ಆ್ಯಪ್ನಗರ

ಡೇ ಸ್ಪೆಷಲ್‌: ವಿಮಾ ಜಾಗೃತಿ ದಿನ

ಅನಿಶ್ಚಿತ ನಷ್ಟ ಅಥವಾ ಗಂಡಾಂತರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರೂಪಿಸುವ ಒಂದು ರೀತಿಯ ಅಪಾಯ ನಿರ್ವಹಣೆಯ ಉಪಾಯವೇ ವಿಮೆ ಎಂದು ...

Vijaya Karnataka 28 Jun 2018, 5:00 am
ಅನಿಶ್ಚಿತ ನಷ್ಟ ಅಥವಾ ಗಂಡಾಂತರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರೂಪಿಸುವ ಒಂದು ರೀತಿಯ ಅಪಾಯ ನಿರ್ವಹಣೆಯ ಉಪಾಯವೇ ವಿಮೆ ಎಂದು ಹೇಳಲಾಗುತ್ತದೆ. ಎಷ್ಟೋ ಜನರು ಇದರ ಬಗ್ಗೆ ಮಾತನಾಡುವುದಿಲ್ಲ , ಚಿಂತಿಸುವುದು ಇಲ್ಲ. ವಿಮೆಯಿಂದಾಗುವ ಪ್ರಯೋಜದ ಬಗ್ಗೆ ತಿಳಿದುಕೊಂಡಿರುವುದಿಲ್ಲ. ನಮ್ಮ ಜೀವದಿಂದ ಹಿಡಿದು ಎಲ್ಲವೂ ಇಂದು ಅಸುರಕ್ಷಿತವೇ. ಇಂತಹ ಅಸುರಕ್ಷಿತ ವಾತಾವರಣದಲ್ಲಿ ನಮ್ಮನ್ನು ಮತ್ತು ನಮ್ಮ ಕುಟುಂಬವನ್ನು ಭವಿಷ್ಯದಲ್ಲಿ ಸುರಕ್ಷಿತವಾಗಿಡಲು ವಿಮೆ ನೆರವಾಗುತ್ತದೆ. ವಿಮೆ ಮಾಡಿಸುವ ಅಗತ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್‌ 28ರಂದು ವಿಮಾ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
Vijaya Karnataka Web paper-family


ವಿಮೆಗಳಲ್ಲಿ ಜೀವ ವಿಮೆ, ಗೃಹ, ಆರೋಗ್ಯ, ಅಪಘಾತ, ಕಾಯಿಲೆ, ನಿರುದ್ಯೋಗ, ಅವಘಡ, ಆಸ್ತಿ, ವಾಹನ, ಬೆಳೆವಿಮೆ ಸೇರಿದಂತೆ ಹಲವಾರು ವಿಮೆಗಳಿವೆ. ಬದುಕಿದ್ದಾಗ ವ್ಯಕ್ತಿ ಮಾಡಿಸುವ ಜೀವ ವಿಮೆ ಆತ ಸತ್ತ ನಂತರ ಆತನ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡುತ್ತದೆ. ಅದೇ ರೀತಿ ಮನೆ, ವಾಹನಗಳು, ಆಸ್ತಿ ಮೇಲೆ ಏನಾದರೂ ಅವಘಡ ಸಂಭವಿಸಿ ಹಾಳಾದರೆ ವಿಮೆಯಿಂದ ಪ್ರಯೋಜನವಿದೆ.

ವಿಮೆ ಬಹಳ ಕಾಲದಿಂದಲೂ ಇದೆ. ವಿಮೆಯ ಇತಿಹಾಸ ನೂರಕ್ಕೂ ಹೆಚ್ಚು ವರ್ಷಗಳಿಗಿಂತಲೂ ಹಳೆಯದು ಎಂದು ಹೇಳಲಾಗಿದೆ. ಇದರ ಆರಂಭಿಕ ಆವೃತ್ತಿಗಳು ಕ್ರಿ.ಪೂ. 3000-2000ರಲ್ಲಿ ಕಂಡುಬರುತ್ತವೆ. ಲಂಡನ್‌ನಲ್ಲಿ ನಡೆದ ದೊಡ್ಡ ಆಸ್ತಿ ದುರಂತ ಈ ವಿಮೆ ಕಲ್ಪನೆಯನ್ನು ಹುಟ್ಟು ಹಾಕಿತು ಎನ್ನಲಾಗಿದೆ. ಅನೇಕ ವಿಮಾ ಸಂಸ್ಥೆಗಳು, ಸಂಘಟನೆಗಳು ಈ ದಿನದಂದು ವಿಮೆ ಕುರಿತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ