ಆ್ಯಪ್ನಗರ

Bheemana Amavasya: ಆಷಾಢ ಮಾಸದ ಕೊನೆಯ ಅಮಾವಾಸ್ಯೆಯೇ ಭೀಮನ ಅಮಾವಾಸ್ಯೆ

ಆಷಾಢ ಮಾಸದ ಕೊನೆಯ ಅಮಾವಾಸ್ಯೆಗೆ ಜನರು ಹಬ್ಬದ ಸ್ವರೂಪ ನೀಡಿದ್ದಾರೆ.

Vijaya Karnataka Web 11 Aug 2018, 11:31 am
ಆಷಾಢ ಮಾಸದ ಕೊನೆಯ ಅಮಾವಾಸ್ಯೆಗೆ ಜನರು ಹಬ್ಬದ ಸ್ವರೂಪ ನೀಡಿದ್ದಾರೆ. ಆ ದಿನವನ್ನು ವಿವಿಧ ಪ್ರದೇಶಗಳಲ್ಲಿ ಜ್ಯೋತಿರ್ಭೀಮೇಶ್ವರ ವ್ರತ, ಸತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ, ಗಂಡನ ಪೂಜೆ, ಆಟಿ ಅಮಾವಾಸ್ಯೆ ಮುಂತಾದ ಹೆಸರಿನಲ್ಲಿ ಆಚರಿಸುತ್ತಾರೆ. ಅಂದು ಬಹುತೇಕ ವಿವಾಹಿತ ಮಹಿಳೆಯರು ತಮ್ಮ ಗಂಡನಿಗೆ ಪೂಜೆ ಮಾಡಿ ಅವರ ದೀರ್ಘಾಯಸ್ಸಿಗಾಗಿ ಪ್ರಾರ್ಥಿಸುತ್ತಾಳೆ. ಅವಿವಾಹಿತ ಯುವತಿಯರು ಕೂಡಾ ಅಂದು ಪೂಜೆ ಮಾಡಿ ತಮಗೆ ಒಳ್ಳೆಯ ಗಂಡ ಸಿಗಲಿ ಎಂದು ಶಿವ ಪಾರ್ವತಿ ದೇವರನ್ನು ಪ್ರಾರ್ಥಿಸುತ್ತಾರೆ. ಈ ಬಾರಿ ಆಗಸ್ಟ್ 11 ರಂದು ಆಷಾಢ ಅಮಾವಾಸ್ಯೆ ಬಂದಿದೆ. ಆದ್ದರಿಂದ ಇಂದು ಬಹುತೇಕ ಜನರಿಗೆ ಹಬ್ಬ.
Vijaya Karnataka Web about bheemana amavasye
Bheemana Amavasya: ಆಷಾಢ ಮಾಸದ ಕೊನೆಯ ಅಮಾವಾಸ್ಯೆಯೇ ಭೀಮನ ಅಮಾವಾಸ್ಯೆ


ಭೀಮನ ಅಮಾವಾಸ್ಯೆಯಂದು ಮಹಿಳೆಯರು ಕೈಗೆ ಕಂಕಣ ಕಟ್ಟಿಕೊಂಡು ಜ್ಯೋರ್ತಿಭೀಮೇಶ್ವರ ದೇವರನ್ನು ಪ್ರಾರ್ಥಿಸಿ ವ್ರತ ಮಾಡುತ್ತಾರೆ. ಆಮೇಲೆ ತಮ್ಮ ಗಂಡನ ಪಾದ ಪೂಜೆ ಮಾಡಿ ಆಶೀರ್ವಾದ ಮಾಡುತ್ತಾರೆ. ಕೆಲವೆಡೆ ಈ ಹಬ್ಬದಂದು ಅಕ್ಕ ತಂಗಿಯರು ತಮ್ಮ ಸಹೋದರರ ಕೈಯಿಂದ ಭಂಡಾರ ಅಂದರೆ ಲಕ್ಷ್ಮಿ ರೂಪದ ನಾಣ್ಯವಿಟ್ಟ ಕಡುಬು ಒಡೆಸುತ್ತಾರೆ. ಬಳಿಕ ಅವರ ಆಶೀರ್ವಾದ ಪಡೆದು ತಾಂಬೂಲ ನೀಡುತ್ತಾರೆ. ದಕ್ಷಿಣ ಕನ್ನಡ ಮುಂತಾದ ಕರಾವಳಿ ಜಿಲ್ಲೆಗಳಲ್ಲಿ ಈ ದಿನವನ್ನು ಆಟಿ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಈ ದಿನ ಪಾಲೆ ಮರದ ಕಹಿ ಕಷಾಯ ಕುಡಿಯಲಾಗುತ್ತದೆ. ಹಾಗೂ ಮೆಂತ್ಯೆ ಕಾಳು, ಅಕ್ಕಿ ಮತ್ತು ಸಾಂಬಾರ ಮಸಾಲೆ ಹಾಕಿ ಮಾಡಿದ ಪಾಯಸವನ್ನು ಮಾಡಲಾಗುತ್ತದೆ. ಕೆಲವೆಡೆ ಈ ದಿನದಂದು ಶಿವ ಪಾರ್ವತಿಯರಿಗೆ ಹಿಟ್ಟಿನಿಂದ ಮಾಡಿದ ತಂಬಿಟ್ಟು ದೀಪ ಹಚ್ಚಿ ಪೂಜೆ ಮಾಡಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ