ಭಾರತದಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸಾಕಷ್ಟು ಸಾಮಾನ್ಯವಾಗಿವೆ. ಆದ್ದರಿಂದ ನೀವು ನಿಮ್ಮ ಪ್ರತಿನಿತ್ಯದ ಆಹಾರ ಪದಾರ್ಥಗಳ ಜೊತೆಗೆ ಪುದೀನಾ ಮತ್ತು ಕೊತ್ತಂಬರಿ ಚಟ್ನಿ ಗಳನ್ನು ಸೇವಿಸಿ. ಕೊತ್ತಂಬರಿ ಮತ್ತು ಪುದೀನಾ ಚಟ್ನಿ ತಯಾರಿಸುವಾಗ ಇದಕ್ಕೆ ನಿಂಬೆ, ಕಪ್ಪು ಉಪ್ಪು, ಜೀರಿಗೆ, ಹಸಿರು ಮೆಣಸಿನಕಾಯಿ, ಹಿಂಗು,ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿದಾಗ ಇದು ಜೀರ್ಣಕ್ರಿಯೆಗೆ ಒಂದು ಉತ್ತಮ ಆಹಾರ ಪದಾರ್ಥ ವಾಗುತ್ತದೆ. ಇದು ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ ಊಟಕ್ಕೆ ಹೆಚ್ಚಿನ ರುಚಿಯನ್ನು ನೀಡುತ್ತದೆ.
ಜೀರ್ಣಕ್ರಿಯೆ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ
ಜೀರ್ಣಕ್ರಿಯೆಯ ಸಮಸ್ಯೆ ಇರುವವರು ಕೊತ್ತಂಬರಿ ಮತ್ತು ಪುದೀನಾ ಚಟ್ನಿಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಯನ್ನು ಹೋಗಲಾಡಿಸಬಹುದು.ಅಲ್ಲದೆ ಈ ರೀತಿಯ ಚಟ್ನಿಯನ್ನು ತಯಾರಿಸಲು ಕೆಲವು ಸಾಂಬಾರು ಪದಾರ್ಥಗಳನ್ನು ಬಳಸಲಾಗುತ್ತದೆ ಈ ಪದಾರ್ಥಗಳು ಜೀರ್ಣಕ್ರಿಯೆಯನ್ನು ಉತ್ತಮಪಡಿಸುವಲ್ಲಿ ನಿಮಗೆ ಸಹಕಾರ ನೀಡುತ್ತವೆ.
ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಇದೆ.ಇಂತಹ ಸಮಯದಲ್ಲಿ ಮಧುಮೇಹಿಗಳಿಗೆ ತಾವು ಯಾವ ಆಹಾರಗಳನ್ನು ಸೇವಿಸಬೇಕು ಎನ್ನುವುದರ ಬಗ್ಗೆ ಗಮನವಿರಬೇಕು. ಯಾವ ಆಹಾರವನ್ನು ಸೇವಿಸಿದರೆ ತಮ್ಮ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಎನ್ನುವುದರ ಬಗ್ಗೆ ತಿಳುವಳಿಕೆ ಇರಬೇಕು. ಕೊತ್ತಂಬರಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಆದ್ದರಿಂದ ಮಧುಮೇಹವನ್ನು ನಿಯಂತ್ರಿಸಬೇಕೆಂದು ಕೊಳ್ಳುವವರು ಕೊತ್ತಂಬರಿ ಮತ್ತು ಪುದೀನಾ ಚಟ್ನಿಯನ್ನು ನಿರಂತರವಾಗಿ ಸೇವಿಸಬೇಕು.
ನಿಯಮಿತವಾಗಿ ಇದನ್ನು ಸೇವಿಸುವುದರಿಂದ ನಿಮ್ಮ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.ಕೊತ್ತಂಬರಿ ಸೊಪ್ಪುಮಧುಮೇಹ ಇರುವವರಿಗೆ ಪ್ರಯೋಜನಕಾರಿ ಎಂದು ತಿಳಿದುಬಂದಿದೆ. ಏಕೆಂದರೆ ಇದು ಇನ್ಸುಲಿನ್ ಸ್ರವಿಕೆಯನ್ನು ಉತ್ತೇಜಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಂಗಾಲು ನೋವು ಮತ್ತು ಉರಿ ಸಮಸ್ಯೆಗೆ ಆಯುರ್ವೇದಿಕ ಮನೆ ಮದ್ದುಗಳು
ಉರಿಯೂತವನ್ನು ಕಡಿಮೆ ಮಾಡುತ್ತದೆ
ಕೆಲವರು ಯಾವಾಗಲೂ ಉರಿಯೂತದ ಸಮಸ್ಯೆಯನ್ನು ಎದುರಿಸುತ್ತಾರೆ.ಉರಿಯೂತದ ಸಮಸ್ಯೆ ಇರುವವರು ಧನಿಯಾ ಮತ್ತು ಪುದಿನಾದಿಂದ ತಯಾರಿಸಿದ ಹಸಿರು ಚಟ್ನಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಇದು ನಿಮ್ಮ ದೇಹ ಇಡೀ ದೇಹದಲ್ಲಿರುವ ಉರಿಯೂತವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.ಉರಿಯೂತದ ಸಮಸ್ಯೆಯೂ ದೀರ್ಘಕಾಲದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಆದ್ದರಿಂದ ಉರಿಯೂತದ ಸಮಸ್ಯೆ ಇರುವವರು ನಿಯಮಿತವಾಗಿ ಕೊತ್ತಂಬರಿ ಮತ್ತು ಪುದೀನಾದಿಂದ ತಯಾರಿಸಿದ ಚಟ್ನಿಯನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಬಳಸಿ. ಇದನ್ನು ಬೆಳಿಗ್ಗೆ ತಯಾರಿಸಿ ದಿನದ ಮೂರು ಸಮಯವೂ ಸಹ ನೀವು ನಿಮ್ಮ ಅಗತ್ಯತೆಗಳಿಗೆ ತಕ್ಕಂತೆ ಸೇವಿಸಬಹುದು.
ಹಸಿವನ್ನು ಹೆಚ್ಚಿಸುತ್ತದೆ
ನಾವು ಉತ್ತಮವಾಗಿ ಆಹಾರ ಸೇವಿಸಬೇಕೆಂದರೆ ನೈಸರ್ಗಿಕವಾಗಿ ನಮಗೆ ಹಸಿವಾಗಬೇಕು.ನೈಸರ್ಗಿಕವಾಗಿ ನಮಗೆ ಹಸಿ ವಾಗದಿದ್ದರೆ ನಾವು ಉತ್ತಮ ರೀತಿಯಲ್ಲಿ ಆಹಾರಗಳನ್ನು ಸೇವಿಸದೇ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಸಿವನ್ನು ಅನುಭವಿಸದಿರುವುದು ದೌರ್ಬಲ್ಯ ಮತ್ತು ದಣಿವಿಗೆ ಕಾರಣವಾಗುತ್ತದೆ.
ಆದ್ದರಿಂದ ನಿಮ್ಮ ನಿಯಮಿತವಾದ ಊಟದಲ್ಲಿ ಸೂಕ್ಷ್ಮವಾದ ಚಟ್ನಿಯನ್ನು ಸೇರಿಸುವುದರಿಂದ ನಿಮ್ಮ ಹಸಿವು ಹೆಚ್ಚಾಗುತ್ತದೆ ಮಾತ್ರವಲ್ಲದೆ ಇದು ಊಟದ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ನಿಮಗೆ ಉತ್ತಮ ರೀತಿಯಲ್ಲಿ ಜೀರ್ಣವಾಗುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯವು ಉತ್ತಮವಾಗಿರುತ್ತದೆ.
ಉತ್ತಮ ಆರೋಗ್ಯಕ್ಕಾಗಿ ಈ ಸಮಯದಲ್ಲಿ ಜೇನುತುಪ್ಪದೊಂದಿಗೆ ಬೆಳ್ಳುಳ್ಳಿ ಸೇವಿಸಿ ಸಾಕು!
ವಾಕರಿಕೆ ತೊಡೆದುಹಾಕಲು ಸಹಾಯ ಮಾಡುತ್ತದೆ
ಪುದಿನಾ ಎಲೆಗಳು ಉತ್ತಮವಾದ ಸುವಾಸನೆಯನ್ನು ಹೊಂದಿವೆ.ಇದರಲ್ಲಿರುವ ಉಲ್ಲಾಸಕರ ಮತ್ತು ನೈಸರ್ಗಿಕವಾದ ಸುವಾಸನೆಯು ವಾಕರಿಕೆಯ ಸಮಸ್ಯೆಯನ್ನು ನಿವಾರಿಸಲು ಸಹಾಯಮಾಡುತ್ತದೆ. ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗಿ ಊಟ ಮಾಡುವ ಸಮಯದಲ್ಲಿ ವಾಕರಿಕೆಯ ಲಕ್ಷಣಗಳು ಕಂಡುಬರುತ್ತದೆ.ಅಂತಹ ಸಮಯದಲ್ಲಿ ನೀವು ಪುದೀನಾ ಮತ್ತು ಕೊತ್ತಂಬರಿ ಯಿಂದ ತಯಾರಿಸಿದ ಚಟ್ನಿಯನ್ನು ಸೇವಿಸುವುದರಿಂದ ಇದು ನಿಮ್ಮ ವಾಕರಿಕೆಯನ್ನು ನಿಲ್ಲಿಸುತ್ತದೆ.
ಹೊಳೆಯುವ ಚರ್ಮ ಪಡೆಯಲು ಸಹಾಯ ಮಾಡುತ್ತದೆ
ಉತ್ತಮವಾದ ಚರ್ಮವನ್ನು ಪಡೆಯಬೇಕೆಂದರೆ ಯಾವಾಗಲೂ ಹಸಿರು ತರಕಾರಿಗಳನ್ನು ಸೇವಿಸಬೇಕು ಎಂಬುದು ನಮಗೆ ಈಗಾಗಲೇ ತಿಳಿದ ವಿಷಯವಾಗಿದೆ. ಹಸಿರು ಕೊತ್ತಂಬರಿ ಸೊಪ್ಪಿನಲ್ಲಿ ಆಂಟಿ ಫಂಗಲ್ ಮತ್ತು ನಂಜುನಿರೋಧಕ ಗುಣಗಳಿವೆ. ಆದ್ದರಿಂದ ಇದರಿಂದ ಚಟ್ನಿ ಮಾಡಿ ನಿಯಮಿತವಾಗಿ ಸೇವಿಸುವುದರಿಂದ ಚರ್ಮದ ಕಲೆಗಳು ಮತ್ತು ಮೊಡವೆಗಳ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಅಂತಿಮವಾಗಿ ಸ್ಪಷ್ಟವಾದ ಹೊಳೆಯುವ ಚರ್ಮವು ನಿಮ್ಮದಾಗುತ್ತದೆ.ನೀವೇನಾದರೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ,ಸ್ಪಷ್ಟ ಚರ್ಮವನ್ನು ಪಡೆಯಬೇಕೆಂದರೆ ನಿಯಮಿತವಾಗಿ ಹಸಿರು ಚಟ್ನಿಯನ್ನು ಸೇವಿಸಿ.
ನಿಂಬೆ ಹಣ್ಣಿನಿಂದ ನಿಮ್ಮ ದೇಹದ ಮೇಲೆ ಇಂತಹ ಒಂದು ಮ್ಯಾಜಿಕ್ ಸಾಧ್ಯವೇ?
ರಕ್ತಹೀನತೆಯನ್ನು ಗುಣಪಡಿಸುತ್ತದೆ
ದೇಹದಲ್ಲಿ ಕಬ್ಬಿಣದ ಕೊರತೆಯ ರಕ್ತಹೀನತೆಗೆ ಕಾರಣವಾಗುತ್ತದೆ. ದೇಹದಲ್ಲಿ ರಕ್ತ ಹೀನತೆಯ ಸಮಸ್ಯೆ ಇದ್ದರೆ ಇದು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ನಮ್ಮ ದೇಹವು ಉತ್ತಮವಾಗಿ ಆರೋಗ್ಯಯುತವಾಗಿ ಇರಬೇಕೆಂದರೆ ನಮ್ಮ ದೇಹದಲ್ಲಿನ ರಕ್ತದ ಪ್ರಮಾಣ ಹೆಚ್ಚಾಗಿರಬೇಕು.ಕೊತ್ತಂಬರಿ ಮತ್ತು ಪುದೀನಾ ದಿಂದ ಮಾಡಿದ ಚಟ್ನಿಯನ್ನು ಸೇವಿಸುವುದು ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪುದೀನಾ ಮತ್ತು ಕೊತ್ತಂಬರಿ ಎರಡರಲ್ಲೂ ಸಾಕಷ್ಟು ಪ್ರಮಾಣದ ಕಬ್ಬಿಣದ ಅಂಶವಿದೆ.
ಕೊತ್ತಂಬರಿ ಮತ್ತು ಪುದೀನಾ ಭಾರತೀಯರು ಸಾಮಾನ್ಯವಾಗಿ ತಮ್ಮ ದಿನನಿತ್ಯದ ಅಡುಗೆಗಳಲ್ಲಿ ಬಳಸುವ ಸೊಪ್ಪುಗಳಾಗಿವೆ.ಕೊತ್ತಂಬರಿ ಮತ್ತು ಪುದೀನಾ ಸೊಪ್ಪು ಆಹಾರಗಳಿಗೆ ಉತ್ತಮ ರುಚಿ ನೀಡುವ ಕಾರಣದಿಂದಾಗಿ ಇದನ್ನು ಬಳಸಲಾಗುತ್ತದೆ. ಕೊತ್ತಂಬರಿ ಮತ್ತು ಪುದೀನಾ ಇಷ್ಟೆಲ್ಲಾ ಆರೋಗ್ಯ ಲಾಭಗಳನ್ನು ನೀಡುತ್ತವೆ. ಈ ಮೇಲ್ಕಂಡ ಎಲ್ಲಾ ಉಪಯೋಗಗಳಿಗೆ ನೀವು ಕೊತ್ತಂಬರಿ ಮತ್ತು ಪುದೀನಾ ಚಟ್ನಿಯನ್ನು ಬಳಸಬಹುದು.
ಕೆಲವರಿಗೆ ಪುದಿನಾದಲ್ಲಿರುವ ಗಮನವು ಇಷ್ಟವಾಗುವುದಿಲ್ಲ. ಆದರೆ ಇದು ಹೊಂದಿರುವ ಉತ್ತಮ ಗುಣಗಳನ್ನು ನೋಡಿದರೆ, ಪ್ರತಿಯೊಬ್ಬರು ಇದನ್ನು ಸೇವಿಸಬೇಕು.ಒಂದು ವೇಳೆ ನೀವೇನಾದರೂ ಪುದೀನಾ ಮತ್ತು ಕೊತ್ತಂಬರಿ ಸೇವಿಸದವರಾಗಿದ್ದರೆ ಇನ್ನುಮುಂದೆ ಆದರೂ ಇದರಿಂದ ದೊರೆಯುವ ಲಾಭಗಳನ್ನು ತಿಳಿದ ನಂತರವಾದರೂ ನಿಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಇವುಗಳನ್ನು ಬಳಸಿ. ಇದರಿಂದ ದೊರೆಯುವ ಉತ್ತಮ ಲಾಭಗಳನ್ನು ಪಡೆದುಕೊಳ್ಳಿ.