ಆ್ಯಪ್ನಗರ

ಗರ್ಭಿಣಿಯರಿಗೆ ವಾಟರ್ ಬ್ರೇಕಿಂಗ್ ಆಗುವುದು ಯಾವಾಗ, ಯಾತಕ್ಕೆ ಗೊತ್ತೇ?

ಗರ್ಭಿಣಿಯಾದಾಗ ಯೋನಿಯಿಂದ ನೀರು ಹೊರಬಂದರೆ ಅದಕ್ಕೆ ಅನೇಕ ಕಾರಣಗಳಿವೆ. ಆದರೆ ಆಮ್ನಿಯೋಟಿಕ್ ದ್ರವ ಹೊರಬಂದರೆ ಮಗು ಹೊರಬರುವ ಸಮಯ ಬಂದಾಯಿತು ಎಂದರ್ಥ. ಈ ಬಗ್ಗೆ ಕೆಲವು ಸತ್ಯಗಳನ್ನು ತಿಳಿದುಕೊಂಡರೆ ಹೆರಿಗೆಗೆ ತಯಾರಿ ನಡೆಸುತ್ತಿರುವ ಗರ್ಭಿಣಿಯರಿಗೆ ಸಹಾಯವಾಗುತ್ತದೆ.

Vijaya Karnataka Web 27 Jun 2020, 2:53 pm
ಪ್ರತಿ ಮಹಿಳೆ ತನ್ನ ಮಗುವನ್ನು ಹೆರುವ ಸಂದರ್ಭದಲ್ಲಿ ವಿಶಿಷ್ಟ ಅನುಭವವನ್ನು ಹೊಂದಿರುತ್ತಾಳೆ. ಬಹುತೇಕರಿಗೆ ಹೆರಿಗೆಯ ಸಂದರ್ಭದಲ್ಲಿ ಯೋನಿಯಿಂದ ನೀರು ಹೊರಬರುತ್ತದೆ. ಆದರೆ ಕೆಲವು ಮಹಿಳೆಯರು ಈ ನೀರನ್ನು ನಿರ್ಲಕ್ಷಿಸಿ
Vijaya Karnataka Web is water breaking is important sign of labor
ಗರ್ಭಿಣಿಯರಿಗೆ ವಾಟರ್ ಬ್ರೇಕಿಂಗ್ ಆಗುವುದು ಯಾವಾಗ, ಯಾತಕ್ಕೆ ಗೊತ್ತೇ?

ತನಗೆ ಮತ್ತು ತನ್ನ ಮಗುವಿಗೆ ಅಪಾಯ ತಂದೊಡ್ಡಿಕೊಳ್ಳುತ್ತಾರೆ. ಮತ್ತೆ ಕೆಲವರು ಭಯಪಡುತ್ತಾರೆ. ಆದ್ದರಿಂದ ಇಲ್ಲಿ ಗರ್ಭಾವಸ್ಥೆಯಲ್ಲಿ ನೀರು ಹೊರಬರುವುದೇಕೆ ? ಅದು ಯಾವಾಗ ಸಂಭವಿಸುತ್ತದೆ? ಮುಂದೆ ಏನು ಮಾಡಬೇಕು? ಅದರ
ಚಿಹ್ನೆಗಳೇನು? ಮುಂತಾದ ಮಾಹಿತಿಗಳನ್ನು ಕೊಡಲಾಗಿದೆ ಓದಿ…


​ನೀರು ಯಾವಾಗ ಬರುತ್ತದೆ?

ಗರ್ಭಾವಸ್ಥೆಯಲ್ಲಿ ಮಗು ‘ಆಮ್ನಿಯೋಟಿಕ್ ಚೀಲ’ ಎಂದು ಕರೆಯಲ್ಪಡುವ ದ್ರವ ತುಂಬಿದ ಪೊರೆಯ ಚೀಲದಿಂದ ಸುತ್ತುವರಿದಿರುತ್ತದೆ. ವಿಶೇಷವಾಗಿ ಹೆರಿಗೆ ಆರಂಭದಲ್ಲಿ ಅಥವಾ ಸಮಯದಲ್ಲಿ ಆ ಪೊರೆ ಛಿದ್ರವಾಗುತ್ತವೆ. ಇದನ್ನು ವಾಟರ್ ಬ್ರೇಕಿಂಗ್ ಎಂದು ಕರೆಯುತ್ತಾರೆ. ವಾಟರ್ ಬ್ರೇಕಿಂಗ್ ಆದಾಗ ಯೋನಿ ಅಥವಾ ಪೆರಿನಿಯಂನಲ್ಲಿ ತೇವದ ಅನುಭವವಾಗುತ್ತದೆ. ಯೋನಿಯಿಂದ ಸಣ್ಣ ಪ್ರಮಾಣದ ನೀರಿನ ದ್ರವ ನಿರಂತರವಾಗಿ ಸೋರಿಕೆಯಾಗುತ್ತದೆ. ಇದು ಸಾಮಾನ್ಯವಾಗಿ ಗರ್ಭಧಾರಣೆಯ ಕೊನೆಯಲ್ಲಿ ಸಂಭವಿಸುತ್ತದೆ. ಹಾಗೆಯೇ ಶೀಘ್ರದಲ್ಲೇ ಹೆರಿಗೆಯಾಗುತ್ತದೆ ಎಂಬುದರಸಂಕೇತವೂ ಆಗಿದೆ.

​ಇದು ಹೇಗೆ ಗೊತ್ತಾಗುತ್ತದೆ?

ವಾಟರ್ ಬ್ರೇಕಿಂಗ್ ಆಗಿದೆ ಎಂದು ಎಲ್ಲರಿಗೂ ಅಷ್ಟು ಸುಲಭವಾಗಿ ತಿಳಿಯುವುದಿಲ್ಲ. ಉದಾಹರಣೆಗೆ ವಿಶೇಷವಾಗಿ ನೀವು ಆರ್ದ್ರತೆಯ ಭಾವನೆ ಮಾತ್ರ ಅನುಭವಿಸಿದರೆ ಆಮ್ನಿಯೋಟಿಕ್ ದ್ರವ ಮತ್ತು ಮೂತ್ರದ ನಡುವಿನ ವ್ಯತ್ಯಾಸವನ್ನು ಹೇಳುವುದು ಕಷ್ಟವಾಗಬಹುದು. ಒಂದು ವೇಳೆ ನಿಮಗೆ ವಾಟರ್ ಬ್ರೇಕಿಂಗ್ ಆಗಿದೆ ಎಂದು ತಿಳಿಯದಿದ್ದರೆ ವೈದ್ಯರಿಗೆ ಕರೆ ಮಾಡಿ ತಿಳಿದುಕೊಳ್ಳಿ. ಆಗ ಆಮ್ನಿಯೋಟಿಕ್ ದ್ರವ ಸೋರುತ್ತಿರುವುದನ್ನು ನಿರ್ಧರಿಸಲು ವೈದ್ಯರು ದೈಹಿಕ ಪರೀಕ್ಷೆಯನ್ನು ಮಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ, ಆಮ್ನಿಯೋಟಿಕ್ ದ್ರವದ ಪ್ರಮಾಣವನ್ನು ಪರೀಕ್ಷಿಸಲು ಅಲ್ಟ್ರಾಸೌಂಡ್ ಮಾಡಬಹುದು.

​ನೀರು ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ

ಹೆಚ್ಚಿನ ಮಹಿಳೆಯರಲ್ಲಿ ಹೆರಿಗೆಯ ಮೊದಲ ಅಥವಾ ಎರಡನೆಯ ಹಂತದಲ್ಲಿ ನೀರು ಒಡೆದು ಹೊರಬರುತ್ತದೆ. ಈ ಅವಧಿಯಲ್ಲಿ ಸಂಭವಿಸುವ ಸಂಕೋಚನವೇ ಇದಕ್ಕೆ ಕಾರಣ. ಹತ್ತು ಮಹಿಳೆಯರಲ್ಲಿ ಒಬ್ಬರಲ್ಲಿ, ಹೆರಿಗೆಯ ಚಿಹ್ನೆಗಳು ಕಾಣುವ ಮೊದಲು ನೀರು ಒಡೆಯುತ್ತದೆ. ಅಂದರೆ ಸಂಕೋಚನಕ್ಕೂ ಮುಂಚೆಯೇ. ಬಹಳ ಅಪರೂಪದ ಸಂದರ್ಭಗಳಲ್ಲಿ ಗರ್ಭಧಾರಣೆಯ 37 ನೇ ವಾರದಲ್ಲಿ ನೀರು ಒಡೆಯಬಹುದು. ಆದ್ದರಿಂದ, ನೀರು ಒಡೆದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಆದರೂ ಕೆಲವೊಮ್ಮೆ ವೈದ್ಯರು ಗರ್ಭಾಶಯದ ಸಂಕೋಚನವನ್ನು ಉತ್ತೇಜಿಸಬಹುದು . ಸಾಮಾನ್ಯವಾಗಿ ನೀರು ಒಡೆದ ನಂತರ ಡೆಲಿವರಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.


ನೀವಂದುಕೊಂಡಂತೆ ಇರುವುದಿಲ್ಲ ಸಿಸೇರಿಯನ್ ಹೆರಿಗೆ…


​ಮಗು ಹೊರಬರುವ ಸಂಕೇತವೇ?

ಸಾಮಾನ್ಯವಾಗಿ ವೈದ್ಯರು ಹೇಳಿದ ಡೆಲಿವರಿ ಡೇಟ್ ಅಥವಾ ಸ್ವಲ್ಪ ಮೊದಲು ವಾಟರ್ ಬ್ರೇಕಿಂಗ್ ಸಂಭವಿಸಬಹುದು. ಇದು ಬೇಗನೆ ಸಂಭವಿಸಿದಲ್ಲಿ, ಅಕಾಲಿಕ ಹೆರಿಗೆ ಸೂಚಿಸುತ್ತದೆ. ಆದ್ದರಿಂದ ತಕ್ಷಣ ಆಸ್ಪತ್ರೆಗೆ ಹೋಗುವುದು ಬಹಳ ಮುಖ್ಯ. ಇದರರ್ಥ ಮಗುವನ್ನು ನೀವು ಯೋಜಿಸಿದ್ದಕ್ಕಿಂತ ಬೇಗ ಹೊಂದಬಹುದು.

ಒಂದು ವೇಳೆ ಹೆಚ್ಚು ನೋವು ಅನುಭವಿಸುತ್ತಿದ್ದರೆ ಅಥವಾ 37 ವಾರಗಳಿಗಿಂತ ಕಡಿಮೆ ಗರ್ಭಿಣಿಯಾಗಿದ್ದರೆ ಮತ್ತು ಸಿ-ಸೆಕ್ಷನ್ ಆಗಲು ಯೋಜಿಸುತ್ತಿದ್ದರೆ ಆದಷ್ಟು ಬೇಗ ಆಸ್ಪತ್ರೆಗೆ ಹೋಗಬೇಕು . ಆದರೂ ಕೆಲವೇ ಕೆಲವು ಹೆರಿಗೆಗಳು ನೀರಿನ ಒಡೆಯುವಿಕೆಯಿಂದ ಪ್ರಾರಂಭವಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಸಾಮಾನ್ಯವಾಗಿ 8ಸೆಂ.ಮೀ.ನಿಂದ 10 ಸೆಂ.ಮೀ. ಹಿಗ್ಗಿದಾಗ ಮಾತ್ರ ನಿಮ್ಮ ನೀರು ಒಡೆಯುತ್ತದೆ. ಹಿಗ್ಗಿದಾಗ ಕೆಲವೊಮ್ಮೆ ವೈದ್ಯರು ಹೆರಿಗೆಯನ್ನು ವೇಗಗೊಳಿಸಲು ನೀರನ್ನು ಒಡೆಯುತ್ತಾರೆ.

​ಈ ಸಾಧ್ಯತೆ ಕಡಿಮೆ

ನೀರು ಒಡೆಯುವ ಅನುಭವ ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿರುತ್ತದೆ. ಕೆಲವರಲ್ಲಿ ವಾಸನೆಯಿಲ್ಲದ ಮತ್ತು ಬಣ್ಣರಹಿತ ಆಮ್ನಿಯೋಟಿಕ್ ದ್ರವ ಹೊರಬರುತ್ತದೆ. ಅಲ್ಲದೆ, ಆಮ್ನಿಯೋಟಿಕ್ ದ್ರವವು ಸಾಮಾನ್ಯವಾಗಿ ಕ್ಷೀರ ಅಥವಾ ಗುಲಾಬಿ ಬಣ್ಣದ್ದಾಗಿರುತ್ತದೆ, ಕಂದು ಬಣ್ಣದ್ದಾಗಿರುವುದಿಲ್ಲ. ಅನೇಕ ಅಮ್ಮಂದಿರು ಶಾಪಿಂಗ್ ಮಾಡುವಾಗ ಅಥವಾ ರೆಸ್ಟೋರೆಂಟ್‌ನಲ್ಲಿರುವಾಗ ಅಥವಾ ತಮ್ಮ ಮನೆಗಳ ಹೊರಗೆ ಎಲ್ಲಿಯಾದರೂ ಇದ್ದಾಗ ತಮ್ಮ ನೀರು ಒಡೆಯಬಹುದು ಎಂದು ಚಿಂತೆ ಮಾಡುತ್ತಾರೆ. ಈ ಸಾಧ್ಯತೆಯ ಬಗ್ಗೆ ಹೆಚ್ಚು ಚಿಂತಿಸಬೇಡಿ, ಬದಲಿಗೆ ನಿಮ್ಮ ಗರ್ಭಧಾರಣೆಯ 37 ನೇ ವಾರದಿಂದ ಹೆರಿಗೆ ಪ್ಯಾಡ್ ಅನ್ನು ಒಯ್ಯಿರಿ. ಇದಕ್ಕಾಗಿ ಟ್ಯಾಂಪೂನ್ ಅಥವಾ ನೈರ್ಮಲ್ಯ ಕರವಸ್ತ್ರವನ್ನು ಬಳಸಬೇಡಿ.

ಹೆಂಡತಿ ಗರ್ಭಿಣಿಯಾದರೆ ಗಂಡನನ್ನೂ ಕಾಡುತ್ತವಂತೆ ಈ ಸಂಕಟಗಳು

​​ನೀರು ಹೊರಬಂದಾಗ ಅನುಸರಿಸಬೇಕಾದ ಸಲಹೆಗಳು


ಶಾಂತವಾಗಿರಿ. ನಿಮ್ಮ ಮಗು ತಕ್ಷಣಕ್ಕೆ ಹೊರಬರುವುದಿಲ್ಲ. ಮುಂದಿನ ಹಂತದ ಬಗ್ಗೆ ಉಸಿರಾಡಲು ಮತ್ತು ಯೋಚಿಸಲು ನಿಮಗೆ ಇನ್ನೂ ಸಮಯವಿರುತ್ತದೆ.

ಮೊದಲಿಗೆ ಈ ವಿಷಯವನ್ನು ವೈದ್ಯರು, ಶುಶ್ರೂಷಕಿಯರಿಗೆ ಅಥವಾ ಮೆಟರ್ನಿಟಿ ವಾರ್ಡ್‌ಗೆ ತಿಳಿಸಿ. ಅವರು ತಕ್ಷಣ ಏನು ಮಾಡಬೇಕೆಂದು ನಿಮಗೆ ತಿಳಿಸಬಹುದು.

ನಿಮ್ಮ ಬಳಿ ಮೆಟರ್ನಿಟಿ ಪ್ಯಾಡ್‌ಗಳನ್ನು ಇಟ್ಟುಕೊಳ್ಳಿ. ಏಕೆಂದರೆ ನೀರು ಒಡೆದ ನಂತರ, ಅದು ನಿರಂತರವಾಗಿ ಹರಿಯುತ್ತಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ