ಆ್ಯಪ್ನಗರ

ಮಳೆಗಾಲದಲ್ಲಿ ಬರುವ ತಲೆನೋವು, ಶೀತ, ಕೆಮ್ಮು, ಜ್ವರಕ್ಕೆಲ್ಲಾ ಇಲ್ಲಿದೆ ಮನೆಮದ್ದುಗಳು

ತಲೆನೋವು, ನೆಗಡಿ, ಕೆಮ್ಮು ಇತ್ಯಾದಿಗಳಿಗೆ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಮನೆಯಲ್ಲೇ ಪರಿಹಾರವನ್ನು ಕಂಡುಕೊಳ್ಳಬಹುದು.

Vijaya Karnataka Web 17 May 2021, 3:49 pm
ಈಗಾಗಲೇ ಬೇಸಿಗೆ ಕಾಲ ಕಳೆಯುತ್ತಿದೆ. ವರ್ಷದ ಮೊದಲ ಮಳೆಗಾಲ ಆರಂಭವಾಗುತ್ತಿದೆ. ಮಳೆಗಾಲದ ಟ್ರೈಲರ್ ಈಗಾಗಲೇ ಕೆಲವೊಂದು ಕಡೆ ಭರ್ಜರಿಯಾಗಿ ಸಾಗುತ್ತಿದೆ. ಈ ಸಂದರ್ಭದಲ್ಲಿ ಜನರ ಆರೋಗ್ಯ ಹದಗೆಡುವುದು ಬಹುತೇಕ ಸಾಮಾನ್ಯವಾಗಿರುತ್ತದೆ.
Vijaya Karnataka Web try these natural remedies for common rainy season
ಮಳೆಗಾಲದಲ್ಲಿ ಬರುವ ತಲೆನೋವು, ಶೀತ, ಕೆಮ್ಮು, ಜ್ವರಕ್ಕೆಲ್ಲಾ ಇಲ್ಲಿದೆ ಮನೆಮದ್ದುಗಳು


ಆರೋಗ್ಯ ಕೆಟ್ಟು ಹೋಯಿತು ಎಂದು ಆಸ್ಪತ್ರೆ ಕಡೆಗೆ ಮುಖ ಮಾಡುವ ಹಾಗೂ ಇಲ್ಲ. ಏಕೆಂದರೆ ಹೊರಗಡೆ ಕೊರೊನಾ ಭಯ.

ಹಾಗಾಗಿ ಮನೆಯಲ್ಲಿಯೇ ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಶೀತ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಎಂಬುದು ಕೆಲವು ಮನೆಮದ್ದುಗಳಿಂದ ಸಾಬೀತಾಗಿದೆ. ಬನ್ನಿ ಈ ಲೇಖನದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಕೆಲವು ಮಾಹಿತಿಯನ್ನು ಕಲೆ ಹಾಕೋಣ.

​ಶುಂಠಿಯನ್ನು ತಲೆ ನೋವಿನ ಪರಿಹಾರಕ್ಕೆ ಉಪಯೋಗಿಸಬಹುದು

ಶುಂಠಿಯಲ್ಲಿ anti-inflammatory ಮತ್ತು ನೋವು ನಿವಾರಕ ಗುಣ ಲಕ್ಷಣಗಳು ಸಾಕಷ್ಟು ಕಂಡುಬರುತ್ತವೆ. ಹಾಗಾಗಿ ಕೇವಲ ಮೈಕೈನೋವು ಮಾತ್ರವಲ್ಲದೆ ತಲೆ ನೋವಿನ ಪರಿಹಾರಕ್ಕೆ ಶುಂಠಿ ಬಹಳ ಚೆನ್ನಾಗಿ ಕೆಲಸ ಮಾಡಬಲ್ಲದು.

ಮೈಗ್ರೇನ್ ಸಮಸ್ಯೆಗೆ ಕೂಡ ಒಂದು ಹಂತದಲ್ಲಿ ಇದು ಪರಿಹಾರವನ್ನು ಒದಗಿಸುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ತಲೆನೋವು ಬಂದಾಗ ಮಾತ್ರೆ ತೆಗೆದುಕೊಳ್ಳುವ ಬದಲು ನಿಮ್ಮ ಬಳಿ ಹಸಿಶುಂಠಿ ಇದ್ದರೆ ಅದನ್ನು ಜಜ್ಜಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಸೋಸಿಕೊಂಡು ಉಗುರುಬೆಚ್ಚಗಿನ ತಾಪಮಾನಕ್ಕೆ ಬಂದ ನಂತರದಲ್ಲಿ ಇದನ್ನು ತಕ್ಷಣವೇ ಕುಡಿಯುವುದರಿಂದ ಬಹಳ ಬೇಗನೆ ಬಂದಿರುವ ತಲೆನೋವು ಮಾಯವಾಗುತ್ತದೆ.

​ಗಂಟಲು ನೋವಿಗೆ ಅರಿಶಿನ ಮಿಶ್ರಿತ ಹಾಲು

  • ದಿನದಲ್ಲಿ 2 ಬಾರಿ ಒಂದು ಲೋಟ ಬಿಸಿ ಹಾಲಿಗೆ ಸ್ವಲ್ಪ ಅರಿಶಿಣ ಮಿಶ್ರಣಮಾಡಿ ಕುಡಿಯುವ ಅಭ್ಯಾಸ ಇಟ್ಟುಕೊಂಡರೆ ಗಂಟಲು ನೋವು ಮಾಯವಾಗುತ್ತದೆ.
  • ಗಂಟಲು ನೋವು ಕೂಡ ಶೀತಲ ವಾತಾವರಣದಿಂದ ಉಂಟಾಗುತ್ತದೆ. ಇದು ಕೂಡ ಒಂದು ಶೀತದ ಲಕ್ಷಣ. ಆದರೆ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಇನ್ಫಾಮೇಟರಿ ಗುಣ ಲಕ್ಷಣಗಳನ್ನು ಒಳಗೊಂಡಿರುವ ಅರಿಶಿನ ಗಂಟಲಿನ ಭಾಗದಲ್ಲಿ ನೋವುಂಟುಮಾಡುವ ಬ್ಯಾಕ್ಟೀರಿಯಾಗಳ ಸೋಂಕನ್ನು ಕಡಿಮೆ ಮಾಡಿ ಉರಿಯೂತವನ್ನು ದೂರಮಾಡುತ್ತದೆ. ಇದರಿಂದ ಬಹಳ ಬೇಗನೆ ಗಂಟಲಿನ ನೋವು ವಾಸಿಯಾಗುತ್ತದೆ.

ದಿನಾ ಒಂದು ಗ್ಲಾಸ್ ಅರಿಶಿನ ಹಾಲು ಕುಡಿದರೆ ಈ ಕಾಯಿಲೆಗಳೆಲ್ಲಾ ದೂರ

​ಕೆಮ್ಮು ಜಾಸ್ತಿ ಇದ್ದರೆ ತುಳಸಿ ಚಹಾ ಮಾಡಿ ಕುಡಿಯಿರಿ

  • ಕೆಮ್ಮಿಗೆ ತುಳಸಿ ಅತ್ಯದ್ಭುತ ಪರಿಹಾರ ಎಂದು ಈಗಾಗಲೇ ಸಾಬೀತಾಗಿದೆ. ಮೂಗು ಗಂಟಲು ಹಾಗೂ ಎದೆಯ ಭಾಗದಲ್ಲಿ ಕಟ್ಟಿದ ಕಫವನ್ನು ಕರಗಿಸಿ ಉಸಿರಾಡಲು ಅನುಕೂಲವಾಗುವಂತೆ ಮಾಡಿ ದಮ್ಮು, ಅಸ್ತಮ ಸಮಸ್ಯೆಯನ್ನು ಸಹ ಇದು ಹೋಗಲಾಡಿಸುತ್ತದೆ.
  • ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಗುಣವನ್ನು ತುಳಸಿ ಪಡೆದುಕೊಂಡಿದೆ. ಒಲೆಯ ಮೇಲೆ ಒಂದುವರೆ ಕಪ್ ನೀರನ್ನು ಕುದಿಯಲು ಇಟ್ಟು ಅದಕ್ಕೆ ಹತ್ತರಿಂದ ಹದಿನೈದು ಹಸಿ ತುಳಸಿ ಎಲೆಗಳನ್ನು ಹಾಕಿ ಮಿಶ್ರಣ ಮಾಡಿ ಸುಮಾರು ಹತ್ತು ನಿಮಿಷಗಳು ಚೆನ್ನಾಗಿ ಕುದಿಸಬೇಕು.
  • ನಂತರ ಇದನ್ನು ಸೋಸಿಕೊಂಡು ಆರಿಸಿ ಕುಡಿಯುವ ಸಂದರ್ಭದಲ್ಲಿ 1 ಟೇಬಲ್ ಚಮಚ ನಿಂಬೆ ಹಣ್ಣಿನ ರಸವನ್ನು ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಸ್ವಲ್ಪ ಬಿಸಿ ಇರುವಾಗ ಈ ಪಾನೀಯವನ್ನು ಕುಡಿದರೆ ಉತ್ತಮ.

ಶೀತ, ಕೆಮ್ಮು, ಅಜೀರ್ಣ, ಇನ್ನೂ ನಾನಾ ಸಮಸ್ಯೆಗಳಿಗೆ ಒಣ ಶುಂಠಿ ರಾಮಬಾಣ

​ವೈರಲ್ ಜ್ವರ ಇದ್ದರೆ ಗಂಜಿ ಸೇವಿಸಿ

  • ವೈರಲ್ ಜ್ವರದ ವಿರುದ್ಧ ಅತ್ಯುತ್ತಮ ಮನೆ ಮದ್ದಾಗಿ ಕಾಂಜಿ ಕೆಲಸ ಮಾಡಲಿದೆ ಎಂಬುದು ಬಹಳ ಹಿಂದಿನ ಕಾಲದಿಂದಲೂ ಸಾಬೀತಾಗಿದೆ.
  • ಅನ್ನದ ಗಂಜಿಯಲ್ಲಿ ಸ್ಟಾರ್ಚ್ ಅಂಶ ಇರುವ ಕಾರಣ ಇದು ಮೂತ್ರ ವರ್ಧಕ ಗುಣ ಲಕ್ಷಣಗಳನ್ನು ಒಳಗೊಂಡಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕವಾಗಿ ಕೆಲಸ ಮಾಡುತ್ತದೆ.
  • ಅನ್ನದ ಗಂಜಿ ಬಸಿದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಬಿಸಿ ಇರುವಾಗ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಜ್ವರದ ತಾಪಮಾನ ತೀವ್ರತೆ ಕಡಿಮೆಯಾಗುತ್ತದೆ.

ಮಳೆಗಾಲದಲ್ಲಿ ಕಾಡುವ ಈ ಕಾಯಿಲೆಗಳಿಗೆ ಸ್ವ ಚಿಕಿತ್ಸೆ ಮಾಡಬೇಡಿ

​ಅಜೀರ್ಣ ಸಮಸ್ಯೆಗೆ ನಿಂಬೆ ಹಣ್ಣು ಮತ್ತು ಜೇನು ತುಪ್ಪ

  • ಸಾಮಾನ್ಯವಾಗಿ ಶೀತದ ಯಾವುದೇ ಸಮಸ್ಯೆಗಳು ಎದುರಾದರೂ ಸಹ ಅಜೀರ್ಣತೆ ಮತ್ತು ವಾಕರಿಕೆ, ವಾಂತಿ ಸಮಸ್ಯೆ ಕಾಡುತ್ತದೆ. ಇಂತಹ ಸಂದರ್ಭದಲ್ಲಿ ಬಾಯಿ ಕೆಟ್ಟಿರುವುದರಿಂದ ಯಾವುದೇ ಆಹಾರ ತಿನ್ನಲು ಹೋದರೂ ಅದು ರುಚಿ ಕೊಡುವುದಿಲ್ಲ.
  • ಅದಕ್ಕಿಂತ ಮೊದಲು ಆಹಾರವನ್ನು ತಿನ್ನಲು ಕೂಡ ಸಾಧ್ಯವಾಗುವುದಿಲ್ಲ. ಸಾಕಷ್ಟು ವಾಕರಿಕೆ ಈ ಸಮಯದಲ್ಲಿ ಕಂಡುಬರುವುದರಿಂದ ಇದನ್ನು ಪರಿಹಾರ ಮಾಡಿಕೊಳ್ಳಲು ನಿಂಬೆ ಹಣ್ಣಿನ ಪಾನೀಯವನ್ನು ತಯಾರು ಮಾಡಿಕೊಂಡು ಅದಕ್ಕೆ ಒಂದು ಟೇಬಲ್ ಚಮಚ ಜೇನು ತುಪ್ಪವನ್ನು ಮಿಶ್ರಣ ಮಾಡಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಜೀರ್ಣಶಕ್ತಿ ಹೆಚ್ಚಾಗುವ ಜೊತೆಗೆ ರೋಗ ನಿರೋಧಕ ಶಕ್ತಿ ಕೂಡ ಅಭಿವೃದ್ಧಿಯಾಗುತ್ತದೆ.

ಅಜೀರ್ಣ ಸಮಸ್ಯೆಗೆ, ವೈದ್ಯರು ಯಾಕೆ? ಮನೆಯಲ್ಲಿಯೇ ಇದೆ ಪರಿಹಾರ!

​ನೆಗಡಿ ಇದ್ದರೆ ಬೆಳ್ಳುಳ್ಳಿ ಸೂಪ್ ಕುಡಿಯಬಹುದು

  • ಮಳೆಗಾಲದ ಸಂದರ್ಭದಲ್ಲಿ ಆಗಾಗ ನೆಗಡಿ ಆಗುವುದು ಸಾಮಾನ್ಯ. ಆದರೆ ಬೆಳ್ಳುಳ್ಳಿ ಇದಕ್ಕೆ ಪರಿಹಾರವಾಗಿ ಕೆಲಸ ಮಾಡುತ್ತದೆ. ಏಕೆಂದರೆ ಬೆಳ್ಳುಳ್ಳಿಯಲ್ಲಿ ದೇಹಕ್ಕೆ ಉಷ್ಣ ಪ್ರಭಾವವನ್ನುಂಟು ಮಾಡುವ ಗುಣ ಲಕ್ಷಣಗಳು ಕಂಡುಬರುತ್ತದೆ.
  • ಇದು ದೇಹದ ಉಷ್ಣತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದ ನೆಗಡಿ ವಾಸಿಯಾಗಿ ಬೇರೆ ಬಗೆಯ ಆರೋಗ್ಯ ಸಮಸ್ಯೆಗಳಿಗೆ ಕಾರಣ ಆಗದಂತೆ ಮಾಡುತ್ತದೆ.

​ಭೇದಿ ಆಗುತ್ತಿದ್ದರೆ ಸೇಬು ಹಣ್ಣು ಬೇಯಿಸಿ ತಿನ್ನಬಹುದು

  • ಭೇದಿಯ ಸಂದರ್ಭದಲ್ಲಿ ಮನುಷ್ಯನಿಗೆ ಸುಸ್ತು, ಆಯಾಸ ಎದುರಾಗುವುದು ಸಹಜ. ಆದರೆ ಸೇಬುಹಣ್ಣನ್ನು ಈ ಸಮಯದಲ್ಲಿ ಬೇಯಿಸಿ ತಿನ್ನುವುದರಿಂದ ಅದರಲ್ಲಿರುವ ಸೆಲ್ಯುಲೋಸ್ ಅಂಶ ಮೆತ್ತಗಾಗಿ ಬಹಳ ಬೇಗನೆ
  • ಜೀರ್ಣವಾಗುವುದರಿಂದ ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡುಬರುತ್ತದೆ ಮತ್ತು ಮೊದಲಿನಂತೆ ಸಹಜ ಸ್ಥಿತಿಗೆ ಮರಳಲು ನಿಮಗೆ ಅನುಕೂಲವಾಗುತ್ತದೆ.

ಹೊಟ್ಟೆ ಕೆಟ್ಟು ಹೋಗಿ ವಾಂತಿ, ಭೇದಿ ಆಗುತ್ತಿದ್ದರೆ ಈ ಪಾನೀಯಗಳಲ್ಲಿದೆ ಪರಿಹಾರಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ