ಆ್ಯಪ್ನಗರ

ಸುಗಂಧಭರಿತವಾಗಿರಲಿ ಮನೆ

ಮನೆಯಲ್ಲಿ ಅಗರಬತ್ತಿ ಸೇರಿದಂತೆ ಸುಗಂಧಮಯವಾದ ವಸ್ತುಗಳನ್ನು ಉರಿಸುವುದರ ಹಿಂದೆ ವೈಜ್ಞಾನಿಕಕ ಕಾರಣವಿದೆ. ಇದು ಒತ್ತಡ ಮತ್ತು ಉದ್ವಿಗ್ನತೆಯನ್ನು ಕಡಿಮೆಗೊಳಿಸುತ್ತದೆ.

Agencies 19 May 2019, 2:26 pm
ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧನೆಯಲ್ಲಿ ಮನೆ ಸುಗಂಧಭರಿತವಾಗಿದ್ದರೆ ಯಾವ ರೀತಿ ಅದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಬಹಿರಂಗವಾಗಿದೆ. ಇದಕ್ಕಾಗಿಯೇ ದೇವಾಲಯ, ಮನೆ, ಹೊಟೇಲ್‌ ಸೇರಿದಂತೆ ಎಲ್ಲೆಡೆ ಅಗರಬತ್ತಿ ಹಚ್ಚುತ್ತಾರೆ ಎಂದು ಅದು ವಿವರಿಸಿದೆ.
Vijaya Karnataka Web room freshner


ಮನುಷ್ಯ ದಿನಕ್ಕೆ ಸರಾಸರಿ 20,000 ಸಾವಿರ ಬಾರಿ ಉಸಿರಾಡುತ್ತಾನೆ. ಪ್ರತಿ ಬಾರಿಯ ಉಸಿರಾಟದ ಸಂದರ್ಭದಲ್ಲಿ ಒಳಗೆ ಹೋಗುವ ವಾಸನೆ ನಮ್ಮ ಮೆದುಳಿನಲ್ಲಿ ನೆನಪಾಗಿ ಸಂಗ್ರಹವಾಗುತ್ತದೆ. ಒಂದು ವೇಳೆ ಸುವಾಸನೆ ಹಳೆಯದ್ದಾಗಿದ್ದರೆ ಆ ಕಾಲಕ್ಕೆ ನೆನಪಿನ ಶಕ್ತಿ ಹಾರುತ್ತದೆ, ಅದೇ ರೀತಿ ಹೊಸ ಸುವಾಸನೆಯಾಗಿದ್ದರೆ ಹೊಸ ಸ್ಮರಣ ಶಕ್ತಿಯನ್ನು ಸೃಷ್ಟಿಸುತ್ತದೆ ಎಂದು ಕೊಲಂಬಿಯಾ ವಿವಿ ಸಂಶೋಧನೆ ವರದಿ ಹೇಳಿದೆ.

ನಿರಾಳ ಮನಸ್ಥಿತಿ: ಮನೆಯಲ್ಲಿ ಅಗರಬತ್ತಿ ಸೇರಿದಂತೆ ಸುಗಂಧಮಯವಾದ ವಸ್ತುಗಳನ್ನು ಉರಿಸುವುದರ ಹಿಂದೆ ವೈಜ್ಞಾನಿಕಕ ಕಾರಣವಿದೆ. ಇದು ಒತ್ತಡ ಮತ್ತು ಉದ್ವಿಗ್ನತೆಯನ್ನು ಕಡಿಮೆಗೊಳಿಸುತ್ತದೆ. ಅರೋಮಾಥೆರಪಿ ಎಂಬುದು ವಿಜ್ಞಾನವಾಗಿದ್ದು, ಇದರ ಮೇಲೆ ನಂಬಿಕೆ ಇಡಬೇಕು. ಪ್ರತಿ ಹೊಟೇಲ್‌, ರೆಸ್ಟೊರೆಂಟ್‌, ಹಾಸ್ಪಿಟಲ್‌ ಅಥವಾ ಮನೆಯಲ್ಲಿ ನಿರ್ದಿಷ್ಟ ಸುವಾಸನೆಯಿದ್ದು, ಇದು ಮನುಷ್ಯರ ಜತೆಗೆ ಸಂಬಂಧ ಹೊಂದಿದೆ. ಇಂತಹ ಸುವಾಸನೆಯು ಈ ಜಾಗಗಳ ಜತೆಗೆ ಆತ್ಮೀಯ ಸಂಬಂಧವನ್ನು ಬೆಳೆಸುತ್ತದೆ.

ಏಕಾಗ್ರತೆಗೆ ನೆರವು:
ಕಚೇರಿಗಳಲ್ಲಿ ಲಿಂಬೆಯ ರೀತಿಯ ಸುವಾಸನೆಯಿದ್ದರೆ ಅಲ್ಲಿ ಶೇ. 54ರಷ್ಟು ಉತ್ಪನ್ನಕಾರಕತೆ ಹೆಚ್ಚುತ್ತದೆ ಎಂದು ಅಧ್ಯಯನ ವರದಿಗಳಲ್ಲಿ ತಿಳಿದು ಬಂದಿದೆ. ಇದು ಏಕಾಗ್ರತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಯಾವುದೇ ವಿಷಯದ ಬಗ್ಗೆ ಕೋಪ, ಉದ್ವೇಗ ಅಥವಾ ನಿರಾಶೆಗೆ ಒಳಗಾದ ಸಂದರ್ಭದಲ್ಲಿ ಇದು ಮಾನಸಿಕ ಶಾಂತಿ ನೀಡಲು ಇದು ನೆರವಾಗುತ್ತದೆ ಎಂದು ಕಂಡು ಬಂದಿದೆ.

ಹಲವಾರು ತೈಲಗಳು ವೈರಸ್‌, ಬ್ಯಾಕ್ಟೀರಿಯಾ ಮತ್ತು ಫಂಗಸ್‌ ನಿರೋಧಕ ಗುಣಗಳನ್ನು ಹೊಂದಿವೆ. ಇವು ಸುವಾಸನೆಯ ಜತೆಗೆ ಆರೋಗ್ಯದ ರಕ್ಷಣೆಯನ್ನೂ ಈ ಮೂಲಕ ಮಾಡುತ್ತವೆ. ಒಟ್ಟಿನಲ್ಲಿ ಈ ಮೇಲಿನ ಅಂಶಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮನೆ ಸುಗಂಧಭರಿತವಾಗಿರುವಂತೆ ನೋಡಿಕೊಂಡು ಮಾನಸಿಕ ನೆಮ್ಮದಿ ಪಡೆಯಿರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ