ಆ್ಯಪ್ನಗರ

ಅರಿತುಕೊಂಡು ಬಾಳಿದರೆ ಜೀವನ ಸುಗಮ

ವೈಯಕ್ತಿಕ ಸಂಬಂಧಗಳು ಒಂದು ತಂತಿಯ ಮೇಲೆ ನಡೆದಂತೆ. ಆದ್ದರಿಂದ ಇಲ್ಲಿ ಪರಸ್ಪರರನ್ನು ಅರಿತುಕೊಂಡು ಸಾಗುವುದು ಬಹಳ ಮುಖ್ಯ.

Vijaya Karnataka Web 29 Mar 2019, 8:30 pm
ಪ್ರತಿಯೊಂದು ಸಂಬಂಧದಲ್ಲಿ ಏನಾದರೂ ಕುಂದು ಕೊರತೆ ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಸಂಬಂಧಗಳು ಹಳಸುತ್ತಾ ಬರುವುದನ್ನು ನಾವು ಕಾಣುತ್ತಿದ್ದೇವೆ.
Vijaya Karnataka Web Couple


ಈ ವೈಯಕ್ತಿಕ ಸಂಬಂಧಗಳಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಒಬ್ಬರಿಗೊಬ್ಬರು ಅಥೈರ್‍ಸಿಕೊಳ್ಳಲು ಬಹಳ ಕಷ್ಟ. ಈ ವೈಯಕ್ತಿಕ ಸಂಬಂಧಗಳು ಒಂದು ತಂತಿಯ ಮೇಲೆ ನಡೆದಂತೆ. ಆದ್ದರಿಂದ ಇಲ್ಲಿ ಪರಸ್ಪರರನ್ನು ಅರಿತುಕೊಂಡು ಸಾಗುವುದು ಬಹಳ ಮುಖ್ಯ.

ಪ್ರಪಂಚದಲ್ಲಿ ಅತ್ಯಂತ ಒಳ್ಳೆಯ ಗೆಳತಿ ಎಂದು ಹಾಡಿ ಹೊಗಳಿದಂತಹ ಗೆಳೆಯನನ್ನೇ ಕಳೆದುಕೊಳ್ಳುವ ಸಾಧ್ಯತೆಯುಂಟು. ನಂತರ ಅದೇ ದುಖಃಕ್ಕೂ, ಖಿನ್ನತೆಗೂ ಹೋಗಬಹುದು. ಅದಲ್ಲದೆ ಅತಿಶಯೋಕ್ತಿಯಾದ ಪ್ರೀತಿಯಿಂದ ಹೆಚ್ಚು ಕಮ್ಮಿಯಾಗಿ ವ್ಯಕ್ತಿ ಕಾಲ ಕಸಕ್ಕೆ ಸಮನಾಗಬಹುದು. ಹಾಗಾಗಿ ಈ ರೀತಿಯಾಗದಂತೆ ನಮ್ಮ ಸಂಹವನ ಮತ್ತು ಸಂಬಂಧದಲ್ಲಿ ಒಳ್ಳೆಯತನಕ್ಕೆ ದಾರಿ ಮಾಡಿ ಕೊಡಲು ಕೆಲವೊಂದು ನಿರ್ದಿಷ್ಟ ಆದರ್ಶಗಳನ್ನು ಇಬ್ಬರಲ್ಲಿಯೂ ಅಳವಡಿಸಿಕೊಂಡಲ್ಲಿ ಒಬ್ಬರಿಗೊಬ್ಬರು ಅಥೈರ್‍ಸಿಕೊಂಡು ಹೋದಲ್ಲಿ ಸುಖ ಜೀವನವನ್ನು ಅನುಭವಿಸಬಹುದು.

ತಾನು ಮೇಲೆಂಬ ಭಾವನೆಯನ್ನು ಬಿಟ್ಟು ಜೊತೆಜೊತೆಯಲ್ಲಿ ಪ್ರೀತಿಯಿಂದ ಜೀವನ ನಡೆಸಬೇಕು ಮತ್ತು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು.

ಹಗಲುಗನಸು ಕಾಣದೆ ನಿಜ ಜೀವನದತ್ತ ಚಿತ್ತವನ್ನು ಇಡಿ.

ನಾವು ಸಮಾಜದಲ್ಲಿರುವ ಒಳ್ಳೆಯವರನ್ನು ಆದರ್ಶವಾಗಿ ತೆಗೆದುಕೊಂಡು ಅನವಶ್ಯಕವಾದ ಚಿಂತೆಯನ್ನು ಬಿಟ್ಟು ಆದರ್ಶಯುಕ್ತ ಸ್ನೇಹಿತರಾಗಿ ನಮಗೆ ನಾವೇ ಹೀರೋ ಆಗಿದ್ದುಕೊಂಡು ದಾರಿ ಮಾಡಿ ಕೊಡುವುದು.

ಒಣ ಪ್ರತಿಷ್ಠೆಯನ್ನು ಬಿಟ್ಟು ಒಬ್ಬರನ್ನೊಬ್ಬರು ಪ್ರೀತಿ ಪೂರ್ವಕವಾಗಿ ಗೌರವಿಸುತ್ತಾ ಜೀವನದ ಮೌಲ್ಯಗಳಿಗೆ ಬೆಲೆ ಕೊಟ್ಟು ಬಾಳಿದಲ್ಲಿ ಜೀವನವೇ ಹಾಲು ಜೇನಿನಂತಿರುತ್ತದೆ.

ಒಬ್ಬರನ್ನೊಬ್ಬರು ದೂಷಿಸುವುದಕ್ಕಿಂತ ಒಬ್ಬರನ್ನೊಬ್ಬರು ಅಥೈರ್‍ಸಿ ನಡೆಯುವುದೇ ಸವಿಜೇನು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ