ಆ್ಯಪ್ನಗರ

ಸಂಸಾರ ನೆಮ್ಮದಿಯಾಗಿರಬೇಕೆಂದ್ರೆ, ಈ ರೂಲ್ಸ್ ಫಾಲೋ ಮಾಡಲೇಬೇಕು!

ಕೆಲವು ದಂಪತಿಯನ್ನು ನೋಡಿದರೆ ಅವರು ಎಷ್ಟು ಸಂತೋಷವಾಗಿರುವರು ಎಂದು ನಮಗೆ ಅನಿಸುವುದು.

Vijaya Karnataka Web 25 Jun 2021, 1:42 pm
ದಾಂಪತ್ಯದಲ್ಲಿ ಯಾವತ್ತಿಗೂ ಸುಖದುಃಖ ಎನ್ನುವುದು ಇದ್ದೇ ಇರುತ್ತದೆ. ಅದನ್ನೆಲ್ಲಾ ನಿಭಾಯಿಸಿಕೊಂಡು, ನೋವಾದಾಗ ಕುಗ್ಗದೆ, ಸಂತೋಷವಾದಾಗ ಹಿಗ್ಗದೆ ಮುಂದುವರಿಯಬೇಕು. ಅದುವೇ ಜೀವನ. ಕೆಲವು ದಂಪತಿಯನ್ನು ನೋಡಿದರೆ, ಅವರು ಯಾವಾಗಲೂ ತುಂಬಾ ಸಂತೋಷದಿಂದ ಇರುವರು.
Vijaya Karnataka Web these little things happy couples do for each other every day
ಸಂಸಾರ ನೆಮ್ಮದಿಯಾಗಿರಬೇಕೆಂದ್ರೆ, ಈ ರೂಲ್ಸ್ ಫಾಲೋ ಮಾಡಲೇಬೇಕು!


ಇದು ಹೇಗಪ್ಪಾ ಎನ್ನುವ ಪ್ರಶ್ನೆಯು ನಮ್ಮ ಮನಸ್ಸಿನಲ್ಲಿ ಮೂಡದೇ ಇರದು. ಆದರೆ ನಿಜವಾಗಿಯೂ ಅವರು ಸಂತೋಷದಿಂದ ಇರುವರು. ಅದು ಹೇಗೆ ಎನ್ನುವ ಬಗ್ಗೆ ನೀವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

​ನಿಜವಾಗಿಯೂ ಸಂತೋಷವಾಗಿರುವರು

  • ಸಂತೋಷವಾಗಿರುವಂತಹ ದಂಪತಿಯು ಯಾವಾಗಲೂ ತಮ್ಮ ಸಂಗಾತಿಯು ಜತೆಗೆ ಇರುವರು ಎಂದು ಭಾವಿಸುವರು. ಹೀಗಾಗಿ ಅವರು ಯಾವಾಗಲೂ ಸಂತೋಷವಾಗಿಯೇ ಇರುವರು.
  • ಜತೆ ಜತೆಯಾಗಿಯೇ ಕೈ ಕೈ ಹಿಡಿದುಕೊಂಡು ಯಾವುದೇ ಕಾರ್ಯಕ್ರಮಕ್ಕೆ ಹೋಗಲು ಅವರು ಹಿಂಜರಿಯಲ್ಲ. ಪಾರ್ಟಿಯಲ್ಲಿ ದೂರವಿದ್ದರೂ ಅವರ ಕಣ್ಣು ಮತ್ತು ಹೃದಯ ಮಾತ್ರ ಜತೆಯಾಗಿಯೇ ಇರುವುದು.

​ವಾಗ್ವಾದದಿಂದ ವ್ಯಕ್ತಿಯ ಕಳೆದುಕೊಳ್ಳುವರು

  • ನಾವು ಯಾರ ಜತೆಗಾದರೂ ವಾಗ್ವಾದ ಮಾಡಿದರೆ, ಆಗ ಯಾರಾದರೂ ಒಬ್ಬರು ಗೆಲ್ಲಬಹುದು. ಆದರೆ ಇದರಿಂದ ನಾವು ಒಬ್ಬ ಪ್ರಮುಖ ವ್ಯಕ್ತಿಯನ್ನು ಕಳೆದುಕೊಳ್ಳುತ್ತೇವೆ ಎನ್ನುವುದನ್ನು ಮರೆಯುತ್ತೇವೆ.
  • ಮುಖ್ಯವಾಗಿ ಸಂಬಂಧದಲ್ಲಿ ದಂಪತಿ ನಡುವಿನ ವಾಗ್ವಾದದಲ್ಲಿ ಯಾರೇ ಗೆದ್ದರು ಅವರು ಒಬ್ಬ ವ್ಯಕ್ತಿಯನ್ನು ಕಳೆದುಕೊಳ್ಳುವರು.

​ಹಣದ ವಿಚಾರ ಸ್ಪಷ್ಟವಾಗಿರಬೇಕು

ಸಂಗಾತಿಗಳಿಬ್ಬರು ದುಡಿಯುತ್ತಲಿದ್ದರೆ, ಆಗ ಅವರಿಬ್ಬರು ಜತೆಯಾಗಿ ತಮ್ಮ ಆರ್ಥಿಕ ಯೋಜನೆಗಳನ್ನು ಹಾಕಿಕೊಳ್ಳಬೇಕು ಮತ್ತು ಸರಿಯಾದ ರೀತಿಯಲ್ಲಿ ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು.

ಕೆಲವೊಂದು ದಾಂಪತ್ಯವು ಹಣದ ವಿಚಾರವಾಗಿ ಮುರಿದು ಬೀಳುವುದು ಇದೆ. ಸಂಬಂಧದಲ್ಲಿ ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ ತೊಂದರೆ ಆಗಬಹುದು.

ದಾಂಪತ್ಯದಲ್ಲಿ ಕಾಡುವ ಹಣದ ಸಮಸ್ಯೆ, ಅದಕ್ಕೆ ಪರಿಹಾರ ನಮ್ಮ ಕೈಯಲ್ಲಿಯೇ ಇದೆ...

​ಜತೆ ಜತೆಯಲಿ…

ಸಂಗಾತಿಗಳಿಬ್ಬರು ಜತೆಯಾಗಿ ಇದ್ದರೆ ಆಗ ಅವರ ನಡುವಿನ ಪ್ರೀತಿ ಹಾಗೂ ಅನ್ಯೋನ್ಯತೆಯು ಹೆಚ್ಚಾಗುವುದು. ಸಂಗಾತಿಗಳು ಪರಸ್ಪರರ ಖಾಸಗಿತನ ಮತ್ತು ಜೀವನವನ್ನು ಗೌರವಿಸಬೇಕು ಮತ್ತು ಅದಕ್ಕೆ ಮಹತ್ವ ನೀಡಬೇಕು. ಜತೆಯಾಗಿ ಹೊರಗಡೆ ಹೋಗಿ ಕಾಲ ಕಳೆಯುವುದು ಕೂಡ ಇದರಲ್ಲಿ ಪ್ರಮುಖವಾಗಿರುವುದು.

​ತಾತ್ಕಾಲಿಕ ಸಮಯ

ಯಾರು ಕೂಡ ಪರಿಪೂರ್ಣರಲ್ಲ, ಅದೇ ರೀತಿ ಯಾವ ದಾಂಪತ್ಯವೂ ಕೂಡ. ಪರಸ್ಪರ ಜಗಳಗಳು ಇದ್ದೇ ಇರುವುದು.

ಆದರೆ ಇಂತಹ ಜಗಳ ಹಾಗೂ ಸಮಸ್ಯೆಗಳನ್ನು ದೂರ ಮಾಡಿಕೊಂಡು ದಾಂಪತ್ಯದಲ್ಲಿ ಮುಂದುವರಿಯುವುದು ಅತೀ ಅಗತ್ಯ. ಜಗಳ ಕೇವಲ ತಾತ್ಕಾಲಿಕ ಎಂದು ತಿಳಿದು ಮರೆತು ಬಿಡುವುದು ಅನಿವಾರ್ಯ ಮತ್ತು ಸಂಗಾತಿ ಜತೆಗೆ ಹೊಂದಾಣಿಕೆಯಿಂದ ಬಾಳಬೇಕು.

ಸುಖಿ ಸಂಸಾರದ ಸೀಕ್ರೆಟ್ಸ್: ಮಲಗುವ ಮುನ್ನ ಈ ವಿಷ್ಯಗಳನ್ನು ಮರೆಯದಿರಿ....

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ