ಆ್ಯಪ್ನಗರ

ಬೆಂಗಳೂರು ಆಕಾಶವಾಣಿ

1950ರ ಏಪ್ರಿಲ್‌ 1 ರಂದು 'ಆಲ್‌ ಇಂಡಿಯಾ ರೇಡಿಯೋ' ಆಕಾಶವಾಣಿಯು ಅಖಿಲ ಭಾರತ ಜಾಲದಲ್ಲಿ ಒಂದಾಯಿತು...

Vijaya Karnataka Web 5 Dec 2022, 1:46 pm
1950ರ ಏಪ್ರಿಲ್‌ 1 ರಂದು 'ಆಲ್‌ ಇಂಡಿಯಾ ರೇಡಿಯೋ' ಆಕಾಶವಾಣಿಯು ಅಖಿಲ ಭಾರತ ಜಾಲದಲ್ಲಿ ಒಂದಾಯಿತು. ಮೈಸೂರು ನಿಲಯ 1955ರ ನವೆಂಬರ್‌ 2ರವರೆಗೆ ಪ್ರಸಾರವನ್ನು ನಿರ್ವಹಿಸಿತು. ಅದೇ ದಿನದಂದೇ ಹೆಚ್ಚು ಶಕ್ತಿಯ ಪ್ರಸಾರ ಕೇಂದ್ರ ಬೆಂಗಳೂರಿನಲ್ಲಿ ಪ್ರಾರಂಭಗೊಂಡಿತು.
Vijaya Karnataka Web Image by FindingSR from Pixabay


ಈ ಕೇಂದ್ರದಿಂದ 50 ಕಿಲೋವ್ಯಾಟ್‌ ಸಾಮರ್ಥ್ಯ‌ದೊಂದಿಗೆ ಕಾರ್ಯಕ್ರಮಗಳ ಪ್ರಸಾರ ಪ್ರಾರಂಭವಾಯಿತು. ಈಗಿರುವ ಆಕಾಶವಾಣಿ ಕಟ್ಟಡ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರಿಗೆ ಸೇರಿದ್ದು. ಆಕಾಶವಾಣಿಗಾಗಿ ಒಂದು ಸಾವಿರ ರೂಪಾಯಿ ಬಾಡಿಗೆಗೆಂದು ಪಡೆಯಲಾಗಿತ್ತು. ಆನಂತರ 45 ಲಕ್ಷ ರೂಪಾಯಿಗಳಿಗೆ ಈ ಕಟ್ಟಡವನ್ನು ಕೊಂಡುಕೊಳ್ಳಲಾಯಿತು. ಈ ಕೇಂದ್ರದ ಮೊದಲ ನಿರ್ದೇಶಕರು ಪ್ರೊ.ಬಿ.ಕೆ.ನಂದಿ.

ಬೆಂಗಳೂರು ಕೇಂದ್ರ ಇಡೀ ದೇಶದಲ್ಲೇ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಸರಾಗಿದೆ. ಕಾರ್ಯಕ್ರಮದಲ್ಲಿ ತಂದ ಹೊಸತನ ಅಪಾರ ಮೆಚ್ಚುಗೆ ಪಡೆದಿದೆ. ಕೃಷಿ ಬಾನುಲಿ ಪಾಠಶಾಲೆ (1976), ಕರ್ನಾಟಕದ ಎಲ್ಲ ಕೇಂದ್ರಗಳಿಂದ ಪ್ರಸಾರಗೊಂಡ ನಿಸರ್ಗ ಸಂಪದದ ಸಾಮಾಜಿಕ ಅರಣ್ಯ ಮತ್ತು ಪ್ರಕೃತಿ ಶಿಕ್ಷಣ ಕುರಿತ 13 ಕಾರ್ಯಕ್ರಮಗಳು. ಇಲ್ಲಿ ನೋಂದಾಯಿತಗೊಂಡ ಶ್ರೋತೃಗಳು 15 ಸಾವಿರ, ಕಾರ್ಯಕ್ರಮದ ಕೊನೆಯಲ್ಲಿ ಬಹುಮಾನ ಪಡೆದವರು 500 ಜನರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ