ಆ್ಯಪ್ನಗರ

ದಾಂಪತ್ಯದಿಂದ ಹೊರ ಬರಬೇಕಾದ್ದು ಯಾವಾಗ?

ಸಂಬಂಧವೊಂದು ಹಳಸಿದ ಮೇಲೆ ಅದರಲ್ಲಿ ಮುಂದುವರಿಯಬೇಕೋ ಬೇಡವೋ ಎನ್ನುವ ಗೊಂದಲದ ನಡುವೆ ನೀವಿದ್ದರೆ ಮೊದಲು ನಿಮ್ಮ ವೈಮನಸ್ಸಿನ ಗಂಭೀರತೆ ಹುಡುಕಿ.

Vijaya Karnataka 19 Dec 2018, 9:38 am
ಕೆಲವೊಮ್ಮೆ ವೈವಾಹಿಕ ಬದುಕು ಸಾಕೆನಿಸುತ್ತದೆ. ಅದರಿಂದ ಹೊರಬರಬೇಕು ಎನ್ನುವಷ್ಟು ಉಸಿರುಕಟ್ಟಿಸುವ ವಾತಾವರಣ ಸೃಷ್ಟಿಯಾಗುತ್ತದೆ. ಅಂಥದ್ದೊಂದು ಸಂಬಂಧದಿಂದ ಹೊರ ಬರಬೇಕು ಎಂದಾಗ ಎಲ್ಲದಕ್ಕೂ ವಿಚ್ಛೇದನ ಪರಿಹಾರ ಎನಿಸಿಕೊಳ್ಳುತ್ತಾರೆ. ಆದರೆ ಇದರ ಪರಿಣಾಮದ ಬಗ್ಗೆ ಆತಂಕ, ಅನಂತರದ ಬದುಕಿನ ಬಗ್ಗೆ ಗೊಂದಲಗಳೆಲ್ಲವೂ ವಿಚ್ಛೇದನ ಎನ್ನುವ ಅಡ್ಡಗೋಡೆ ಬದುಕನ್ನು ಇಟ್ಟ ಹಾಗಾಗುತ್ತದೆ. ವಿಚ್ಛೇದನ ಪಡೆಯುವ ಮುನ್ನ ವೈಮನಸ್ಸನ್ನು ದಾಂಪತ್ಯದೊಳಗೆ ಬಗೆಹರಿಸಿಕೊಳ್ಳಲು ನೋಡುವುದು ಸೂಕ್ತ. ಅದು ಅಸಾಧ್ಯ ಎಂದಾಗ ಪರಸ್ಪರ ಒಪ್ಪಿಕೊಂಡು ದೂರವಿರಿ.
Vijaya Karnataka Web what are the warning signs of divorce
ದಾಂಪತ್ಯದಿಂದ ಹೊರ ಬರಬೇಕಾದ್ದು ಯಾವಾಗ?


ನಿಮ್ಮನ್ನು ಹಗುರವಾಗಿ ನೋಡುತ್ತಿದ್ದರೆ: ದಾಂಪತ್ಯದಲ್ಲಿ ಗಂಡ ಹಾಗೂ ಹೆಂಡತಿ ಇಬ್ಬರೂ ಸರಿಸಮಾನರು. ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ. ನಿಮ್ಮ ಪತಿ/ಪತ್ನಿ ನಿಮ್ಮನ್ನು ಹಗುರವಾಗಿ ಪರಿಗಣಿಸಿದರೆ, ನಿಮ್ಮನ್ನು ಗುಲಾಮರಂತೆ ನೋಡಿದರೆ ನೀವು ಅಂತಹ ಪತಿ/ಪತ್ನಿಯೊಂದಿಗೆ ಇದ್ದರೂ ನಿಮ್ಮ ದಾಂಪತ್ಯ ಸುಖಮಯವಾಗಿರಲಾಗದು. ಹಾಗಾಗಿ ಅಂತಹ ಸಂಬಂಧದಿಂದ ತಕ್ಷ ಣ ಹೊರಬನ್ನಿ.

ಗೌರವ ಸಿಗುತ್ತಿಲ್ಲ: ಪತಿ ಪತ್ನಿಯರಿಬ್ಬರಿಗೂ ಪರಸ್ಪರರ ಮೇಲೆ ಗೌರವವಿರಲೇಬೇಕು. ಗೌರವ ಕಡಿಮೆಯಾದಂತೆ ಸಂಬಂಧ ಹಳಸುತ್ತದೆ. ಸಂಬಂಧ ಹಳಸಿದ ಮೇಲೆ ದೂರ ಆಗುವುದು ಒಳಿತು.

ಪ್ರೀತಿ ಸತ್ತಾಗ: ಗಂಡ ಹೆಂಡತಿಯ ನಡುವೆ ಮೊದಲನೆಯದಾಗಿ ಇರಬೇಕಾದುದು ಪ್ರೀತಿ. ಪ್ರೀತಿಯೊಂದಿದ್ದರೆ ಎಂತಹ ಬಡತನವಿದ್ದರೂ ಬದುಕು ಶ್ರೀಮಂತವಾಗಿತ್ತದೆ. ಆದರೆ ಪ್ರೀತಿಯೇ ಸತ್ತರೆ ಎಷ್ಟೇ ಸಿರಿತನವಿದ್ದರೂ ದಾಂಪತ್ಯ ಬಡವಾಗುತ್ತದೆ.

ನಂಬಿಕೆ ಇಲ್ಲವಾದಾಗ: ಪತಿ ಪತ್ನಿ ನಡುವೆ ಪರಸ್ಪರ ನಂಬಿಕೆ ವಿಶ್ವಾಸ ಇರಲೇಬೇಕು. ನಂಬಿಕೆಯೇ ಸುಖ ಸಂಸಾರದ ಕೀಲಿಕೈ. ಆದರೆ ಗಂಡ/ಹೆಂಡತಿಗೆ ತಮ್ಮ ಸಂಗಾತಿ ಮೇಲೆ ನಂಬಿಕೆ ಕಡಿಮೆ ಆದರೆ ಆ ಸಂಸಾರದಲ್ಲಿ ಯಾವುದೇ ಸಾರವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಪರಸ್ಪರರ ಒಪ್ಪಿಗೆ ಮೆರೆಗೆ ವಿಚ್ಛೇದನ ಪಡೆಯುವುದು ಒಳಿತು.

ಮೂರನೆ ವ್ಯಕ್ತಿಯ ಪ್ರವೇಶವಾದಾಗ: ಗಂಡ ಹೆಂಡತಿ ನಡುವೆ ಇನ್ನೊಬ್ಬ/ಇನ್ನೊಬ್ಬಳು ಬಂದರೆ ಅವರ ಸಂಸಾರ ಛಿದ್ರವಾಗುವುದು ಖಚಿತ. ತಪ್ಪು ತಿದ್ದುಕೊಂಡು ಪುನಃ ಸುಖ ಸಂಸಾರ ನಿಮ್ಮದಾದರೆ ಸಮಸ್ಯೆಯಿಲ್ಲ. ಅದು ಅಸಾಧ್ಯ ಎಂದಾಗ ಹೊರ ಬನ್ನಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ