ಆ್ಯಪ್ನಗರ

ಎರಡು ದಿನ ಗೆಳೆಯ ಕಾಲೇಜಿಗೆ ಬಾರದಿದ್ದಾಗ

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸ್ನೇಹ ಬಳಗವನ್ನು ಹೊಂದಿರುತ್ತಾರೆ. ಒಂದೇ ಮನಸ್ಸಿನ ಸಹೃದಯದ ಮನೋಭಾವನೆಯನ್ನು ಹೊಂದಿರುವ ನನ್ನ ಪ್ರೀತಿಯ ಗೆಳೆಯರಿಗೆ ನನ್ನ ಕಡೆಯಿಂದ ಹೃತ್ಪೂರ್ವಕ ಗೆಳೆಯರ ದಿನದ ಶುಭಾಶಯಗಳನ್ನು ಹೇಳಲು ಬಯಸುತ್ತೇನೆ. ಈ ಒಂದು ದಿನಕ್ಕೆ ಮಾತ್ರ ಗೆಳೆತನ ಸೀಮಿತವಾಗಬಾರದು ಅಲ್ಲವೇ!

Vijaya Karnataka Web 3 Aug 2019, 12:30 pm
ಮೊದಲೇ ನಾವು ಕಾಲೇಜಿನ ವಿದ್ಯಾರ್ಥಿ ಮಿತ್ರರು ಆಗಿದ್ದರಿಂದ ಕ್ಲಾಸ್ ಬಂಕ್ ಮಾಡಿ ಆಗಾಗ ಕೆಲವು ಸ್ಥಳಗಳಾದ ಬಲಮುರಿ, ಎಡಮುರಿ,ಚಾಮುಂಡಿ ಬೆಟ್ಟ ,ಶ್ರೀರಂಗ ಪಟ್ಟಣ, ಕೆ ಆರ್ ಎಸ್ ಇನ್ನಿತರ ಸ್ಥಳಗಳಿಗೆ ಮತ್ತು ಮಾಸ್ ಬಂಕ್ ಮಾಡಿ ಸಿನಿಮಾ ನೋಡಲು ಹೋಗುತ್ತಿದ್ದೆವು .
Vijaya Karnataka Web friendship


ಇಲ್ಲಿ ತರಗತಿಗಳನ್ನು ತಪ್ಪಿಸಿಕೊಳ್ಳಬಹುದು ಎಂಬ ಮನೋ ಭಾವನೆ ಅಲ್ಲ ಬದಲಾಗಿ ಎಲ್ಲಾ ರೀತಿಯಲ್ಲೂ ಗೆಳೆತನವು ಹೊಂದಾಣಿಕೆ ಎಂಬುದು ಬಹುಮುಖ್ಯ. ಪರೀಕ್ಷೆಯ ಸಮಯದಲ್ಲಿ ಮಾತ್ರ ಪ್ರತಿಯೊಬ್ಬರೂ ಕೂಡ ಶಿಸ್ತಿನಿಂದ ಕುಳಿತು ಅಭ್ಯಾಸದಲ್ಲಿ ನಿರತರಾಗುತ್ತಿದ್ದೇವು .ನಮ್ಮ ಗೆಳೆಯರ ಬಳಗದಲ್ಲಿ ಸಹಾಯಾಸ್ತದ ಮನೋಭಾವನೆ ಎಲ್ಲರಲ್ಲೂ ಹೆಚ್ಚಾಗಿಯೇ ಇತ್ತು. ಗೆಳೆತನ ಎಂಬುದು ಕೇವಲ ಬಾಯಿ ಮಾತಿನ ಮಾತಾಗ ಬಾರದು. ಏನೇ ಸಮಸ್ಯೆಯಿದ್ದರೂ ಗೆಳೆಯರ ನೆರವಿನಿಂದ ಎದುರಿಸಬಹುದು.

ನನ್ನ ಗೆಳೆಯರು ಬೇರೆ-ಬೇರೆಯ ಮನೋಭಾವನೆ ಹೊಂದಿದ್ದರೂ ಸಹ ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಪರಸ್ಪರ ಭಾಗಿಯಾಗುವುದನ್ನು ಕಂಡು ನನಗೆ ನಿಜಕ್ಕೂ ಖುಷಿಯಾಗುತ್ತದೆ . ಬರಿ ಮೋಜು-ಮಸ್ತಿ ಎಂಬ ಮಾಯಾ ಲೋಕದಲ್ಲೇ ಸಕ್ರಿಯರಾಗಿರುವ ಈಗಿನ ಕಾಲದಲ್ಲಿ ಅದರಲ್ಲೂ ಸುಖ-ದುಃಖ ಎರಡಕ್ಕೂ ಸಮಾನವಾದ ಪ್ರೀತಿಯನ್ನು ತೋರುವ ಗೆಳೆಯರೇ ನಿಜವಾದ "ಗಾಡ್ ಫಾದರ್" ಎಂದರು ತಪ್ಪಾಗಲಾರದು .

ಏಕೆಂದರೆ ಅದೊಂದು ದಿನ ನಮ್ಮ ಗೆಳೆಯನೊಬ್ಬನು ಎರಡು ದಿನವಾದರೂ ಕಾಲೇಜಿಗೆ ಬಾರದಿದ್ದಾಗ ಗಾಬರಿಗೊಂಡ ನಾವು ಅವನಿದ್ದಲ್ಲಿಗೆ ಹೋಗಿ ನೋಡಿದಾಗ ಅವನ ಆರೋಗ್ಯ ಸರಿಯಾಗಿರಲಿಲ್ಲ ಮೈ ಸುಡುವಂತಹ ಬಿಸಿ ಮೊದಲೇ ದೂರದ ಊರಿಂದ ವಿದ್ಯಾಭ್ಯಾಸಕ್ಕೆ ಬಂದಿದ್ದ, ಅವನಿದ್ದ ತಂಗಿದ್ದ ರೂಮ್‌ನ ಪಕ್ಕದಲ್ಲೇ ಆಸ್ಪತ್ರೆ ಇದ್ದರೂ ಅವನು ವೈದ್ಯರ ಬಳಿ ಹೋಗಿರಲಿಲ್ಲ.

ಇಷ್ಟೊಂದು ಜ್ವರ ಇದ್ದರೂ ಏಕೆ ಹೋಗಿಲ್ಲ ಎಂದು ಕೇಳಿದಾಗ ಅವನ ಬಳಿ ಬರೀ 35ರೂ ಮಾತ್ರ ಇದೆ ಎಂದು ತಿಳಿದು ಬಂತು. ತಕ್ಷಣವೇ ನಾವು ಸ್ನೇಹಿತರು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಇಲ್ಲಿ ನಾವು ಮಾಡಿದ ಕೆಲಸ ದೊಡ್ಡದಲ್ಲ, ಸ್ನೇಹವೇ ದೊಡ್ಡದು.

ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ, ಯಾವುದೇ ರೀತಿಯ ಜಾತಿ,ಮತ, ಪಂಥ, ಧರ್ಮದ ಧೋರಣೆಗಳಿಲ್ಲ, ಸ್ನೇಹವೆಂಬ ಅಂಬಾರಿಯಲ್ಲಿ ನಾವೆಲ್ಲರೂ ಸಾಗುತ್ತಿದ್ದೇವೆ.

ರಂಜನ್ ಪಿ ಎಸ್
ಪತ್ರಿಕೋದ್ಯಮ ವಿಭಾಗ
ಸಂತ ಫಿಲೋಮಿನಾ ಕಾಲೇಜು ಮೈಸೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ