ಆ್ಯಪ್ನಗರ

ದಾಂಪತ್ಯ ಕೊಲ್ಲುವ 7 ಸಾಮಾನ್ಯ ಸಂಗತಿಗಳು

ಯಾವ ಸಂಗಾತಿ ತನ್ನ ಕುಟುಂಬದ ಬಗ್ಗೆ ಹೇಳುವಾಗ ನಾವು ಎನ್ನುವ ಬದಲು ನಾನು ಬಳಸುತ್ತಾರೋ ಅಲ್ಲಿ ಮತ್ತೊಬ್ಬರ ಭಾವನೆಗೆ ಬೆಲೆಯಿಲ್ಲ ಎಂದರ್ಥ. ಈ ರೀತಿಯ ಸಂಬಂಧ ಹೆಚ್ಚು ಬಾಳುವುದಿಲ್ಲ.

TIMESOFINDIA.COM 5 Sep 2020, 5:57 pm
ಸಂಬಂಧದಲ್ಲಿ ಹೀಗೆ ಇರಬೇಕು, ಹಾಗೆ ಇರಬೇಕು ಎಂದು ಚೌಕಟ್ಟು ಹಾಕಿ ಬಾಳಲು ಸಾಧ್ಯವಿಲ್ಲ. ದಾಂಪತ್ಯ ಜೀವನದ ಸಂಬಂಧ ಗಟ್ಟಿಯಾಗುವುದೇ ಭಾವನೆಗಳ ಮೂಲಕ. ದಾಂಪತ್ಯ ಜೀವನದಲ್ಲಿ ಸಣ್ಣ-ಪುಟ್ಟ ಮುನಿಸು ಇದ್ದೇ ಇರುತ್ತದೆ. ಆದರೆ ಅಲ್ಲಿ ನೀರವ ಮೌನ ಇರಬಾರದು.
Vijaya Karnataka Web relationship


ದಾಂಪತ್ಯ ಜೀವನದಲ್ಲಿ ಸಂಗಾತಿ ನಡುವೆ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಆ ಜೀವನ ತುಂಬಾ ಕಾಲ ಬಾಳಲ್ಲ ಎಂದರ್ಥ:

1. ಚುಚ್ಚು ಮಾತು
ದಂಪತಿ ನಡುವೆ ಸಣ್ಣ-ಪುಟ್ಟ ಮುನಿಸು ಇದ್ದೇ ಇರುತ್ತದೆ, ಆದರೆ ಒಬ್ಬರ ಮನಸ್ಸಿಗೆ ನೋವಾಗುವಂಥ ಚುಚ್ಚು ಮಾತುಗಳನ್ನಾಡುವುದು ಆರೋಗ್ಯಕರ ಸಂಬಂಧಕ್ಕೆ ಒಳ್ಳೆಯದಲ್ಲ. ಇನ್ನು ಕೆಲವರಿಗೆ ತಮ್ಮ ಸಂಗಾತಿಯ ದೂರನ್ನು ಮೂರನೇಯ ವ್ಯಕ್ತಿ ಬಳಿ ಹೇಳುವ ಕೆಟ್ಟ ಚಾಳಿ ಇರುತ್ತದೆ, ಈ ರೀತಿಯ ಬುದ್ಧಿಯಿಂದ ಸಂಸಾರದಲ್ಲಿ ಬಿರುಕು ಮತ್ತಷ್ಟು ದೊಡ್ಡದಾಗುವುದು.

2. ಲೈಂಗಿಕ ಆಸೆ ಬಗ್ಗೆ ಹೇಳಿಕೊಳ್ಳದಿರುವುದು
ಜತೆಯಾಗಿ ಸಂಸಾರ ನಡೆಸುವವರು ಲೈಂಗಿಕ ಆಸಕ್ತಿಯನ್ನು ಮುಕ್ತವಾಗಿ ಹಂಚಿಕೊಂಡಷ್ಟು ಸಂಸಾರ ಸುಂದರವಾಗಿರುವುದು. ತಮ್ಮ ಸಂಗಾತಿ ಬಳಿ ತಮ್ಮ ಲೈಂಗಿಕ ಆಸೆ ಹೇಳಿಕೊಳ್ಳದೆ ಇದ್ದರೆ ಅನೇಕ ಸಮಸ್ಯೆಗಳು ಎದುರಾಗುವುದು. ಅನೈತಿಕ ಸಂಬಂಧಕ್ಕೆ ಪ್ರಮುಖ ಕಾರಣವೇ ಲೈಂಗಿಕ ಅತೃಪ್ತಿ.

ಸಂಬಂಧ ಮುರಿದು ಬೀಳುತ್ತದೆ ಎನ್ನುವ ಸೂಚನೆಗಳಿವು

3. ಸಂಶಯ
ಸಂಸಾರದಲ್ಲಿ ಸಂಶಯದ ಭುತ ಹೊಕ್ಕಿದರೆ ಆ ಸಂಸಾರ ಹಾಳಾಯಿತು ಎಂದೇ ಹೇಳಬಹುದು. ತಮಗೆ ತಾವೇ ಏನೋ ಊಹೆ ಮಾಡಿ ಸಂಶಯ ಪಟ್ಟುಕೊಂಡು ತಾವು ಕೊರಗು ಅನುಭವಿಸಿ, ಸಂಗಾತಿಗೆ ಹಿಂಸೆ ನೀಡುವುದಕ್ಕಿಂತ ಏನಾದರೂ ಅನುಮಾನ ಬಂದಾಗ ಅದನ್ನು ಕೇಳಿ ಬಗೆಹರಿಸಿಕೊಳ್ಳಬೇಕು. ಅಲ್ಲದೆ ಸಂಗಾತಿಗೆ ಸಂಶಯ ಬರುವ ರೀತಿಯಲ್ಲಿ ಮತ್ತೊಬ್ಬರು ನಡೆದುಕೊಳ್ಳಬಾರದು.

4. ಯಾವುದೇ ಕುತೂಹಲ ಇಲ್ಲದಿದ್ದರೆ
ಲವ್‌ ಮಾಡುತ್ತಿದ್ದ ಸಮಯವನ್ನು ನೆನಪು ಮಾಡಿಕೊಳ್ಳಿ, ಎಷ್ಟೊಂದು ಎಕ್ಸೈಟ್ ಇತ್ತಲ್ಲ. ಆದರೆ ಮದುವೆಯ ನಂತರ ಏಕೆ ಇಲ್ಲವಾಗಿದೆ ಎಂದು ಒಮ್ಮೆ ಯೋಚಿಸಿ, ಆ ಎಕ್ಸೈಟ್ ಮತ್ತೆ ಬದುಕಿನಲ್ಲಿ ಮರಳಿ ತನ್ನಿ.

5. ನಿರ್ಲಕ್ಷ್ಯ
ಸಂಗಾತಿಯನ್ನು ನಿರ್ಲಕ್ಷ್ಯ ಮಾಡುವುದು, ಅವರ ಭಾವನೆಗಳಿಗೆ ಬೆಲೆ ಕೊಡದಿರುವುದು ಮಾಡಿದರೆ ಅವರು ನಿಮ್ಮಿಂದ ಮಾನಸಿಕವಾಗಿ ದೂರವಾಗುವುದರ ಜತೆ ಸಂಬಂಧವು ಕೊನೆಯಾಗಬಹುದು.

ನಿಮ್ಮಿಬ್ಬರ ನಡುವೆ ಹೀಗೆಲ್ಲಾ ಆದ್ರೆ, ಕೊನೆಗೆ ಡೈವೋರ್ಸ್‌ಯೇ ಗತಿ!

6. ಅಸಹನೀಯ ಮೌನ
ಪ್ರಣಯದ ಮೌನ ಬೇರೆ, ಅಸಹನೀಯ ಮೌನ ಬೇರೆ, ಯಾವಾಗ ಇಬ್ಬರ ನಡುವೆ ಅಸಹನೀಯ ಮೌನ ಉಂಟಾಗಿದೆಯೇ ಸಂಬಂಧ ಶಿಥಿಲವಾಗಿದೆ ಎಂದರ್ಥ.

7. ನಾವು ಎನ್ನುವ ಬದಲು ನಾನು ಪದದ ಬಳಕೆ
ಯಾವ ಸಂಗಾತಿ ತನ್ನ ಕುಟುಂಬದ ಬಗ್ಗೆ ಹೇಳುವಾಗ ನಾವು ಎನ್ನುವ ಬದಲು ನಾನು ಬಳಸುತ್ತಾರೋ ಅಲ್ಲಿ ಮತ್ತೊಬ್ಬರ ಭಾವನೆಗೆ ಬೆಲೆಯಿಲ್ಲ ಎಂದರ್ಥ. ಈ ರೀತಿಯ ಸಂಬಂಧ ಹೆಚ್ಚು ಬಾಳುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ