ಆ್ಯಪ್ನಗರ

ನಮ್ಮ ಕರ್ನಾಟಕ: ರಾಜ್ಯ ಪುನರ್‌ ಸಂಘಟನಾ ಸಮಿತಿ ಅಥವಾ ಫಝಲ್‌ ಆಲಿ ಸಮಿತಿ

ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ರಾಜ್ಯ ಪುನರ್‌ ಸಂಘಟನಾ ಸಮಿತಿ ಅಥವಾ ಫಝಲ್‌ ಆಲಿ ಸಮಿತಿ ಪಾತ್ರ ಬಹಳ ...

Vijaya Karnataka 4 Jun 2018, 5:00 am
ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ರಾಜ್ಯ ಪುನರ್‌ ಸಂಘಟನಾ ಸಮಿತಿ ಅಥವಾ ಫಝಲ್‌ ಆಲಿ ಸಮಿತಿ ಪಾತ್ರ ಬಹಳ ಪ್ರಮುಖವಾದದ್ದು. 1953ರಲ್ಲಿ ಮೂರು ಸದಸ್ಯರನ್ನೊಳಗೊಂಡ ಸಮಿತಿಯೊಂದು ರಚಿಸಲ್ಪಟ್ಟು ರಾಜ್ಯ ಏಕೀಕರಣದ ಸಮಸ್ಯೆಯನ್ನು ಬಗೆಹರಿಸಲು ಮುಂದಾಯಿತು. ಫಝಲ್‌ ಆಲಿ ಈ ಸಮಿತಿಯ ಅಧ್ಯಕ್ಷರಾಗಿದ್ದು ಎಚ್‌.ಎನ್‌.ಕುಂಜ್ರು ಮತ್ತು ಕೆ.ಎಂ. ಫಣಿಕ್ಕರ್‌ ರವರು ಈ ಸಮಿತಿಯ ಸದಸ್ಯರಾಗಿದ್ದರು. ರಾಜಾಜ್ಯಂತ ಭೇಟಿ ನೀಡಿ ಜನರ ಅಭಿಪ್ರಾಯ, ಮನವಿ, ಸಂದರ್ಶನಗಳೆಲ್ಲವನ್ನೂ ಪರಿಶೀಲಿಸಿ 1955ರಲ್ಲಿ ವರದಿಯನ್ನು ಸಲ್ಲಿಸಿತು. ಈ ವರದಿಯ ಆಧಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ 1956 ನವೆಂಬರ್‌ 1ರಂದು ಮೈಸೂರು ರಾಜ್ಯವು ಉದಯಿಸಿತು. ಏಕೀಕೃತಗೊಂಡ ಕನ್ನಡ ನೆಲದಲ್ಲಿ ಸೇರ್ಪಡೆಯಾದ ಜಿಲ್ಲೆಗಳ ಪಟ್ಟಿ ಹೀಗಿದೆ.
Vijaya Karnataka Web namma karnataka fajal ali samithi
ನಮ್ಮ ಕರ್ನಾಟಕ: ರಾಜ್ಯ ಪುನರ್‌ ಸಂಘಟನಾ ಸಮಿತಿ ಅಥವಾ ಫಝಲ್‌ ಆಲಿ ಸಮಿತಿ


-ಹಳೇ ಮೈಸೂರು ಪ್ರಾಂತ್ಯದಲ್ಲಿ ಒಂಭತ್ತು ಜಿಲ್ಲೆಗಳು ಇದ್ದವು. ಬೆಂಗಳೂರು, ಮೈಸೂರು, ಕೋಲಾರ. ತುಮಕೂರು, ಮಂಡ್ಯ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಚಿತ್ರದುರ್ಗ.

-ಮೈಸೂರು ಪ್ರಾಂತ್ಯಕ್ಕೆ ಮದ್ರಾಸ್‌ ಪ್ರಾಂತ್ಯದಿಂದ ದಕ್ಷಿಣ ಕನ್ನಡ ಜಿಲ್ಲೆ, ಕೊಳ್ಳೆಗಾಲ ತಾಲೂಕು ಮತ್ತು ಬಳ್ಳಾರಿಯನ್ನೂ.

-ಮುಂಬಯಿ ಪ್ರಾಂತ್ಯದಿಂದ ಧಾರವಾಡ, ಬೆಳಗಾವಿ, ವಿಜಾಪುರ, ಉತ್ತರ ಕನ್ನಡ ಜಿಲ್ಲೆಗಳನ್ನೂ,

-ಹೈದರಾಬಾದಿನಿಂದ ರಾಯಚೂರು, ಬೀದರ್‌, ಗುಲ್ಬರ್ಗಾವನ್ನೂ,

-ಬಿ ರಾಜ್ಯ ಕೊಡುಗೆಗಳನ್ನೂ ಸೇರಿಸಲಾಯಿತು.

ಇಷ್ಟೆಲ್ಲ ಸಾಂಘಿಕ ಪ್ರಯತ್ನಗಳು ನಡೆದರೂ ಏಕೀಕರಣಗೊಂಡ ಕನ್ನಡ ನೆಲಕ್ಕೆ ಕನ್ನಡ ಭಾಷೆಯನ್ನು ಮಾತನಾಡುವ ಇನ್ನೂ ಕೆಲವು ಭಾಗಗಳು ಸೇರಿಲ್ಲ. ಇಂದಿಗೂ ಇದು ರಾಜ್ಯಗಳ ನಡುವಣ ವಿವಾದಗಳಿಗೆ ಕಾರಣವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ