ಆ್ಯಪ್ನಗರ

ಸರಳ ವಿಧಾನ ಅನುಸರಿಸಿ

ಮಹಿಳೆಯರ ಬಹುತೇಕ ಸಮಯ ಕಿಚನ್‌ ನಲ್ಲಿ ಕಳೆದು ಹೋಗುತ್ತದೆ...

Vijaya Karnataka 24 Oct 2017, 5:30 am

ಮಹಿಳೆಯರ ಬಹುತೇಕ ಸಮಯ ಕಿಚನ್‌ ನಲ್ಲಿ ಕಳೆದು ಹೋಗುತ್ತದೆ. ಕಿಚನ್‌ ಕೆಲಸ ಬೇಗ ಮುಗಿಸಿ ಸ್ವಲ್ಪ ಸಮಯ ಮಕ್ಕಳು, ಗಂಡನ ಜೊತೆ ಕಳೆಯೋಣ ಎಂದ್ರೆ ಕೆಲಸ ಮುಗಿಯೋದೇ ಇಲ್ಲ ಎನ್ನುವವರು ಹಲವರಿದ್ದಾರೆ. ಅಂತವರು ಕೆಲವೊಂದು ಸರಳ ವಿಧಾನವನ್ನು ಅನುಸರಿಸಿದರೆ ಬಹುಬೇಗ ಆಹಾರ ಮಾಡÜಬಹುದು.

-ಖೀರ್‌ ಮಾಡುವ ಮೊದಲು ಪಾತ್ರೆಗೆ ಸ್ವಲ್ಪ ನೀರು ಹಾಕಿ ನಂತರ ಹಾಲು ಹಾಕಬೇಕು. ಈ ರೀತಿ ಮಾಡಿದರೆ ಪಾತ್ರೆಯ ತಳಕ್ಕೆ ಹಾಲು ಹಿಡಿಯುವುದಿಲ್ಲ.

-ಬೇಳೆಯ ಸ್ವಾದ ಹೆಚ್ಚಲು ಬೇಯಿಸುವ ಮೊದಲು ಸ್ವಲ್ಪ ಹುರಿದುಕೊಳ್ಳಬೇಕು.

-ಅನ್ನ ಮುದ್ದೆಯಾಗದಂತೆ ಬೇಯಿಸುವ ಮೊದಲು ಚಿಟಕಿ ಎಣ್ಣೆ ಹಾಕಬೇಕು.

-ಆಲೂಗಡ್ಡೆ ಬೇಯಿಸುವಾಗ ಚಿಟಕಿ ಉಪ್ಪು ಹಾಕಿದರೆ ಸಿಪ್ಪೆ ತೆಗೆಯಲು ಸುಲಭವಾಗುತ್ತದೆ.

-ಇಡ್ಲಿ ಮೃದುವಾಗಲು ಬಂಧಕ್ಕೆ ಸ್ವಲ್ಪ ಅನ್ನ ಸೇರಿಸಬೇಕು.

-ಈರುಳ್ಳಿ ಕತ್ತರಿಸುವ 10 ನಿಮಿಷ ಮೊದಲು ನೀರಿನಲ್ಲಿ ನೆನೆಸಿಟ್ಟರೆ ಕಣ್ಣಲ್ಲಿ ನೀರು ಬರುವುದಿಲ್ಲ.

-ರೊಟ್ಟಿ ಮೃದುವಾಗಬೇಕಾದರೆ ಹಿಟ್ಟಿಗೆ ಬಿಸಿ ನೀರಿನ ಜೊತೆಗೆ ಬಿಸಿ ಹಾಲು ಹಾಕಬೇಕು.

-ಕತ್ತರಿಸಿದ ಹಣ್ಣು ಕಪ್ಪಾಗದಂತೆ ತಡೆಯಲು ಹಣ್ಣಿನ ಮೇಲೆ ನಿಂಬೆ ರಸ ಹಚ್ಚಬೇಕು.

-ಪೂರಿ ಗರಿಗರಿಯಾಗಬೇಕಾದರೆ ಹಿಟ್ಟಿಗೆ ಸ್ವಲ್ಪ ರವೆ ಮಿಕ್ಸ್‌ ಮಾಡಬೇಕು.

-ತರಕಾರಿ ಹಾಗೂ ಹಣ್ಣುಗಳು ತಾಜಾ ಇರಬೇಕೆಂದ್ರೆ ಅವುಗಳನ್ನು ಪೇಪರ್‌ ನಲ್ಲಿ ಸುತ್ತಿಡಬೇಕು.

-ಪಕೋಡಾ ಮಾಡುವ ಮೊದಲು ಎಣ್ಣೆಗೆ ಸ್ವಲ್ಪ ಉಪ್ಪು ಹಾಕಿದರೆ ಜಾಸ್ತಿ ಎಣ್ಣೆ ಹೀರಿಕೊಳ್ಳುವುದಿಲ್ಲ.

-ಬೇಳೆ ಅಥವಾ ತರಕಾರಿ ಬೇಯಿಸುವಾಗ ನೀರು ಜಾಸ್ತಿಯಾದರೆ ಚೆಲ್ಲಬಾರದು. ಆ ನೀರು ಬಳಸಿ ಸಾಂಬಾರ್‌ ಮಾಡಬೇಕು. ಪೌಷ್ಟಿಕಾಂಶ ಸಿಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ