ಆ್ಯಪ್ನಗರ

ಪೋಷಕರ ವಿಚ್ಛೇದನದಿಂದ ಮಕ್ಕಳಲ್ಲಿ ಒತ್ತಡ

ವಿಚ್ಛೇದನ ಅನ್ನುವುದು ಕೆಲವರಿಗೆ ಸಂತೋಷ ಕೊಡಬಹುದು. ಆದರೆ ಕೆಲವರಿಗೆ ಪೇನ್‌ಫುಲ್‌ ಎಂದೆನಿಸಿಕೊಳ್ಳುತ್ತದೆ. ಸ್ವ ಇಚ್ಛೆಯಿಂದ ದೂರವಾದ ದಂಪತಿಗೆ ಇಲ್ಲದೆ ಬೇಸರ ಇಲ್ಲದೆ ಹೋದರೂ ಅವರನ್ನು ನಂಬಿದ ಕುಟುಂಬ ಅಥವಾ ಮಕ್ಕಳು ಬೇಸರಕ್ಕೆ ಒಳಗಾಗಬಹುದು.

Agencies 1 Jun 2019, 12:47 pm
ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ತನ್ನದೇ ಆದ ಮಹತ್ವವಿದೆ. ಹಿಂದಿನ ಕಾಲದಲ್ಲಿ ಒಮ್ಮೆ ಮದುವೆಯಾಯಿತೆಂದರೆ ಜನ್ಮ ಪೂರ್ತಿ ಸಂಗಾತಿಗಳಾಗಿ ಇರುತ್ತಿದ್ದರು. ಒಬ್ಬರನೊಬ್ಬರು ಅರ್ಥ ಮಾಡಿಕೊಂಡು, ಬದುಕಿನ ಬಂಡಿ ದೂಡಲು ಕೆಲವಷ್ಟನ್ನು ತ್ಯಾಗ ಮಾಡುತ್ತಿದ್ದರು.
Vijaya Karnataka Web Kid- Parents


ಮತ್ತೀಗ ಮದುವೆ ದಿಬ್ಬಣ ಮನೆಗೆ ತಲುಪುವುದರೊಳಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿಯಾಗಿರುತ್ತದೆ.

ವಿಚ್ಛೇದನ ಅನ್ನುವುದು ಕೆಲವರಿಗೆ ಸಂತೋಷ ಕೊಡಬಹುದು. ಆದರೆ ಕೆಲವರಿಗೆ ಪೇನ್‌ಫುಲ್‌ ಎಂದೆನಿಸಿಕೊಳ್ಳುತ್ತದೆ. ಸ್ವ ಇಚ್ಛೆಯಿಂದ ದೂರವಾದ ದಂಪತಿಗೆ ಇಲ್ಲದೆ ಬೇಸರ ಇಲ್ಲದೆ ಹೋದರೂ ಅವರನ್ನು ನಂಬಿದ ಕುಟುಂಬ ಅಥವಾ ಮಕ್ಕಳು ಬೇಸರಕ್ಕೆ ಒಳಗಾಗಬಹುದು. ನಾನಾ ಕಾರಣಗಳಿಂದ ಸಮಾಜದಲ್ಲಿ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವಂತೆಯೇ, ಆ ದಂಪತಿಗಳ ಮಕ್ಕಳು ಯಾರ ಸುಪರ್ದಿಗೆ ಸೇರಬೇಕು ಎನ್ನುವ ಕಾನೂನು ಹೋರಾಟದ ವ್ಯಾಜ್ಯಗಳೂ ದಿನೇ ದಿನೇ ಜಾಸ್ತಿಯಾಗುತ್ತಿವೆ.

ದಂಪತಿಯ ವಿಚ್ಛೇದನ ಅವರ ಮಕ್ಕಳ ಬೆಳವಣಿಗೆ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಈಗಾಗಲೇ ಹಲವು ಸಂಶೋಧನೆಗಳು ಹೇಳಿದ್ದು, ಏಕಾಂಗಿಯಾಗಿ ಮಕ್ಕಳನ್ನು ಬೆಳೆಸುವುದರಿಂದ ಅವರ ಮೇಲೆ ಒತ್ತಡ ಹೆಚ್ಚುತ್ತದೆ ಎಂದು ಇತ್ತೀಚಿನ ವರದಿ ತಿಳಿಸಿದೆ. ತಾಯಿ ಅಥವಾ ತಂದೆ ಒಟ್ಟಾರೆ ಒಂದೇ ಪೋಷಕರೊಂದಿಗೆ ಬೆಳೆದ ಮಗು ಹಲವಾರು ಅವಕಾಶಗಳಿಂದ ವಂಚಿತರಾಗುತ್ತಾರೆ. ಅಷ್ಟೆ ಅಲ್ಲ, ಹಲವಾರು ಅಂಶಗಳು ಮಕ್ಕಳಲ್ಲಿ ಒತ್ತಡ ಸೃಷ್ಟಿಸುತ್ತವೆ ಎಂದಿದ್ದಾರೆ ತಜ್ಞರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ