ಆ್ಯಪ್ನಗರ

ಜಗಳ ಮುಗಿದ ಮೇಲೆ ಮುದ್ದಾಡಿ

ಜಗಳವಾದ ನಂತರ ಅಪ್ಪಿಕೊಂಡು ಮುದ್ದಾಡಿ. ಇದರಿಂದ ನೀವು ರಿಲ್ಯಾಕ್ಸ್ ಆಗುತ್ತೀರ, ದಂಪತಿ ಅಂತಲ್ಲ, ಸ್ನೇಹಿತರಾದರೂ ಸರಿ, ಒಮ್ಮೆ ಜಗಳವಾಡುತ್ತೀರ ಅಂದರೆ ಅನಂತರ ತಬ್ಬಿಕೊಂಡು ಸಮಾಧಾನಿಸಿಕೊಂಡರೆ ಜಗಳದ ನಡುವೆ ಉಂಟಾದ ಮನಸ್ತಾಪ ದೂರವಾಗುತ್ತದೆ. ಧನಾತ್ಮಕ ಸಂದೇಶವೊಂದನ್ನು ರವಾನಿಸಿದಂತಾಗುತ್ತದೆ.

Vijaya Karnataka Web 23 Jan 2019, 8:55 am
ಸ್ನೇಹ, ಪ್ರೀತಿ, ದಾಂಪತ್ಯ ಅಥವಾ ಇತರ ಯಾವುದೇ ಸಂಬಂಧ ಇರಲಿ, ಸಣ್ಣ ಪುಟ್ಟ ವಿಷಯಕ್ಕೆ ಮನಸ್ತಾಪ, ಜಗಳ, ಅಸಮಧಾನ ಆಗಾಗ ಉಂಟಾಗುವುದು ಸಹಜ. ಹಾಗಂತ ಇದನ್ನು ಹಾಗೆಯೇ ಬಿಟ್ಟರೆ ಕಂದಕ ಹೆಚ್ಚುತ್ತಲೇ ಹೋಗಬಹುದು. ಅದನ್ನು ಆ ಕ್ಷಣವೇ ಪರಿಹರಿಸಿಕೊಳ್ಳುವುದು ಸಹ ಅತ್ಯಗತ್ಯ. ಅದಕ್ಕಾಗಿ ಹೆಚ್ಚು ಕಷ್ಟ ಪಡಬೇಕಿಲ್ಲ. ಜಸ್ಟ್ ಒಂದು ಹಗ್ ಮಾಡಿ.
Vijaya Karnataka Web Hug


ಜಗಳವಾದ ನಂತರ ಅಪ್ಪಿಕೊಂಡು ಮುದ್ದಾಡಿ. ಇದರಿಂದ ನೀವು ರಿಲ್ಯಾಕ್ಸ್ ಆಗುತ್ತೀರ, ದಂಪತಿ ಅಂತಲ್ಲ, ಸ್ನೇಹಿತರಾದರೂ ಸರಿ, ಒಮ್ಮೆ ಜಗಳವಾಡುತ್ತೀರ ಅಂದರೆ ಅನಂತರ ತಬ್ಬಿಕೊಂಡು ಸಮಾಧಾನಿಸಿಕೊಂಡರೆ ಜಗಳದ ನಡುವೆ ಉಂಟಾದ ಮನಸ್ತಾಪ ದೂರವಾಗುತ್ತದೆ. ಧನಾತ್ಮಕ ಸಂದೇಶವೊಂದನ್ನು ರವಾನಿಸಿದಂತಾಗುತ್ತದೆ.

ಅಪ್ಪುಗೆ ಅನ್ನೋದು ನಿಜಕ್ಕೂ ಮಧುರಾನುಭೂತಿ ಕೊಡುತ್ತೆ. ನಿಮ್ಮ ಸಂಗಾತಿ, ಗೆಳೆಯ, ಅಮ್ಮ, ಅಪ್ಪ ಅಥವಾ ಇತರ ಯಾವುದೇ ಸಂಬಂಧವಿರಲಿ. ನೀವು ಮನಸಾರೆ ಅಪ್ಪಿಕೊಂಡಾಗ ಪ್ರಪಂಚದ ಎಲ್ಲಾ ನೋವುಗಳು ಅಲ್ಲೇ ಕರಗಿ ಹೋಗುತ್ತವೆ. ಅಲ್ಲದೇ ನಿಮ್ಮ ಸಂಬಂಧ ಇನ್ನೂ ಗಟ್ಟಿಯಾಗಲು ಸಹ ನೆರವಾಗುತ್ತದೆ. ಆಕೆ/ಅವನು ಬೇಸರ, ಕೋಪದಲ್ಲಿದ್ದಾಗ ಇಗೋ ತೊರೆದು ಪ್ರೀತಿಯಿಂದ ಒಂದು ಅಪ್ಪುಗೆ ನೀಡಿ. ಇದರಿಂದ ಅಸಮಾಧಾನವೆಲ್ಲ ಇಳಿದು ಹೋಗಿ ಇಬ್ಬರಲ್ಲೂ ಭರವಸೆ ಹಾಗೆ ಭದ್ರತೆಯ ಭಾವ ಮೂಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ