ಆ್ಯಪ್ನಗರ

ಮಳೆ ನಿಂತ ಮೇಲೂ ಕಾಡುವ ಹನಿಯಂತೆ ಹಳೆಯ ಪ್ರೇಮ

ಪ್ರೇಮ ಸಂಬಂಧವೊಂದು ಕೊಂಡಿ ಕಳಚಿದ ಮೇಲೆ ಪುನಃ ಪರಸ್ಪರರನ್ನು ಜತೆಗೂಡಿಸುವುದಿಲ್ಲಎಂದುಕೊಂಡೇ ಮುಂದಿನ ಬದುಕಿನತ್ತ ಹೆಜ್ಜೆ ಹಾಕುತ್ತಾರೆ. ಆದರೆ ಇದ್ದಕ್ಕಿದ್ದಂತೆ ಹಳೆ ಪ್ರೇಮಿ ಎದುರಾದರೆ? ಹೀಗೆ ಎದುರಾಗುವ ಹಳೆ ಪ್ರೇಮಿಯನ್ನು ಎದುರಿಸುವುದು ಸುಲಭವಲ್ಲ.

Samayam Telugu 20 May 2020, 11:02 pm
ಪರಸ್ಪರ ಕನವರಿಸಿ ಜತೆಯಾಗಿ ಕನಸಿದ್ದ ಪ್ರೀತಿಯ ಸೌಧ ಕೆಲವೊಮ್ಮೆ ಮುರಿದು ಬೀಳುತ್ತದೆ. ಹಾಗೆ ಕಳೆದುಕೊಂಡ ಪ್ರೀತಿಯ ಹಿಂದಿನ ಕಾರಣ ಏನೇ ಇರಬಹುದು. ಆದರೆ ಯಾವತ್ತೋ ಒಂದು ದಿನ ಅಂಥದ್ದೊಂದು ಸಂಬಂಧದಿಂದ ಹೊರ ಬಂದಾಗ ಕೆಲವರಿಗೆ ನಿರಾಳ. ಇನ್ನೂ ಹಲವರಿಗೆ ಮರೆಯಲಾಗದ ನೆನಪು. ಮರೆಯಲಾಗದವರಿಗೆ ಪುನಃ ಪ್ರೇಮಿಯನ್ನು ಸಂಪರ್ಕಿಸುವ ತವಕ.
Vijaya Karnataka Web ಮಳೆ ನಿಂತ ಮೇಲೂ ಕಾಡುವ ಹನಿಯಂತೆ ಹಳೆಯ ಪ್ರೇಮ


ಕೆಲವರಿಗೆ ಪುನಃ ಪ್ರೇಮಿ ಎದುರಾಗದಿರಲಿ ಎನ್ನುವ ಹಂಬಲ. ಆದರೆ ಕೆಲವೊಮ್ಮೆ ಇದ್ದಕ್ಕಿದ್ದ ಹಾಗೆ ಹಳೆ ಪ್ರೇಮಿ ಎದುರಾಗಬಹುದು. ಪ್ರೇಮ ಸಂಬಂಧವೊಂದು ಕೊಂಡಿ ಕಳಚಿದ ಮೇಲೆ ಪುನಃ ಪರಸ್ಪರರನ್ನು ಜತೆಗೂಡಿಸುವುದಿಲ್ಲಎಂದುಕೊಂಡೇ ಮುಂದಿನ ಬದುಕಿನತ್ತ ಹೆಜ್ಜೆ ಹಾಕುತ್ತಾರೆ.

ಈ ಟಿಪ್ಸ್ ಫಾಲೋ ಮಾಡಿ, ಜೀವನ ಪರ್ಯಾಂತ ಖುಷಿ-ಖುಷಿಯಾಗಿರುವಿರಿ

ಆದರೆ ಇದ್ದಕ್ಕಿದ್ದಂತೆ ಹಳೆ ಪ್ರೇಮಿ ಎದುರಾದರೆ? ಹೀಗೆ ಎದುರಾಗುವ ಹಳೆ ಪ್ರೇಮಿಯನ್ನು ಎದುರಿಸುವುದು ಸುಲಭವಲ್ಲ. ಆದರೆ ಸಾಮಾಜಿಕ ತಾಣಗಳಲ್ಲಿನಿಮ್ಮನ್ನು ಹಿಂಬಾಲಿಸುತ್ತಿದ್ದರೆ ಅಂಥವರನ್ನು ಹೇಗೆ ನಿಭಾಯಿಸುತ್ತೀರ? ನಿಮ್ಮ ಮೊಬೈಲಿನಲ್ಲಿ ಧುತ್‌ ಎಂದು ಇದ್ದಕಿದ್ದಂತೆ ಹಿಂದೊಮ್ಮೆ ನೀವು ಡೇಟ್‌ ಮಾಡಿ ಬಿಟ್ಟಿದ್ದ ನಿಮ್ಮ ಮಾಜಿ ಹುಡುಗನಿಂದ ಮತ್ತೆ ಕಾಳಜಿಯ ಸಂದೇಶ ಬರಲಾರಂಭಿಸಿದರೆ ಅದರರ್ಥ, ನೀವು ಪೇಪರ್‌ ಕ್ಲಿಪ್‌ಡ್‌ ಅಂತ. ಏನಿದು?: ಸ್ವಲ್ಪ ದಿನಗಳ ಕಾಲ ಇಬ್ಬರೂ ಜೊತೆಯಲ್ಲಿದ್ದು, ಸುತ್ತಾಡಿ ಕಾರಣಾಂತರಗಳಿಂದ ಬೇರೆಯಾಗಿರುತ್ತಾರೆ.


ಬದಲಾದ ಜೀವನವನ್ನು ಬಂದಂತೆ ಸ್ವೀಕರಿಸಿ ಮುಂದುವರಿದಿರುತ್ತೀರಿ. ಅದು ಅವರಿಗೂ ಗೊತ್ತಿರುತ್ತದೆ. ಆದರೂ ಮತ್ತ್ಯಾವಾಗಲೋ ನಿಮ್ಮ ಜೀವನದಲ್ಲಿಇದ್ದಕ್ಕಿದಂತೆ ಅವರು ಪ್ರತ್ಯಕ್ಷವಾಗಿ ಬಿಟ್ಟರೆ! ನೀವು ಮಾಡುವ ಪ್ರತಿಯೊಂದು ಕೆಲಸವನ್ನೂ ಹೆಲಿಕ್ಯಾಪ್ಟರ್‌ ಥರ ಸರ್ವೇ ಮಾಡಲು ಶುರುವಿಟ್ಟುಕೊಂಡು, ಹೆಜ್ಜೆ ಹೆಜ್ಜೆಗೂ ಸಲಹೆ ನೀಡಲು ಮುಂದಾದರೆ? ಥೇಟ್‌ ನಮ್ಮ ಕಂಪ್ಯೂಟರ್‌ನಲ್ಲಿದ್ದ ಪೇಪರ್‌ ಕ್ಲಿಪ್ಪರ್‌ ತರಹ.

ಇಂತಹ ಹುಡುಗರನ್ನು ನಂಬಲೇಬೇಡಿ, ನಡು ನೀರಿನಲ್ಲಿ ನಿಮ್ಮ ಕೈಬಿಡಬಹುದು!
ನಿಮಗೆ ಈಗ ಆ ವ್ಯಕ್ತಿಯ ಅವಶ್ಯಕತೆ ಇದೆಯೋ ಇಲ್ಲವೋ ಏನೂ ಯೋಚಿಸದೇ, ಧಿಡೀರ್‌ ಎಂದು ಮತ್ತೆ ನಿಮ್ಮ ಜೀವನಕ್ಕೆ ಎಂಟ್ರಿ ಕೊಟ್ಟುಬಿಡುತ್ತಾರೆ. ಇವರೂ ಥೇಟ್‌ ಆ ಪೇಪರ್‌ ಕ್ಲಿಪ್ಪರ್‌ ಥರಾನೇ ಆಗ್ಗಿಂದಾಗ್ಗೆ ನಿಮ್ಮ ಜೀವನದಲ್ಲಿ ಮೂಗು ತೂರಿಸಿ ತಮ್ಮ ಅಸ್ತಿತ್ವವನ್ನು ನಿಮ್ಮ ಜೀವನದಲ್ಲಿ ಬಲವಂತವಾಗಿಯಾದರೂ ಇದೆ ಎಂದು ತೋರಿಸಲು ಹೊಡೆದಾಡುತ್ತಲೇ ಇರುತ್ತಾರೆ. ಇದು ನಿಮಗೆ ಕಿರಿಕಿರಿ ಆಗಬಹುದು. ನಿಮಗೆ ಪುನಃ ಅಂಥದ್ದೊಂದು ಸಂಬಂಧದಲ್ಲಿ ಗುರುತಿಸಿಕೊಳ್ಳಲು ಮನಸ್ಸಿಲ್ಲಅಂತಾದರೆ ಹಿಂಬಾಲಿಸುವ ವ್ಯಕ್ತಿಯೊಂದಿಗಿನ ಸಂಪೂರ್ಣ ಸಂಬಂಧ ಕಳೆದುಕೊಳ್ಳುವುದೇ ಉತ್ತಮ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ