ಏಕೀಕರಣದ ನಂತರವೂ ಬೆಂಗಳೂರಿನಲ್ಲಿ ಕನ್ನಡ ಅನಾಥವಾಗಿತ್ತು. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕನ್ನಡ ಜಾಗೃತಿಯಾತ್ರೆ ಹೆಚ್ಚಾಯಿತು. ಕೋಣಂದೂರು ಲಿಂಗಪ್ಪ ಬೆಂಗಳೂರು ಲಾ ಕಾಲೇಜು ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದರು. ಅಲ್ಲಿ ಕನ್ನಡ ಚಟುವಟಿಕೆ ಚುರುಕುಗೊಳಿಸಿದರು. ಕನ್ನಡ ಯುವಜನ ಸಭಾದ ಚಟುವಟಿಕೆ ಹೆಚ್ಚಾಯಿತು. 1961ರ ನವೆಂಬರ್ ಹೊತ್ತಿಗೆ ಬೆಂಗಳೂರಿನಲ್ಲಿ 30-40 ಕನ್ನಡ ಸಂಘಗಳು ಹುಟ್ಟಿಕೊಂಡಿದ್ದವು. ಇವುಗಳ ಸಹಕಾರದಿಂದ 'ಯುವಜನ ಸಭಾ' ನವೆಂಬರ್ 1ರಂದು ಚಿಕ್ಕಲಾಲ್ಬಾಗ್ನಲ್ಲಿ ಪ್ರಥಮ ಬಾರಿಗೆ ರಾಜ್ಯೋತ್ಸವ ಆಚರಿಸಿತು. ಭುವನೇಶ್ವರಿ ಧ್ವಜ ಹಾರಿಸುವುದರೊಂದಿಗೆ ರಾಜ್ಯೋತ್ಸವ ಆರಂಭಗೊಂಡಿತು. ಕನ್ನಡಿಗರ ಹಿನ್ನಡೆಯ ಪರಿಸ್ಥಿತಿ ವಿವರಿಸುವ ಕರಪತ್ರ ಹಂಚಿ, ಕನ್ನಡಕ್ಕಾಗಿ ಕೈಯೆತ್ತಿ, ಕೊರಳೆತ್ತಿ, ಸಂಘಟಿತರಾಗಿ ಎಂದು ಕರೆ ನೀಡಲಾಯಿತು. ಈ ಸಭೆಗೆ ಸುಮಾರು ಒಂದು ಸಾವಿರ ಜನ ಸೇರಿದ್ದರು. ಬೆಂಗಳೂರಿನ ಕನ್ನಡಿಗರಲ್ಲಿ ನಾಡು-ನುಡಿಯ ಬಗ್ಗೆ ಜಾಗೃತಿ ಉಂಟು ಮಾಡಲು 23-11-1961ರಂದು 'ಕನ್ನಡ ದಿನ' ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಅ.ನ.ಕೃ 'ಬೆಂಗಳೂರಿನಲ್ಲಿ ಕನ್ನಡ ಉಳಿಸದಿದ್ದರೆ ಕರ್ನಾಟಕ ಸತ್ತಂತೆ' ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಶಿವಮೂರ್ತಿ ಶಾಸ್ತ್ರಿಗಳು ಭಾಗವಹಿಸಿದ ಎಲ್ಲ ಕಾರ್ಯಕ್ರಮಗಳಲ್ಲಿ ಕನ್ನಡಿಗರು ಎಚ್ಚರಗೊಳ್ಳುವ ಅಗತ್ಯವನ್ನು ಹೇಳುತ್ತಿದ್ದರು. ಇವೆಲ್ಲದರ ಪರಿಣಾಮ ಬೆಂಗಳೂರಿನ ಕನ್ನಡಿಗರು ನಾಡು- ನುಡಿಯ ಪರ ಧ್ವನಿ ಎತ್ತಲಾರಂಭಿಸಿದರು.
ಕನ್ನಡ ದಿನ ಆಚರಣೆ
ಏಕೀಕರಣದ ನಂತರವೂ ಬೆಂಗಳೂರಿನಲ್ಲಿ ಕನ್ನಡ ಅನಾಥವಾಗಿತ್ತು ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕನ್ನಡ ಜಾಗೃತಿಯಾತ್ರೆ ಹೆಚ್ಚಾಯಿತು...
Vijaya Karnataka 4 Nov 2017, 5:30 am