿಸಿದರೆ ಸಮಸ್ಯೆ ಸುಲಭವಾಗಿ ನಿವಾರಣೆಯಾಗುವುದು.

​ಟೀ ಟ್ರೀ ಎಣ್ಣೆ

ಟೀ ಟ್ರೀ ಆಯಿಲ್ ನಂಜು ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಒಳಗೊಂಡಿದೆ. ಈ ಎಣ್ಣೆಯಲ್ಲಿ ಇರುವ ಆಂಟಿ ಮೈಕ್ರೋಬಿಯಲ್ ಗುಣಲಕ್ಷಣಗಳು ಮೊಡವೆಯಂತಹ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವುದು. ತುರಿಕೆ ಮತ್ತು ದದ್ದು ಉಂಟಾದರೆ ತೆಂಗಿನೆಣ್ಣೆ, ಬಾದಾಮಿ ಎಣ್ಣೆ ಅಥವಾ ಮಾಯ್ಚುರೈಸರ್ ಕ್ರೀಮ್ ಜೊತೆಗೆ ಟೀ ಟ್ರೀ ಎಣ್ಣೆಯನ್ನು ಬೆರೆಸಿ. ನಂತರ ಗಣನೀಯವಾಗಿ ಪೀಡಿತ ಪ್ರದೇಶದಲ್ಲಿ ಅನ್ವಯಿಸಿದರೆ ಸಮಸ್ಯೆಯು ಗುಣಮುಖವಾಗುವುದು.


ಮಧುಮೇಹ ನಿಯಂತ್ರಣಕ್ಕೆ ಸೀಬೆ ಹಣ್ಣು ಹಾಗೂ ಇದರ ಎಲೆಗಳು ಪರ್ಫೆಕ್ಟ್ ಮದ್ದು

​ಆಪಲ್ ಸೈಡರ್ ವಿನೆಗರ್

ಚರ್ಮದ ಸಮಸ್ಯೆಗೆ ಇನ್ನೊಂದು ಪರಿಣಾಮಕಾರಿ ಪರಿಹಾರ ಔಷಧಿ ಎಂದರೆ ಆಪಲ್ ಸೈಡರ್ ವಿನೆಗರ್. ತುರಿಕೆ ಉಂಟಾದಾಗ ವಿನೆಗರ್ ಅನ್ನು ನೀರಿನೊಂದಿಗೆ ಬೆರೆಸಿ, ದುರ್ಬಲಗೊಳಿಸಬೇಕು. ನಂತರ ತ್ವಚೆಯ ಮೇಲೆ ಅನ್ವಯಿಸಿ. ಬಹುಬೇಗ ಸಮಸ್ಯೆ ನಿವಾರಣೆಯಾಗುವುದು. ರಕ್ತಸ್ರಾವ ಹಾಗೂ ನೆತ್ತಿಯ ಪ್ರದೇಶಗಳಿಗೆ ಇದನ್ನು ಅನ್ವಯಿಸಬಾರದು ಎನ್ನುವುದನ್ನು ನೆನಪಿಡಬೇಕು.

​ಕೋಲ್ಡ್ ಕಂಪ್ರೆಸ್

ಕೋಲ್ಡ್ ಕಂಪ್ರೆಸ್ ತುರಿಕೆ, ಕಿರಿಕಿರಿ ಮತ್ತು ದದ್ದುಗಳಂತಹ ಸಮಸ್ಯೆಗಳನ್ನು ಶಮನಗೊಳಿಸಲು ಸಹಾಯ ಮಾಡುವುದು. ಇದರ ಅನ್ವಯದಿಂದ ತಕ್ಷಣದ ಪರಿಹಾರ ಕಂಡುಕೊಳ್ಳಬಹುದು. ಚರ್ಮದ ಮೇಲೆ ಉರಿಯೂತ ಹಾಗೂ ಇನ್ನಿತ ಸಮಸ್ಯೆ ಕಂಡುಬಂದಾಗ ಐಸ್ ಬ್ಯಾಗ್ ಅಥವಾ ತಣ್ಣೀರಿನಲ್ಲಿ ಅದ್ದಿದ ಬಟ್ಟೆಯನ್ನು ಇಡಬಹುದು. ತುರಿಕೆ ಕಡಿಮೆಯಾಗುವ ತನಕ ಈ ಕ್ರಮವನ್ನು ಮುಂದುವರಿಸಬೇಕು. ಆಗ ಸಮಸ್ಯೆ ಗುಣಮುಖವಾಗುವುದು.

​ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯಲ್ಲಿ ಇರುವ ಕೊಬ್ಬಿನಾಂಮ್ಲ, ವಿಟಮಿನ್‍ಗಳು ಹಾಗೂ ಔಷಧೀಯ ಗುಣವು ಚರ್ಮ ಸಂಬಂಧಿ ಅನೇಕ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಈ ಎಣ್ಣೆಯನ್ನು ಚರ್ಮಕ್ಕೆ ಮಾಯಿಶ್ಚುರೈಸ್ ಆಗಿ ಬಳಸಬಹುದು. ಇದನ್ನು ಗಾಯ, ತುರಿಕೆ ಹಾಗೂ ಸೋಂಕು ಸೇರಿದಂತೆ ಇನ್ನಿತರ ಸಮಸ್ಯೆಗಳಿಗೂ ಮರಿಣಾಮಕಾರಿಯಾಗಿ ಬಳಸಬಹುದು. ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿರುವ ತೆಂಗಿನೆಣ್ಣೆಯನ್ನು ಎಲ್ಲಾ ಬಗೆಯ ಚರ್ಮ ಸಮಸ್ಯೆಗಳಿಗೂ ಅನ್ವಯಿಸಬಹುದು.

ಕೊಂಚ ಕೊಬ್ಬರಿ ಎಣ್ಣೆಯನ್ನು ಕೊಂಚವೇ ಬಿಸಿ ಮಾಡಿ ತುರಿಕೆ ಇರುವ ತ್ವಚೆಯ ಮೇಲೆ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಎಣ್ಣೆಯನ್ನು ಸಂಜೆ ಹಚ್ಚಿ ಇಡಿಯ ರಾತ್ರಿ ಹಾಗೇ ಇರಲು ಬಿಟ್ಟು ಮರುದಿನ ಸ್ನಾನ ಮಾಡಿ.

​ಎಪ್ಸಮ್ ಉಪ್ಪು

ಎಪ್ಸಮ್ ಉಪ್ಪು ಅತ್ಯುತ್ತಮ ಔಷಧೀಯ ಗುಣಗಳನ್ನು ಒಳಗೊಂಡಿರುವ ಉತ್ಪನ್ನ. ಇದನ್ನು ತುರಿಕೆ, ದದ್ದು, ಉರಿಯೂತ, ಸೋಂಕು ಸಂಬಂಧಿಸಿದ ಇನ್ನಿತ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಔಷಧವನ್ನಾಗಿ ಬಳಸಬಹುದು. ಎಪ್ಸಮ್ ಉಪ್ಪು ದದ್ದಿನ ಸಮಸ್ಯೆಯನ್ನು ಬಹುಬೇಗ ನಿವಾರಿಸುವುದು. ಅತ್ಯುತ್ತಮ ಔಷಧೀಯ ಗುಣಗಳನ್ನು ಒಳಗೊಂಡಿರುವ ಈ ಆರು ಉತ್ಪನ್ನಗಳನ್ನು ಸುಲಭವಾಗಿ ಹಾಗೂ ಯಾವುದೇ ಅಡ್ಡ ಪರಿಣಾಮ ಉಂಟಾಗದಂತೆ ಸಮಸ್ಯೆಗಳನ್ನು ನಿವಾರಿಸಬಹುದು.

​ತುಳಸಿ ಎಲೆಗಳು

ತುಳಸಿ ಎಲೆಗಳಲ್ಲಿರುವ ತುರಿಕೆ ನಿವಾರಿಸಲು ಇದರಲ್ಲಿರುವ ಕೆಲವು ಪೋಷಕಾಂಶಗಳು ನೆರವಾಗುತ್ತವೆ. ಸುಮಾರು ಆರು ತುಳಸಿ ಎಲೆಗಳನ್ನು ಅರೆದು ಇದಕ್ಕೆ ಕೊಂಚ ಕೊಬ್ಬರಿ ಎಣ್ಣೆಯನ್ನು ಬೆರೆಸಿ ತುರಿಕೆ ಇರುವ ತ್ವಚೆಯ ಮೇಲೆ ತೆಳುವಾಗಿ ಹಚ್ಚಿಕೊಳ್ಳಿ.


ತುಳಸಿ ಎಲೆಗಳನ್ನು ಹಾಕಿ ಕುದಿಸಿದ ನೀರು ಕುಡಿದರೆ ಫಿಟ್ ಆಗಿರುವಿರಿ

​ಬೇವಿನ ಎಲೆಗಳು

ಇದರ ಶಿಲೀಂಧ್ರ ನಿವಾರಕ, ಪ್ರತಿಜೀವಕ, ಬ್ಯಾಕ್ಟೀರಿಯಾ ನಿವಾರಕ ಹಾಗೂ ಉರಿಯುತ ನಿವಾರಕ ಗುಣಗಳು ಹಲವಾರು ತ್ವಚೆಯ ತೊಂದರೆಗಳನ್ನು ಇಲ್ಲವಾಗಿಸುತ್ತದೆ. ಇದಕ್ಕಾಗಿ ಬೇವಿನ ಎಣ್ಣೆಯನ್ನು ತೆಳುವಾಗಿ ಲೇಪಿಸಿಕೊಳ್ಳಬಹುದು ಅಥವಾ ಕೊಂಚ ಎಲೆಗಳನ್ನು ಅರೆದು ಲೇಪನದಂತೆಯೂ ಬಳಸಬಹುದು.

​ಸಾಸಿವೆ ಎಣ್ಣೆ

ತುರಿಕೆ ಇರುವ ಚರ್ಮಕ್ಕೆ ಸಾಸಿವೆ ಎಣ್ಣೆಯೂ ಉತ್ತಮವಾದ ಉಪಶಮನ ಒದಗಿಸ್ತುತದೆ ಹಾಗೂ ಚರ್ಮದ ಆಳದಿಂದ ಪೋಷಣೆ ನೀಡುವ ಮೂಲಕ ತ್ವಚೆಯ ಆರೋಗ್ಯ ಹೆಚ್ಚಿಸುತ್ತದೆ. ತುರಿಕೆ ಇರುವ ಭಾಗದಲ್ಲಿ ಕೊಂಚ ಸಾಸಿವೆ ಎಣ್ಣೆಯನ್ನು ತೆಳ್ಳಗೆ ಹಚ್ಚಿ ಕೆಲವು ಘಂಟೆಗಳ ಕಾಲ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ