ಆ್ಯಪ್ನಗರ

ನಮ್ಮ ಕರ್ನಾಟಕ: ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳವಳಿ

1920ರಲ್ಲಿ ಗಾಂಧೀಜಿಯವರು ಅಸಹಕಾರ ಚಳವಳಿಯನ್ನು ಆರಂಭಿಸಿದರು. ಕರ್ನಾಟಕದಲ್ಲಿ ಈ ಚಳವಳಿಯು ವ್ಯಾಪಕವಾಗಿ ಹರಡಿತು. ಅನೇಕ ಕನ್ನಡಿಗರು ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ಖಾದಿ ವಸ್ತ್ರಗಳನ್ನು ಧರಿಸಿ ಚಳವಳಿಯನ್ನು ಪ್ರಾರಂಭಿಸಿದರು.

Vijaya Karnataka 20 Apr 2018, 5:00 am
ಅಸಹಕಾರ ಚಳವಳಿ 1920-21
Vijaya Karnataka Web asahakara

1920ರಲ್ಲಿ ಗಾಂಧೀಜಿಯವರು ಅಸಹಕಾರ ಚಳವಳಿಯನ್ನು ಆರಂಭಿಸಿದರು. ಕರ್ನಾಟಕದಲ್ಲಿ ಈ ಚಳವಳಿಯು ವ್ಯಾಪಕವಾಗಿ ಹರಡಿತು. ಅನೇಕ ಕನ್ನಡಿಗರು ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ಖಾದಿ ವಸ್ತ್ರಗಳನ್ನು ಧರಿಸಿ ಚಳವಳಿಯನ್ನು ಪ್ರಾರಂಭಿಸಿದರು. ವಿದೇಶಿ ವಸ್ತುಗಳನ್ನು ಸುಟ್ಟುಹಾಕಿ ಸಭೆ, ಮೆರವಣಿಗೆ, ಸಾರಾಯಿ ಅಂಗಡಿಗಳ ಮುಂದೆ ಪ್ರತಿಭಟನೆಗಳು ನಡೆದವು. ಸದಾಶಿವರಾವ್‌ ಕಾರ್ನಾಡ್‌, ಟಿ.ಎಸ್‌.ನಾಯಕ್‌, ಆರ್‌.ಆರ್‌.ದಿವಾಕರ್‌, ವೀರಪ್ಪ ವಾಲಿ, ಗಂಗಾಧರರಾವ್‌ ದೇಶಪಾಂಡೆ ಮುಂತಾದ ನಾಯಕರ ನೇತೃತ್ವದಲ್ಲಿ ಅಸಹಕಾರ ಚಳವಳಿಯು ನಡೆಯಿತು. ಬೆಂಗಳೂರಿನಲ್ಲಿ ನಡೆದ ಅಸಹಕಾರ ಚಳವಳಿಯಲ್ಲಿ ಪ್ರದರ್ಶನಕಾರರ ಮೇಲೆ ಗೋಲಿಬಾರ್‌ ಆಗಿ ಇಬ್ಬರು ಮಡಿದರು. ಚಳವಳಿಯು ವಿಜಯದ ಹಂತದಲ್ಲಿದ್ದಾಗ 1922 ಫೆಬ್ರವರಿ 5ರಂದು ಚೌರಿ ಚೌರ ಘಟನೆ ನಡೆಯಿತು. ಈ ಘಟನೆ ಸುದ್ದಿ ತಿಳಿಯುತ್ತಲೇ ಗಾಂಧೀಜಿಯವರು ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡರು. ಆದರೆ ಕರ್ನಾಟಕದಲ್ಲಿ ಚಳವಳಿ ಮುಂದುವರೆಯಿತು. ಕರ್ನಾಟಕದ ಗಾಂಧಿ ಎಂದು ಹೆಸರಾಗಿದ್ದ ಹರ್ಡೀಕರ್‌ ಮಂಜಪ್ಪನವರು ಯುವಕರಲ್ಲಿ ಶಿಸ್ತು, ಸಂಯಮ, ರಾಷ್ಟ್ರಪ್ರೇಮ, ಆತ್ಮಶಕ್ತಿಗಳನ್ನು ಹೆಚ್ಚಿಸುವ ಉದ್ದೇಶದಿಂದ ಹಿಂದೂಸ್ಥಾನ್‌ ಸೇವಾದಳ ಸಂಸ್ಥೆಯನ್ನು ಕಟ್ಟಿದರು. ಆದರೆ ಸರಕಾರ ಅದನ್ನು ಬಹಿಷ್ಕರಿಸಿ ಹರ್ಡೀಕರ್‌ ಅವರನ್ನು ಬಂಧಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ