ಆ್ಯಪ್ನಗರ

ಸಂಬಂಧ ಗಟ್ಟಿಯಾಗಿ ಉಳಿಯಬೇಕೆಂದರೆ ಒಳ್ಳೆಯ ಮಾತುಕತೆ ಅತ್ಯಗತ್ಯ!

ಯಾವುದೇ ಒಂದು ಸಂಬಂಧ ಗಟ್ಟಿಯಾಗಿ ಉಳಿಯಬೇಕೆಂದರೆ ಅದಕ್ಕೆ ಒಳ್ಳೆಯ ಮಾತುಗಳ ಲೇಪನವಿರಬೇಕು.

Vijaya Karnataka Web 21 Nov 2020, 1:43 pm
ಒಂದು ಸೊಗಸಾದ ಸಂಬಂಧದ ಸವಿರುಚಿ ಎಂದರೆ ಅದುವೇ ಸಂಗಾತಿಗಳ ನಡುವೆ ಇರಬೇಕಾದ ಅವಿನಾಭಾವಕತೆ ಮತ್ತು ಪ್ರೀತಿಯ ಸಂವಹನ. ಗಂಡ ಹೆಂಡತಿಯ ನಡುವಿನ ವೈಮನಸ್ಥಿತಿ ದೂರ ಮಾಡುವ ತಂತ್ರ ಸಹ ಇಬ್ಬರ ನಡುವೆ ನಡೆಯಲಾಗುವ ಮಾತಿನಿಂದಲೇ ಬಗೆಹರಿಯುತ್ತದೆ.
Vijaya Karnataka Web communication tips to try with your partner
ಸಂಬಂಧ ಗಟ್ಟಿಯಾಗಿ ಉಳಿಯಬೇಕೆಂದರೆ ಒಳ್ಳೆಯ ಮಾತುಕತೆ ಅತ್ಯಗತ್ಯ!


ಹಾಗಾಗಿ ಯಾವುದೇ ಒಂದು ಸಂಬಂಧ ಗಟ್ಟಿಯಾಗಿ ಉಳಿಯಬೇಕೆಂದರೆ ಅದಕ್ಕೆ ಒಳ್ಳೆಯ ಮಾತುಗಳ ಲೇಪನವಿರಬೇಕು. ಮಾತುಗಳೆಲ್ಲಾ ಖಾಲಿಯಾದವು ಎಂದು ಎಂದಾದರೂ ಅನಿಸಿದರೆ ಆಗ ಈ ಟಿಪ್ಸ್ ಒಮ್ಮೆ ಫಾಲೋ ಮಾಡಿ.

ಸರಳವಾದ ಮಾತುಕತೆ ನಡೆಸಿ

ಯಾವುದೇ ಸಂದರ್ಭದಲ್ಲಿ ನಿಮ್ಮ ಸಂಗಾತಿಯ ಜೊತೆ ನೀವು ಎಲ್ಲವನ್ನೂ ಮಾತನಾಡಿ ಈಗ ಮಾತನಾಡಲು ಬೇರೇನೂ ಉಳಿದಿಲ್ಲ ಎನ್ನುವುದಾದರೆ ಹೊಸದಾದ ವಿಚಾರಗಳನ್ನು ಅದು ನಿಮ್ಮ ಮನೆಗೆ ಸಂಬಂಧಪಟ್ಟ, ನಿಮ್ಮ ಜೀವನಕ್ಕೆ ಸಂಬಂಧಪಟ್ಟ, ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಅಥವಾ

ನೀವು ಎಲ್ಲಾದರೂ ಪ್ರವಾಸ ಕೈಗೊಳ್ಳುವ ಬಗ್ಗೆ ಹಾಗೆ ಕುಳಿತು ಇಬ್ಬರು ಸಮಾಲೋಚನೆ ಮಾಡಿ. ಒಂದು ವೇಳೆ ನಿರ್ಧಾರ ಕೈಗೊಳ್ಳಬೇಕಾದ ವಿಚಾರವಾದರೆ ಇಬ್ಬರೂ ಒಮ್ಮತದ ನಿರ್ಧಾರಕ್ಕೆ ಬನ್ನಿ.

ನಿಮ್ಮ ಸಂಗಾತಿಯ ಬಗ್ಗೆ ವಿಚಾರಿಸಿ

  • ಗಂಡ - ಹೆಂಡತಿ ಎಂದ ಮೇಲೆ ಸಂಸಾರಕ್ಕೆ ಸಂಬಂಧಪಟ್ಟ ಅಥವಾ ಮನೆಗೆ ಸಂಬಂಧಪಟ್ಟ ದಿನದ ಆಗುಹೋಗುಗಳ ಮಾತುಕತೆ ಇದ್ದೇ ಇರುತ್ತದೆ.
  • ಆದರೆ ಇದಕ್ಕೂ ಮೀರಿದಂತೆ ಗಂಡ ಹೆಂಡತಿಯ ಬಗ್ಗೆ ಅಥವಾ ಹೆಂಡತಿ ಗಂಡನ ಬಗ್ಗೆ ಕಾಳಜಿ ವಹಿಸಿ ಮಾತನಾಡುವುದು ಇಬ್ಬರ ಮಧ್ಯೆ ಇರುವ ಪ್ರೀತಿಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ.
  • ಒಂದು ಮನೆಯಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ದುಡಿಯುತ್ತಿದ್ದರೆ ಸಹಜವಾಗಿ ಗಂಡ ತನ್ನ ಹೆಂಡತಿಯ ಕೆಲಸದ ವಿಚಾರಗಳನ್ನು, ಕೆಲಸದ ಒತ್ತಡಗಳನ್ನು ಕೇಳಿ ತಿಳಿದುಕೊಳ್ಳುವುದು ಅಥವಾ ಹೆಂಡತಿ ಕೂಡ ಗಂಡನ ಬಗ್ಗೆ ಇದೇ ರೀತಿಯ ವಿಚಾರಗಳನ್ನು ಹಂಚಿಕೊಳ್ಳುವುದು ತುಂಬಾ ಸೂಕ್ತ.
  • ಒಂದು ವೇಳೆ ಯಾವುದಾದರೂ ಕಷ್ಟಗಳು ಅಥವಾ ನಿಮ್ಮ ಸಂಗಾತಿಯ ಜೀವನದಲ್ಲಿ ಬೇರೆ ಯಾವುದೇ ಬಿಡಿಸಲಾರದ ಸಂಕಷ್ಟಗಳು ನಿಮಗೆ ಕಂಡು ಬಂದರೆ ನೀವು ಅದನ್ನು ನಿಮ್ಮ ಅಭಿಪ್ರಾಯಗಳ ಅಥವಾ ಸಹಾಯದ ಮೂಲಕ ಸುಲಭವಾಗಿ ಬಗೆಹರಿಸಬಹುದು.

ಗಂಡ ಹೆಂಡತಿಯ ನಡುವೆ ನಂಬಿಕೆ ಬಹಳ ಮುಖ್ಯ, ಅದನ್ನು ಹೀಗೆ ಉಳಿಸಿಕೊಳ್ಳಿ

ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ

  • ನಿಮ್ಮ ಸಂಗಾತಿಯ ಜೊತೆ ನೀವು ಕೊನೆವರೆಗೂ ಜೀವನ ನಡೆಸುವ ಕಾರಣದಿಂದ ಮುಂದಿನ ದಿನಗಳ ಬಗ್ಗೆ ಮತ್ತು ಮುಂದಿನ ಜೀವನದ ಬಗ್ಗೆ ಇಬ್ಬರು ಕುಳಿತು ಆಲೋಚನೆ ಮಾಡಬೇಕು.
  • ಅದು ಹಣಕಾಸಿನ ವಿಚಾರವೇ ಆಗಿರಲಿ ಅಥವಾ ಕೆಲಸದ ವಿಚಾರವೇ ಆಗಿರಲಿ. ಮುಂದಿನ ಭವಿಷ್ಯದಲ್ಲಿ ನಿಮ್ಮ ಜೀವನ ಹೇಗಿರಲಿದೆ ಎಂಬುದರ ಬಗ್ಗೆ ಒಂದು ಸಣ್ಣ ಸಮಾಲೋಚನೆಯನ್ನು ನಡೆಸುವುದು ಉತ್ತಮ.

ಆಸಕ್ತಿಕರ ಪ್ರಶ್ನಾವಳಿಗಳನ್ನು ನಡೆಸಿ

ತಮಾಷಾದಾಯಕ ಸಂದರ್ಭವನ್ನು ನಿಮಗೆ ನೀವೇ ಸೃಷ್ಟಿ ಮಾಡಿಕೊಳ್ಳಬಹುದು. ನಿಮ್ಮಿಬ್ಬರ ಮಧ್ಯೆ ಹೆಚ್ಚು ಖುಷಿಯ ವಾತಾವರಣ ನಿರ್ಮಾಣವಾಗಬೇಕಾದರೆ ನಿಮ್ಮ ಸಂಬಂಧದ ಮಧ್ಯೆ ಸಲುಗೆ, ಪ್ರೀತಿ ಹೆಚ್ಚಾಗಿರಬೇಕು.

ಎಂದಾದರೂ ನಿಮಗೆ ರಜಾ ಸಿಕ್ಕಂತಹ ಸಂದರ್ಭದಲ್ಲಿ ನಿಮ್ಮ ಮೆದುಳಿಗೆ ಕೆಲಸ ಕೊಡುವಂತಹ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ, ಇದರಿಂದ ನಿಮ್ಮ ಮಧ್ಯೆ ಜಗಳ ಅಥವಾ ವಿರಸಗಳು ಕಡಿಮೆಯಾಗುತ್ತವೆ. ನಿಮ್ಮ ಮಧ್ಯೆ ಹೆಚ್ಚು ಸಂವಹನ ಉಂಟಾಗುವ ಕಾರಣ ನಿಮ್ಮ ಮನಸ್ಸಿಗೆ ಹೊಸ ಹುರುಪು ಬಂದಂತಾಗುತ್ತದೆ.

ಒಂದೇ ಒಂದು ತಪ್ಪು ನಿರ್ಧಾರದಿಂದ ಜೀವನವೇ ಹಾಳಾಗಬಹುದು ಎಚ್ಚರ!

ನಿಮಗನಿಸಿದ್ದನ್ನು ಹೇಳಿಕೊಳ್ಳಿ

ಯಾವುದೋ ಒಂದು ವಿಚಾರ ನಿಮ್ಮನ್ನು ತುಂಬಾ ಕೊರೆಯುತ್ತಿದ್ದರೆ ಅಥವಾ ಚಿಂತೆಗೀಡು ಮಾಡಿದ್ದರೆ, ಅಂತಹ ವಿಚಾರಗಳನ್ನು ಮನಸ್ಸಿನಲ್ಲಿ ಮುಚ್ಚಿಟ್ಟುಕೊಳ್ಳದೆ ನಿಮ್ಮವರ ಬಳಿ ಕುಳಿತು ಚರ್ಚೆ ಮಾಡಿ.

ನಿಮ್ಮ ಸಂಗಾತಿಯ ಬಗ್ಗೆ ನಿಮಗೆ ಏನನ್ನಿಸುತ್ತದೆ ಎಂದು ಮುಕ್ತವಾಗಿ ಹೇಳಿ. ಇದರಿಂದ ಒಂದು ವೇಳೆ ಎಲ್ಲಾದರೂ ನಿಮ್ಮ ಜೀವನದಲ್ಲಿ ತಪ್ಪುಗಳು ನಡೆಯುತ್ತಿದ್ದರೆ, ಅದನ್ನು ತಿದ್ದಿಕೊಳ್ಳಲು ಅವಕಾಶ ವಾಗುತ್ತದೆ. ಮತ್ತೊಂದು ಬಾರಿ ಅಂತಹ ತಪ್ಪುಗಳು ಮರುಕಳಿಸಲು ಸಾಧ್ಯವಿರುವುದಿಲ್ಲ. ನಿಮ್ಮ ಜೀವನ ನೀವು ಅಂದುಕೊಂಡ ಹಾಗೆ ಮುಂದೆ ಸಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ