Please enable javascript.Home Remedies For Leg Cramps,ಜಸ್ಟ್ ಈ ಮನೆಮದ್ದು ಅನುಸರಿಸಿ, ಕಾಲಿನ ಸೆಳೆತ ಕೂಡಲೇ ಕಮ್ಮಿ ಆಗುತ್ತೆ ನೋಡಿ... - try these simnple home remedies to get rid from leg cramps immediately - Vijay Karnataka

ಜಸ್ಟ್ ಈ ಮನೆಮದ್ದು ಅನುಸರಿಸಿ, ಕಾಲಿನ ಸೆಳೆತ ಕೂಡಲೇ ಕಮ್ಮಿ ಆಗುತ್ತೆ ನೋಡಿ...

Produced byಮನೋಹರ್ ಶೆಟ್ಟಿ | Vijaya Karnataka Web 22 Jun 2023, 10:50 am
Subscribe

How to Get Rid of Leg Cramps: ಕಾಲುಗಳ ಸೆಳೆತ ಅಷ್ಟೇನು ಗಂಭೀರ ಆರೋಗ್ಯ ಸಮಸ್ಯೆ ಅಲ್ಲದಿದ್ದರೂ ಕೂಡ, ಇದರಿಂದ ಉಂಟಾಗುವ ನೋವು, ತುಂಬಾನೇ ಹಿಂಸೆ ಅನಿಸುತ್ತದೆ. ಈ ಸಮಸ್ಯೆ ಇದ್ದವರಿಗೆ ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದುಗಳು

try these simnple home remedies to get rid from leg cramps immediately
ಜಸ್ಟ್ ಈ ಮನೆಮದ್ದು ಅನುಸರಿಸಿ, ಕಾಲಿನ ಸೆಳೆತ ಕೂಡಲೇ ಕಮ್ಮಿ ಆಗುತ್ತೆ ನೋಡಿ...
ಇಂದಿನ ದಿನಗಳಲ್ಲಿ ಕಾಲಿನ ಸೆಳೆತದ ಸಮಸ್ಯೆ, ಹೆಚ್ಚಿನವರಿಗೆ ಕಾಮನ್ ಆಗಿ ಬಿಟ್ಟಿದೆ. ಕೆಲವರಿಗೆ ಈ ಸಮಸ್ಯೆ ಪದೇ ಪದೇ ಕಂಡು ಬರುತ್ತಿದ್ದರೆ, ಇನ್ನು ಕೆಲವರಿಗೆ ಚಳಿಗಾಲದಲ್ಲಿ ಜಾಸ್ತಿ ಆಗಿ ಬಿಡುತ್ತದೆ. ಉದಾಹರಣೆಗೆ ಹೇಳುವುದಾದರೆ, ಕೆಲವೊಮ್ಮೆ ರಾತ್ರಿ ಮಲಗಿ ನಿದ್ರೆ ಮಾಡುತ್ತಿರ ಬೇಕಾದರೆ ಇದ್ದಕ್ಕಿದ್ದಂತೆ, ಕಾಲಿನ ಸೆಳೆತದ ಸಮಸ್ಯೆ ಕಂಡು ಬಂದು, ಎಚ್ಚರವಾಗಿ ಬಿಡುತ್ತದೆ.

ಇನ್ನು ಕೆಲವೊಮ್ಮೆ ಮಧ್ಯಾಹ್ನ ಆರಾಮವಾಗಿ ಟಿವಿ ನೋಡುತ್ತಾ ಕೂತಾಗ ಕೂಡ ಸಡನ್ ಆಗಿ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ! ಈ ಸಂದರ್ಭದಲ್ಲಿ ಕಾಲಿನ ಭಾಗದಲ್ಲಿ ಊತ ಕಂಡು ಬರುವುದು, ಕಾಲಿನ ನರಗಳು ಮೇಲೆ ಎದ್ದು ಕೊಂಡಂತೆ ಕಾಣಿಸಬಹುದು. ಅದರಲ್ಲೂ ವಯಸ್ಸಾ ದವರಿಗೆ ಈ ಸಮಸ್ಯೆ ಹೆಚ್ಚು ಕಾಡುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಈ ಸಮಸ್ಯೆಯ ಬಗ್ಗೆ ಇನ್ನಷ್ಟು ತಿಳಿಯೋಣ...

ಈ ಸಮಸ್ಯೆಗೆ ಪ್ರಮುಖ ಕಾರಣಗಳು

ಈ ಸಮಸ್ಯೆಗೆ ಪ್ರಮುಖ ಕಾರಣಗಳು
  • ಕಾಲುಗಳ ಸೆಳೆತ ಉಂಟಾಗಲು ಕಾರಣಗಳನ್ನು ನೋಡು ವುದಾದರೆ ಸರಿಯಾದ ಆಹಾರ ಪದ್ಧತಿ, ಜೀವನ ಶೈಲಿಯನ್ನು ಅನುಸರಿಸದೇ ಇರುವುದು ಕಾಲುಗಳ ಭಾಗದಲ್ಲಿ ಹೆಚ್ಚು ಆಯಾಸ ಕಂಡುಬರುವುದು
  • ಕಾಂಕ್ರೀಟ್ ಅಥವಾ ಸಿಮೆಂಟ್ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಈ ಸಮಸ್ಯೆ ಸಾಮಾನ್ಯ.
  • ಹೆಚ್ಚು ಹೊತ್ತು ಕುಳಿತುಕೊಂಡೆ ಕಾಲಕಳೆಯುವವರಲ್ಲಿ
  • ದೇಹದಲ್ಲಿ ಮಾಂಸಖಂಡಗಳ ಅಸ್ವಸ್ಥತೆ, ಕಿಡ್ನಿಗಳಲ್ಲಿ ತೊಂದರೆ ಥೈರಾಯ್ಡ್ ಮಧುಮೇಹದಂತಹ ಕಾಯಿಲೆ ಗಳು ಹಾರ್ಮೋನುಗಳ ಅಸಮತೋಲನ ಉಂಟಾ ಗುವುದು ಇತ್ಯಾದಿಗಳು ಕಾಲಿನ ಭಾಗದಲ್ಲಿ ಸೆಳೆತ ಕಂಡು ಬರುವಂತೆ ಮಾಡುತ್ತವೆ.
  • ಆದರೆ ಈ ಸಮಸ್ಯೆಯನ್ನು ಸುಲಭವಾಗಿ ಕಡಿಮೆ ಮಾಡಲು ಕೆಲವೊಂದು ಮನೆಮದ್ದುಗಳು ಕೂಡ ಲಭ್ಯವಿದೆ. ಅವು ಯಾವುದು ಎನ್ನುವುದನ್ನು ಒಂ ದೊಂದಾಗಿ ನೋಡೋಣ..

ಶುಂಠಿ

ಶುಂಠಿ
  • ಆಯುರ್ವೇದ ಕಾಲದಿಂದಲೂ ಕೂಡ ಶುಂಠಿಯನ್ನು ಹಲವಾರು ರೀತಿಯ ಕಾಯಿಲೆಗಳನ್ನು ದೂರಮಾಡಲು, ಇದನ್ನು ಚಿಕಿತ್ಸೆಯ ರೂಪದಲ್ಲಿ ಬಳಸಿಕೊಂಡು ಬರಲಾ ಗುತ್ತಿದೆ.
  • ಪ್ರಮುಖವಾಗಿ ನೈಸರ್ಗಕವಾಗಿ ಸಿಗುವ ಈ ಶುಂಠಿಯಲ್ಲಿ ಉರಿಯೂತ ಶಮನಕಾರಿ ನೋವು ನಿವಾರಕ, ಆಂಟಿ ಆಕ್ಸಿಡೆಂಟ್ ಗುಣಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ.
  • ಇದರ ಜೊತೆಗೆ ಮೆಗ್ನೀಷಿಯಂ ಅಂಶದ ಪ್ರಮಾಣ ಯಥೇಚ್ಛವಾಗಿ ಕಂಡು ಬರುತ್ತದೆ. ಇದು ಕಾಲುಗಳ ಭಾಗದ ಸೆಳೆತವನ್ನು ದೂರ ಮಾಡುವುದ ಮಾತ್ರವಲ್ಲದೆ, ಕಾಲಿನ ಭಾಗದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡಿ ಸಮಸ್ಯೆಯನ್ನು ಪರಿಹರಿಸುತ್ತದೆ.​


ಬಹೂಪಯೋಗಿ ಈ ಶುಂಠಿಯ ಔಷಧೀಯ ಗುಣಗಳು ಒಂದಾ ಎರಡಾ... ?

ಹಸಿ ಶುಂಠಿ ಹಾಗೂ ಒಣ ಶುಂಠಿಯಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ

ಶುಂಠಿ ಟೀ

ಶುಂಠಿ ಟೀ
  • ಒಂದು ದೊಡ್ಡ ಲೋಟ ಆಗುವಷ್ಟು ನೀರನ್ನು ಚೆನ್ನಾಗಿ ಕುದಿಸಿಕೊಳ್ಳಿ. ಆ ಬಳಿಕ ಇದಕ್ಕೆ ಒಂದು ಟೇಬಲ್ ಚಮಚ ಆಗುವಷ್ಟು ಶುಂಠಿ ಚೂರುಗಳನ್ನು ಹಾಕಿ ಸುಮಾರು ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ.
  • ಆ ಬಳಿಕ ಗ್ಯಾಸ್ ಸ್ಟವ್ ಆಫ್ ಮಾಡಿ, ಈ ಪಾನೀಯವನ್ನು ಸೋಸಿಕೊಂಡು, ಉಗುರು ಬೆಚ್ಚನೆಯ ರೀತಿ ಆರಲು ಬಿಡಿ. ಆ ಬಳಿಕ ಈ ಪಾನೀಯಕ್ಕೆ ಒಂದು ಚಮಚದಷ್ಟು ನಿಂಬೆ ಹಣ್ಣಿನ ರಸ ಮತ್ತು ಜೇನು ತುಪ್ಪವನ್ನು ಹಾಕಿ ಚೆನ್ನಾಗಿ ತಿರುಗಿಸಿ ಸೇವನೆ ಮಾಡಬಹುದು.​

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್
  • ಆಪಲ್ ಸೀಡರ್ ವಿನೇಗರ್ ಇಂದಿನ ದಿನಗಳಲ್ಲಿ ತುಂಬಾ ಜನಪ್ರಿಯವಾಗಿದೆ. ಇದಕ್ಕೆ ಪ್ರಮುಖ ಕಾರಣ ಇದರಲ್ಲಿ ಕಂಡುಬರುವ ಆರೋಗ್ಯವರ್ಧಕ ಗುಣಲಕ್ಷಣಗಳು!
  • ಹೌದು ಈ ವಿನೇಗರ್‌‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ, ಉರಿಯೂತ ನಿವಾರಕ, ನೋವು ನಿವಾರಕ ಅಂಶಗಳು ಹಾಗೂ ಪೊಟ್ಯಾಶಿಯಂ ಅಂಶಗಳು ಕಂಡು ಬರುವುದ ರಿಂದ, ಕಾಲುಗಳ ಸೆಳೆತವನ್ನು ಹೋಗಲಾಡಿಸಲು ತುಂಬಾನೇ ಸಹಾಯಕ್ಕೆ ಬರುತ್ತದೆ

ರಾತ್ರಿ ಮಲಗುವ ಮೊದಲು ಒಂದು ಚಮಚ ಆಪಲ್ ಸೈಡರ್ ವಿನೆಗರ್ ಸೇವಿಸಿ ನೋಡಿ!

ಹೀಗೆ ಮಾಡಿ:

ಹೀಗೆ ಮಾಡಿ:

ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ, ಒಂದು ಟೇಬಲ್ ಚಮಚದಷ್ಟು ಆಪಲ್ ಸೈಡರ್ ವಿನಿಗರ್ ಹಾಕಿ ಮಿಶ್ರಣ ಮಾಡಿ
ಇದನ್ನು ಟಾನಿಕ್ ರೀತಿ ಪ್ರತಿದಿನ ಒಂದು ಚಮಚ ಆಗುವಷ್ಟು ಸೇವನೆ ಮಾಡಿ

ಹಳದಿ ಸಾಸಿವೆ

ಹಳದಿ ಸಾಸಿವೆ
  • ಹಳದಿ ಸಾಸಿವೆಯಲ್ಲಿ ನೋವು ನಿವಾರಕ ಅಂಶಗಳು, ಉರಿಯೂತ ನಿವಾರಕ ಅಂಶಗಳು ಹಾಗೂ ಅಸಿಟಿಕ್ ಆಮ್ಲಗಳು ಯಥೇಚ್ಛವಾಗಿ ಕಂಡುಬರುತ್ತದೆ.
  • ಇದು ಕಾಲುಗಳ ಭಾಗಕ್ಕೆ ರಕ್ತ ಸಂಚಾರ ವನ್ನು ಹೆಚ್ಚಿಸಲು ನೆರವಿಗೆ ಬರುತ್ತದೆ. ಹೀಗಾಗಿ ಕಾಲುಗಳ ಸೆಳೆತ ಸಮಸ್ಯೆ ಕಂಡು ಬರುವ ಸಂದರ್ಭದಲ್ಲಿ, ಸಣ್ಣ ಟೀ ಚಮಚದಷ್ಟು ಈ ಹಳದಿ ಸಾಸಿವೆಯನ್ನು ಬಾಯಿಕೊಂಡು, ಚೆನ್ನಾಗಿ ಜಗಿದು ಅದರ ರಸವನ್ನು ನಿಧಾನಕ್ಕೆ ಹೀರುತ್ತಾ ಬರಬೇಕು

Image source: Timesofindia

ಅರಿಶಿನ ಹಾಲು

ಅರಿಶಿನ ಹಾಲು
  • ಅರಿಶಿನದ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಅಡುಗೆ ಮನೆಯ ರಾಣಿ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ಇದು ಕೇವಲ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಅನೇಕ ಕಾಯಿಲೆ ಗಳಿಗೆ ಪರಿಹಾರವನ್ನು ನೀಡುತ್ತದೆ.
  • ಇದಕ್ಕೆ ಪ್ರಮುಖ ಕಾರಣ ಇದರಲ್ಲಿ ಕಂಡು ಬರುವ ಕರ್ಕ್ಯೂ ಮಿನ್ ಎನ್ನುವ ಸಂಯುಕ್ತ ಅಂಶ. ಇದು ಉರಿ ಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿರುವು ದರಿಂದ, ಕಾಲಿನ ಸೆಳೆತದಂತಹ ಸಮಸ್ಯೆ ಯನ್ನು ದೂರ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ
  • ಒಂದು ವೇಳೆ, ನಿಮಗೂ ಕಾಲಿನ ಸೆಳೆತದಂತಹ ಸಮಸ್ಯೆ ಇದ್ದರೆ, ರಾತ್ರಿ ಮಲಗುವ ಮುನ್ನ ಒಂದು ಲೋಟ ಉಗುರು ಬೆಚ್ಚಗಿನ ಹಾಲಿಗೆ ಸ್ವಲ್ಪ ಅರಿಶಿನ ಹಾಕಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಮಲಗುವ ಮುನ್ನ ಅರಿಶಿನ ಹಾಲು ಕುಡಿದ್ರೆ, ಆರೋಗ್ಯಕ್ಕೆ ಹತ್ತಾರು ಲಾಭ

ಮನೋಹರ್ ಶೆಟ್ಟಿ
ಲೇಖಕರ ಬಗ್ಗೆ
ಮನೋಹರ್ ಶೆಟ್ಟಿ
"ಕನ್ನಡದ ಲೇಖನ ಬರವಣಿಗೆಯಲ್ಲಿ 9 ವರ್ಷಗಳ ಸುದೀರ್ಘ ವೃತ್ತಿಪರ ಅನುಭವದೊಂದಿಗೆ ಭಾಷೆಯ ಅನುವಾದದೊಂದಿಗೆ ಪ್ರಾರಂಭಿಸಿ ಇಂದಿಗೆ ವಿವಿಧ ವಿಭಾಗಗಳಲ್ಲಿ ಅಂದರೆ ಜೀವನಶೈಲಿ, ಆರೋಗ್ಯ, ಸೌಂದರ್ಯ, ಸಂಬಂಧ, ಜಾಹೀರಾತು ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸಿದ ಹೆಮ್ಮೆ ನನ್ನದು. ಭಾಷೆಯ ಬಗೆಗಿನ ಹಿಡಿತ, ವಿಚಾರದ ಕುರಿತಾದ ಜ್ಞಾನಾಸಕ್ತಿಯೊಂದಿಗೆ ಓದುಗರಿಗೆ ಅತ್ಯುತ್ತಮ ವಿಷಯಗಳನ್ನೊಳಗೊಂಡ ಲೇಖನಗಳನ್ನು ನೀಡುವಲ್ಲಿ ನನಗೆ ತೃಪ್ತಿಯಿದೆ. ಅದು ವಿಚಾರವಿರುವ ಲೇಖನವಾದರೂ ಅಥವಾ ಸಾಧಾರಣ ಮುಖ್ಯಾಂಶವಾದರೂ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಬರವಣಿಗೆಯನ್ನು ತರಲು ನಾನು ಪ್ರಯತ್ನಿಸುತ್ತೇನೆ. ಸದ್ಯದ ಡಿಜಿಟಲ್ ವಿದ್ಯಮಾನಗಳ ಬಗ್ಗೆ ನನ್ನನ್ನು ನಾನು ಕ್ರೂಢೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಇತರ ಲೇಖಕರ ವಿಷಯಗಳನ್ನು, ವಿಚಾರಗಳನ್ನು ಅನುಸರಿಸಿ ನನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಾ ನನ್ನ ಬರವಣಿಗೆಯ ಗುಣಮಟ್ಟವನ್ನು ಈಗಿನ ಓದುಗರ ಆಸಕ್ತಿಗೆ ತಕ್ಕಂತೆ ಕಾಪಾಡಿಕೊಳ್ಳುತ್ತೇನೆ. ಬಿಡುವಿನ ಸಮಯದಲ್ಲಿ ನನ್ನ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯುವ ಮೂಲಕ ಉತ್ತಮ ವೃತ್ತಿಪರತೆಗಾಗಿ ನನ್ನನ್ನು ನಾನು ಚೈತನ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತೇನೆ."... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ