ಆ್ಯಪ್ನಗರ

ಸಂಗಾತಿಯೊಂದಿಗಿನ ಯುಗಾದಿಯ ಖುಷಿ ಹೆಚ್ಚಿಸಲು ಆಚರಣೆ ಹೀಗಿರಲಿ

ಹಬ್ಬಗಳೆಂದರೇನೆ ಸಂಭ್ರಮ. ಹೀಗಿದ್ದಾಗ ಸಂಗಾತಿಯೊಂದಿಗೆ ಯುಗಾದಿ ಹಬ್ಬವನ್ನು ಆಚರಿಸುವುದು ಇನ್ನಷ್ಟು ಖುಷಿ ನೀಡುತ್ತದೆ. ಹೊಸವರ್ಷವನ್ನು ಈ ರೀತಿ ಆಚರಿಸಿ ಸ್ಮರಣೀಯವಾಗಿಟ್ಟುಕೊಳ್ಳಿ

Vijaya Karnataka Web 1 Apr 2022, 5:29 pm
ಹಿಂದೂಗಳ ಪಾಲಿನ ಹೊಸ ವರ್ಷ ಚಂದ್ರಮಾನ ಯುಗಾದಿ ಪ್ರತಿಯೊಬ್ಬರಿಗೂ ವಿಶೇಷವೇ ಆಗಿದೆ. ಹೊಸದಾಗಿ ಮದುವೆಯಾದ ನವ ಜೋಡಿಗಳಿಗೆ ಯುಗಾದಿ ಸ್ಪೆಷಲ್ ಆಗಿರುತ್ತದೆ. ಹೊಸ ಮನೆ, ಹೊಸ ಜನ, ಹೊಸ ಪದ್ಧತಿ ಎಲ್ಲದಕ್ಕೂ ಹೊಂದಿಕೊಳ್ಳುವ ಅನಿವಾರ್ಯತೆ ಪ್ರತೀ ಹೆಣ್ಣಿಗಿರುತ್ತದೆ. ಹಬ್ಬಗಳ ವಿಚಾರದಲ್ಲಿ ಪ್ರತೀ ಮನೆಯ ಸಂಪ್ರದಾಯ , ಆಚರಣೆ ಬೇರೆ ಬೇರೆಯಾಗಿರುತ್ತದೆ. ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು. ನಿಮ್ಮ ಸಂಗಾತಿಯೊಂದಿಗೆ ಯುಗಾದಿಯನ್ನು ಈ ಬಾರಿ ಕೊಂಚ ವಿಭಿನ್ನವಾಗಿ ಆಚರಿಸಿ, ಸದಾ ಕಾಲ ನೆನಪಿನಲ್ಲಿ ಉಳಿಯುವಂತೆ ನೋಡಿಕೊಳ್ಳಿ. ಹೊಸ ವರ್ಷ ಹೊಸ ಕನಸಿನೊಂದಿಗೆ ಆರಂಭವಾಗುವ ಹಬ್ಬದಂದು ಮೆಟ್ಟಿದ ಮನೆಗೆ ಒಳಿತನ್ನೇ ಬಯಸಿ. ಈ ಬಾರಿ ಯುಗಾದಿಯನ್ನು ಆಚರಿಸಲು ನೀವು ಹೊಸ ಐಡಿಯಾಗಳನ್ನು ಹುಡುಕುತ್ತಿದ್ದರೆ ಇಲ್ಲೊಂದಿಷ್ಟು ಮಾಹಿತಿಗಳಿವೆ ನೋಡಿ,
Vijaya Karnataka Web celebrate memorable ugadi with partner in these way
ಸಂಗಾತಿಯೊಂದಿಗಿನ ಯುಗಾದಿಯ ಖುಷಿ ಹೆಚ್ಚಿಸಲು ಆಚರಣೆ ಹೀಗಿರಲಿ


​ಬೇವು ಬೆಲ್ಲ:

ಯುಗಾದಿ ಎಂದರೆ ನೆನಪಾಗುವುದೇ ಬೇವು ಬೆಲ್ಲ. ಜೀವನದಲ್ಲಿ ಕಷ್ಟ ಸುಖಗಳೆರಡೂ ಸಮಾನವಾಗಿರಲಿ ಎನ್ನುವ ನಿಟ್ಟಿನಲ್ಲಿ ಬೇವು ಬೆಲ್ಲವನ್ನು ನೀಡಲಾಗುತ್ತದೆ. ನಿಮ್ಮ ಸಂಗಾತಿಗೆ ಮೊದಲು ಬೇವು ಬೆಲ್ಲ ನೀಡಿ ಶುಭಹಾರೈಸಿ. ಕಷ್ಟ ಸುಖಗಳೆರಡರಲ್ಲಿಯೂ ಸಮಾನವಾಗಿ ಭಾಗಿಯಾಗುವೆನೆಂಬ ಭರವಸೆ ನೀಡಿ. ಹೊಸ ಕನಸುಗಳನ್ನು ಸಾಕಾರಗೊಳಿಸುವ ಆಶಾಭಾವನೆಯೊಂದಿಗೆ ಹಬ್ಬವನ್ನು ಆಚರಿಸಿ.

​ಗಿಡನೆಡಿ:

ಪರಿಸರ ಒಳ್ಳೆಯದಾಗಿದ್ದರೆ ಬದುಕೂ ಹಸನಾಗಿರುತ್ತದೆ. ಚೈತ್ರ ಮಾಸದ ಆರಂಭದ ದಿನ ಸಂಗಾತಿಯೊಂದಿಗೆ ಸೇರಿ ಒಂದು ಗಿಡ ನೆಡಿ. ಇದು ಪ್ರೀತಿಯ ಸಂಕೇತವಾಗಿಯೂ ಇರುತ್ತದೆ. ಜೊತೆಗೆ ಪರಿಸರಕ್ಕೂ ಒಂದೊಳ್ಳೆ ಕೊಡುಗೆಯಾಗುತ್ತದೆ. ಗಿಡದ ಹಂತ ಹಂತದ ಬೆಳವಣಿಗೆಯನ್ನು ನೋಡುವುದರಿಂದ ಖುಷಿಯೂ ಹೆಚ್ಚುತ್ತದೆ. ಈ ಮೂಲಕ ಈ ಬಾರಿಯ ಯುಗಾದಿಯನ್ನು ಅರ್ಥಪೂರ್ಣವಾಗಿ ಆಚರಿಸಿ.

​ಅನಾಥಾಶ್ರಮಗಳಿಗೆ ಭೇಟಿ ನೀಡಿ

ಹಬ್ಬ ಎಂದರೆ ಎಲ್ಲಿರಿಗೂ ಖುಷಿ ಇರುತ್ತದೆ. ಕುಟುಂಬ, ಪತಿ, ಮಕ್ಕಳೊಂದಿಗೆ ಆಚರಿಸುವ ಹಬ್ಬ ನಮ್ಮೆಲ್ಲರ ಪಾಲಿಗೆ ಸಿಕ್ಕ ದು ಸೌಭಾಗ್ಯ. ಆದರೆ ತಂದೆ ತಾಯಿಗಳನ್ನೇ ಕಾಣದೆ, ಕುಟುಂಬದ ಸದಭಿರುಚಿಯನ್ನೇ ಹೊಂದದ ಮಕ್ಕಳಿಗೆ ನಿಮ್ಮ ಪ್ರೀತಿ ಹಂಚಿ. ಈ ಯುಗಾದಿಯಂದು ಅನಾಥ ಮಕ್ಕಳ ಬಾಳಲ್ಲೂ ಹೊಸ ಕನಸು ಬಿತ್ತಲಿ ಎಂದು ಹಾರೈಸಿ. ಅನಾಥಾಶ್ರಮಕ್ಕೆ ಭೇಟಿ ನೀಡಿ ಸಿಹಿ ಹಂಚಿ ನೋಡಿ. ನಿಷ್ಕಲ್ಮಶ ಮನಸ್ಸಿನ ಮಕ್ಕಳ ಮುಖದಲ್ಲಿ ಕಾಣುವ ನಗು ಎಂತಹ ನೋವನ್ನೂ ಮರೆಸುತ್ತದೆ..

​ಒಟ್ಟಿಗೆ ಅಡುಗೆ ಮಾಢಿ

ಕೆಲಸದ ಒತ್ತಡದಿಂದ ಇಬ್ಬರಿಗೂ ಮನಸ್ಥಿತಿ ಹದಗೆಟ್ಟಿರುತ್ತದೆ. ಹೀಗಾಗಿ ಹಬ್ಬದ ದಿನ ಖುಷಿಯಾಗಿರಿ. ಹೊಸ ಬಟ್ಟೆಗಳನ್ನು ತೊಟ್ಟು, ಮನೆ ಮುಂದ ರಂಗೋಲಿ ಹಾಕಿ ಹಬ್ಬ ಆಚರಿಸಿ. ಹಬ್ಬ ಎಂದರೆ ಊಟದೆಡೆಗೆ ಗಮನ ಇರುವುದು ಸಹಜ. ನಿಮ್ಮ ಅಡುಗೆ ಕೆಲಸಗಳಿಗೆ ಸಂಗಾತಿಯನ್ನು ಸೇರಿಸಿಕೊಳ್ಳಿ. ಒಟ್ಟಿಗೆ ಅಡುಗೆ ಮಾಡಿ ಖುಷಿ ಹೆಚ್ಚಿಸಿಕೊಳ್ಳಿ.

​ಆಡಂಬರದ ಆಚರಣೆಯಿಂದ ದೂರವಿರಿ:

ಹಬ್ಬವೆಂದರೆ ಸಾಂಪ್ರದಾಯಿಕ ಆಚರಣೆ. ಹೀಗಾಗಿ ಅದಕ್ಕೆ ಆಡಂಬರದ ತೇಪೆ ಬೇಡ. ಭಕ್ತಿಯಿಂದ ದೇವರ ಪೂಜೆ ಮಾಡಿ, ಬೇವು ಬೆಲ್ಲ ಹಂಚಿರಿ. ಹೊಸ ಯೋಜನೆಗಳಿಗೆ ರೂಪುರೇಷೆ ಸಿದ್ಧಪಡಿಸಿ. ಭವಿಷ್ಯದ ಭದ್ರತೆಗೆ ಬುನಾದಿ ಹಾಕಿಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ