ಆ್ಯಪ್ನಗರ

ಎದೆಯಲ್ಲಿ ಉಂಟಾಗುವ ದಟ್ಟಣೆ ತಿಳಿಗೊಳಿಸಲು ಮನೆ ಮದ್ದು

ದೇಹದ ಪ್ರತಿಯೊಂದು ಅಂಗದ ಆರೈಕೆಯು ತುಂಬಾ ಮುಖ್ಯ. ನಾವು ಒಂದು ಅಂಗವನ್ನು ಕಡೆಗಣಿಸಿದರೂ ಅದರಿಂದ ಸಮಸ್ಯೆಗಳು ಆರಂಭವಾಗುತ್ತದೆ. ಇದಕ್ಕಾಗಿಯೇ ಯೋಗ ಮತ್ತು ವ್ಯಾಯಾಮ ಮಾಡಿದರೆ ಪ್ರತಿಯೊಂದು ಅಂಗಗಳು ಸರಿಯಾಗಿ ಇರುತ್ತದೆ.

Vijaya Karnataka Web 27 Mar 2019, 10:50 pm
ಶ್ವಾಸಕೋಶದಲ್ಲಿ ಕಫ ತುಂಬಿಕೊಳ್ಳುವ ಕಾರಣದಿಂದಾಗಿ ಎದೆಯಲ್ಲಿ ದಟ್ಟನೆ ಉಂಟಾಗಬಹುದು. ಇದರಿಂದ ಎದೆಯ ಭಾಗ ಭಾರವಾಗಿರುವ ಅನುಭವವಾಗಬಹುದು. ಸಣ್ಣ ಮಟ್ಟದ ಎದೆ ನೋವು, ಕಫ, ಉಸಿರಾಟದ ಸಮಸ್ಯೆ, ಕಿರಿಕಿರಿ ಮತ್ತು ಆಯಾಸ ಎದೆ ದಟ್ಟನೆಯ ಅಥವಾ ಎದೆ ದಟ್ಟಣೆಯ ಕೆಲವು ಲಕ್ಷಣಗಳಾಗಿವೆ.
Vijaya Karnataka Web chest congestion


ಬಿಸಿ ನೀರು ಕುಡಿಯುವುದು
ಎದೆ ದಟ್ಟಣೆ ಉಂಟಾಗಿರುವಂತಹ ಸಂದರ್ಭದಲ್ಲಿ ನಿಮಗೆ ಬಾಯಾರಿಕೆಯಾದ ಸಮಯದಲ್ಲೂ ಬಿಸಿ ನೀರು ಕುಡಿಯಲು ಪ್ರಯತ್ನಿಸಿ. ಎದೆಯಲ್ಲಿ ಜಮೆಯಾಗಿರುವಂತಹ ಶ್ಲೇಷ್ಮವನ್ನು ಬಿಸಿ ನೀರು ಸಡಿಲಗೊಳಿಸುವುದು. ಇದರಿಂದ ಕಫ ಕಡಿಮೆಯಾಗುವುದು. ಈ ರೀತಿಯಾಗಿ ನಿಮಗೆ ಆರಾಮ ಸಿಗುವುದು.

ಹಾಲು, ಅರಿಶಿನ, ಜೇನು
ಎದೆ ದಟ್ಟಣೆಗೆ ಹಲವಾರು ಶತಮಾನಗಳಿಂದ ಮಾಡಿಕೊಂಡು ಬಂದಿರುವಂತಹ ಮನೆಮದ್ದು ಇದಾಗಿದೆ. ಅರಶಿನದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇದೆ ಎಂದು ತಿಳಿದಿದೆ. ಇದರಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್ ಹಲವಾರು ಆರೋಗ್ಯ ಸಮಸ್ಯೆ ನಿವಾರಣೆ ಮಾಡುವುದು. ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ಅರಿಶಿನ ಮತ್ತು ಎರಡು ಚಮಚ ಜೇನುತುಪ್ಪ ಹಾಕಿಕೊಳ್ಳಿ. ಒಂದು ಚಿಟಿಕೆ ಕರಿಮೆಣಸಿನ ಹುಡಿ ಹಾಕಿ. ಬಿಸಿಯಾಗಿರುವಾಗಲೇ ಈ ಹಾಲನ್ನು ಕುಡಿದರೆ ಎದೆ ದಟ್ಟಣೆ ಕಡಿಮೆ ಮಾಡಬಹುದು

ಲಿಂಬೆರಸ ಮತ್ತು ಜೇನುತುಪ್ಪ
ತಾಜಾ ಲಿಂಬೆಹಣ್ಣಿನ ರಸ ಮತ್ತು ಜೇನುತುಪ್ಪ ತೆಗೆದುಕೊಳ್ಳಿ. ಒಂದು ಲೋಟ ಬಿಸಿ ನೀರಿಗೆ ಇದನ್ನು ಹಾಕಿ. ಎದೆ ದಟ್ಟಣೆ ನಿವಾರಣೆಗೆ ಇದು ಒಳ್ಳೆಯ ಮದ್ದು. ವೇಗವಾಗಿ ಉಪಶಮನ ಪಡೆಯಬೇಕಾದರೆ ಬೆಳಗ್ಗೆ ಮತ್ತು ರಾತ್ರಿ ವೇಳೆ ಇದನ್ನು ಕುಡಿಯಬೇಕು. ಜೇನುತುಪ್ಪವು ಶ್ವಾಸಕೋಶದಲ್ಲಿ ಇರುವಂತಹ ಸೋಂಕನ್ನು ಕಡಿಮೆ ಮಾಡುವುದು ಮತ್ತು ಲಿಂಬೆಯಲ್ಲಿರುವ ಆಮ್ಲೀಯ ಗುಣವು ಕಫವನ್ನು ತೆಳು ಮಾಡುವುದು.

ಬಿಸಿ ನೀರು ಮತ್ತು ಉಪ್ಪಿನ ಮಿಶ್ರಣದಿಂದ ಬಾಯಿ ಮುಕ್ಕಳಿಸಿ
ಎದೆಯು ಕಫದಿಂದ ಮುಕ್ತಿ ಪಡೆಯುವ ತನಕ ದಿನದಲ್ಲಿ ಹಲವಾರು ಸಲ ಉಪ್ಪು ಬೆರೆಸಿದ ಬಿಸಿ ನೀರಿನಿಂದ ಬಾಯಿ ಮುಕ್ಕಳಿಸಿಕೊಳ್ಳಿ. ಇದನ್ನು ದಿನದಲ್ಲಿ 3-4 ಸಲ ಮಾಡಿ. ಉಪ್ಪು ಎದೆಯಲ್ಲಿರುವ ಕಫವನ್ನು ತೆಗೆಯುವುದು ಮತ್ತು ಬಿಸಿ ನೀರು ಗಂಟಲಿನ ಕಿರಿಕಿರಿ ತಪ್ಪಿಸುವುದು. ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಉಪ್ಪು ಹಾಕಿ ಬೆರೆಸಿ ಬಾಯಿ ಮುಕ್ಕಳಿಸಿಕೊಳ್ಳಿ.

ಶುಂಠಿ ಚಹಾ
ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವಂತಹ ಶುಂಠಿಯು ತುಂಬಾ ಪರಿಣಾಮಕಾರಿ ಬೇರು. ಶುಂಠಿಯಲ್ಲಿ ಇರುವಂತಹ ಪಾಲಿಫೆನಾಲ್ಸ್ ನಿಂದಾಗಿ ಕಫದ ಸ್ರವಿಸುವಿಕೆ ನಿಲ್ಲುವುದು. ಚಹಾಕ್ಕೆ ಶುಂಠಿ ಹಾಕಿ ಸೇವಿಸಬಹುದು. ಒಂದು ಚಮಚ ತಾಜಾ ಶುಂಠಿಯನ್ನು ಕತ್ತರಿಸಿಕೊಂಡು ಒಂದು ಲೋಟ ಬಿಸಿ ನೀರಿಗೆ ಹಾಕಿ. ಶುಂಠಿಯ ರಸವು ಸರಿಯಾಗಿ ಹೊರಬರಲು ಬಿಡಿ. ಇದನ್ನು ಸೋಸಿಕೊಂಡು ಅದಕ್ಕೆ ಜೇನುತುಪ್ಪ ಬೆರೆಸಿ. ಇದನ್ನು ದಿನದಲ್ಲಿ ಮೂರು ಸಲ ಸೇವಿಸಿ.

ಬ್ಲ್ಯಾಕ್ ಕಾಫಿ
ಎದೆ ದಟ್ಟಣೆಯ ಪ್ರಮುಖ ಸಮಸ್ಯೆಯೆಂದರೆ ಕೆಮ್ಮು ಮತ್ತು ಉಸಿರಾಟದ ಸಮಸ್ಯೆ. ದಿನದಲ್ಲಿ ಒಂದು ಅಥವಾ ಎರಡು ಕಪ್ ಬ್ಲ್ಯಾಕ್ ಕಾಫಿ ಕುಡಿದರೆ ಅದರಿಂದ ಉಸಿರಾಟದ ಸಮಸ್ಯೆ ಕಡಿಮೆಯಾಗುವುದು.

ಹಬೆ
ಬಿಸಿ ನೀರಿನ ಹಬೆಗೆ ಮುಖವನ್ನು ಒಡ್ಡಿದರೆ ಆಗ ಅದರ ಬಿಸಿ ಮತ್ತು ತೇವವು ಎದೆಯಲ್ಲಿ ತುಂಬಿರುವ ಕಫವನ್ನು ಕಡಿಮೆ ಮಾಡುವುದು. ಒಂದು ಲೋಟ ನೀರನ್ನು ಬಿಸಿ ಮಾಡಿ ಮತ್ತು ಕುದಿಯುತ್ತಿರಲಿ. ಇದಕ್ಕೆ ಪುದೀನಾದ ಎಣ್ಣೆ ಹಾಕಿದರೆ ತುಂಬಾ ಒಳ್ಳೆಯದು. ಪಾತ್ರೆಗೆ ಮುಖವನ್ನು ಒಡ್ಡಿ ಮತ್ತು ಟವೆಲ್ ನಿಂದ ಮುಚ್ಚಿಕೊಳ್ಳಿ. ಇದರಿಂದ ಆವಿಯು ಹೊರಹೋಗುವುದಿಲ್ಲ. ದೀರ್ಘ ಶ್ವಾಸ ತೆಗೆದುಕೊಳ್ಳಿ ಮತ್ತು ದಿನದಲ್ಲಿ 2-3 ಸಲ ಹೀಗೆ ಮಾಡಿ.

ಅರಿಶಿನ ಮತ್ತು ಬಿಸಿನೀರಿನಿಂದ ಬಾಯಿ ಮುಕ್ಕಳಿಸಿ
ಕಫ ಮತ್ತು ಎದೆನೋವಿನ ಸಮಸ್ಯೆಯನ್ನು ಅರಿಶಿನವು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು. ಅರಿಶಿನದಲ್ಲಿ ಇರುವಂತಹ ಕರ್ಕ್ಯೂಮಿನ್ ಎನ್ನುವ ಅಂಶವು ಎದೆ ದಟ್ಟಣೆಯಿಂದ ತುಂಬಾ ಪರಿಣಾಮಕಾರಿಯಾಗಿ ಪರಿಹಾರ ನೀಡುವುದು. ಒಂದು ಲೋಟ ಬಿಸಿ ನೀರಿಗೆ ಒಂದು ಚಿಟಿಕೆ ಅರಿಶಿನ ಹಾಕಿಕೊಂಡು ಕಲಸಿ ಮತ್ತು ಅದರಿಂದ ಬಾಯಿ ಮುಕ್ಕಳಿಸಿ. ದಿನದಲ್ಲಿ ಹಲವಾರು ಸಲ ಹೀಗೆ ಮಾಡಿ.

ಈರುಳ್ಳಿ ರಸ ಮತ್ತು ಲಿಂಬೆ ರಸ
ಈರುಳ್ಳಿಯಲ್ಲಿ ಸಲ್ಫರ್ ಮತ್ತು ಕ್ವೆರ್ಸೆಟನ್ ಅಂಶವು ಇದ್ದು, ಇದು ಕಫವನ್ನು ಸಡಿಲಗೊಳಿಸುವುದು. ಇದಕ್ಕೆ ಜೇನುತುಪ್ಪ ಮತ್ತು ಲಿಂಬೆರಸ ಹಾಕಿದರೆ ಇದು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಸಣ್ಣ ಈರುಳ್ಳಿಯ ಜ್ಯೂಸ್ ನ್ನು ತಯಾರು ಮಾಡಿ. ಇದಕ್ಕೆ ಒಂದು ಚಮಚ ಲಿಂಬೆರಸ ಮತ್ತು ನೀರು ಹಾಕಿ. ಇದಕ್ಕೆ ಅರ್ಧ ಚಮಚ ಜೇನುತುಪ್ಪ ಕೂಡ ಬೆರೆಸಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಕುಡಿಯುವ ಮೊದಲು ಸ್ವಲ್ಪ ಬಿಸಿ ಮಾಡಿ. ದಿನದಲ್ಲಿ ಮೂರು ಸಲ ಇದನ್ನು ಸೇವಿಸಿ.

ಉಪ್ಪು + ಬಿಸಿ ನೀರು
ಒಂದು ಚಿಟಿಕೆ ಉಪ್ಪನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿಯಿರಿ. ದಿನದಲ್ಲಿ ಮೂರು ಸಲ ಹೀಗೆ ಮಾಡಿ. ಇದು ಲೋಳೆ ನಿವಾರಣೆ ಮಾಡಿ ಕಿರಿಕಿರಿ ಕಡಿಮೆ ಮಾಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ