ಆ್ಯಪ್ನಗರ

ಆಫೀಸ್‌ ಗಾಸಿಪ್‌ಗೆ ಬಲಿಯಾಗಿದ್ದೀರಾ? ಹೀಗೆ ಮಾಡಿ

ಮತ್ತೊಬ್ಬರ ಬಗ್ಗೆ ಗಾಸಿಪ್‌ ಮಾಡುವುದರಲ್ಲಿ ಕೆಲವರಿಗೆ ಭಾರಿ ಖುಷಿ. ಗಾಸಿಪ್ ಹುಟ್ಟು ಹಾಕಿ ಆ ವ್ಯಕ್ತಿಗೆ ನೋವಾದಾಗ ಇವರು ಖುಷಿ ಪಡುತ್ತಾರೆ. ಒಂದು ವೇಳೆ ನಿಮ್ಮ ಬಗ್ಗೆ ಗಾಸಿಪ್‌ ಕೇಳಿ ಬಂದರೆ ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ, ಬದಲಿಗೆ ಈ ರೀತಿ ವರ್ತಿಸಿ, ಮತ್ತೆ ಅವರು ನಿಮ್ಮ ತಂಟೆಗೆ ಬರಲ್ಲ.

TIMESOFINDIA.COM 5 Jul 2019, 3:51 pm
ಆಫೀಸ್‌ ಗಾಸಿಪ್‌ ಇರಲ್ಲ ಅಂತ ಹೇಳಲು ಸಾಧ್ಯವೇ ಇಲ್ಲ, ಎಷ್ಟೋ ಜನರು ಆಫೀಸ್‌ ಗಾಸಿಪ್‌ಗೆ ಬೇಸತ್ತು ಹೋಗಿರುತ್ತಾರೆ. ಅವರದ್ದು ಯಾವುದೇ ತಪ್ಪು ಇಲ್ಲದಿದ್ದರೂ ಆಫೀಸ್‌ ಗಾಸಿಪ್‌ನಿಂದ ಮಾನಸಿಕ ಹಿಂಸೆ ಅನುಭವಿಸುತ್ತಾ ಇರುತ್ತಾರೆ. ಡಾ. ಜಾಕ್‌ ಲೆವಿನ್‌ ಗಾಸಿಪ್‌: ದಿ ಇನ್‌ಸೈಡ್‌ ಸ್ಕೂಪ್‌ ಎಂಬ ಬುಕ್‌ ಕೂಡ ಬರೆದಿದ್ದಾರೆ. ಆ ಬುಕ್‌ನಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ಹಿಂದಿನಿಂದ ಮಾತನಾಡುವುದು ತಪ್ಪು, ಆದರೆ ಈ ಗಾಸಿಪ್ ಸೋಷಿಯಲ್‌ ಗ್ರೂಪ್‌ ಹಾಗೂ ಬ್ಯುಸಿನೆಸ್‌ ನೆಟ್‌ವರ್ಕ್‌ ಬೆಸೆಯುತ್ತದೆ ಎಂದು ಹೇಳಿದ್ದಾರೆ.
Vijaya Karnataka Web depression


ಆದರೆ ಗಾಸಿಪ್‌ ಹುಟ್ಟಿಕೊಂಡರೆ ಅದಕ್ಕೆ ಬಲಿಪಶುವಾದವರಿಗೆ ಮಾನಸಿಕವಾಗಿ ತುಂಬಾ ನೋವಾಗುತ್ತದೆ. ಗಾಸಿಪ್‌ ಬಗ್ಗೆ ನೀವು ತಲೆ ಕೆಡಿಸಿಕೊಂಡಷ್ಟು ಅದನ್ನು ಹುಟ್ಟು ಹಾಕಿದವರಿಗೆ ಹೆಚ್ಚು ಖುಷಿಯಾಗುತ್ತದೆ, ಅವರೇನು ಹೇಳುವುದು ನಿಲ್ಲಿಸುವುದಿಲ್ಲ, ಆದ್ದರಿಂದ ಗಾಸಿಪ್‌ ಅನ್ನು ದಿಟ್ಟವಾಗಿ ಈ ರೀತಿ ಎದುರಿಸಿ.

ನೀವು ಸ್ಟ್ರಾಂಗ್‌ ಅಲ್ಲದಿದ್ದರೂ ಅಂಥವರ ಎದುರು ಅಂಜಬೇಡಿ
ಬಗ್ಗಿದವನಿಗೆ ಗುದ್ದು ಜಾಸ್ತಿ ಎಂಬ ಗಾದೆಯಂತೆ ನೀವು ಅವರ ಗಾಸಿಪ್‌ಗೆ ಹೆದರಿದರೆ ಮತ್ತಷ್ಟು ಸುದ್ದಿ ಹಬ್ಬಿಸಿ, ನಾವು ಹೇಳ್ತಾ ಇರುವುದು ನಿಜವೆಂಬಂತೆ ಬಿಂಬಿಸಿ ಬಿಡುತ್ತಾರೆ. ಆದ್ದರಿಂದ ಗಾಸಿಪ್‌ಗೆ 'ಡೋಂಟ್‌ ಕೇರ್' ಎಂಬಂತೆ ವರ್ತಿಸಿ. ನಿಮ್ಮ ಮನಸ್ಸಿನ ಭಯ ಅವರ ಮುಂದೆ ವ್ಯಕ್ತ ಪಡಿಸಲು ಹೋಗಬೇಡಿ.

ಗಾಸಿಪ್‌ ಹುಟ್ಟು ಹಾಕಿದವರಿಗೆ ಎಚ್ಚರಿಕೆ ನೀಡಿ
ಗಾಸಿಪ್‌ ಹುಟ್ಟು ಹಾಕಿದವರಲ್ಲಿ ಕೇಳುವ ಮೊದಲು ಯೋಚಿಸಿ, ಸರಿಯಾದ ಸಾಕ್ಷ್ಯ
ಸಿಗದಿದ್ದರೆ ಅವರಲ್ಲಿ ಹೋಗಿ 'ನನ್ನ ಬಗ್ಗೆ ಯಾರು ಗಾಸಿಪ್‌ ಹಬ್ಬಿಸುತ್ತಿದ್ದಾರೆ ಅಂತ ಗೊತ್ತು, ಆದರೆ ಇದರಿಂದ ನನಗೇನು ನಷ್ಟವಿಲ್ಲ' ಎಂದು ಹಾಗೇ ಮಾತನಾಡುತ್ತಾ ಹೇಳಿ. ಅವರಿಗೆ ಸಿಗಬೇಕಾದ ಮೆಸೇಜ್‌ ಸಿಕ್ಕಿರುತ್ತದೆ.

ಅವರಿಗೆ ತಿರುಗೇಟು ಕೊಡಿ
ರೂಮರ್‌ನಿಂದ ನಿಮಗೆ ಬೇಜಾರಾಯ್ತು ಅಂತ ಗೊತ್ತಾದಾರೆ ಅವರಿಗೆ ಖುಷಿಯಾಗುತ್ತದೆ, ಬದಲಿಗೆ ನನ್ನ ಬಗ್ಗೆ ಹೇಳಿರುವುದು ಕೇಳಿ ಸಕತ್‌ ಜೋಕ್‌ ಅನಿಸಿತ್ತು ಅಂತ ಹೇಳಿ.

ನಿಮ್ಮ ವೈಯಕ್ತಿಕ ವಿಷಯಗಳನ್ನು ಆಫೀಸ್‌ನವರಲ್ಲಿ ಹೇಳಬೇಡಿ
ನಿಮಗೆ ಅಷ್ಟು ಆಪ್ತರು ಹಾಗೂ ನಂಬಿಕೆ ಇರುವವರಲ್ಲಿ ಮಾತ್ರ ಹೇಳಿ, ಇಲ್ಲದಿದ್ದರೆ ನಿಮ್ಮ ವೈಯಕ್ತಿಕ ವಿಷಯ ಯಾರ ಬಳಿ ಹೇಳಿ ಕೊಳ್ಳಲು ಹೋಗಬೇಡಿ.

ಆಫೀಸ್‌ ಪ್ರಾಜೆಕ್ಟ್ ವಿಷಯ ಅಂಥವರ ಜತೆ ಶೇರ್‌ ಮಾಡಬೇಡಿ
ನಿಮ್ಮ ಪ್ರಾಜೆಕ್ಟ್‌ ಭಾಗ ಯಾರು ಇದ್ದರೋ ಅವರ ಜತೆ ಮಾತ್ರ ನಿಮ್ಮ ಕೆಲಸದ ಬಗ್ಗೆ ಮಾಹಿತಿ ಹಂಚಿಕೊಳ್ಳಿ, ಇತರರ ಬಳಿ ಹೇಳಲು ಹೋಗಬೇಡಿ.

ನಿಮ್ಮ ಶ್ರದ್ಧೆ ಕೆಲಸದ ಮೇಲೆ ಇರಲಿ
ಯಾರು ಏನೇ ಹೇಳಲಿ, ನಿಮಗೆ ಕಂಪನಿ ಸಂಬಳ ನೀಡುತ್ತಿರುವುದು, ಆದ್ದರಿಂದ ಕೆಲಸದ ಕಡೆ ಗಮನ ಕೊಡಿ, ಅರ್ಥವಿಲ್ಲದ ಮಾತುಗಳಿಗೆ, ಮೌಲ್ಯವಿಲ್ಲದ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ